Latest Updates
-
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ
700 ವರ್ಷಗಳ ಬಳಿಕ ಮಹಾಷ್ಟಮಿ ಶುಭ ಯೋಗ: ಈ ರಾಶಿಗಳಿಗೆ ಅದೃಷ್ಟ ಕೈ ಹಿಡಿಯಲಿದೆ
ಚೈತ್ರ ನವರಾತ್ರಿಯಲ್ಲಿ ದೇವಿ ದುರ್ಗೆಯ ಆರಾಧನೆ ಮಾಡಲಾಗುವುದು. ಶಾರದೀಯ ನವರಾತ್ರಿಯಂತೆಯೇ ಈ ನವರಾತ್ರಿಯಲ್ಲಿ ದೇವಿಯ 9 ಸ್ವರೂಪಗಳನ್ನು ಆರಾಧಿಸಲಾಗುವುದು. ಈ ಬಾರಿ ಚೈತ್ರ ನವರಾತ್ರಿಯ ಅಷ್ಟಮಿ ದಿನಾಂಕವು ತುಂಬಾ ವಿಶೇಷವಾಗಿದೆ, ಏಕೆಂದರೆ ಮಹಾ ಅಷ್ಟಮಿಯಂದು ಗ್ರಹಗಳ ಅದ್ಭುತ ಸಂಯೋಜನೆ ರೂಪಗೊಳ್ಳಲಿದೆ.
ಈ ರೀತಿ ಗ್ರಹಗಳ ಸಂಯೋಜನೆ ಬರೋಬರಿ 700 ವರ್ಷಗಳ ನಂತರ ಸಂಭವಿಸಲಿದೆ. ಗುರು ಮೀನ ರಾಶಿಯಲ್ಲಿದೆ, ಬುಧವು ಮೇಷ ರಾಶಿಯಲ್ಲಿ ಸಾಗಲಿದ್ದಾನೆ. ಮತ್ತೊಂದೆಡೆ, ಸೂರ್ಯನು ಮೀನರಾಶಿಯಲ್ಲಿದ್ದಾನೆ ಮತ್ತು ಶನಿ ತನ್ನದೇ ಆದ ರಾಶಿಯಾದ ಕುಂಭ ರಾಶಿಯಲ್ಲಿದೆ. ಅದಲ್ಲದೆ ಶುಕ್ರ ಮತ್ತು ರಾಹು ಮೇಷ ರಾಶಿಯಲ್ಲಿದೆ.ಇದರಿಂದಾಗಿ ಮಹಾ ಸಂಯೋಗವು ಸೃಷ್ಟಿಯಾಗುತ್ತಿದೆ.

ಈ ಸಮಯದಲ್ಲಿ, ಮಾಲವ್ಯ, ಕೇದಾರ, ಹಂಸ ಮತ್ತು ಮಹಾಭಾಗ್ಯ ಯೋಗ ರಚನೆಯಾಗಲಿದೆ. ಜ್ಯೋತಿಷ್ಯ ಶಾಸ್ತ್ರವು ಈ ಯೋಗ ಕೆಲ ರಾಶಿಗಳಿಗೆ ಅದೃಷ್ಟದ ಯೋಗ ತಂದಿದೆ ಎಂದು ಹೇಳುತ್ತದೆ. ಆ ಅದೃಷ್ಟದ ರಾಶಿಗಳಾವುವು ಎಂದು ನೋಡೋಣ ಬನ್ನಿ:
ಮಿಥುನ ರಾಶಿ
ಅದೃಷ್ಟ ಮಿಥುನ ರಾಶಿಯವರ ಕೈ ಹಿಡಿಯಲಿದೆ. ಈ ಅವಧಿಯಲ್ಲಿ ನಿಮ್ಮ ಪ್ರತಿಯೊಂದು ಕೆಲಸವು ಯಶಸ್ಸು ಆಗಲಿದೆ. ಅವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ. ವಿವಾಹಿತರ ವೈವಾಹಿಕ ಜೀವನ ತುಂಬಾ ಚೆನ್ನಾಗಿರಲಿದೆ. ಏನಾದರೂ ಇಬ್ಬರ ನಡುವೆ ಭಿನ್ನಾಭಿಪ್ರಾಯ ಇದ್ದರೆ ಎಲ್ಲವೂ ಸರಿಯಾಗಲಿದೆ. ಈ ಸಮಯ ವ್ಯಾಪಾರಸ್ಥರಿಗೆ ಒಳ್ಳೆಯ ಲಾಭ ತಂದು ಕೊಡಲಿದೆ.
