Latest Updates
-
ವಿಶ್ವ ಸೈಕಲ್ ದಿನ: ಫಿಟ್ನೆಸ್ ಮತ್ತು ಟ್ರಾಫಿಕ್ ಸಮಸ್ಯೆಗೆ ಸೈಕ್ಲಿಂಗ್ಗಿಂತ ಉತ್ತಮ ಪರಿಹಾರವಿದೆಯೇ? -
ಮಳೆಗಾಲದಲ್ಲಿ ದಂಪತಿಗಳ ಬಾಂಧವ್ಯ ಗಟ್ಟಿಯಾಗಬೇಕೆ? ಮದುವೆ ಮತ್ತು ಬಜೆಟ್ ಪ್ಲಾನಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ದೆಹಲಿ ನೀರಿನ ಬಿಕ್ಕಟ್ಟು: ಮನೆಯಲ್ಲಿ ನೀರು ಉಳಿಸಿ, ಗಿಡಗಳನ್ನು ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಡೈರಿ ಉತ್ಪನ್ನಗಳ ಸ್ಮಾರ್ಟ್ ಆಯ್ಕೆ: ವಿಶ್ವ ಹಾಲು ದಿನದ ವಿಶೇಷ ಸಲಹೆಗಳು -
ಬೆಂಗಳೂರು ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಸ್ಟೈಲಿಶ್ ಆಗಿ ಕಾಣಲು ಈ ವೈರಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು!
ಚಂದ್ರಗ್ರಹಣ 2021: ಗ್ರಹಣ ಸಮಯದಲ್ಲಿ ಮಾಡಬೇಕಾದ, ಮಾಡಲೇಬಾರದ ಕೆಲಸಗಳಿವು
ವೈಶಾಖ ತಿಂಗಳ ಹುಣ್ಣಿಮೆಯ ದಿನದಂದು ಅಂದರೆ ಬುದ್ಧ ಪೂರ್ಣಿಮಾ ದಿನದಂದು 2021 ವರ್ಷದ ಮೊದಲ ಚಂದ್ರಗ್ರಹಣ ಘಟಿಸಲಿದೆ. ಮೇ 26ರಂದು ನಡೆಯಲಿರುವ ಈ ಚಂದ್ರಗ್ರಹಣದಂದೇ, ಸೂಪರ್ ಮೂನ್, ರೆಡ್ ಬ್ಲಡ್ ಮೂನ್ ಸಹ ಗೋಚರಿಸಲಿರುವುದು ಈ ದಿನದ ವಿಶೇಷವಾಗಿದೆ.

ಒಂದೇ ದಿನ ಸೌರಮಂಡಲದಲ್ಲಿ ಚಂದ್ರಗ್ರಹಣ, ಸೂಪರ್ ಮೂನ್ ರೆಟ್ ಬ್ಲಡ್ ಮೂನ್ ಮೂರು ವಿದ್ಯಾಮಾನಗಳು ಘಟಿಸಲಿದ್ದು, ಈ ದಿನದಂದು ಯಾವುದನ್ನು ಮಾಡಲೇಬಾರದು, ಯಾವೆಲ್ಲಾ ಕೆಲಸಗಳನ್ನು ಮಾಡಬಹುದು ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ.

ಮಾಡಬಹುದಾದ ಕೆಲಸಗಳು
* ವೈಜ್ಞಾನಿಕವಾಗಿ ಚಂದ್ರ ಗ್ರಹಣವನ್ನು ನೇರವಾಗಿ ಕಣ್ಣುಗಳ ಮೂಲಕ ವೀಕ್ಷಿಸಲು ಸುರಕ್ಷಿತವಾಗಿದೆ. ಆದ್ದರಿಂದ, ಚಂದ್ರ ಗ್ರಹಣಕ್ಕೆ ಸಾಕ್ಷಿಯಾಗಲು ಯಾವುದೇ ವಿಶೇಷ ಮುನ್ನೆಚ್ಚರಿಕೆಗಳನ್ನು ನೋಡಿಕೊಳ್ಳುವ ಅಗತ್ಯವಿಲ್ಲ.
* ಭಾರತೀಯ ಪುರಾಣದ ಪ್ರಕಾರ ಚಂದ್ರಗ್ರಹಣದ ಸಮಯದಲ್ಲಿ "ಮಹಾಮೃತ್ಯುಂಜಯ ಮಂತ್ರ ಅಥವಾ ಇಷ್ಟದೇವರ ನಾಮಸ್ಮರಣೆ"ಯನ್ನು ಜಪಿಸಬೇಕು ಎಂದು ಹೇಳಲಾಗುತ್ತದೆ. ಇದು ಗ್ರಹಣದಿಂದ ಉಂಟಾಗುವ ನಕಾರಾತ್ಮಕ ಶಕ್ತಿಯ ಹಾನಿಕಾರಕ ಪರಿಣಾಮವನ್ನು ಕಡಿಮೆ ಮಾಡುತ್ತದೆ.

