ಚಂದ್ರ ದೋಷವಿದೆಯೇ? ಲಾಲ್‌ ಕಿತಾಬ್‌ ಶಾಸ್ತ್ರದಲ್ಲಿ ಹೇಳಲಾಗಿರುವ ಈ ಪರಿಹಾರ ಮಾಡಿ

ನಮ್ಮ ಕುಂಡಲಿಯಲ್ಲಿ ಚಂದ್ರ ದುರ್ಬಲ ಸ್ಥಾನದಲ್ಲಿದ್ದರೆ ಚಂದ್ರದೋಷ ಉಂಟಾಗುತ್ತದೆ. ಚಂದ್ರದೋಷವಿದ್ದರೆ ಮದುವೆ ವಿಳಂಬವಾಗುವುದು, ಜೀವನದಲ್ಲಿ ಹಲವು ಸಮಸ್ಯೆಗಳು ಎದುರಾಗುವುದು. ಕೆಲವರಿಗೆ ಮಕ್ಕಳಾಗಲು ಕೂಡ ತೊಂದರೆಯಾಗುವುದು. ಯಾವುದೇ ಗ್ರಹ ದೋಷವಿದ್ದರೂ ಜ್ಯೋತಿಷ್ಯದಲ್ಲಿ ಪರಿಹಾರ ಇದೆ. ಚಂದ್ರ ದೋಷ ನಿವಾರಣೆಗೆ ಲಾಲ್‌ ಕಿತಾಬ್‌ನಲ್ಲಿ ಪರಿಹಾರವಿದೆ ನೋಡಿ:

 lal kitab

ಚಂದ್ರನನ್ನು ಪೂಜಿಸಿ
ಲಾಲ್ ಕಿತಾಬ್ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಚಂದ್ರನು ದುರ್ಬಲ ಸ್ಥಿತಿಯಲ್ಲಿದ್ದರೆ ಚಂದ್ರನನ್ನು ಬಲಪಡಿಸಲು, ಬೆಳ್ಳಿಯ ಪಾತ್ರೆಯಲ್ಲಿ ಗಂಗಾಜಲ, ಹಾಲು, ಅಕ್ಕಿ ಮತ್ತು ಸಕ್ಕರೆ ಹಾಕಿ ಆ ನೀರನ್ನು ಹುಣ್ಣಿಮೆಯಂದು ಚಂದ್ರನಿಗೆ ಅರ್ಘ್ಯವನ್ನಾಗಿ ಅರ್ಪಿಸಬೇಕು.

ಆರ್ಘ್ಯ ಅರ್ಪಿಸುವಾಗ ಈ ಮಂತ್ರ ಪಠಿಸಿ
ಚಂದ್ರನ ಸ್ಥಾನವನ್ನು ಮತ್ತು ಚಂದ್ರನ ದುಷ್ಪರಿಣಾಮಗಳನ್ನು ಬಲಪಡಿಸಲು, ಚಂದ್ರನ ಮಂತ್ರಗಳನ್ನು ಪಠಿಸಿ.
ಓಂ ಪುತ್ರ ಸೋಮಾಯ ನಮಃ ।
ಓಂ ಶ್ರೀ ಚಂದ್ರಾಯ ನಮಃ

ಹುಣ್ಣಿಮೆಯಂದು ಈ ವಸ್ತುಗಳನ್ನು ದಾನ ಮಾಡಿ

ನಮ್ಮ ಜಾತಕದಲ್ಲಿ ಚಂದ್ರ ಸ್ಥಾನವನ್ನು ಬಲಪಡಿಸಲು ಅಕ್ಕಿ ಪಾಯಸ ಮಾಡು ದಾನ ಮಾಡಿ. ಜಾತಕದಲ್ಲಿ ಚಂದ್ರ ದುರ್ಬಲನಾಗಿದ್ದರೆ ಸೋಮವಾರ ಸಿಹಿ ಹಾಲು ಕುಡಿಯಬಾರದು.

ತಾಯಿಯ ಪಾದಗಳಿಗೆ ನಮಸ್ಕರಿಸಿ
ಲಾಲ್ ಕಿತಾಬ್ ಪ್ರಕಾರ, ಬೆಳಗ್ಗೆ ಎದ್ದ ತಕ್ಷಣ ತಾಯಿಯ ಪಾದ ಮುಟ್ಟಿ ನಮಸ್ಕರಿಸಿ, ಅವಳನ್ನು ಖುಷಿಯಾಗಿ ನೋಡಿಕೊಳ್ಳಿ. ಅವಳು ಖುಷಿಯಾಗಿದ್ದರೆ ಚಂದ್ರನ ದೋಷ ಕಡಿಮೆಯಾಗುವುದು.

ಶಿವನಿಗೆ ರುದ್ರಾಭಿಷೇಕ ಮಾಡಿ
ಲಾಲ್ ಕಿತಾಬ್ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಚಂದ್ರನು ದುರ್ಬಲ ಅಥವಾ ಅಶುಭ ಸ್ಥಾನದಲ್ಲಿದ್ದರೆ ಶಿವನನ್ನು ಆರಾಧಿಸಬೇಕು. ಪ್ರತಿ ಸೋಮವಾರ, ಶಿವನಿಗೆ ರುದ್ರಾಭಿಷೇಕವನ್ನು ಮಾಡಬೇಕು ಹಾಗೂ ಶಿವ ಚಾಲೀಸಾವನ್ನು ಪಠಿಸುವುದರಿಂದ ತೊಂದರೆಗಳು ದೂರಾಗುವುದು.

ಈ ವಿಷಯಗಳನ್ನು ನೆನಪಿನಲ್ಲಿಡಿ
ಶಾಸ್ತ್ರ ಪ್ರಕಾರ ಬಿಳಿ ಮತ್ತು ಬೂದು ಬಣ್ಣಗಳು ಚಂದ್ರನ ಸಂಕೇತವಾಗಿದೆ, ಈ ಬಣ್ಣದ ಬಟ್ಟೆಗಳನ್ನು ಧರಿಸಿ, ಅಲ್ಲದೆ ನೀಲಿ, ಹಸಿರು ಮತ್ತು ಗುಲಾಬಿ ಬಣ್ಣಗಳು, ಆಕಾಶ ನೀಲಿ ಬಣ್ಣದ ಉಡುಪು ಧರಿಸಿ. ಚಂದ್ರ ದುರ್ಬಲವಾಗಿರುವವರು ಕಪ್ಪು ಮತ್ತು ಕೆಂಪು ಬಣ್ಣ ನಿಮಗೆ ಅದೃಷ್ಟಕರವಲ್ಲ.

ಯಾರ ಜಾತಕದಲ್ಲಿ ಚಂದ್ರ ದುರ್ಬಲನಾಗಿದ್ದರೆ ಅವರು ನೀರನ್ನು ವ್ಯರ್ಥ ಮಾಡುವುದನ್ನು ತಪ್ಪಿಸಬೇಕು. ನಿಮ್ಮ ಮನೆಯಲ್ಲಿ ಹಾಳಾದ ಟ್ಯಾಪ್‌ಗಳನ್ನು ಆದಷ್ಟು ಬೇಗ ಸರಿಪಡಿಸಿ.

English summary

Lal Kitab Remedies For Chandra Dosha

Here are lal kitab remedies for chandra dosha read on..
Story first published: Saturday, February 18, 2023, 21:59 [IST]
X
Desktop Bottom Promotion