Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಹಾವಿನ ಬಾಯಿಗೆ ಬಾಯಿಟ್ಟು ಗಾಳಿಯೂದಿ ಹಾವಿನ ಪ್ರಾಣಯುಳಿಸಿದ ಪೊಲೀಸ್: ವೀಡಿಯೋ ವೈರಲ್
ವ್ಯಕ್ತಿ ಪ್ರಜ್ಞೆ ತಪ್ಪಿದಾಗ ಅವರ ಜೀವ ಉಳಿಸಲು ಪ್ರಥಮ ಚಿಕಿತ್ಸೆಯಾಗಿ CPR ನೀಡುವುದು ನೋಡಿದ್ದೇವೆ, ಆದರೆ ಹಾವಿನ ಪ್ರಾಣ ಉಳಿಸಲು ಮಧ್ಯಪ್ರದೇಶದ ಪೊಲೀಸ್ CPR ಚಿಕಿತ್ಸೆ ನೀಡಿರುವ ವೀಡಿಯೋ ವೈರಲ್ ಆಗಿದೆ. ಪ್ರಜ್ಞೆ ತಪ್ಪಿ ಬಿದ್ದ ಹಾವಿನ ಬಾಯಿಗೆ ಬಾಯಿಟ್ಟು ಗಾಳಿ ಊದಿದ್ದಾರೆ.
ಈ ವೀಡಿಯೋದಲ್ಲಿ ಇರುವವರು ಅಥುಲ್ ಶರ್ಮ, ಈ ವೀಡಿಯೋದಲ್ಲಿ ಪೊಲೀಸ್ CPR ಚಿಕಿತ್ಸೆ ನೀಡಿದಾಗ ಅದಕ್ಕೆ ಹಾವು ಸ್ಪಂದಿಸುತ್ತಿರುವುದು ಕಂಡು ಬಂದಿದೆ. ನಂತರ ಹಾಲಿಗೆ ಪ್ರಜ್ಞೆ ಬಂದಿದೆ, ಆ ಹಾವನ್ನು ನೆಲದ ಮೇಲೆ ಬಿಟ್ಟಾಗ ಹರಿದಾಡಿದೆ.

ಹಾವು ವಿಷ ಹಾಕಿರುವ ನೀರಿಗೆ ಬಿದ್ದು ಪ್ರಜ್ಞೆ ಕಳೆದುಕೊಂಡಿತು. ಅದನ್ನು ನೋಡಿದ ಅಥುಲ್ ಶರ್ಮ ಹಾವನ್ನು ಉಳಿಸಲು ಮುಂದಾಗಿದ್ದಾರೆ.
ಅಥುಲ್ ಶರ್ಮ ಈ ರೀತಿಯ ಟೆಕ್ನಿಕ್ ಅನ್ನು ಡಿಸ್ಕವರ್ ಚಾನಲ್ ನೋಡಿ ಕಲಿತುಕೊಂಡಿರುವುದಂತೆ. ಮಾಧ್ಯಮ ಜೊತೆ ಮಾತನಾಡಿರುವ ಅಥುಲ್ ಶರ್ಮ ಹಾವು ಪ್ರಜ್ಞೆ ತಪ್ಪಿತ್ತು, ನಾವು ಹಾವನ್ನು ನೀರಿನಲ್ಲಿ ತೊಳೆದು ನಂತರ ಅದರ ಪ್ರಾಣ ಉಳಿಸಲು ತಮ್ಮ ಬಾಯಿಯನ್ನು ಹಾವು ಬಾಯಿ ಬಳಿ ತಂದು ಗಾಳಿ ಊದಿದ್ದಾರೆ.
ಅವರು ಮಾಡಿರುವ ಕಾರ್ಯ ಒಳ್ಳೆಯದೇ ಆದರೂ ಅದನ್ನು ಯಾರೂ ಪ್ರಯತ್ನಿಸದಿರುವುದು ಒಳ್ಳೆಯದು, ಏಕೆಂದರೆ ಸರಿಯಾಗಿ ಜ್ಞಾನವಿಲ್ಲದೆ ಮಾಡಲು ಹೋಗಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಅಲ್ಲದೆ ಈ ರೀತಿ ಮಾಡುವುದು ಹಾವಿಗೂ ಒಳ್ಳೆಯದಲ್ಲ ಎಂದು ಪ್ರಾಣಿ ತಜ್ಞರು ಹೇಳಿದ್ದಾರೆ.
1. ಹಾವಿಗೆ ಸಿಂಗಲ್ ಓಪಿನಿಂಗ್ ಇರುತ್ತೆ, ಇದು ಯೂರಿನರಿ ಟ್ರ್ಯಾಕ್ಟ್, ಸಂತಾನೋತ್ಪತ್ತಿ ಟ್ರ್ಯಾಕ್ಟ್, ಜೀರ್ಣಕ್ರಿಯೆ ಟ್ರ್ಯಾಕ್ಟ್ ಜೊತೆ ಸಂಬಂಧ ಹೊಂದಿರುತ್ತದೆ, ಗಾಳಿಯನ್ನು ಬಲವಂತದಿಂದ ಊದಿದಾಗ ಅದರ ಒಳ ಅಂಗಾಂಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
2. ಹಾವಿಗೆ CPR ನೀಡುವಾಗ ಆ ಹಾವಿಗೆ ಪ್ರಜ್ಞೆ ಬಂದು ಅಕಾಸ್ಮಾತ್ ಕಚ್ಚಿದರೆ ಪ್ರಾಣಕ್ಕೆ ಅಪಾಯ.
ಆದ್ದರಿಂದ ಈ ಬಗ್ಗೆಯ ಚಿಕಿತ್ಸೆ ಒಳ್ಳೆಯದಲ್ಲ.
pic.twitter.com/BYbmgmDR9m
— SAFFRON (@saffronbharat25) October 26, 2023
A video from Narmadapuram has gone viral where a police constable is giving CPR to a snake that had fallen unconscious after being drenched in pesticide laced toxic water
Opinions 🤔🤔



Click it and Unblock the Notifications