ಮಾಡಬಹುದಾದ ಕೆಲಸಗಳು
* ಆಹಾರ ಶುದ್ಧತೆಯನ್ನು ಕಳೆದುಕೊಳ್ಳದಿರಲು ಆಹಾರ ಪದಾರ್ಥಗಳಿಗೆ ತುಳಸಿ ಎಲೆ ಅಥವಾ ಗರಿಕೆ ಹುಲ್ಲನ್ನು ಹಾಕಿ
* ಅಗತ್ಯವಿರುವವರಿಗೆ ದಾನ ಮಾಡಿದರೆ ಒಳ್ಳೆಯದು ಎನ್ನಲಾಗಿದೆ.
* ಚಂದ್ರ ಗ್ರಹಣ ನಂತರ ನೀವು ಸ್ನಾನ ಮಾಡಬೇಕು.
* ಆದಷ್ಟು ಮನೆಯ ಒಳಗೆ ಇದ್ದರೆ ಒಳಿತು. ಮಕ್ಕಳನ್ನು ಹೊರಗೆ ಬಿಡಬೇಡಿ.
* ಶುಭ ಕಾರ್ಯಗಳನ್ನು ಈ ದಿನ ಮಾಡಬೇಡಿ, ಮುಂದೂಡಿ.

ಇವುಗಳನ್ನು ಮಾಡಲೇಬೇಡಿ
* ಭಾರತೀಯ ಪುರಾಣದ ಪ್ರಕಾರ ಈ ಸಮಯದಲ್ಲಿ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ ಹಾಗೂ ಆಹಾರ ಸೇವಿಸಿದರೆ ಮೂರು ದಿನಗಳ ಕಾಲ ಉಪವಾಸ ಮಾಡಿ.
* ಹಿಂದೂ ಶಾಸ್ತ್ರದ ಪ್ರಕಾರ ಸಂಭೋಗದಿಂದ ದೂರವಿರುವುದು ಒಳಿತು. ಗ್ರಹಗಳ ಪರಿಣಾಮ ಉತ್ತಮವಾಗಿರದ ಕಾರಣ ಈ ಸಮಯದಲ್ಲಿ ಸಂಭೋಗ ಶುಭವಲ್ಲ ಎನ್ನಲಾಗುತ್ತದೆ.
* ಗ್ರಹಣದ ಅವಧಿಯಲ್ಲಿ ನೀವು ನಿದ್ರೆ ಮಾಡಬೇಡಿ.

ಇವುಗಳನ್ನು ಮಾಡಲೇಬೇಡಿ
* ಗ್ರಹಣದ ಪರಿಣಾಮ ಪ್ರಾಣಿಗಳ ನಡವಳಿಕೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಚಂದ್ರ ಗ್ರಹಣದಿಂದ ಪ್ರಭಾವಿತವಾಗುತ್ತವೆ, ಆದ್ದರಿಂದ ಆದಷ್ಟು ಪ್ರಾಣಿಗಳಿಂದ ದೂರವಿರಿ.
* ಗರ್ಭಿಣಿಯರು ಹೆಚ್ಚು ಮುಂಜಾಗ್ರತೆ ವಹಿಸಿ ಹಾಗೂ ಗ್ರಹಣವನ್ನು ನೋಡಬೇಡಿ.
* ಗ್ರಹಣವು ಕೆಲವು ನಕಾರಾತ್ಮಕ ಶಕ್ತಿ ಅಥವಾ ಕಿರಣಗಳನ್ನು ಹೊರಸೂಸುವ ಕಾರಣ ಇದು ಕಣ್ಣು, ತ್ವಚೆ ಹಾಗೂ ಹಾರ್ಮೋನುಗಳ ಮೇಲೆ ಪ್ರಭಾವ ಬೀರಲಿದೆ.
* ಗ್ರಹಣದ ವೇಳೆ ಮಲಗಬೇಡಿ



Click it and Unblock the Notifications