ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸಬಾರದೆನ್ನಲು ಇಲ್ಲಿವೆ ವೈಜ್ಞಾನಿಕ ಕಾರಣಗಳು

ಈಗಾಗಲೇ ಶ್ರಾವಣ ಮಾಸ ಪ್ರಾರಂಭವಾಗಿದ್ದು, ಹೆಚ್ಚಿನವರು ಶಿವನ ಆರಾಧನೆಗೆ ವಿವಿಧ ಆಚರಣೆಗಳನ್ನು ಆರಂಭಿಸಿದ್ದಾರೆ. ಶಿವನಿಗೆ ಶ್ರಾವಣ ಸೋಮವಾರ ಬಹಳ ಪ್ರಶಸ್ತವಾಗಿದ್ದು, ಈ ದಿನ ಶಿವನ ಪೂಜೆ, ಪುನಸ್ಕರಾರ, ಉಪವಾಸಗಳಲ್ಲಿ ಭಕ್ತರು ನಿರತರಾಗುತ್ತಾರೆ.

ಶಿವನಿಗೆ ಸಮರ್ಪಿತವಾದ ಈ ತಿಂಗಳ ಪ್ರತಿ ದಿನವೂ ಧಾರ್ಮಿಕ ಮಹತ್ವವುಳ್ಳದ್ದಾಗಿದ್ದು, ಈ ಸಮಯದಲ್ಲಿ ಮಾಂಸಾಹಾರ ಮತ್ತು ಮದ್ಯ ಸೇವನೆ ನಿಷೇಧಿಸಬೇಕು ಎನ್ನಲಾಗುತ್ತದೆ. ಸಾಮಾನ್ಯವಾಗಿ ಪ್ರತಿ ಹಬ್ಬ-ಆಚರಣೆಗಳ ಹಿಂದೆ ಅದರದ್ದೇ ಆದ ಧಾರ್ಮಿಕ ಪ್ರಾಮುಖ್ಯತೆ ಜೊತೆಗೆ ವೈಜ್ಞಾನಿಕ ಮಹತ್ವವೂ ಇರುತ್ತದೆ. ಅದರಂತೆ ಶ್ರಾವಣ ತಿಂಗಳಲ್ಲಿ ಮಾಂಸಹಾರ ತಿನ್ನದೇ ಇರುವುದರ ವೈಜ್ಞಾನಿಕ ಮಹತ್ವ ನಿಮಗೆ ತಿಳಿದಿದೆಯೇ?.. ಈ ಸ್ಟೋರಿ ನೋಡಿ ತಿಳಿಯುತ್ತೆ.

ಶ್ರಾವಣ ಮಾಸದಲ್ಲಿ ಮಾಂಸಹಾರ ಸೇವಸಬಾರದೆನ್ನಲು ವೈಜ್ಞಾನಿಕ ಕಾರಣಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

1. ಸೋಂಕಿನ ಅಪಾಯ:

1. ಸೋಂಕಿನ ಅಪಾಯ:

ಈ ಋತುಮಾನವು ತೇವಾಂಶಭರಿತವಾಗಿದ್ದು, ಹೆಚ್ಚಿನ ಬ್ಯಾಕ್ಟೀರಿಯಾಗಳು ಮತ್ತು ವೈರಸ್ ಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ, ವೈರಲ್ ಸೋಂಕುಗಳು, ಹೊಟ್ಟೆ ಸೋಂಕು, ಫುಡ್ ಪಾಯಿಸನ್, ಅತಿಸಾರ ಮತ್ತು ಅಜೀರ್ಣವು ಈ ಸಮಯದಲ್ಲಿ ಸಾಮಾನ್ಯವಾಗಿ ಕಾಡುವುದು. ಜೊತೆಗೆ ವಾತಾವರಣದಲ್ಲಿ ಹೆಚ್ಚಿನ ಮಟ್ಟದ ತೇವಾಂಶದಿಂದಾಗಿ, ನಮ್ಮ ದೇಹವು ಆಹಾರವನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಆದ್ದರಿಂದ ಈ ನಿರ್ದಿಷ್ಟ ತಿಂಗಳುಗಳಲ್ಲಿ, ಹೆಚ್ಚಿನವರು ಮೊಟ್ಟೆ ಮತ್ತು ಮಾಂಸಾಹಾರವನ್ನು ತಪ್ಪಿಸುತ್ತಾರೆ, ಕೇವಲ ತರಕಾರಿಗಳನ್ನು ಬಳಕೆ ಮಾಡುತ್ತಾರೆ.

