Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಮೌನಿ ಅಮವಾಸ್ಯೆಯಂದು ಪಿತೃ ದೋಷ ನಿವಾರಣೆಗೆ ಈ ವಿಧಿವಿಧಾನ ಪಾಲಿಸಿ
Pulse
oi-Shreeraksha
By Shreeraksha
ಪಿತೃದೋಷಗಳಿಂದ ಮುಕ್ತಿ ಪಡೆಯಲು ಸಹಾಯಮಾಡುವ ಅಮವಾಸ್ಯೆಯೇ ಮೌನಿ ಅಮವಾಸ್ಯೆ. ಮೌನವಾಗಿಯೇ ಏನನ್ನೂ ಮಾತನಾಡದೇ ಆಚರಣೆ ಮಾಡುವ ಕಾರಣದಿಂದಾಗಿ ಇದನ್ನು ಮೌನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ.ಫೆಬ್ರವರಿ 11ರಂದು ಇರುವ ಈ ಅಮವಾಸ್ಯೆಯಂದು ಗಂಗಾ ಸ್ನಾನ ಮಾಡುವುದು, ದಾನ ಮಾಡುವುದು ಮತ್ತು ಸದ್ಗುಣಗಳನ್ನು ಪಾಲನೆ ಮಾಡುವುದು ಬಹಳ ಶುಭಕರ.

ಮೌನಿ ಅಮವಾಸ್ಯೆಯಂದು ಎಳ್ಳು ಅಥವಾ ಇತರ ವಸ್ತುಗಳನ್ನು ದಾನ ಮಾಡುವುದರಿಂದ ವಿಷ್ಣುವಿನ ಆಶೀರ್ವಾದಕ್ಕೆ ಪಾತ್ರರಾಗುತ್ತೀರಿ. ಮೌನಿ ಅಮಾವಾಸ್ಯೆಯಂದು, ಪಿತೃಗಳ ಎಲ್ಲಾ ಕೆಲಸಗಳನ್ನು ಮೌನವಾಗಿ ಮಾಡಲಾಗುತ್ತದೆ. ಈ ದಿನ, ಪಿತೃದೋಷವನ್ನು ಕೆಲವು ವಿಶೇಷ ಕ್ರಮಗಳಿಂದ ಸಮಾಧಾನಪಡಿಸಬಹುದು. ಆ ವಿಧಾನಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

ಪಿತೃದೋಷ ನಿವಾರಣೆಗಾಗಿ ಪೂಜೆ ಮಾಡುವ ವಿಧಾನ:
- ಪಿತೃ ದೋಷವನ್ನು ತೊಡೆದುಹಾಕಲು, ಈ ದಿನ ಪೂರ್ವಜರನ್ನು ಧ್ಯಾನಿಸುತ್ತಾ ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ.
- ಪಿತ್ರ ದೋಷ ತಡೆಗಟ್ಟಲು, ಕಮಲದಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಕೆಂಪು ಹೂವುಗಳು ಮತ್ತು ಕಪ್ಪು ಎಳ್ಳು ಸೇರಿಸಿ.
- ನಂತರ ಈ ನೀರನ್ನು ಸೂರ್ಯ ದೇವರಿಗೆ ಅರ್ಪಿಸಿ, ನಿಮ್ಮ ಪಿತೃಗಳ ಶಾಂತಿಗಾಗಿ ಪ್ರಾರ್ಥಿಸಿ.
- ಅಶ್ವತ್ಥ ಮರದ ಮೇಲೆ ಕೆಲವು ಬಿಳಿ ಬಣ್ಣದ ಸಿಹಿತಿಂಡಿಗಳನ್ನು ಇಟ್ಟು, ಮರವನ್ನು 108 ಬಾರಿ ಪ್ರದಕ್ಷಿಣೆ ಹಾಕಿ.
- ಮೌನಿ ಅಮಾವಾಸ್ಯೆಯ ದಿನ, ಎಳ್ಳಿನ ಲಡ್ಡು, ಎಳ್ಳೆಣ್ಣೆ, ನೆಲ್ಲಿ, ಕಂಬಳಿ ಮತ್ತು ಬಟ್ಟೆಗಳನ್ನು ಅಗತ್ಯವಿರುವ ವ್ಯಕ್ತಿಗೆ ದಾನ ಮಾಡಿ. ಇದನ್ನು ಮಾಡುವುದರಿಂದ ನಿಮಗೆ ಪುಣ್ಯ ಲಭಿಸುತ್ತದೆ.
- ಮನೆಯ ದಕ್ಷಿಣ ಭಾಗದಲ್ಲಿ ಸ್ವಲ್ಪ ಎಳ್ಳನ್ನು ಬಿಳಿ ಬಟ್ಟೆಯ ಮೇಲೆ ಹಾಕಿ. ಅದರ ಮೇಲೆ ಹಿತ್ತಾಳೆ ಅಥವಾ ತಾಮ್ರದ ಹೂಜಿಯನ್ನು ಸ್ಥಾಪಿಸಿ.
- ಈಗ ಅದರ ಎಡಭಾಗದಲ್ಲಿ ಎಳ್ಳೆಣ್ಣೆಯ ದೀಪವನ್ನು ಪಿತೃಗಳಿಗಾಗಿ ಹಚ್ಚಿ. ಈಗ ನೀರು ತುಂಬಿದ ಸ್ಟೀಲ್ ಪಾತ್ರೆಯನ್ನು ಮಧ್ಯದಲ್ಲಿ ಇರಿಸಿ.
- ಅದರ ಮೇಲೆ ಸ್ಟೀಲ್ ಪ್ಲೇಟ್ ಮತ್ತು ಎಳ್ಳಿನ ರೊಟ್ಟಿ ಇರಿಸಿ.
- ಈಗ ಅದರ ಮೇಲೆ ತುಳಸಿ ಎಲೆಯನ್ನು ಇರಿಸಿ.
- ಇದಕ್ಕೆ ಬಿಳಿ ಹೂವನ್ನು ಅರ್ಪಿಸಿ ಮತ್ತು ಶ್ರೀಗಂಧದ ತಿಲಕವನ್ನು ಇಡಿ.
- ಈಗ ರೊಟ್ಟಿಯನ್ನು ನಾಲ್ಕು ತುಂಡುಗಳನ್ನು ಮಾಡಿ. ಅದರಲ್ಲಿ ಒಂದು ತುಂಡನ್ನು ನಾಯಿಗೆ, ಎರಡನೆಯ ತುಂಡು ಹಸುವಿಗೆ, ಮೂರನೆಯ ತುಂಡನ್ನು ಕ್ಷುದ್ರಶಕ್ತಿಗಳಿಗೆ, ನಾಲ್ಕನೆಯ ತುಂಡನ್ನು ಅಶ್ವತ್ಥ ಮರದ ಕೆಳಗೆ ಇರಿಸಿ.

ವಾಸ್ತು ಪ್ರಕಾರ ಪಿತೃ ದೋಷ ನಿವಾರಣೆಗೆ ಹೀಗೆ ಮಾಡಿ:

ನೆನಪಿನಲ್ಲಿಡಿ:
ಈ ಎಲ್ಲಾ ಕೆಲಸಗಳನ್ನು ನೀವು ಮೌನವಾಗಿ ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ.
Comments
English summary
Mauni Amavasya 2021 : Pitru Dosh Nivaran Pujan Vidhi
Story first published: Wednesday, February 10, 2021, 18:00 [IST]
Other articles published on Feb 10, 2021



Click it and Unblock the Notifications