Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
Rahu Ketu Dosha : ರಾಹು-ಕೇತು ದೋಷ ನಿವಾರಣೆಗೆ ಈ ಸರಳ ಪರಿಹಾರ ಮಾಡಿದರೆ ಸಾಕು
ಏಪ್ರಿಲ್ 12ಕ್ಕೆ ರಾಹು-ಕೇತು ಗ್ರಹವು ತನ್ನ ರಾಶಿ ಬದಲಾಯಿಸುತ್ತಿದೆ. ರಾಹು ಮೇಷ ರಾಶಿಯನ್ನು ಪ್ರವೇಶಿಸಿದರೆ, ಕೇತು ತುಲಾ ರಾಶಿಯನ್ನು ಪ್ರವೇಶಿಸುವುದು. ಇದರ ಪ್ರಭಾವ 12 ರಾಶಿಗಳ ಮೇಲೆ ಇರಲಿದೆ.
ಸಮುದ್ರ ಮಂಥನ ಮಾಡುವ ಸಮಯದಲ್ಲಿ ಉಕ್ಕಿ ಬಂದ ಅಮೃತವನ್ನು ದೇವತೆಗಳು ಅಸುರರಿಗೆ ನೀಡುವುದಿಲ್ಲ, ಆದರೆ ಸ್ವರಭಾನು ಎಂಬ ರಾಕ್ಷಸ ವೇಷ ಮರೆಸಿ ದೇವತೆಗಳ ಜೊತೆ ಕೂರುತ್ತಾನೆ. ಅವನಿಗೆ ಅಮೃತ ನೀಡಲಾಗುವುದು, ಅವನು ಅದನ್ನು ಕುಡಿಯುವಷ್ಟರಲ್ಲಿ ಅವನು ರಾಕ್ಷಸ ಎಂಬುವುದನ್ನು ಅರಿತ ಸೂರ್ಯ ಹಾಗೂ ಚಂದ್ರ ವಿಷ್ಣುವಿಗೆ ತಿಳಿಸುತ್ತಾನೆ. ವಿಷ್ಣು ತನ್ನ ಸುದರ್ಶನ ಚಕ್ರದಿಂದ ರಾಕ್ಷಸನ ರುಂಡ-ಮುಂಡ ಬೇರಾಗುವಂತೆ ಮಾಡುತ್ತಾನೆ, ಆದರೆ ಅವನು ಅಷ್ಟರಲ್ಲಿಯೇ ಅಮೃತ ಕುಡಿದಿದ್ದ ಕಾರಣ ಸಾವಾಗುವುದಿಲ್ಲ, ಆ ರುಂಡ ಮುಂಡವೇ ರಾಹು-ಕೇತು. ರಾಹು ಹಾವಿನ ತಲೆಯ ರೂಪದಲ್ಲಿ ಇದ್ದರೆ ಕೇತು ಹಾವಿನ ಬಾಲದ ರೂಪದಲ್ಲಿ ಇರುತ್ತದೆ.
ರಾಹು-ಕೇತು ಸೂರ್ಯ ಹಾಗೂ ಚಂದ್ರನ ಶತ್ರುಗಳಾಗಿದ್ದು ಸೂರ್ಯಗ್ರಹಣ-ಹಾಗೂ ಚಂದ್ರಗ್ರಹಣಕ್ಕೆ ರಾಹು-ಕೇತು ಕಾರಣ ಎಂಬುವುದನ್ನು ವೈದಿಕ ಶಾಸ್ತ್ರ ಹೇಳುತ್ತದೆ.
ಈ ಎರಡು ಗ್ರಹಗಳು ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದ್ದು ಆದ್ದರಿಂದಲೇ ರಾಹುಕಾಲದಲ್ಲಿ ಯಾವುದೇ ಶುಭಕಾರ್ಯ ಮಾಡುವುದು ನಿಷಿದ್ಧ ಎಂದು ನಂಬಲಾಗಿದೆ.

ರಾಹು ದೋಷ ಯಾವಗೆಲ್ಲಾ ಉಂಟಾಗುವುದು
1. ರಾಹು ಹಾಗೂ ಚಂದ್ರ ಸೇರಿದಾಗ ರಾಹು ದೋಷ ಉಂಟಾಗುವುದು.
2. ರಾಹು ಮೊದಲ, 2ನೇ, 5ನೇ, 7ನೇ, 8ನೇ, 9ನೇ, 12ನೇ ಮನೆಯಲ್ಲಿದ್ದಾಗ ರಾಹು ದೋಷವಿರುತ್ತದೆ.
3, ಚಂದ್ರ ಅಧಿಪತಿಯಾಗಿರುವ ರಾಶಿಯಲ್ಲಿ ಗುರು ಹಿಮ್ಮುಖವಾಗಿ ಚಲಿಸಿದಾಗ
ವೈದಿಕ ಶಾಸ್ತ್ರದಲ್ಲಿ ರಾಹು ಕೇತು ದೋಷವಿದೆ. ಕೆಲವೊಂದು ಸರಳ ಪರಿಹಾರ ಮೂಲಕ ರಾಹು-ಕೇತು ದೋಷ ತೆಗೆಯಬಹುದು.

