Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಹಾಸಿಗೆ ಅಡಿಯಲ್ಲಿ ಈ ವಸ್ತುಗಳನ್ನು ಇಟ್ಟರೆ ನಿಮ್ಮ ಅದೃಷ್ಟವೇ ಬದಲಾಗಬಹುದು

ಅದೃಷ್ಟ ಯಾರಿಗೆ ಬೇಡ? ಪ್ರತಿಯೊಬ್ಬರು ಜೀವನದ ಏಳಿಗೆ ಅಥವಾ ಸುಧಾರಣೆಗಾಗಿ ಹಂಬಲಿಸುತ್ತಲೇ ಇರುತ್ತಾರೆ. ಒಂದು ಚಿಕ್ಕ ಬದಲಾವಣೆ ಹಾಗೂ ಸುಧಾರಣೆಗಳು ನಮಗೆ ಮಹತ್ತರವಾದ ಸಂತೋಷ ನೀಡುವುದರಲ್ಲಿ ಸಂದೇಹವಿಲ್ಲ. ಕೆಲವರು ಜೀವನದಲ್ಲಿ ಸದಾ ಅದೃಷ್ಟವನ್ನು ಪಡೆದುಕೊಳ್ಳುತ್ತಲೇ ಇರುತ್ತಾರೆ. ಇನ್ನೂ ಕೆಲವರು ಅದೃಷ್ಟದ ಹಂಬಲದಲ್ಲಿ ಇರುತ್ತಾರೆ.
ನೀವೂ ಸಹ ಅದೃಷ್ಟದ ಹಂಬಲದಲ್ಲಿ ಇದ್ದೀರಿ ಅಥವಾ ಜೀವನದಲ್ಲಿ ಬದಲಾವಣೆಯನ್ನು ಬಯಸುತ್ತಿದ್ದೀರಿ ಎಂದರೆ ಮೊದಲು ಹಾಸಿಗೆಯ ಅಡಿಯಲ್ಲಿ ಕೆಲವು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ವಸ್ತುಗಳನ್ನು ಇಡಲು ಮರೆಯದಿರಿ. ಹಾಗಾದರೆ ಆ ವಸ್ತುಗಳು ಯಾವವು? ಅದರಿಂದ ಯಾವ ಬಗೆಯ ಲಾಭ ಉಂಟಾಗುವುದು ಎನ್ನುವುದನ್ನು ಬೋಲ್ಡ್ ಸ್ಕೈ ಈ ಮುಂದೆ ಸಂಕ್ಷಿಪ್ತವಾಗಿ ವಿವರಿಸಿದೆ ನೋಡಿ...

ನಿಮ್ಮ ಕೋಪದ ನಿಯಂತ್ರಣಕ್ಕೆ
ಕೋಪ ಮನುಷ್ಯನ ಹಾನಿಕಾರಕ ವಿಚಾರ. ಬಹಳಷ್ಟು ಸಾರಿ ನಾವು ಕೋಪದ ಕೈಗೆ ಬುದ್ಧಿಯನ್ನು ಕೊಡುತ್ತೇವೆ. ಇದರಿಂದ ಅನಾಹುತಗಳನ್ನು ಸಹ ಅನುಭವಿಸುತ್ತವೆ. ಇಂತಹ ಕೋಪವನ್ನು ನಮ್ಮ ಹಿಡಿತದಲ್ಲಿ ಇಡಬೇಕು ಎಂದರೆ ಹಾಸಿಗೆಯ ಅಡಿಯಲ್ಲಿ ಅಥವಾ ಪಕ್ಕದಲ್ಲಿ ನೀರು ತುಂಬಿದ ತಾಮ್ರದ ಪಾತ್ರೆಯನ್ನು ಇಡಿ. ಕೆಂಪು ಶ್ರೀಗಂಧದ ಕೊರಡು (ತುಂಡು) ಅನ್ನು ದಿಂಬಿನ ಕೆಳಗೆ ಇರಿಸಿ.

