Latest Updates
-
ರಕ್ತದಾನದ ನಂತರ ಜಿಮ್ಗೆ ಹೋಗುವ ಮುನ್ನ ಎಚ್ಚರ! ಈ ತಪ್ಪುಗಳನ್ನು ಮಾಡಬೇಡಿ -
ವೀಕೆಂಡ್ ಪ್ಲಾನ್ ಮಾಡಿದ್ದೀರಾ? ಹವಾಮಾನ ವೈಪರೀತ್ಯದ ಎಚ್ಚರಿಕೆ: ನಿಮ್ಮ ಸುರಕ್ಷತೆಗಾಗಿ ಈ ಬದಲಾವಣೆ ಮಾಡಿಕೊಳ್ಳಿ! -
ಮುಂಬೈ ಬಿಸಿಲು ಮತ್ತು ಆರ್ದ್ರತೆ: 15 ನಿಮಿಷದಲ್ಲಿ ನಿಮ್ಮ ಮನೆಯನ್ನು ತಂಪಾಗಿರಿಸುವ ಸರಳ ಉಪಾಯಗಳು! -
ನಿಮ್ಮ ಆಹಾರದ ಪ್ಯಾಕೆಟ್ನಲ್ಲಿ ಸ್ಟೇಪ್ಲರ್ ಪಿನ್ ಇದೆಯೇ? ಎಚ್ಚರ, FSSAI ಕಠಿಣ ಆದೇಶ! -
ಧರ್ಮಶಾಲಾದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಮಳೆ ಆತಂಕದ ನಡುವೆ ಗೆಲ್ಲೋರು ಯಾರು? -
ದೆಹಲಿ-ಎನ್ಸಿಆರ್ ಬಿರುಗಾಳಿ: ಫಿಟ್ನೆಸ್ ಪ್ರಿಯರೇ ಎಚ್ಚರ, ಇಂದಿನ ವರ್ಕೌಟ್ ಮನೆಯಲ್ಲೇ ಮಾಡುವುದು ಏಕೆ ಸುರಕ್ಷಿತ? -
ದೆಹಲಿಯಲ್ಲಿ ಇಂದು ಮಳೆ ಎಚ್ಚರಿಕೆ: ನಿಮ್ಮ ಡಿನ್ನರ್ ಪ್ಲಾನ್ ಸುರಕ್ಷಿತವಾಗಿರಲು ಈ ಟಿಪ್ಸ್ ಫಾಲೋ ಮಾಡಿ -
ಬೆಂಗಳೂರಿನಲ್ಲಿ ಭರ್ಜರಿ ಮಳೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ಈ 5 ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಪತ್ರಿಕೆಯಲ್ಲಿ ಆಹಾರ ಸುತ್ತಿ ತಿನ್ನುತ್ತಿದ್ದೀರಾ? ಇದು ನಿಮ್ಮ ಆರೋಗ್ಯಕ್ಕೆ 'ನಿಧಾನಗತಿಯ ವಿಷ' ಎಚ್ಚರ! -
ಬೆಂಗಳೂರಿನಲ್ಲಿ ಮತ್ತೆ ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ಸೇರಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್!
ಸೆಪ್ಟೆಂಬರ್ 29ರಿಂದ ಅಕ್ಟೋಬರ್ 14ರವರೆಗೆ ಪಿತೃಪಕ್ಷ: ಶ್ರಾದ್ಧಕಾರ್ಯಕ್ಕೆ ಈ 3 ದಿನಗಳಂತೂ ತುಂಬಾನೇ ವಿಶೇಷ
ಹಿಂದೂ ಧರ್ಮದಲ್ಲಿ ಪಿತೃ ತರ್ಪಣಕ್ಕೆ ತುಂಬಾನೇ ಮಹತ್ವವಿದೆ. ಪಿತೃ ದೋಷದಿಂದ ಪಾರಾಗಲು ಪಿತೃ ತರ್ಪಣ ಅತ್ಯುತ್ತಮವಾದ ಪರಿಹಾರವಾಗಿದೆ. ಪಿತೃದೋಷವಿದ್ದರೆ ಅನೇಕ ಸಮಸ್ಯೆಗಳು ಎದುರಾಗುವುದು. ವೃತ್ತಿ ಜೀವನದಲ್ಲಿ ಬೆಳವಣಿಗೆಗೆ ತುಂಬಾನೇ ಕಷ್ಟವಾಗುವುದು. ಸಂತಾನಹೀನತೆ, ಆರೋಗ್ಯ ಸಮಸ್ಯೆ ಹೀಗೆ ಹಲವು ಬಗೆಯ ಸಮಸ್ಯೆಗಳು ಕಂಡು ಬರುವುದು.
