Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆತ್ತಲೆ ದೃಶ್ಯಕ್ಕಾಗಿ 3 ದಿನ ಉಪವಾಸ ಮಾಡಿ ವೋಡ್ಕಾ ಕುಡಿದಿದ್ದ ಪೃಥ್ವಿರಾಜ್..! 31 ಕೆ.ಜಿ ಇಳಿಸಿದ್ದರು.!
ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಪರಿಚಿತ ವ್ಯಕ್ತಿ, ಮಲಯಾಳಂ ಸಿನಿಮಾರಂಗದಲ್ಲಿ ತಮ್ಮದೆ ಅಭಿಮಾನಿಗಳ ಹೊಂದಿರುವ ಅವರು ಇತ್ತೀಚಿಗೆ ಹೊಸ ಸಿನಿಮಾ ಆಡು ಜೀವಿತಂ/ಗೋಟ್ ಲೈಫ್ನಲ್ಲಿ ಭರ್ಜರಿ ನಟನೆ ಮಾಡಿ ಈಗ ದೇಶವ್ಯಾಪಿ ಹೆಸರಾಗಿದ್ದಾರೆ. ಸಿನಿಮಾ ಸಹ ಬಾಕ್ಸ್ ಆಫಿಸ್ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಇದರ ಜೊತೆಗೆ ಪೃಥ್ವಿರಾಜ್ ಅವರ ನಟನೆಯನ್ನು ಜನ ಕೊಂಡಾಡಿದ್ದಾರೆ.
ಆಡು ಜೀವಿತಂ ಒಂದು ರಿಯಲ್ ಲೈಫ್ ಕಹಾನಿಯಾಗಿದೆ. ಕೇರಳದ ವ್ಯಕ್ತಿಯೊಬ್ಬ ದುಬೈಗೆ ತೆರಳಿ ಅಲ್ಲಿ ಅನುಭವಿಸಿದ ಕಷ್ಟಗಳನ್ನು ತೆರೆ ಮೇಲೆ ತರಲಾಗಿದೆ. ಆತ ಕಂಪನಿ ಕೆಲಸಕ್ಕೆಂದು ತೆರಳಿ ಕುರಿ ಕಾಯಲು ಮರಳುಗಾಡಿನಲ್ಲಿ ನೇಮಕಗೊಂಡು ಅನುಭವಿಸಿದ ಕಷ್ಟದ ದಿನಗಳನ್ನು ಕಟ್ಟಿಕೊಡಲಾಗಿದೆ.

ಇದೊಂದು ಸತ್ಯ ಘಟನೆ ಆಧಾರಿತ ಚಿತ್ರವಾಗಿದ್ದರಿಂದ ನಿರ್ದೇಶಕರು ನಟ ಪೃಥ್ವಿರಾಜ್ ಸುಕುಮಾರನ್ ನೈಜವಾಗಿ ಕಾಣಬೇಕು ಎಂದು ವಿವಿಧ ಶೇಡ್ನಲ್ಲಿ ಅವರನ್ನು ತೋರಿಸಿದ್ದಾರೆ. ಒಮ್ಮೆ 80 ರಿಂದ 90 ಕೆ.ಜಿ ತೂಕದ ವ್ಯಕ್ತಿಯಂತೆ ಕಾಣುನ ನಟ ಮಗದೊಮ್ಮೆ ಸಣಕಲು ದೇಹದ 50 ಕೆ.ಜಿ ತೂಕದ ವ್ಯಕ್ತಿಯಂತೆ ಕಾಣುತ್ತಾರೆ.
ಈ ರೀತಿ ತೂಕ ಇಳಿಸಿಕೊಳ್ಳಲು ಪೃಥ್ವಿರಾಜ್ ಹಗಲು ಇರುಳು ಶ್ರಮಿಸಿದ್ದಾರಂತೆ. ಕಠಿಣ ಡಯಟ್ ಪ್ಲಾನ್ ಮೂಲಕ ಈ ರೀತಿ ತೂಕ ಇಳಿಸಿ ತಮ್ಮ ದೇಹದ ಪ್ರದರ್ಶನ ಮಾಡಿದ್ದಾರೆ. ಒಬ್ಬ ಮರಳುಗಾಡಿನಲ್ಲಿ ಆಹಾರ, ನೀರು ಇಲ್ಲದೆ ಹೇಗೆ ಕಾಣುತ್ತಾನೆ ಎನ್ನುವುದನ್ನು ಅಕ್ಷರಶಃ ಅವರು ಕಟ್ಟಿಕೊಟ್ಟಿದ್ದಾರೆ.
ಈ ಕುರಿತಂತೆ ಮಾತನಾಡಿದ ಛಾಯಾಗ್ರಾಹಕ ಸುನಿಲ್ ನಾಯಕ ಪೃಥ್ವಿರಾಜ್ ಅವರ ತೂಕ ಇಳಿಕೆ, ಅವರ ಶೂಟಿಂಗ್ ಸಮಯದ ಕೆಲವು ಅಚ್ಚರಿಯ ವಿಚಾರಗಳನ್ನು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದನ್ನು ಕೇಳಿದ ಜನ ಶಾಕ್ ಆಗುವ ಜೊತೆ ಪೃಥ್ವಿರಾಜ್ ಅವರ ಬದ್ಧತೆ ಕಂಡು ನಿಜಕ್ಕೂ ತಲೆದೂಗಿದ್ದಾರೆ.
