Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ
ದುಷ್ಟನ ಮನಸ್ಸು ಪರಿಶುದ್ಧವಾಗಿರಲು ಸಾಧ್ಯವೇ ಇಲ್ಲ ಎಂದು ಚಾಣಕ್ಯ ಹೇಳಿದ ಮಾತು ನೀವು ಒಪ್ಪುತ್ತೀರಾ?
ಆಚಾರ್ಯ ಚಾಣಕ್ಯ ಒರ್ವ ಕೌಶಲ್ಯಪೂರಿತ ರಾಜಕಾರಣಿ ಹಾಗೂ ಅರ್ಥಶಾಸ್ತ್ರಜ್ಞ. ಇಂದಿಗೂ ಅವರು ರೂಪಿಸಿದ ನೀತಿಗಳು ಜನಸಾಮಾನ್ಯರ ಜೀವನಕ್ಕೆ ಅನ್ವಯಿಸುತ್ತದೆ. ನೀವೆನಾದರೂ ಸಾಧನೆ ಮಾಡಲು ಬಯಸಿದ್ದೇ ಆದರೆ ನೀವು ನಿಮ್ಮ ಗುರಿಯೆಡೆಗೆ ಕೆಲಸ ಮಾಡಲು ನಿರಂತರವಾಗಿ ಪ್ರಯತ್ನಿಸಿ. ಅದನ್ನು ದುಷ್ಟರ ಜೊತೆ ಸೇರಿ ಕೆಟ್ಟ ಕೆಲಸಗಳನ್ನು ಮಾಡಿದ್ದೇ ಆದರೆ ಅದು ನಿಮಗೆ ಶೋಭೆ ತರುವುದಿಲ್ಲ.

ಒಂದು ಬಾರಿ ನೀವು ಮಾಡಿದ ಕೆಟ್ಟ ಕೆಲಸಗಳು ಯಮನ ಪಾಪಗಳ ಪಟ್ಟಿಯಲ್ಲಿ ದಾಖಲಾಯ್ತು ಅಂದ್ರೆ ನೀವೆಷ್ಟು ಪುಣ್ಯಸ್ನಾನಗಳನ್ನು ಮಾಡಿದ್ರು ಅದು ವ್ಯರ್ಥವೇ ಸರಿ. ಇಷ್ಟು ದಿನ ಕೆಟ್ಟ ಕೆಲಸ ಮಾಡಿದ್ದು ಸಾಕು. ಇನ್ನು ಮುಂದಾದರೂ ಒಳ್ಳೆಯ ಕೆಲಸವನ್ನು ಮಾಡಿ ಒಳ್ಳೆಯ ವ್ಯಕ್ತಿ ಅನ್ನಿಸಿಕೊಳ್ಳಬೇಕಾದರೆ ಚಾಣಕ್ಯ ಈ ನೀತಿಗಳನ್ನು ಪಾಲಿಸಿ.
ದುಷ್ಟನ ಮನಸ್ಸು ಪರಿಶುದ್ಧವಾಗಿರಲು ಸಾಧ್ಯವೇ ಇಲ್ಲ
ಚಾಣಕ್ಯನ ಪ್ರಕಾರ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳನ್ನು ಇಟ್ಟುಕೊಂಡು ಒಳ್ಳೆಯವರಂತೆ ನಟಿಸಿದವರ ಮನಸ್ಸು ಪರಿಶುದ್ಧವಾಗಿ ಇರುವುದಿಲ್ಲ. ಬೇವಿನ ಮರದ ಪ್ರತಿಯೊಂದು ಭಾಗವು ಹೇಗೆ ಕಹಿಯಾಗಿರುತ್ತದೋ ಅದೇ ರೀತಿ ದುಷ್ಟ ಮನಸ್ಸು. ಭೂಮಿಯಲ್ಲಿ ಬದುಕಿರುವ ನಾಲ್ಕು ದಿನದಲ್ಲಿ ಒಳ್ಳೆಯ ಕೆಲಗಳನ್ನು ಮಾಡಿ ಒಳ್ಳೆಯವರೆನಿಸಿಕೊಳ್ಳಿ. ಬೆಳಗ್ಗೆ ಎದ್ದ ತಕ್ಷಣ ನಾನು ಇವತ್ತು ಯಾವ ಕೆಲಸ ಮಾಡೋದಕ್ಕೆ ಹೊರಟಿದ್ದೇನೆ ಎಂಬುವುದನ್ನು ಮನಸ್ಸಿನಲ್ಲೇ ಆಲೋಚಿಸಿ. ಹಾಗೂ ನಿಮ್ಮ ತಾಯಿಯ ಬಗ್ಗೆ ಒಂದು ಸಲ ಯೋಚಿಸಿ ಆಕೆ ನಿಮಗಾಗಿ ಎಷ್ಟು ಕಷ್ಟ ಪಟ್ಟಿದ್ದಾಳೆ ಅನ್ನೋದನ್ನ. ಆಗ ನಿಮ್ಮ ಮನಸ್ಸಿನ ಆ ಕೆಟ್ಟ ಆಲೋಚನೆಗಳೆಲ್ಲಾ ಮಂಜಿನಂತೆ ಕರಗಿ ಹೋಗುತ್ತದೆ.
