Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
700 ವರ್ಷಗಳ ಬಳಿಕ ಮಹಾಷ್ಟಮಿ ಶುಭ ಯೋಗ: ಈ ರಾಶಿಗಳಿಗೆ ಅದೃಷ್ಟ ಕೈ ಹಿಡಿಯಲಿದೆ
ಚೈತ್ರ ನವರಾತ್ರಿಯಲ್ಲಿ ದೇವಿ ದುರ್ಗೆಯ ಆರಾಧನೆ ಮಾಡಲಾಗುವುದು. ಶಾರದೀಯ ನವರಾತ್ರಿಯಂತೆಯೇ ಈ ನವರಾತ್ರಿಯಲ್ಲಿ ದೇವಿಯ 9 ಸ್ವರೂಪಗಳನ್ನು ಆರಾಧಿಸಲಾಗುವುದು. ಈ ಬಾರಿ ಚೈತ್ರ ನವರಾತ್ರಿಯ ಅಷ್ಟಮಿ ದಿನಾಂಕವು ತುಂಬಾ ವಿಶೇಷವಾಗಿದೆ, ಏಕೆಂದರೆ ಮಹಾ ಅಷ್ಟಮಿಯಂದು ಗ್ರಹಗಳ ಅದ್ಭುತ ಸಂಯೋಜನೆ ರೂಪಗೊಳ್ಳಲಿದೆ.
ಈ ರೀತಿ ಗ್ರಹಗಳ ಸಂಯೋಜನೆ ಬರೋಬರಿ 700 ವರ್ಷಗಳ ನಂತರ ಸಂಭವಿಸಲಿದೆ. ಗುರು ಮೀನ ರಾಶಿಯಲ್ಲಿದೆ, ಬುಧವು ಮೇಷ ರಾಶಿಯಲ್ಲಿ ಸಾಗಲಿದ್ದಾನೆ. ಮತ್ತೊಂದೆಡೆ, ಸೂರ್ಯನು ಮೀನರಾಶಿಯಲ್ಲಿದ್ದಾನೆ ಮತ್ತು ಶನಿ ತನ್ನದೇ ಆದ ರಾಶಿಯಾದ ಕುಂಭ ರಾಶಿಯಲ್ಲಿದೆ. ಅದಲ್ಲದೆ ಶುಕ್ರ ಮತ್ತು ರಾಹು ಮೇಷ ರಾಶಿಯಲ್ಲಿದೆ.ಇದರಿಂದಾಗಿ ಮಹಾ ಸಂಯೋಗವು ಸೃಷ್ಟಿಯಾಗುತ್ತಿದೆ.

ಈ ಸಮಯದಲ್ಲಿ, ಮಾಲವ್ಯ, ಕೇದಾರ, ಹಂಸ ಮತ್ತು ಮಹಾಭಾಗ್ಯ ಯೋಗ ರಚನೆಯಾಗಲಿದೆ. ಜ್ಯೋತಿಷ್ಯ ಶಾಸ್ತ್ರವು ಈ ಯೋಗ ಕೆಲ ರಾಶಿಗಳಿಗೆ ಅದೃಷ್ಟದ ಯೋಗ ತಂದಿದೆ ಎಂದು ಹೇಳುತ್ತದೆ. ಆ ಅದೃಷ್ಟದ ರಾಶಿಗಳಾವುವು ಎಂದು ನೋಡೋಣ ಬನ್ನಿ:
ಮಿಥುನ ರಾಶಿ
ಅದೃಷ್ಟ ಮಿಥುನ ರಾಶಿಯವರ ಕೈ ಹಿಡಿಯಲಿದೆ. ಈ ಅವಧಿಯಲ್ಲಿ ನಿಮ್ಮ ಪ್ರತಿಯೊಂದು ಕೆಲಸವು ಯಶಸ್ಸು ಆಗಲಿದೆ. ಅವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ. ವಿವಾಹಿತರ ವೈವಾಹಿಕ ಜೀವನ ತುಂಬಾ ಚೆನ್ನಾಗಿರಲಿದೆ. ಏನಾದರೂ ಇಬ್ಬರ ನಡುವೆ ಭಿನ್ನಾಭಿಪ್ರಾಯ ಇದ್ದರೆ ಎಲ್ಲವೂ ಸರಿಯಾಗಲಿದೆ. ಈ ಸಮಯ ವ್ಯಾಪಾರಸ್ಥರಿಗೆ ಒಳ್ಳೆಯ ಲಾಭ ತಂದು ಕೊಡಲಿದೆ.
