Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಕಬೀರ್ ದಾಸ್ ಜಯಂತಿ 2021: ದಿನಾಂಕ, ತಿಥಿ ಹಾಗೂ ಮಹತ್ವದ ಕುರಿತು ಮಾಹಿತಿ
ಇದೇ ಜೂನ್ 24ರಂದು ಕಬೀರ್ದಾಸ್ ಜಯಂತಿಯನ್ನು ಆಚರಿಸಲಾಗುವುದು. ಭಾರತದ ಪ್ರಸಿದ್ಧ ಕವಿ, ಸಂತ ಮತ್ತು ಸಾಮಾಜಿಕ ಸುಧಾರಕರಾದ ಸಂತ ಕಬೀರ್ದಾಸ್ ರ ಜನ್ಮ ದಿನವನ್ನು ಕಬೀರ್ ದಾಸ್ ಜಯಂತಿ ಎಂದು ಆಚರಣೆ ಮಾಡಲಾಗುವುದು. ಇಲ್ಲಿ ನಾವು ಜಯಂತಿಯ ತಿಥಿ ಮತ್ತು ಮಹತ್ವವನ್ನು ವಿವರಿಸಿದ್ದೇವೆ.

ಕಬೀರ್ ದಾಸ್ ಬಗ್ಗೆ :
ಕಬೀರ್ ಮುಸ್ಲಿಂ ಕುಟುಂಬದಲ್ಲಿ ಜನಿಸಿದರೂ ಅವನಿಗೆ ಹಿಂದೂ ಗುರು ಶಿಕ್ಷಣ ನೀಡಿದ್ದರು. ಆದರೆ, ಅವನಿಗೆ ಸರಿಯಾದ ಶಿಕ್ಷಣ ಇರಲಿಲ್ಲ ಎಂದು ಸಹ ಹೇಳಲಾಗುತ್ತದೆ. ಸಂತ ಕಬೀರ್, ತಮ್ಮ ಇಡೀ ಜೀವಿತಾವಧಿಯಲ್ಲಿ, ಬೂಟಾಟಿಕೆ, ಮೂಢನಂಬಿಕೆ ಮತ್ತು ವ್ಯಕ್ತಿ ಆರಾಧನೆಯನ್ನು ವಿರೋಧಿಸಿದರು, ಜನರಿಗೆ ಐಕ್ಯತೆಯ ಪಾಠವನ್ನು ಕಲಿಸಿದರು.

ಕಬೀರ್ ದಾಸ್ ಜಯಂತಿಯ ದಿನಾಂಕ ಮತ್ತು ಸಮಯ:
ದಿನಾಂಕ - 2021, ಜೂನ್ 24 ರ ಗುರುವಾರ
ಪೂರ್ಣಿಮಾ ತಿಥಿ - 2021 ಜೂನ್ 24 ರಂದು ಬೆಳಿಗ್ಗೆ 03:32ಕ್ಕೆ
ಪೂರ್ಣಿಮಾ ತಿಥಿ ಅಂತ್ಯ - ಜೂನ್ 21, 2021 ರಂದು ರಾತ್ರಿ 12.09 ನಿಮಿಷಕ್ಕೆ

ಕಬೀರ್ ದಾಸ್ ಜಯಂತಿಯ ಮಹತ್ವ:
ಹಿಂದೂ ಪಂಚಾಂಗದ ಪ್ರಕಾರ, ಸಂತ ಕಬೀರ್ ಅವರ ಜನ್ಮ ದಿನಾಚರಣೆಯನ್ನು ಜೇಷ್ಠ ಮಾಸದ ಪೂರ್ಣಿಮಾ ತಿಥಿಯಲ್ಲಿ ಆಚರಿಸಲಾಗುತ್ತದೆ. ಸಂತ ಕಬೀರ್ದಾಸ್ ಅವರ ಪ್ರಸಿದ್ಧ ಬರಹಗಳಲ್ಲಿ ಬಿಜಾಕ್, ಸಖಿ ಗ್ರಂಥ, ಕಬೀರ್ ಗ್ರಂಥಾವಳಿ ಮತ್ತು ಅನುರಾಗ ಸಾಗರ ಸೇರಿವೆ. ಈ ದಿನ, ಸಂತ ಕಬೀರ್ ದಾಸರ ಅನುಯಾಯಿಗಳು ಅವರ ಬೋಧನೆಗಳನ್ನು ಭೋದಿಸುತ್ತಾರೆ ಮತ್ತು ಅವರ ಕವಿತೆಗಳನ್ನು ಒಟ್ಟಿಗೆ ಪಠಿಸುತ್ತಾರೆ.

ಸತ್ಯವೇ ದೇವರು :
ಸಂತ ಕಬೀರ್ದಾಸ್ ಅವರ ಕೃತಿಯ ವಿಶಿಷ್ಟ ಲಕ್ಷಣವೆಂದರೆ, 'ಕಬೀರ್ ಕೆ ದೋಹಾ' ಅಂದರೆ ಎರಡು ಸಾಲಿನ ಪದ್ಯಗಳು. ಕಬೀರ್ ದಾಸ್ ಜೀವನದ ನಿಜವಾದ ಅರ್ಥವನ್ನು ಬರೆಯುವಲ್ಲಿ ಬಹಳ ಸರಳವಾದ ಭಾಷೆಯನ್ನು ಬಳಸಿದ್ದಾರೆ. ಪದ್ಯಗಳನ್ನು ಬರೆಯಲು ಹಿಂದಿ ಭಾಷೆಯನ್ನು ಬಳಸಲಾಗುತ್ತಿತ್ತು, ಆದರೆ ಅದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಅವರ ಕಾಲದ ಜನರು ಅವರ ಕಾವ್ಯವನ್ನು ಒಪ್ಪಿಕೊಂಡರು. ಜನರಲ್ಲಿ ಜಾಗೃತಿ ಮೂಡಿಸುವ ಸಾಧನವಾಗಿ ಅವರು ಈ ಎರಡು ಸಾಲಿನ ಪದ್ಯವನ್ನು ಬರೆಯಲು ಪ್ರಾರಂಭಿಸಿದರು. ಅವರ ಕವನಗಳು ಮತ್ತು ನುಡಿಗಟ್ಟುಗಳನ್ನು ಶಾಲಾ ಮಟ್ಟದ ಪಠ್ಯಕ್ರಮದಲ್ಲಿ ಅಳವಡಿಸಲಾಗಿದೆ.



Click it and Unblock the Notifications











