Just In
Don't Miss
- News Gold Price: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ, ಇಂದಿನ ಬೆಲೆ ವಿವರ
- Finance BMRCL: ಇಂದು ನಮ್ಮ ಮೆಟ್ರೋ ಕಾರ್ಯಾಚರಣೆ ಅವಧಿ ವಿಸ್ತರಣೆ, ಸಮಯ ವಿವರ
- Movies Shobha Shetty ; ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ ನಟಿ ಶೋಭಾ ಶೆಟ್ಟಿ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶ್ರಾವಣ ಮಾಸ: ಇಷ್ಟಾರ್ಥ ಸಿದ್ಧಿಗಾಗಿ ಶಿವನಿಗೆ ಯಾವ ಹೂವನ್ನು ಅರ್ಪಿಸಬೇಕು?
ಶ್ರಾವಣ ಮಾಸ ಇನ್ನೇನು ಕೆಲವೇ ದಿನಗಳಲ್ಲಿ ಬರಲಿದೆ. ಈ ಶ್ರಾವಣ ತಿಂಗಳು ಶಿವನಿಗೆ ಅತ್ಯಂತ ಪ್ರಿಯ. ಈ ದಿನಗಳಲ್ಲಿ ಶಿವನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುವುದರಿಂದ ನಮ್ಮ ಇಷ್ಟಾರ್ಥಗಳೆಲ್ಲಾ ನೆರವೇರುತ್ತದೆ ಎಂಬ ನಂಬಿಕೆಯಿದೆ. ಈ ತಿಂಗಳಲ್ಲಿ, ಬೆಳಿಗ್ಗೆ ಎದ್ದು ಸ್ನಾನ ಮಾಡಿ ಶಿವನನ್ನು ಪೂಜಿಸಿದರೆ, ಭಕ್ತರ ಎಲ್ಲಾ ಆಸೆಗಳನ್ನು ಈಡೇರಿಕೆಯಾಗುವುದು. ಹಾಗಾದರೆ ಈ ಪೂಜೆಗೆ ಯಾವ ಹೂವುಗಳನ್ನು ಬಳಸಬೇಕು, ಶಿವನಿಗೆ ಯಾವ ಹೂವಿನಿಂದ ಪೂಜೆ ಸಲ್ಲಿಸದರೆ ಉತ್ತಮ ಎಂಬ ವಿಚಾರವನ್ನು ಈ ಲೇಖನದಲ್ಲಿ ವಿವರಿಸುತ್ತೇವೆ.
ಶಿವನ ಕೃಪೆಗೆ ಪಾತ್ರರಾಗಲು ಶ್ರಾವಣ ಮಾಸದಂದು ಯಾವ ಹೂವುಗಳಿಂದ ಪೂಜೆ ಸಲ್ಲಿಸಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:
ಕಮಲ, ಬಿಲ್ಬಪತ್ರೆ ಮತ್ತು ಶಂಖಪುಷ್ಪ:
ಲಕ್ಷ್ಮಿ ಅಂದರೆ ಸಂಪತ್ತನ್ನು ಪಡೆಯಲು ಬಯಸುವ ಶಿವಭಕ್ತನು ದೇವರನ್ನು ಕಮಲ, ಬಿಲ್ವಪತ್ರೆ ಮತ್ತು ಶಂಖಪುಷ್ಪ ಹೂವುಗಳಿಂದ ಪೂಜಿಸಬೇಕು. ಒಂದು ಲಕ್ಷ ಹೂವುಗಳನ್ನು ಬಳಸಿ ಶಿವನ ಆರಾಧನೆ ಮಾಡಿದರೆ, ನಮ್ಮ ಎಲ್ಲಾ ಪಾಪಗಳು ನಾಶವಾಗುತ್ತವೆ ಮತ್ತು ಲಕ್ಷ್ಮಿ ಒಲಿಯುತ್ತಾಳೆ ಎಂಬ ನಂಬಿಕೆಯಿದೆ.