ಶ್ರಾದ್ಧ ಮಾಡಲು ಪಿತೃ ಪಕ್ಷ ಎಂದು ಪಿತೃತರ್ಪಣಕ್ಕಾಗಿ ಕೆಲವು ದಿನಗಳಿವೆ. ಈ ದಿನಗಳಲ್ಲಿ ಪಿತೃ ತರ್ಪಣ ಮಾಡಿದರೆ ಪಿತೃ ದೋಷದಿಂದ ಮುಕ್ತರಾಗಬಹುದು ಎಂದು ಹೇಳಲಾಗುವುದು. ಈ ವರ್ಷ ಪಿತೃಪಕ್ಷ ಸೆಪ್ಟೆಂಬರ್ 29ರಿಂದ ಶುರು, ಅದರಲ್ಲೂ ಪಿತೃ ತರ್ಪಣಕ್ಕೆ ಈ ಮೂರು ದಿನ ಅಂತೂ ತುಂಬಾನೇ ಒಳ್ಳೆಯದು ನೋಡಿ:

ಪಿತೃಪಕ್ಷ ಎಲ್ಲಿಯವರೆಗೆ ಇದೆ
ಪ್ರತಿ ವರ್ಷ ಪಿತೃ ಪಕ್ಷವು ಭಾದ್ರಪದ ಮಾಸದ ಹುಣ್ಣಿಮೆಯಿಂದ ಪ್ರಾರಂಭವಾಗಿ ಅಶ್ವಿನ್ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಕೊನೆಗೊಳ್ಳುತ್ತದೆ. ಶ್ರಾದ್ಧ ಅಥವಾ ಪಿತೃಪಕ್ಷ 16 ದಿನಗಳು ಇರಲಿದೆ. ಈ ದಿನಗಳಲ್ಲಿ ತಮ್ಮ ಪೂರ್ವಜರನ್ನು ನೆನಪಿಸಿಕೊಂಡರೆ ತುಂಬಾನೇ ಪುಣ್ಯ ಸಿಗುವುದು ಎಂದು ಹೇಳಲಾಗುವುದು. ಈ ಸಮಯದಲ್ಲಿ ಪಿತೃತರ್ಪಣ ನೀಡುವುದರಿಂದ ಮೃತರ ಆತ್ಮಕ್ಕೆ ಶಾಂತಿ, ಮೋಕ್ಷ ಸಿಗುವುದು.
ಧಾರ್ಮಿಕ ನಂಬಿಕೆಯ ಪ್ರಕಾರ ಈ ಆಚರಣೆಯನ್ನು ಕುಟುಂಬದ ಹಿರಿಯ ಮಗ ನಿರ್ವಹಿಸುತ್ತಾನೆ. 2023 ರಲ್ಲಿ, ಪಿತೃ ಪಕ್ಷವು ಸೆಪ್ಟೆಂಬರ್ 29 ರಿಂದ ಪ್ರಾರಂಭವಾಗಿ ಅಕ್ಟೋಬರ್ 14 ರಂದು ಕೊನೆಗೊಳ್ಳಲಿದೆ. ಶ್ರಾದ್ಧ ಪಕ್ಷದ ಎಲ್ಲಾ ದಿನಾಂಕಗಳು ವಿಶೇಷವಾಗಿದ್ದರೂ, ಶ್ರಾದ್ಧ ಪಕ್ಷದಲ್ಲಿ 3 ದಿನಗಳು ಅಂತೂ ತುಂಬಾನೇ ವಿಶೇಷವಾಗಿದೆ. ಆ ದಿನಾಂಕಗಳೆಂದರೆ
ಭರಣಿ ಶ್ರಾದ್ಧ ದಿನಾಂಕ
ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ಬಾರಿ ಭರಣಿ ಶ್ರಾದ್ಧವನ್ನು ಚತುರ್ಥಿ ಶ್ರಾದ್ಧದೊಂದಿಗೆ 2 ಅಕ್ಟೋಬರ್ 2023 ರಂದು ನಡೆಸಲಾಗುವುದು. ಈ ದಿನ ಭರಣಿ ನಕ್ಷತ್ರವು ಸಂಜೆ 06:24 ರವರೆಗೆ ಇರುತ್ತದೆ. ಭರಣಿ ಶ್ರಾದ್ಧವನ್ನು ಮರಣದ ಒಂದು ವರ್ಷದ ನಂತರ ಮಾಡಬೇಕು ಎಂದು ಹೇಳಲಾಗುವುದು. ಮದುವೆಗೆ ಮುಂಚೆ ಮರಣ ಹೊಂದಿದವರ ಶ್ರಾದ್ಧವನ್ನು ಪಂಚಮಿ ತಿಥಿಯಂದು ಮಾಡಲಾಗುತ್ತದೆ, ಭರಣಿ ಶ್ರಾದ್ಧವು ಪಂಚಮಿ ತಿಥಿಯಂದು ಸಂಭವಿಸಿದರೆ ಅದು ತುಂಬಾ ವಿಶೇಷವಾಗಿದೆ.
