Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಾಸ್ತು ಪ್ರಕಾರ, ಕಪ್ಪು ಎಳ್ಳನ್ನು ಈ ರೀತಿ ಬಳಸಿದರೆ, ಹಣವು ವೃದ್ಧಿಯಾಗುವುದು
ಕೆಲವರು ಕೈತುಂಬಾ ಹಣ ಗಳಿಸಿದರೂ, ಕೈಯಲ್ಲಿ ಹಣ ಉಳಿಯುವುದಿಲ್ಲ. ಇದರಿಂದ ಭವಿಷ್ಯದಲ್ಲಿ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ. ಜ್ಯೋತಿಷ್ಯ ಮತ್ತು ವಾಸ್ತು ಪ್ರಕಾರ, ಇದು ರಾಹು ಮತ್ತು ಶನಿಯ ಕೆಟ್ಟ ದೆಸೆಯಿಂದ ಸಂಭವಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಗ್ರಹಗಳನ್ನು ಬಲಪಡಿಸುವ ಅವಶ್ಯಕತೆಯಿದೆ. ಹಣಕಾಸಿನ ಅಡೆತಡೆಗಳನ್ನು ತೊಡೆದುಹಾಕಲು ಮತ್ತು ಹಣವನ್ನು ಉಳಿಸಲು ವಾಸ್ತು ಶಾಸ್ತ್ರದಲ್ಲಿ ಬಹಳ ಸುಲಭವಾದ ಮಾರ್ಗವನ್ನು ಹೇಳಲಾಗಿದೆ. ಈ ಪರಿಹಾರವು ಕಪ್ಪು ಎಳ್ಳು ಬೀಜಗಳೊಂದಿಗೆ ಸಂಬಂಧಿಸಿದೆ. ಹಾಗಾದರೆ, ಹಣವು ಹೆಚ್ಚಾಗಲು ಕಪ್ಪು ಎಳ್ಳನ್ನು ಹೇಗೆ ಬಳಸಬೇಕೆಂದು ತಿಳಿದುಕೊಳ್ಳೋಣ.
ವಾಸ್ತು ಪ್ರಕಾರ ಕಪ್ಪು ಎಳ್ಳನ್ನು ಈ ರೀತಿ ಬಳಸಿದರೆ ಹಣದ ಹರಿವು ಹೆಚ್ಚಾಗುತ್ತದೆ. ಅದು ಹೇಗೆ ಎಂಬುದನ್ನ ಇಲ್ಲಿ ನೋಡೋಣ:
.

ಆರ್ಥಿಕ ಸ್ಥಿತಿ ಸುಧಾರಣೆಗೆ:
ಆರ್ಥಿಕ ಸ್ಥಿತಿ ಉತ್ತಮವಾಗಿರದಿದ್ದರೆ, ಬೆಳಿಗ್ಗೆ ಸ್ನಾನ ಮಾಡಿದ ನಂತರ, ತಾಮ್ರದ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಗಂಗಾಜಲವನ್ನು ಸೇರಿಸಿ. ನಂತರ ಅದಕ್ಕೆ ಸ್ವಲ್ಪ ಕಪ್ಪು ಎಳ್ಳನ್ನು ಸೇರಿಸಿ ಮತ್ತು ಈ ನೀರನ್ನು ಶಿವಲಿಂಗಕ್ಕೆ ಅರ್ಪಿಸಿ. ನೀರನ್ನು ಅರ್ಪಿಸುವಾಗ, ನಿಮ್ಮ ಮನಸ್ಸಿನಲ್ಲಿ ಓಂ ಸಾಂಬ ಸದಾಶಿವಾಯ ನಮಃ ಎಂದು ಜಪಿಸುತ್ತಿರಿ. ಪ್ರತಿದಿನ ಹೀಗೆ ಮಾಡುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.

ಶುಭಕಾರ್ಯಕ್ಕೆ:
ಮನೆಯಲ್ಲಿ ಶುಭಕಾರ್ಯ ನಡೆಸಲಾಗುತ್ತಿದ್ದರೆ, ಬೆಳಗ್ಗೆ ಎದ್ದು ಸ್ನಾನ ಮುಗಿಸಿ ಒಂದು ಹಿಡಿ ಕರಿ ಎಳ್ಳನ್ನು ತೆಗೆದುಕೊಂಡು ತಾರಸಿಗೆ ಹಾಕಬೇಕು. ಪಕ್ಷಿಗಳು ಎಳ್ಳನ್ನು ತಿಂದರೆ ಮನೆಯಲ್ಲಿ ಐಶ್ವರ್ಯ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಸೂರ್ಯೋದಯಕ್ಕೆ ಮುನ್ನ ಈ ಪರಿಹಾರವನ್ನು ಮಾಡಿ.

ಕೆಲಸದಲ್ಲಿ ಯಶಸ್ವಯಾಗಲು:
ನೀವು ಯಾವುದೇ ಕೆಲಸದಲ್ಲಿ ಯಶಸ್ವಿಯಾಗದಿದ್ದರೆ, ಕುಟುಂಬದ ಹಿರಿಯ ಸದಸ್ಯರ ಕೈಯಿಂದ ಕಪ್ಪು ಎಳ್ಳನ್ನು ತೆಗೆದುಕೊಂಡು ಮನೆಯ ಉತ್ತರ ದಿಕ್ಕಿಗೆ ಎಸೆಯಿರಿ. ಹೀಗೆ ಮಾಡುವುದರಿಂದ ನಿಮ್ಮ ಕೆಲಸ ಯಶಸ್ವಿಯಾಗುವುದು.

ಹಣದ ಹರಿವು ಹೆಚ್ಚಾಗಲು:
ಹರಿಯುವ ನೀರಿನಲ್ಲಿ ಎಳ್ಳನ್ನು ಹಾಕುವುದರಿಂದ ಹಣಕಾಸಿನ ತೊಂದರೆಯೂ ದೂರವಾಗುತ್ತದೆ. ಮನೆಯ ಹೊರಗೆ ನಾಯಿಗೆ ಎಳ್ಳು ಹಾಕಿ. ನಾಯಿ ಎಳ್ಳು ತಿಂದರೆ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದು ಅರ್ಥಮಾಡಿಕೊಳ್ಳಿ. ಸತತ ಪ್ರಯತ್ನ ಮಾಡಿದರೂ ಹಣ ಹೆಚ್ಚಾಗದಿದ್ದರೆ ಕಪ್ಪು ಎಳ್ಳು ಮತ್ತು ಕಪ್ಪು ಉಂಡೆಯನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಪ್ರತಿ ಶನಿವಾರದಂದು ಯಾರಿಗಾದರೂ ದಾನ ಮಾಡಿ. ಇದನ್ನು ಮಾಡುವುದರಿಂದ ನೀವು ಹಣವನ್ನು ಉಳಿಸಲು ಪ್ರಾರಂಭಿಸುತ್ತೀರಿ.



Click it and Unblock the Notifications