2.ಹೆಚ್ಚಿದ ಮೆಲಟೋನಿನ್ ಮತ್ತು ಕಡಿಮೆ ಸಿರೊಟೋನಿನ್ ಮಟ್ಟ:

2.ಹೆಚ್ಚಿದ ಮೆಲಟೋನಿನ್ ಮತ್ತು ಕಡಿಮೆ ಸಿರೊಟೋನಿನ್ ಮಟ್ಟ:

ಮಳೆಗಾಲದಲ್ಲಿ, ಹಗಲು ಕಡಿಮೆಯಾಗಿ, ರಾತ್ರಿ ಹೆಚ್ಚಾಗುತ್ತವೆ. ಇದು ಮೆಲಟೋನಿನ್ ಹಾರ್ಮೋನುಗಳ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ದೇಹದಲ್ಲಿ ಸಿರೊಟೋನಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಮೆಲಟೋನಿನ್ ಕತ್ತಲೆಗೆ ಪ್ರತಿಕ್ರಿಯೆಯಾಗಿ ಸ್ರವಿಸುವ ಹಾರ್ಮೋನ್ ಆಗಿದ್ದು, ಸಿರೊಟೋನಿನ್ ಎಂಬುದು ಹಗಲು ಅಥವಾ ಬಿಸಿಲು ಅಥವಾ ಬೆಳಕಿನ ವಾತಾವರಣಕ್ಕೆ ಪ್ರತಿಕ್ರಿಯೆಯಾಗಿ ಸ್ರವಿಸುವ ಹಾರ್ಮೋನ್ ಆಗಿದೆ.

ಮಳೆಗಾಲದಲ್ಲಿ ರಾತ್ರಿಗಳು ಹೆಚ್ಚಾದಂತೆ, ಮೆಲಟೋನಿನ್ ಮಟ್ಟ ಹೆಚ್ಚಾಗುತ್ತದೆ ಮತ್ತು ಸಿರೊಟೋನಿನ್ ಕಡಿಮೆಯಾಗುತ್ತದೆ. ಮೆಲಟೋನಿನ್ ಜಠರಗರುಳಿನ ಲೋಳೆಪೊರೆಯ ಒಂದು ಪ್ರಮುಖ ಭಾಗವಾಗಿದ್ದರೂ, ಹೆಚ್ಚಿದ ಮಟ್ಟ ಹೊಟ್ಟೆಯನ್ನು ತೊಂದರೆಗೊಳಿಸಬಹುದು ಜೊತೆಗೆ ಜೀರ್ಣಕ್ರಿಯೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಅಲ್ಲದೆ, ಮಾಂಸಾಹಾರಿ ಆಹಾರಗಳು ಜೀರ್ಣಕ್ರಿಯೆಗೆ ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ, ತ್ಯಜಿಸುವುದು ಉತ್ತಮ. ಏಕೆಂದರೆ ಹೆಚ್ಚಿನ ಪ್ರಮಾಣದ ಮೆಲಟೋನಿನ್ ಜೊತೆಗೆ ಮಾಂಸಾಹಾರದ ಕೊಬ್ಬುಗಳು ಒಟ್ಟಾರೆ ಜೀರ್ಣಾಂಗ ವ್ಯವಸ್ಥೆಗೆ ಹಾನಿಯುಂಟು ಮಾಡಬಹುದು.

3. ಇದು ಅನೇಕ ಜೀವಿಗಳು ಸಂತಾನೋತ್ಪತ್ತಿ ಮಾಡುವ ಸಮಯ:

3. ಇದು ಅನೇಕ ಜೀವಿಗಳು ಸಂತಾನೋತ್ಪತ್ತಿ ಮಾಡುವ ಸಮಯ:

ಹಸಿ ಮೊಟ್ಟೆ, ಸಮುದ್ರಾಹಾರ, ಕೋಳಿ ಮತ್ತು ಕುರಿ ಮಾಂಸವನ್ನು ಆರೋಗ್ಯದ ದೃಷ್ಟಿಯಿಂದಾಗಿ ಇವುಗಳನ್ನು ತಿನ್ನುವುದನ್ನು ತಪ್ಪಿಸಲು ಸೂಚಿಸಲಾಗಿದೆ. ಇದಲ್ಲದೆ, ಮಳೆಗಾಲವು ಸೀಗಡಿ ಮತ್ತು ಮೀನುಗಳಿಗೆ ಸಂತಾನೋತ್ಪತ್ತಿ ಮಾಡುವ ಸಮಯ. ಅದಕ್ಕಾಗಿಯೇ ಮಳೆಗಾಲದಲ್ಲಿ ಸಮುದ್ರಾಹಾರವನ್ನು ತಿನ್ನಬಾರದೆಂದು ಹೇಳುವುದು. ಕೆಲವು ಮೀನು ಸೇವನೆಯಿಂದ ಹೊಟ್ಟೆಯ ಸೋಂಕನ್ನು ಪಡೆಯುವ ಸಾಧ್ಯತೆಯೂ ಇದೆ. ನಿಮಗೆ ಮೀನು ತಿನ್ನಲೇಬೇಕೆಂದಿದ್ದರೆ ತಾಜಾ ಮೀನು ತಿನ್ನುವುದು ಉತ್ತಮ.