ಇನ್ನು ಚಿತ್ರದಲ್ಲಿ ಪೃಥ್ವಿರಾಜ್ ಬೆತ್ತಲೆ ದೃಶ್ಯವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಕೊನೆಯದಾಗಿ ಮರಳುಗಾಡಿನಿಂದ ತಪ್ಪಿಸಿಕೊಂಡು ಬರುವ ಮುನ್ನ ಹಳೆಯ ಬಟ್ಟಗಳನ್ನೆಲ್ಲ ತೆಗೆದು ಬೆತ್ತಲಾಗುತ್ತಾರೆ. ಈ ವೇಳೆ ಅವರ ದೇಹ ನೀಳವಾಗಿ ಅತ್ಯಂತ ಸೊರಗಿದ ರೀತಿ ಕಾಣುತ್ತದೆ. ಈ ದೃಶ್ಯವನ್ನು ಯಾವುದೇ ಸಿಜಿಐ ಬಳಸಿ ಮಾಡಿಲ್ಲವಂತೆ, ಇದು ನೈಜವಾಗಿ ಶೂಟ್ ಮಾಡಲಾದ ದೃಶ್ಯವಾಗಿದ್ದು, ಇದೊಂದೇ ದೃಶ್ಯಕ್ಕಾಗಿ ಪೃಥ್ವಿರಾಜ್ ಪಟ್ಟ ಕಷ್ಟ ಅಷ್ಟಿಷ್ಟಲ್ಲವಂತೆ.
ಎಕ್ಸ್ ನಲ್ಲಿ ವೀಡಿಯೊವನ್ನು ಹಂಚಿಕೊಂಡ ಕ್ರಿಸ್ಟೋಫರ್, ಸುನಿಲ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, "ಬೆತ್ತಲೆ ದೃಶ್ಯಕ್ಕಾಗಿ, ಪೃಥ್ವಿರಾಜ್ ಮೂರು ದಿನಗಳ ಕಾಲ ಉಪವಾಸ ಮಾಡಿದ್ದರು, ಕೊನೆಯ ದಿನ ನೀರು ಕೂಡ ಕುಡಿದಿರಲಿಲ್ಲ; ಈ ದೃಶ್ಯ ಚಿತ್ರೀಕರಣಕ್ಕೆ ಮೊದಲು ಅವರು ದೇಹದಲ್ಲಿರುವ ನೀರು ಒಣಗುವಂತೆ ಮಾಡಲು 30 ಎಂಎಲ್ ವೋಡ್ಕಾವನ್ನು ಕುಡಿದಿದ್ದರಂತೆ. ಬಳಿಕ ಅವರನ್ನು ವೀಲ್ ಚೇರ್ ಮೇಲೆ ತಳ್ಳಿಕೊಂಡು ಬಂದು ಶೂಟಿಂಗ್ ಸ್ಪಾಟ್ ತಲುಪಿದರಂತೆ. ಜೊತೆಗೆ ಅವರಿಗೆ ಮೇಲೆ ಏಳಲು ಸಹ ಆಗುತ್ತಿರಲಿಲ್ಲವಂತೆ. ಮೂರ್ನಾಲ್ಕು ಜನ ಅವರನ್ನು ಎತ್ತಿಕೊಂಡು ಬಂದು ಶೂಟಿಂಗ್ ಸ್ಪಾಟ್ಗೆ ಬಿಡಬೇಕಿತ್ತಂತೆ. ಅಷ್ಟು ತೆಳುವಾಗ ಶಕ್ತಿ ಇಲ್ಲದಂತಾಗಿದ್ದರಂತೆ. ಹೀಗಾಗಿ ಆ ದೃಶ್ಯ ಸಹ ಅಷ್ಟೇ ನೈಜವಾಗಿ ಶೂಟ್ ಮಾಡಲು ಸಾಧ್ಯವಾಗಿತ್ತಂತೆ.
ಇನ್ನು ಪೃಥ್ವಿರಾಜ್ ಅವರ ಸುತ್ತ ವೈದ್ಯರು ಯಾವಾಗಲು ಇರುತ್ತಿದ್ದರಂತೆ. ಅವರ ಸಲಹೆ ಮೇರೆಗೆ ಅವರ ಡಯಟ್ ರೂಪಿಸಲಾಗಿತ್ತಂತೆ. ನಿತ್ಯ ನೀರು ಮಾತ್ರ ಕುಡಿದು ಮಲಗುತ್ತಿದ್ದರಂತೆ. ರಾತ್ರಿ ವೇಳೆ ಮಲಗುವಾಗ ನೀರು ಕುಡಿಯುತ್ತಿದ್ದರಂತೆ. ಹಣ್ಣುಗಳು ಅವರ ಊಟವಾಗಿತ್ತಂತೆ. ಹೀಗಾಗಿ ಅವರು ಒಟ್ಟು 31 ಕೆ.ಜಿ ತೂಕ ಇಳಿಸಿದ್ದರಂತೆ.



Click it and Unblock the Notifications