ಗರಿಕೆ ಮತ್ತು ಪಾರಿಜಾತ:
ಕದಿಕೆ ಮತ್ತು ಪಾರಿಜಾತ ಹೂವಿನಿಂದ ಶಿವನನ್ನು ಪೂಜಿಸುವುದು ಸಂತೋಷ ಮತ್ತು ಸಂಪತ್ತನ್ನು ಹೆಚ್ಚಿಸುತ್ತದೆ. ಶಿವನಿಗೆ ಕದಿಕೆ ಅರ್ಪಿಸುವುದರಿಂದ ವ್ಯಕ್ತಿಯು ಆರೋಗ್ಯವಾಗಿರುತ್ತಾನೆ. ದೀರ್ಘಾಯುಷ್ಯವನ್ನು ಬಯಸುವ ವ್ಯಕ್ತಿಯು ಶಿವನನ್ನು ಒಂದು ಲಕ್ಷ ಕದಿಕೆಗಳಿಂದ ಪೂಜಿಸಬೇಕು ಎಂದು ಶಿವ ಪುರಾಣದಲ್ಲಿ ಹೇಳಲಾಗಿದೆ.
ಚೇಪುಲು ಮತ್ತ ಕಣಗಿಲೆ ಹೂವು:
ಈ ಹೂವುಗಳಿಂದ ಶಿವನನ್ನು ಪೂಜಿಸುವುದರಿಂದ ವ್ಯಕ್ತಿಯು ಆಭರಣಗಳನ್ನು ಪಡೆಯುತ್ತಾನೆ. ಅಂತೆಯೇ, ಕಣಗಿಲೆ ಹೂವುಗಳಿಂದ ಪೂಜಿಸುವ ಮೂಲಕ ಒಬ್ಬ ವ್ಯಕ್ತಿಯು ಅತ್ಯುತ್ತಮವಾದ ಬಟ್ಟೆಗಳನ್ನು ಪಡೆಯುತ್ತಾನೆ.
ದುಂಡು ಮಲ್ಲಿಗೆ ಮತ್ತು ಮಲ್ಲಿಗೆ:
ದುಂಡು ಮಲ್ಲಿಗೆಯಿಂದ ಶಿವನನ್ನು ಪೂಜಿಸುವವರು ತಾವು ಬಯಸಿದ ವ್ಯಕ್ತಿಯೊಂದಿಗೆ ಅಥವಾ ಅಪೇಕ್ಷಿತ ವಧು-ವರರ ಜೊತೆ ವಿವಾಹವಾಗಲು ಸಾದ್ಯವಾಗುವುದು. ಜೊತೆಗೆ ಪರಿಮಳಯುಕ್ತ ಮಲ್ಲಿಗೆಯಿಂದ ಶಿವನನ್ನು ಪೂಜಿಸಿದರೆ, ವಾಹನಗಳನ್ನು ಒದಗಿಸುತ್ತಾನೆ.
ಶಮಿ ಮತ್ತು ಸಣ್ಣ ಮಲ್ಲಿಗೆ:
ಶಿವನನ್ನು ಶಮಿಪತ್ರೆಯಿಂದ ಪೂಜಿಸುವುದರಿಂದ ವ್ಯಕ್ತಿಯು ಮೋಕ್ಷವನ್ನು ಪಡೆಯುತ್ತಾನೆ. ಶಮಿಯು ವಿಷ್ಣುವಿಗೆ ಪ್ರಿಯವಾದ ವಸ್ತುವಾಗಿದೆ. ಈ ಮರದ ಹೂವುಗಳನ್ನು ಶಿವನಿಗೆ ಅರ್ಪಿಸಿದರೆ, ಆ ವ್ಯಕ್ತಿ ಮೋಕ್ಷವನ್ನು ಪಡೆಯುತ್ತಾನೆ. ಶಿವನನ್ನು ಸಣ್ಣ ಮಲ್ಲಿಗೆಯಿಂದ ಪೂಜಿಸಿದರೆ, ಮನೆಯಲ್ಲಿ ಎಂದಿಗೂ ಆಹಾರದ ಕೊರತೆ ಉಂಟಾಗುವುದಿಲ್ಲ.
ಎಕ್ಕದ ಹೂವು ಹಾಗೂ ಉಮ್ಮತ್ತಿ ಹೂವು:
ಶಿವನಿಗೆ ಎಕ್ಕದ ಹೂವುಗಳನ್ನು ಅರ್ಪಿಸುವುದರಿಂದ ವ್ಯಕ್ತಿಯ ಕಣ್ಣು ಮತ್ತು ಹೃದಯ ಆರೋಗ್ಯಕರವಾಗಿರುತ್ತದೆ. ಜೊತೆಗೆ ಉಮ್ಮತ್ತಿ ಹೂವಿನಿಂದ ಪೂಜಿಸುವುದರಿಂದ ವಿಷಕಾರಿ ಜೀವಿಗಳಿಂದ ಯಾವುದೇ ಅಪಾಯ ಆಗುವುದಿಲ್ಲ.