ರಾಹು-ಕೇತು ದೋಷ ವ್ಯಕ್ತಿಯ ಮೇಲೆ ಬೀರುವ ಪರಿಣಾಮ
* ಮಾನಸಿಕ ಸಮಸ್ಯೆ
* ಖಿನ್ನತೆ
* ಒತ್ತಡ
* ನಷ್ಟ
* ಕಾನೂನು ಸಮಸ್ಯೆಯಲ್ಲಿ ಸಿಕ್ಕಿಕೊಳ್ಳುವುದು
* ಕುಟುಂಬದಲ್ಲಿ ಅಕಾಲಿಕ ಮರಣ
* ಬದುಕಿನಲ್ಲಿ ದರ್ಘಟನೆ
* ತ್ವಚೆ ಸಮಸ್ಯೆ
* ಉಸಿರಾಟದ ತೊಂದರೆ
ಕೇತು ಸರಿಯಾದ ಸ್ಥಾನದಲ್ಲಿ ಇಲ್ಲದೇ ಹೋದರೆ ಮೆದುಳಿನ ಸಮಸ್ಯೆ, ಕಿವಿ ಸಮಸ್ಯೆ, ಶ್ವಾಸಕೋಶದ ಸಮಸ್ಯೆ ಕಂಡು ಬರುವುದು. ಕೇತು ನಮ್ಮಲ್ಲಿ ಅಹಂ ಹೆಚ್ಚಿಸುತ್ತೆ, ಕೆಟ್ಟ ಚಟುವಟಿಕೆ, ಕೆಟ್ಟ ಸಂಗ ಸೇರುವಂತೆ ಪ್ರೇರೇಪಿಸುತ್ತದೆ.
ರಾಹು-ಕೇತು ದೋಷ ತುಂಬಾನೇ ಕೆಟ್ಟ ಪರಿಣಾಮ ಬೀರುವುದು, ಆದ್ದರಿಂದ ರಾಹು-ಕೇತು ದೋಷಕ್ಕೆ ಪರಿಹಾರ ಮಾಡಲೇಬೇಕು.

ರಾಹು-ಕೇತು ದೋಷಕ್ಕೆ ಸರಳ ಪರಿಹಾರ
* ಅನಾಥರಿಗೆ ಸಿಹಿ ನೀಡುವುದರಿಂ ಕೇತುವಿನ ಋಣಾತ್ಮಕ ಪ್ರಬಾವ ತೆಗೆಯಬಹುದು.
* ಪ್ರತಿದಿನ 'ಓಂ ನಮಃ ಶಿವಾಯ' 108 ಬಾರಿ ಪಠಿಸಿ.
* ಬಿಲ್ವೆ ಪತ್ರೆ, ಹಸಿ ಹಾಲು, ಹಣ್ಣುಗಳು ಹಾಗೂ ನೀರನ್ನು ಶಿವಲಿಂಗಕ್ಕೆ ಅರ್ಪಿಸಿ.
* ದೋಷ ನಿವಾರಣ ಮಂತ್ರವನ್ನು 108 ಬಾರಿ ಪಠಿಸಿ
* ಶಿವ ಕೃಪೆಗೆ ಪಾತ್ರರಾಗುವಂತೆ ನಡೆದುಕೊಳ್ಳಿ,ಶಿವ ಭಕ್ತರಾಗುವುದರಿಂದ ರಾಹು-ಕೇತು ದೋಷ ತೆಗೆಯಬಹುದು.

ರಾಹು-ಕೇತು ದೋಷ ನಿವಾರಣೆಗೆ ಪರಿಹಾರ
* ನಿವಾರಣ ಯಂತ್ರ ಅಥವಾ ರುದ್ರಾಕ್ಷಿ ಮಾಲೆ ಧರಿಸಿ
* ನಾಗ ಪೂಜೆ ಮಾಡಿಸಿ.
ಬೆಳ್ಳಿಯಲ್ಲಿ ತಯಾರಿಸಿದ ದೋಷ ನಿವಾರಣ ಉಂಗುರ ಬಳಸಿ.
* ರುದ್ರಾಭಿಷೇಕ ಮಾಡಿಸಿ.
* ಕುಕ್ಕೆಗೆ ಹೋಗಿ ಬನ್ನಿ
* ಕಾಳ ಸರ್ಪ ನಿವಾರಣ ಪೂಜೆ ಮಾಡಿಸಿ.
* ಅಡುಗೆ ಮನೆಯಲ್ಲಿಯೇ ಆಹಾರ ಸೇವಿಸಿ.
* ರಾಹು ಹಾಗೂ ಕೇತುವಿಗೆ ಪ್ರತ್ಯೇಕ ಜಪ ಮಾಡಿ.

ರಾಹು-ಕೇತು ದೋಷಕ್ಕೆ ಸರಳ ಪರಿಹಾರ
* ಕೆಂಪು ಬಟ್ಟೆ ಹಾಗೂ ಹವಳ ಬಲಸಬೇಡಿ.
* ಕಪ್ಪು ಕಂಬಳಿಯನ್ನು ಬಡವರಿಗೆ ದಾನ ಮಾಡಿ.
* ದೇವಾಲಯಕ್ಕೆ ಸಾಸಿವೆಯೆಣ್ಣೆಯನ್ನು ದಾನ ಮಾಡಿ.
* ಬೀದಿ ನಾಯಿಗಳಿಗೆ ಆಹಾರ ಹಾಕಿ.
* ಕಪ್ಪು ಬಟ್ಟೆ ಧರಿಸಬೇಡಿ.
* ರಾಹುವಿಗೆ ಹಳದಿ ಹಾಗೂ ಬಿಳಿ ಪ್ರಿಯವಾದ ಬಣ್ಣ, ಈ ಬಣ್ಣದ ಬಟ್ಟೆ ಧರಿಸಿ.
ಈ ಸರಳ ಪರಿಹಾರ ಮೂಲಕ ರಾಹು-ಕೇತು ದೋಷ ಹೋಗಲಾಡಿಸಬಹುದು.



Click it and Unblock the Notifications