Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಮಹಾಕಾವ್ಯ ರಾಮಾಯಣ ಜನಸಾಮಾನ್ಯರಿಗೆ ಅರ್ಥವಾಗುವಂತೆ ಮಾಡಿದ ಈ ಸಂತನಿಗೆ ಅನಾಂತನಂತ ನಮನಗಳು
ಆಗಸ್ಟ್ 15ರಂದು ತುಳಸಿದಾಸ ಜಯಂತಿ. ಹಿಂದೂ ಧರ್ಮದ ಬಹುದೊಡ್ಡ ಸನ್ಯಾಸಿ ಲೇಖಕಕರಲ್ಲಿ ತುಳಸಿದಾಸರು ಒಬ್ಬರು. ಭಕ್ತಿ ಆಂದೋಲನದ ಮೂಲಕವಾಗಿ ಅವರು ಅಖಂಡ ಭಾರತದಲ್ಲಿ ತನ್ನದೇ ಆದ ಬೆಂಬಲಿಗರನ್ನು ಪಡೆದಿದ್ದ ತುಳಸಿದಾಸರು ರಾಮನ ಭಕ್ತನಾಗಿದ್ದರು. ಇಂತಹ ಮಹಾನ್ ವ್ಯಕ್ತಿಯ ಇವರ ಜಯಂತಿಯ ಇತಿಹಾಸ ಹಾಗೂ ಪ್ರಾಮುಖ್ಯತೆ ಏನೆಂಬುದನ್ನು ನೋಡೋಣ.

ತುಳಸಿದಾಸರ ಜಯಂತಿ 2021ರ ದಿನಾಂಕ:
ಹಿಂದೂ ಕ್ಯಾಲೆಂಡರ್ ಪ್ರಕಾರ, ತುಳಸಿದಾಸರು ಶ್ರಾವಣ ಮಾಸದ ಶುಕ್ಲ ಪಕ್ಷದ 'ಸಪ್ತಮಿ' (ಏಳನೇ ದಿನ) ದಂದು ಜನಿಸಿದರು. ಈ ವರ್ಷ, ಆಗಸ್ಟ್ 15 ಭಾನುವಾರದಂದು ತುಳಸಿದಾಸ ಜಯಂತಿಯನ್ನು ಆಚರಿಸಲಾಗುವುದು.

ತುಳಸಿದಾಸರ ಜಯಂತಿಯ ಇತಿಹಾಸ:
ಭಾರತದ ಮಹಾಕಾವ್ಯ ರಾಮಾಯಣವನ್ನು ಮೂಲತಃ ವಾಲ್ಮೀಕಿ ಸಂಸ್ಕೃತದಲ್ಲಿ ಬರೆದಿದ್ದಾರೆ. ಇದು ಕೇವಲ ವಿದ್ವಾಂಸರಿಗೆ ಮಾತ್ರ ಲಭ್ಯವಿತ್ತು. ಹಿಂದಿಯ ಉಪಭಾಷೆಯಾದ ಅವಧಿಯಲ್ಲಿ ರಾಮಾಯಣದ ಕಥೆಯನ್ನು ತುಳಸಿದಾಸರು ಪುನಃ ಬರೆದರು. ತುಳಸೀದಾಸರ ರಾಮಾಯಣದ ಆವೃತ್ತಿ ವ್ಯಾಪಕವಾಗಿ ಜನಪ್ರಿಯಗೊಂಡವು. ಜೊತೆಗೆ ತುಳಸೀದಾಸರು ಹನುಮಾನ್ ಚಾಲೀಸಾವನ್ನು ರಚಿಸಿದ್ದಾರೆ ಎಂದು ಹಲವರ ನಂಬಿಕೆ. ಆದ್ದರಿಂದ, ಈ ಮಹಾನ್ ಕವಿಗೆ ಗೌರವ ಸಮರ್ಪಿಸುವ ಉದ್ದೇಶದಿಂದ ತುಳಸೀದಾಸರ ಜಯಂತಿಯನ್ನು ದೇಶದಾದ್ಯಂತ ಆಚರಿಸುತ್ತಾರೆ.

ತುಳಸಿದಾಸರ ಜಯಂತಿ ಆಚರಣೆ :
ಪ್ರತಿ ವರ್ಷ, ತುಳಸೀದಾಸ ಜಯಂತಿಯಂದು ಜನರು ಹನುಮ ಮತ್ತು ರಾಮ ಮಂದಿರಗಳಲ್ಲಿ ಶ್ರೀ ರಾಮರ ಕಥೆಗಳನ್ನು ಪಠಿಸುತ್ತಾರೆ. ಇದರ ಹೊರತಾಗಿ, ತುಳಸೀದಾಸರ ಬೋಧನೆಗಳನ್ನು ವಿವಿಧ ಕಡೆಗಳಲ್ಲಿ ಹೇಳಲಾಗುತ್ತದೆ. ಆದರೆ ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷ ಆಚರಣೆಯು ವಿಭಿನ್ನವಾಗಿರುತ್ತದೆ.

ತುಳಸಿದಾಸರ ಭೋಧನೆಗಳು:
"ದುಃಖದ ವಾಸಸ್ಥಾನವಾದ ಆಸೆಯನ್ನು ಬಿಟ್ಟುಕೊಡುವವರೆಗೂ ಯಾವ ಜೀವಿಗೂ ಸಂತೋಷವಿರುವುದಿಲ್ಲ ಅಥವಾ ಕನಸಿನಲ್ಲಿಯೂ ಅವರ ಮನಸ್ಸಿಗೆ ಯಾವುದೇ ಶಾಂತಿ ಸಿಗುವುದಿಲ್ಲ" -ತುಳಸಿದಾಸರು
"ಕಾಮ, ಕೋಪ ಮತ್ತು ದುರಾಸೆ ನರಕಕ್ಕೆ ಹೋಗುವ ದಾರಿಗಳು -ತುಳಸಿದಾಸರು



Click it and Unblock the Notifications