ನವಮಿ ಶ್ರಾದ್ಧ ತಿಥಿ
ಹಿಂದೂ ಕ್ಯಾಲೆಂಡರ್ ಪ್ರಕಾರ ಈ ಬಾರಿ ನವಮಿ ಶ್ರಾದ್ಧವನ್ನು ಅಕ್ಟೋಬರ್ 7 ರಂದು ಮಾಡಲಾಗುವುದು. ನವಮಿ ಶ್ರಾದ್ಧವನ್ನು ಮಾತೃ ಶ್ರಾದ್ಧ ಅಥವಾ ಮಾತೃ ನವಮಿ ಎಂದೂ ಕರೆಯಲಾಗುವುದು. ಮಾತೃ ನವಮಿಯಂದು ಮನೆಯ ಹಿರಿಯರಿಗೆ ಪಿತೃ ತರ್ಪಣ ನೀಡಲಾಗುವುದು. ಈ ದಿನ ತಾಯಿ, ಅಜ್ಜಿ, ಅಜ್ಜಿಯರ ಶ್ರಾದ್ಧ ನೀಡಲಾಗುವುದು. ಮಾತೃ ನವಮಿಯ ದಿನದಂದು ತಮ್ಮ ತಂದೆ ತಾಯಿಗಳಿಗೆ ತರ್ಪಣ, ಶ್ರಾದ್ಧ ಅಥವಾ ಪಿಂಡ ದಾನ ನೀಡಿ ಸಂತುಷ್ಟರಾಗುತ್ತಾರೆ.
ಸರ್ವ ಪಿತೃ ಅಮವಾಸ್ಯೆ
ಅಕ್ಟೋಬರ್ 14 ರಂದು ಸರ್ವ ಪಿತೃ ಅಮಾವಾಸ್ಯೆ ಬರುತ್ತದೆ. ಇದೇ ದಿನ ಸೂರ್ಯಗ್ರಹಣವೂ ಸಂಭವಿಸಲಿದೆ. ಈ ದಿನಾಂಕದಂದು, ಮರಣದ ದಿನಾಂಕ ತಿಳಿದಿಲ್ಲದ ಪೂರ್ವಜರಿಗೆ ಶ್ರಾದ್ಧವನ್ನು ನಡೆಸಲಾಗುತ್ತದೆ, ಅಂದರೆ, ಸರ್ವ ಪಿತೃ ಅಮಾವಾಸ್ಯೆಯ ದಿನದಂದು, ತಿಳಿದಿರುವ ಮತ್ತು ತಿಳಿದಿಲ್ಲದ ಎಲ್ಲಾ ಪೂರ್ವಜರಿಗೆ ಶ್ರಾದ್ಧ, ತರ್ಪಣ ಮತ್ತು ಪಿಂಡದಾನವನ್ನು ಮಾಡಲಾಗುವುದು.
2023ರ ಪಿತೃಪಕ್ಷದ ದಿನಾಂಕಗಳು
ಪೂರ್ಣಿಮಾ ಶ್ರಾದ್ಧ- 29 ಸೆಪ್ಟೆಂಬರ್ 2023, ಶುಕ್ರವಾರ
ದ್ವಿತೀಯ ಶ್ರಾದ್ಧ- 30 ಸೆಪ್ಟೆಂಬರ್ 2023, ಶನಿವಾರ
ತೃತೀಯಾ ಶ್ರಾದ್ಧ- 01 ಅಕ್ಟೋಬರ್ 2023, ಭಾನುವಾರ
ಚತುರ್ಥಿ ಶ್ರಾದ್ಧ- 02 ಅಕ್ಟೋಬರ್ 2023, ಸೋಮವಾರ
ಪಂಚಮಿ ಶ್ರಾದ್ಧ- 03 ಅಕ್ಟೋಬರ್ 2023, ಮಂಗಳವಾರ
ಷಷ್ಠಿ ಶ್ರಾದ್ಧ- 04 ಅಕ್ಟೋಬರ್ 2023, ಬುಧವಾರ
ಸಪ್ತಮಿ ಶ್ರಾದ್ಧ- 05 ಅಕ್ಟೋಬರ್ 2023, ಗುರುವಾರ
ಅಷ್ಟಮಿ ಶ್ರಾದ್ಧ- 06 ಅಕ್ಟೋಬರ್ 2023, ಶುಕ್ರವಾರ
ನವಮಿ ಶ್ರಾದ್ಧ- 07 ಅಕ್ಟೋಬರ್ 2023, ಶನಿವಾರ
ದಶಮಿ ಶ್ರಾದ್ಧ- 08 ಅಕ್ಟೋಬರ್ 2023, ಭಾನುವಾರ
ಏಕಾದಶಿ ಶ್ರಾದ್ಧ- 09 ಅಕ್ಟೋಬರ್ 2023, ಸೋಮವಾರ
ದ್ವಾದಶಿ ಶ್ರಾದ್ಧ- 11 ಅಕ್ಟೋಬರ್ 2023, ಬುಧವಾರ
ತ್ರಯೋದಶಿ ಶ್ರಾದ್ಧ- 12 ಅಕ್ಟೋಬರ್ 2023, ಗುರುವಾರ
ಚತುರ್ದಶಿ ಶ್ರಾದ್ಧ- 13 ಅಕ್ಟೋಬರ್ 2023, ಶುಕ್ರವಾರ
ಸರ್ವ ಪಿತೃ ಅಮವಾಸ್ಯೆ- 14 ಅಕ್ಟೋಬರ್ 2023, ಶನಿವಾರ



Click it and Unblock the Notifications