ಪುಣ್ಯಸ್ನಾನ ಮಾಡಿದರೂ ಪಾಪ ತೊಲಗುವುದಿಲ್ಲ
ಚಾಣಕ್ಯನ ಪ್ರಕಾರ ದುಡ್ಡು ಅನ್ನೋದು ಮನುಷ್ಯನನ್ನು ಎಂತಹ ನೀಚ ಕೆಲಸಕ್ಕಾದರೂ ಇಳಿಸಿ ಬಿಡುತ್ತದೆ. ಹೀಗೆ ನೀಚ ಕೆಲಸಗಳನ್ನೇ ಮಾಡಿ ಎಷ್ಟು ಸಂಪಾದನೆ ಮಾಡಿದರೂ ಅದು ವ್ಯರ್ಥವೇ ಸರಿ. ಕೆಲವು ಜನ ಮಾಡಿದ ಪಾಪ ಕೆಳೆಯುವುದಕ್ಕೆ ಪುಣ್ಯಸ್ನಾನ ಮಾಡುತ್ತಾರೆ. ಒಂದಲ್ಲ, ಎರಡಲ್ಲ ನೂರು ಬಾರಿ ಪುಣ್ಯ ಸ್ನಾನ ಮಾಡಿದರೂ ಮೈ ಕೊಳೆ ಹೋಗುವುದಷ್ಟೇ ಅಲ್ಲದೇ, ನಾವು ಮಾಡಿದ ಪಾಪ ಕರ್ಮಗಳು ಕಳೆಯುವುದಿಲ್ಲ. ಹೀಗಾಗಿ ಕೆಟ್ಟ ಕೆಲಸಗಳನ್ನು ಮಾಡುವ ಮೊದಲು ಕೊಂಚ ಆಲೋಚಿಸಿ.
ದಾನ ಮಾಡಿ
ಚಾಣಕ್ಯನ ಪ್ರಕಾರ ನಿಮ್ಮ ಜೀವನ ಸಾಗಿಸಲು ಬೇಕಾಗುವಷ್ಟು ದುಡ್ಡಿದರೆ ಸಾಕು. ನಿಮ್ಮಲ್ಲಿ ಬೇಕಾದಷ್ಟು ಆಸ್ತಿ-ಪಾಸ್ತಿ ಇದ್ದರೆ ಅದರಲ್ಲಿ ಸ್ವಲ್ಪ ಭಾಗವನ್ನು ದಾನಕ್ಕೆ ವಿನಿಯೋಗಿಸಿ. ಬಡಬಗ್ಗರಿಗೆ ದಾನ ಮಾಡಿ, ನಿರ್ಗತಿಕರಿಗೆ ಅನ್ನ ಹಾಕಿ. ಖಂಡಿತ ನಿಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಅದನ್ನು ಬಿಟ್ಟು ನಿಮ್ಮ ಸ್ವಾರ್ಥವೇ ಹೆಚ್ಚಾದರೆ ಆದಷ್ಟು ಬೇಗ ನಿಮ್ಮ ಪಾಪದ ಕೊಡ ತುಂಬಿ ಹೋಗುತ್ತದೆ.
ಇರುವ ನಾಲ್ಕು ದಿನದ ಬದುಕಿನಲ್ಲಿ ನಾವು ಮಾಡಿದ ಒಳ್ಳೆಯ ಕೆಲಸಗಳನ್ನಷ್ಟೇ ಜನ ನೆನಪಿಟ್ಟುಕೊಳ್ಳುತ್ತಾರೆ. ಕೈಲಾದಷ್ಟು ಇತರರಿಗೆ ಸಹಾಯ ಮಾಡಿ. ಪಾಪ-ಕರ್ಮಗಳೇ ಹೆಚ್ಚಾದರೆ ಸತ್ತ ಮೇಲೂ ನಮಗೆ ಮುಕ್ತಿ ಸಿಗೋದಿಲ್ಲ.



Click it and Unblock the Notifications














