Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೈಡನ್ ದಂಪತಿಗೆ ದಶದಾನ ಮಾಡಿದ ಮೋದಿ: ವೈದಿಕ ಶಾಸ್ತ್ರದಲ್ಲಿ ದಶದಾನದ ಮಹತ್ವವೇನು ?
ಪ್ರಧಾನಿ ಮೋದಿ ಅಮೆರಿಕಾ ಪ್ರವಾಸದಲ್ಲಿದ್ದು ಅಮೆರಿಕ ಅಧ್ಯಕ್ಷ ಬೈಡನ್ ಹಾಗೂ ಜಿಲ್ ಬೈಡೆನ್ಗೆ ದಶದಾನ ಮಾಡಿದ್ದಾರೆ. ಈ ಮೂಲಕ ಭಾರತದ ಸಂಪ್ರದಾಯವನ್ನು ಅಮೆರಿಕದವರಿಗೆ ಪರಿಚಯಿಸಿದ್ದಾರೆ. ವೈದಿಕ ಶಾಸ್ತ್ರದಲ್ಲಿ ದಶದಾನಕ್ಕೆ ತುಂಬಾನೇ ಮಹತ್ವವಿದೆ. ದಶದಾನ ಎಂದರೇನು? ದಶದಾನದ ಮಹತ್ವವೇನು ಎಂದು ನೋಡೋಣ ಬನ್ನಿ:
ದಶದಾನದಲ್ಲಿ ಯಾವೆಲ್ಲಾ ವಸ್ತುಗಳನ್ನು ದಾನ ಮಾಡಲಾಗುವುದು?
- ಆಸ್ತಿ ಅಥವಾ ಶ್ರೀಗಂಧ
- ಎಳ್ಳು
- ಚಿನ್ನ
- ತುಪ್ಪ
- ಧಾನ್ಯ
- ಬೆಲ್ಲ
- ಬೆಳ್ಳಿ
- ಉಪ್ಪು
- ಗೋದಾನ

ದಶದಾನದ ಮಹತ್ವ
ವೈದಿಕ ಶಾಸ್ತ್ರದಲ್ಲಿ ದಶದಾನಕ್ಕೆ ತುಂಬಾನೇ ಮಹತ್ವವಿದೆ. ಪಿತೃದೋಷ ನಿವಾರಣೆ ದಶದಾನ ಮಾಡಲಾಗುವುದು. ದಶದಾನ ಮಾಡುವುದರಿಂದ ಪಿತೃದೋಷದಿಂದ ಮುಕ್ತಿ ಸಿಗುವುದು ಅಷ್ಟು ಮಾತ್ರವಲ್ಲ ಮರಣದ ನಂತರ ಮೋಕ್ಷ ಪ್ರಾಪ್ತಿಯಾಗಲಿದೆ. ವ್ಯಕ್ತಿಯ ಮರಣದ ನಂತರ ದಶದಾನನ್ನು ಮಾಡಲಾಗುವುದು. ಯಾವುದೇ ಪಿತೃದೋಷ ಹೊಂದಿದ್ದರೆ ಆ ಎಲ್ಲಾ ಪಾಪಗಳಿಂದ ಮುಕ್ತಿ ಪಡೆದು ವ್ಯಕ್ತಿಗೆ ಮೋಕ್ಷ ಸಿಗುವುದು ಎಂಬ ನಂಬಿಕೆಯಾಗಿದೆ. ಹೀಗಾಗಿ ಪಿತೃದೊಷ ನಿವಾರಣೆಗೆ ಹಾಗೂ ಆಯುಸ್ಸು ತೀರಿದವರಿಗೆ ಸ್ವರ್ಗ ಪ್ರಾಪ್ತಿಯಾಗಲು ಈ ದಾನವನ್ನು ಮಾಡಲಾಗುವುದು.
ದಶದಾನದಲ್ಲಿ ನೀಡಲಾಗುವ ವಸ್ತುಗಳ ಮಹತ್ವವೇನು?