ಕರ್ಕ ರಾಶಿ
ಮಹಾ ಅಷ್ಟಮಿಯ ದಿನದಂದು ಹಂಸ ಮತ್ತು ಮಾಲವ್ಯ ರಾಜಯೋಗವು ಕರ್ಕ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಸ್ಥಾನ ಪ್ರತಿಷ್ಠೆ ಸಾಧಿಸಬಹುದು. ನಿರುದ್ಯೋಗಿಗಳು ಉತ್ತಮ ಉದ್ಯೋಗವನ್ನು ಪಡೆಯಬಹುದು. ಕೆಲಸ ಬದಲಾಯಿಸಲು ಯೋಚಿಸುತ್ತಿದ್ದರೆ ಒಳ್ಳೆಯ ಆಫರ್ಗಳು ಸಿಗಲಿವೆ. ವ್ಯಾಪಾರಸ್ಥರು ಲಾಭ ಗಳಿಸುವುರಿ, ಆರ್ಥಿಕವಾಗಿ ತುಂಬಾ ಸುಧಾರಣೆಯಾಗಲಿದೆ.
ಕನ್ಯಾರಾಶಿ
ಕನ್ಯಾ ರಾಶಿಯವರಿಗೆ ಈ ಸಮಯ ಶುಭಕರವಾಗಿರುತ್ತದೆ. ಈ ಸಮಯವು ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರವಾಗಿದೆ. ಈ ಸಮಯವು ಉದ್ಯಮಿಗಳಿಗೂ ಉತ್ತಮವಾಗಿರುತ್ತದೆ. ಇದರೊಂದಿಗೆ, ನಿರುದ್ಯೋಗಿಗಳು ಹೊಸ ಉದ್ಯೋಗವನ್ನು ಪಡೆಯಬಹುದು. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ.
ಮೀನ ರಾಶಿ
ಈ ಅವಧಿಯಲ್ಲಿ ಮೀನ ರಾಶಿಯವರ ಸಾಮಾಜಿಕ ಸ್ಥಾನಮಾನ ಹೆಚ್ಚಾಗಲಿದೆ. ವ್ಯಾಪಾರಸ್ಥರೂ ಒಳ್ಳೆಯ ಲಾಭ ಗಳಿಸುವಿರಿ. ಉದ್ಯೋಗಸ್ಥರು ಪ್ರಗತಿಯನ್ನು ಕಾಣುವಿರಿ. ನಿಮ್ಮ ಸ್ಥಗಿತಗೊಂಡ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ಒಟ್ಟಿನಲ್ಲಿ ಈ ಯೋಗ ನಿಮಗೆ ತುಂಬಾನೇ ಮಂಗಳಕರವಾಗಿದೆ.
ಅಷ್ಟಮಿಯಂದು ಈ ಪರಿಹಾರ ಮಾಡಿದರೆ ಇನ್ನೂ ಒಳ್ಳೆಯದು
* ಈ ದಿನ ಉಪವಾಸವಿದ್ದು ದೇವಿಯ ಆರಾಧನೆ ಮಾಡಿದರೆ ಒಳ್ಳೆಯದು. ಹೋಮ- ಹವನ ಮಾಡಲು ಈ ದಿನ ಶುಭವಾಗಿದೆ.
* ಅಷ್ಟಮಿ ದಿನ 9 ಚಿಕ್ಕ ಹುಡುಗಿಯರಿಗೆ ಉಡುಗೊರೆ ನೀಡಿ
* ಈ ದಿನ ತಾಯಿಗೆ ಉಡುಗೊರೆ ನೀಡಿ



Click it and Unblock the Notifications