Latest Updates
-
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ!
ಪಿತೃಪಕ್ಷ: ಅಕ್ಟೋಬರ್ 2ಕ್ಕೆ ಭರಣಿ ಶ್ರಾದ್ಧ, ಈ ಶ್ರಾದ್ಧದ ಮಹತ್ವವೇನು?
ಪಿತೃ ಪಕ್ಷದಲ್ಲಿ ಭರಣಿ ಶ್ರಾದ್ಧಕ್ಕೆ ತುಂಬಾನೇ ಮಹತ್ವವಿದೆ. ಪಿತೃಪಕ್ಷ ಎಂಬುವುದು 16 ದಿನಗಳ ಆಚರಣೆ. ಈ 16 ದಿನವೂ ಪಿತೃತರ್ಪಣಕ್ಕೆ ಸೂಕ್ತ ದಿನಗಳಾಗಿವೆ. ಅದರಲ್ಲಿ 3 ದಿನಗಳಂತೂ ತುಂಬಾನೇ ವಿಶೇಷವಾಗಿರುತ್ತದೆ. ಭರಣಿ ಶ್ರಾದ್ಧ, ನವಮಿ ಶ್ರಾದ್ಧ, ಸರ್ವ ಪಿತೃ ಅಮವಾಸ್ಯೆ. ಇಂದು ಭರಣಿ ಶ್ರಾದ್ದ, ಈ ದಿನದ ವಿಶೇಷವೇನು ಎಂದು ನೋಡೋಣ:

ದಿನಾಂಕ ಮತ್ತು ತಿಥಿ
ಭರಣಿ ಶ್ರಾದ್ಧ ದಿನಾಂಕ: ಅಕ್ಟೋಬರ್ 2
ಈ ವರ್ಷ ಅಶ್ವಿನಿ ಕೃಷ್ಣ ಪಕ್ಷ ಚತುರ್ಥಿಯಂದು ಭರಣಿ ಶ್ರಾದ್ಧ ಬಂದಿದೆ. ಭರಣಿ ಶ್ರಾದ್ಧವನ್ನು ಛೌತ್ ಭರಣಿ ಎಂದು ಕೂಡ ಕರೆಯಲಾಗುವುದು.
ಭರಣಿ ಶ್ರಾದ್ಧ ಏಕೆ ಮಾಡಲಾಗುವುದು?
ಪಿತೃ ಪಕ್ಷದಲ್ಲಿ ಬರುವ ಭರಣಿ ನಕ್ಷತ್ರದಂದು ಭರಣಿ ಶ್ರಾದ್ಧವನ್ನು ಮಾಡಲಾಗುವುದು. ವ್ಯಕ್ತಿ ಸತ್ತ ಒಂದು ವರ್ಷದೊಳಗೆ ಈ ಶ್ರಾದ್ಧ ಮಾಡಲಾಗುವುದು. ತೀರಿ ಹೋದ ಮೊದಲ ವರ್ಷದ ಮಹಾಲಯ ಅಮಾವಾಸ್ಯೆಯಲ್ಲಿ ಶ್ರಾದ್ಧ ಮಾಡುವುದಿಲ್ಲ, ಎರಡನೇ ವರ್ಷದಿಂದ ಮಹಾಲಯ ಅಮವಾಸ್ಯೆಯಂದು ಶ್ರಾದ್ಧ ಮಾಡಲಾಗುವುದು. ಆದ್ದರಿಂದ ಭರಣಿ ನಕ್ಷತ್ರದಂದು ಶ್ರಾದ್ಧ ಕಾರ್ಯವನ್ನು ಮಾಡಲಾಗುವುದು.
ಭರಣಿ ನಕ್ಷತ್ರದ ಮಹತ್ವ
ಭರಣಿ ನಕ್ಷತ್ರದ ಅಧಿಪತಿ ಯಮ ಎಂದು ಹೇಳಲಾಗುವುದು. ಆದ್ದರಿಂದ ಈ ದಿನ ಶ್ರಾದ್ದ ಕಾರ್ಯವನ್ನು ಮಾಡಲಾಗುವುದು. ಈ ದಿನ ಶ್ರಾದ್ಧ ಕಾರ್ಯ ಮಾಡಿದರೆ ತೀರಿ ಹೋದವರಿಗೆ ಮೋಕ್ಷ ಸಿಗುವುದು ಎಂದು ಹೇಳಲಾಗುವುದು.
ಪೂರ್ವಜರ ಆಶೀರ್ವಾದ ಸಿಗುವುದು
ಭರಣಿ ನಕ್ಷತ್ರದಂದು ಶ್ರಾದ್ಧ ಮಾಡುವುದರಿಂದ ಅವರಿಗೆ ಮೋಕ್ಷ ಸಿಗುವುದು, ಇದರಿಂದ ಪೂರ್ವಜರ ಆಶೀರ್ವಾದ ಸಿಗುವುದು. ಇದರಿಂದ ಜೀವನದಲ್ಲಿ ಒಳಿತಾಗುವುದು. ನಿಮ್ಮ ಜೀವನದಲ್ಲಿರುವ ಅಡೆತಡೆಗಳು ದೂರಾಗುವುದು. ಇದರಿಂದ ನಿಮ್ಮ ಹಾಗೂ ನಿಮ್ಮ ಮುಂದಿನ ಪೀಳಿಗೆಗೆ ಒಳಿತಾಗುವುದು.
ಸಾಲದಿಂದ ಮುಕ್ತರಾಗುವುದು
ಪಿತೃತರ್ಪಣ ಮಾಡುವುದರಿಂದ ಆರ್ಥಿಕ ಸಂಕಷ್ಟ ದೂರಾಗುವುದು. ಪಿತೃಗಳ ಆಶೀರ್ವಾದವಿದ್ದರೆ ಎಲ್ಲಾ ಆರ್ಥಿಕ ತೊಂದರೆಗಳು ದೂರಾಗುವುದು, ಅವರ ಆಶೀರ್ವಾದದಿಂದ ಎಲ್ಲಾ ಒಳಿತಾಗುವುದು ಎಂಬ ನಂಬಿಕೆಯಲ್ಲಿ ಪಿತೃ ತರ್ಪಣ ಮಾಡಲಾಗುವುದು.



Click it and Unblock the Notifications