1.ಭೂಮಿ ಅಥವಾ ಶ್ರೀಗಂಧ: ವೈದಿಕ ಶಾಸ್ತ್ರವು ಇದನ್ನು ನೀಡುವುದರಿಂದ ವ್ಯಕ್ತಿ ಬ್ರಹ್ಮಹತ್ಯೆ ಪಾಪದಿಂದಲೂ ಮುಕ್ತನಾಗುತ್ತಾನೆ. ಯಾರಿಗೆ ಭೂಮಿ ನೀಡಲು ಶಕ್ತಿ ಇರುವುದಿಲ್ಲವೋ ಅವರು ಶ್ರೀಗಂಧದ ತುಂಡನ್ನು ದಾನವನ್ನಾಗಿ ನೀಡಬಹುದು.
2. ಕಪ್ಪು ಎಳ್ಳು: ಕಪ್ಪು ಎಳ್ಳು ಕೆಟ್ಟ ಆಲೋಚನೆ, ಮಾತು, ಕೆಟ್ಟ ಕ್ರಿಯೆಗಳ ಪಾಪದಿಂದ ಮುಕ್ತವಾಗಿಸುತ್ತದೆ.
3. ತುಪ್ಪ: ತುಪ್ಪ ದಾನ ಮಾಡುವುದರಿಂದ ದೇವತೆಗಳ ಆಶೀರ್ವಾದ ಸಿಗಲಿದೆ
4. ಚಿನ್ನ: ಚಿನ್ನವನ್ನು ದಾನ ಮಾಡಿದರೆ ಎಲ್ಲಾ ದೇವರು ತೃಪ್ತರಾಗುತ್ತಾರೆ. ಯಮ ಲೋಕದಲ್ಲಿ ಸ್ವರ್ಗ, ನರಕ ಎಂಬ ಪರಿಕಲ್ಪನೆ ಇದೆ. ಚಿನ್ನವನ್ನು ದಾನ ಮಾಡುವುದರಿಂದ ವ್ಯಕ್ತಿ ಸ್ವರ್ಗಕ್ಕೆ ಹೋಗುತ್ತಾನೆ ಎಂಬ ನಂಬಿಕೆ ಇದೆ.
5. ವಸ್ತ್ರ ದಾನ: ವಸ್ತ್ರ ದಾನ ಮಾಡುವುದರಿಂದ ಕೂಡ ವ್ಯಕ್ತಿ ಪಾಪ ಕರ್ಮಗಳನ್ನು ಕಳೆದು ಮೋಕ್ಷವನ್ನು ಪಡೆಯುತ್ತಾರೆ.
6. ಧಾನ್ಯ: ಧಾನ್ಯಗಳನ್ನು ಧಾನ ಮಾಡುವುದರಿಂದ ಮರಣದ ನಂತರ ವ್ಯಕ್ತಿ ಸ್ವರ್ಗಕ್ಕೆ ಹೋಗುವಾಗ ದ್ವಾರಪಾಲಕರ ತೊಂದರೆ ಇರಲ್ಲ ಎಂಬ ನಂಬಿಕೆ ಇದೆ.
7. ಬೆಲ್ಲ: ಬೆಲ್ಲವನ್ನು ದಾನ ಮಾಡುವುದರಿಂದ ಆತ್ಮಕ್ಕೆ ಮೋಕ್ಷ ಸಿಗುವುದು
8. ಬೆಳ್ಳಿ: ಭೂಮಿಯಲ್ಲಿ ಮಾಡಲಾದ ಎಲ್ಲಾ ಬಗೆಯ ಪಾಪಗಳಿಂದ ಮುಕ್ತರಾಗುತ್ತಾರೆ.
9. ಉಪ್ಪು: ಉಪ್ಪನ್ನು ದಾನ ಮಾಡುವುದರಿಂದ ಯಮನ ಭಯ ನಿವಾರಣೆಯಾಗುತ್ತದೆ.
10. ಗೋದಾನ: ಗೋದಾನ ಮಾಡುವುದರಿಂದ ಎಲ್ಲಾ ಬಗೆಯ ನರಕಗಳಿಂದ ಮುಕ್ತರಾಗುತ್ತಾರೆ.



Click it and Unblock the Notifications