ಕರ್ಕ ರಾಶಿ
ಮಹಾ ಅಷ್ಟಮಿಯ ದಿನದಂದು ಹಂಸ ಮತ್ತು ಮಾಲವ್ಯ ರಾಜಯೋಗವು ಕರ್ಕ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಸ್ಥಾನ ಪ್ರತಿಷ್ಠೆ ಸಾಧಿಸಬಹುದು. ನಿರುದ್ಯೋಗಿಗಳು ಉತ್ತಮ ಉದ್ಯೋಗವನ್ನು ಪಡೆಯಬಹುದು. ಕೆಲಸ ಬದಲಾಯಿಸಲು ಯೋಚಿಸುತ್ತಿದ್ದರೆ ಒಳ್ಳೆಯ ಆಫರ್ಗಳು ಸಿಗಲಿವೆ. ವ್ಯಾಪಾರಸ್ಥರು ಲಾಭ ಗಳಿಸುವುರಿ, ಆರ್ಥಿಕವಾಗಿ ತುಂಬಾ ಸುಧಾರಣೆಯಾಗಲಿದೆ.
ಕನ್ಯಾರಾಶಿ
ಕನ್ಯಾ ರಾಶಿಯವರಿಗೆ ಈ ಸಮಯ ಶುಭಕರವಾಗಿರುತ್ತದೆ. ಈ ಸಮಯವು ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರವಾಗಿದೆ. ಈ ಸಮಯವು ಉದ್ಯಮಿಗಳಿಗೂ ಉತ್ತಮವಾಗಿರುತ್ತದೆ. ಇದರೊಂದಿಗೆ, ನಿರುದ್ಯೋಗಿಗಳು ಹೊಸ ಉದ್ಯೋಗವನ್ನು ಪಡೆಯಬಹುದು. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ.
ಮೀನ ರಾಶಿ
ಈ ಅವಧಿಯಲ್ಲಿ ಮೀನ ರಾಶಿಯವರ ಸಾಮಾಜಿಕ ಸ್ಥಾನಮಾನ ಹೆಚ್ಚಾಗಲಿದೆ. ವ್ಯಾಪಾರಸ್ಥರೂ ಒಳ್ಳೆಯ ಲಾಭ ಗಳಿಸುವಿರಿ. ಉದ್ಯೋಗಸ್ಥರು ಪ್ರಗತಿಯನ್ನು ಕಾಣುವಿರಿ. ನಿಮ್ಮ ಸ್ಥಗಿತಗೊಂಡ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ಒಟ್ಟಿನಲ್ಲಿ ಈ ಯೋಗ ನಿಮಗೆ ತುಂಬಾನೇ ಮಂಗಳಕರವಾಗಿದೆ.
ಅಷ್ಟಮಿಯಂದು ಈ ಪರಿಹಾರ ಮಾಡಿದರೆ ಇನ್ನೂ ಒಳ್ಳೆಯದು
* ಈ ದಿನ ಉಪವಾಸವಿದ್ದು ದೇವಿಯ ಆರಾಧನೆ ಮಾಡಿದರೆ ಒಳ್ಳೆಯದು. ಹೋಮ- ಹವನ ಮಾಡಲು ಈ ದಿನ ಶುಭವಾಗಿದೆ.
* ಅಷ್ಟಮಿ ದಿನ 9 ಚಿಕ್ಕ ಹುಡುಗಿಯರಿಗೆ ಉಡುಗೊರೆ ನೀಡಿ
* ಈ ದಿನ ತಾಯಿಗೆ ಉಡುಗೊರೆ ನೀಡಿ



Click it and Unblock the Notifications