ಆತ್ಮ ವಿಶ್ವಾಸದ ಹೆಚ್ಚಳಕ್ಕೆ
ಆತ್ಮ ವಿಶ್ವಾಸ ಇಲ್ಲವೆಂದರೆ ನಾವು ಯಾವ ಕೆಲಸವನ್ನೂ ಮಾಡಲು ಸಾಧ್ಯವಿಲ್ಲ. ನಮ್ಮ ಗುರಿ ಅಥವಾ ಧ್ಯೇಯಗಳ ಸಾಧನೆಗೆ ನಮ್ಮಲ್ಲಿ ಉತ್ತಮ ಮಟ್ಟದ ಆತ್ಮವಿಶ್ವಾಸ ಇರಬೇಕು. ಸಾಧಿಸುತ್ತೇನೆ ಎನ್ನುವ ಛಲ ಇರಬೇಕು. ಈ ಶಕ್ತಿಯ ಹೆಚ್ಚಳಕ್ಕೆ ಬೆಳ್ಳಿ ಪಾತ್ರೆಯಲ್ಲಿ ಅಥವಾ ಬೆಳ್ಳಿ ಲೋಟದಲ್ಲಿ ನೀರನ್ನು ತುಂಬಿ ಹಾಸಿಗೆ ಅಡಿಯಲ್ಲಿ ಇರಿಸಿ. ಕೆಲವು ಬೆಳ್ಳಿ ಆಭರಣಗಳನ್ನು ಧರಿಸುವುದರಿಂದ ಅದ್ಭುತವನ್ನು ಸಾಧಿಸಬಹುದು.

ಧೈರ್ಯಶಾಲಿಯಾಗಲು
ನಾವು ಮಲಗುವ ಹಾಸಿಗೆಯ ಅಡಿಯಲ್ಲಿ ಚಿನ್ನ ಅಥವಾ ಬೆಳ್ಳಿಯ ಆಭರಣವನ್ನು ಇರಿಸಿಕೊಂಡು ಮಲಗಬೇಕು. ಇದರಿಂದ ನಮ್ಮ ಕುಂಡಲಿಯಲ್ಲಿರುವ ಕೆಲವು ದೋಷಗಳು ಹಾಗೂ ಕೆಟ್ಟ ಅದೃಷ್ಟವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಉತ್ತಮ ಅದೃಷ್ಟಕ್ಕಾಗಿ ಕಂಚಿನ ಪಾತ್ರೆಯಲ್ಲಿ ನೀರನ್ನು ತುಂಬಿ ಹಾಸಿಗೆಯ ಅಡಿಯಲ್ಲಿ ಇಡಬಹುದು.

ಉತ್ತಮ ಅದೃಷ್ಟ ಪಡೆಯಲು
ಜೀವನದಲ್ಲಿ ಸದಾ ಅದೃಷ್ಟವನ್ನು ಹೊಂದಲು ಹಾಸಿಗೆ ಅಡಿಯಲ್ಲಿ ಬೆಳ್ಳಿಯಿಂದ ತಯಾರಿಸಿರುವ ಮೀನನ್ನು ಇಟ್ಟು ಮಲಗಬೇಕು. ಇಲ್ಲವೇ ಬೆಳ್ಳಿ ಪಾತ್ರೆಯಲ್ಲಿ ನೀರನ್ನು ತುಂಬಿಸಿ, ಅದರಲ್ಲಿ ಬೆಳ್ಳಿಯ ಮೀನನ್ನು ಇರಿಸಿ ಮಲಗಬೇಕು.

ಕೆಟ್ಟ ಅದೃಷ್ಟವನ್ನು ತಡೆಯಲು
ಅದೃಷ್ಟ ಸುಧಾರಣೆಯಾಗಬೇಕು ಎಂದರೆ ಮೊದಲು ಕೆಟ್ಟ ಕಣ್ಣಿನಿಂದ ನಾವು ದೂರ ಇರಬೇಕು. ನಮ್ಮ ಕೆಟ್ಟ ಅದೃಷ್ಟವನ್ನು ತಡೆಯಲು ಹಾಸಿಗೆಯ ಅಡಿಯಲ್ಲಿ ನೀಲ ಮಣಿಯನ್ನು ಇರಿಸಬೇಕು. 21 ದಿನಗಳ ಕಾಲ, ಕಬ್ಬಿಣದ ಪಾತ್ರೆಯಲ್ಲಿ ನೀರನ್ನು ತುಂಬಿಸಿ ಹಾಸಿಗೆಯ ಅಡಿಯಲ್ಲಿಟ್ಟು ಮಲಗಬೇಕು. ಆಗ ಕೆಟ್ಟ ಶಕ್ತಿ ಹಾಗೂ ಅದೃಷ್ಟಗಳು ನಮ್ಮಿಂದ ದೂರ ಸರಿಯುವವು.



Click it and Unblock the Notifications