ಹಿಂದೂ ಪುರಾಣಗಳಲ್ಲಿ, ಸಂತಾನೋತ್ಪತ್ತಿ ಅವಧಿಯಲ್ಲಿ ಪ್ರಾಣಿಯನ್ನು ಕೊಲ್ಲುವುದು ಪಾಪ. ಶ್ರಾವಣ ಅಥವಾ ಮಳೆಗಾಲದಲ್ಲಿ, ಹೆಚ್ಚಿನ ಪ್ರಾಣಿಗಳು ಸಂತಾನೋತ್ಪತ್ತಿ ಮಾಡುತ್ತವೆ. ಇದು ಧಾರ್ಮಿಕವಾಗಿ, ಮಾಂಸಾಹಾರಿ ಆಹಾರ ಮತ್ತು ಮೊಟ್ಟೆಗಳಿಂದ ದೂರವಿರಲು ಇನ್ನೊಂದು ಕಾರಣವಾಗಿದೆ.

4. ಅಪಾಯಕಾರಿ ರೋಗಗಳ ಆಹ್ವಾನ:

4. ಅಪಾಯಕಾರಿ ರೋಗಗಳ ಆಹ್ವಾನ:

ಮಾಂಸಾಹಾರಿ ಮತ್ತು ಮೊಟ್ಟೆ ತಪ್ಪಿಸುವುದರ ಜೊತೆಗೆ, ವಿಶೇಷವಾಗಿ ರಸ್ತೆಬದಿ ಮಾರಾಟಗಾರರು ಮಾರಾಟ ಮಾಡುವ ಹಣ್ಣಿನ ರಸ ಅಥವಾ ಜ್ಯೂಸ್ ಕೂಡ ದೂರವಿಡಲು ಹೇಳಲಾಗುತ್ತದೆ. ಮಾರಾಟಗಾರರು ತಾಜಾ ಹಣ್ಣುಗಳನ್ನು ಪ್ರತಿದಿನ ಮಾರಾಟ ಮಾಡುವುದಿಲ್ಲ. ಇದರಿಂದ ಹಣ್ಣುಗಳು ಮಳೆಗಾಲದ ಆರ್ದ್ರ ವಾತಾವರಣದಲ್ಲಿ ದೀರ್ಘಕಾಲ ಇರುವುದರಿಂದ ಒಳ್ಳೆಯದಕ್ಕಿಂತ ಹೆಚ್ಚು ಹಾನಿಯಾಗುತ್ತದೆ. ಅತಿಸಾರ ಮತ್ತು ಟೈಫಾಯಿಡ್ ನಂತಹ ರೋಗಗಳನ್ನು ತಡೆಗಟ್ಟಲು ಮನೆಯಲ್ಲಿ ತಯಾರಿಸಿದ ಹಣ್ಣಿನ ರಸವನ್ನು ಮಾತ್ರ ಆರಿಸಿಕೊಳ್ಳಿ.

ಶ್ರಾವಣ ಮಾಸದಲ್ಲಿ ಮಾಂಸಾಹಾರಿ ಆಹಾರಗಳ ಹೊರತಾಗಿ, ಇದನ್ನು ತಪ್ಪಿಸಬೇಕು:

ಶ್ರಾವಣ ಮಾಸದಲ್ಲಿ ಮಾಂಸಾಹಾರಿ ಆಹಾರಗಳ ಹೊರತಾಗಿ, ಇದನ್ನು ತಪ್ಪಿಸಬೇಕು:

  • ತಣ್ಣಗಾದ ಅಥವಾ ತಂಪು ಪಾನೀಯಗಳು
  • ಮದ್ಯ
  • ಮಸಾಲೆಯುಕ್ತ ಆಹಾರಗಳು
  • ಹಾಲು ( ಮಜ್ಜಿಗೆ ಒಳ್ಳೆಯದು)
  • ಪೂರ್ವಸಿದ್ಧ ಅಥವಾ ಸಂಸ್ಕರಿಸಿದ ಆಹಾರಗಳು
  • ಎಣ್ಣೆಯುಕ್ತ ಆಹಾರಗಳು

English summary

Shravan 2021: Scientific Reasons Why People Avoid Eating Non Veg During Shravan Month

Here we talking about Shravan 2021: Scientific Reasons Why people avoid eating non veg during shravan month, read on
X
Desktop Bottom Promotion