Latest Updates
-
ಬೈಸಾಕಿ ಮತ್ತು ವಿಷು ಹಬ್ಬದ ಲುಕ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ತೆಲಂಗಾಣ ಬಿಸಿಲ ಬೇಗೆ: ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ -
MI vs RCB ಮ್ಯಾಚ್ ನೋಡುವಾಗ ದಂಪತಿಗಳ ಜಗಳ ತಪ್ಪಿಸುವುದು ಹೇಗೆ? -
ವಿಷು, ಬೈಸಾಖಿ ಹಬ್ಬಕ್ಕೆ ನಿಮ್ಮ ಮನೆ ಮಿಂಚಬೇಕೆ? ಈ ಟಿಪ್ಸ್ ಫಾಲೋ ಮಾಡಿ -
ಗರ್ಭಿಣಿಯರ ಆಹಾರ ಕ್ರಮ: ಮಗುವಿನ ಆರೋಗ್ಯಕ್ಕೆ ಈ ಬದಲಾವಣೆ ಕಡ್ಡಾಯ! -
ಬೇಸಿಗೆ ಬಿಸಿಲಿಗೆ ತಂಪಾಗಲು ವೈರಲ್ ಆಗುತ್ತಿರುವ ಫ್ಯಾಷನ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಿಸಿ -
ಹಬ್ಬದ ಫ್ಯಾಷನ್ ಟ್ರೆಂಡ್ಸ್: ಈ ಲುಕ್ ಟ್ರೈ ಮಾಡಿ ಮಿಂಚಿ -
ಬೆಳಗಿನ ವ್ಯಾಯಾಮ: ಬಿಸಿಲ ಧಗೆಯಿಂದ ಪಾರಾಗಲು ಹೀಗೆ ಮಾಡಿ -
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ
ಬೇಸಿಗೆಯಲ್ಲಿ ಈ ವಸ್ತುಗಳನ್ನು ದಾನ ಮಾಡಿದರೆ, ಶ್ರೀಮಂತರಾಗುತ್ತಾರಂತೆ!
ಹಿಂದೂ ಧರ್ಮದಲ್ಲಿ ದಾನ ನೀಡುವುದು ಪುಣ್ಯದ ಕಾರ್ಯ ಎಂದು ಹೇಳಲಾಗುತ್ತದೆ. ದಾನ ಮಾಡುವುದರಿಂದ ಪಾಪಗಳಿಂದ ಮುಕ್ತಿ ಪಡೆಯಬಹುದು. ಒಂದು ಕೈಯಿಂದ ನೀಡಿದ ದಾನವು ಸಾವಿರಾರು ಕೈಗಳಿಂದ ಹಿಂತಿರುಗುತ್ತದೆ ಎಂಬ ನಂಬಿಕೆಯಿದೆ. ಅಂದರೆ, ದಾನ ಮಾಡುವ ಮೂಲಕ ಒಬ್ಬ ವ್ಯಕ್ತಿಯು ದುಪ್ಪಟ್ಟು ಫಲಿತಾಂಶವನ್ನು ಪಡೆಯುತ್ತಾನೆ. ಬೇಸಿಗೆಯಲ್ಲಿ ಯಾವ ವಸ್ತುಗಳನ್ನು ದಾನ ಮಾಡುವುದರಿಂದ ನೀವು ಶ್ರೀಮಂತರಾಗಬಹುದು ಎಂಬುದನ್ನು ನಾವಿಂದು ತಿಳಿಸಿಕೊಡಲಿದ್ದೇವೆ. ಬೇಸಿಗೆಯಲ್ಲಿ ನೀಡುವ ದಾನವು ಇತರರಿಗೆ ಸಹಾಯ ಮಾಡುತ್ತದೆ, ಆದರೆ ಅದರ ಫಲವನ್ನು ನಿಮ್ಮ ಮುಂದಿನ ಜನ್ಮದಲ್ಲಿಯೂ ಪಡೆಯುತ್ತೀರಿ.
ಬೇಸಿಗೆಯಲ್ಲಿ ಯಾವ ವಸ್ತುವನ್ನು ದಾನ ಮಾಡಿದರೆ ಉತ್ತಮ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ನೀರು ತುಂಬಿದ ಎರಡು ಮಡಿಕೆ:
ಬೇಸಿಗೆಯಲ್ಲಿ ನೀರು ದಾನ ಮಾಡುವುದು ಪುಣ್ಯದ ಹಾಗೂ ಶ್ರೇಷ್ಠ ಕಾರ್ಯವೆಂದು ಪರಿಗಣಿಸಲಾಗಿದೆ. ನೀವು ಯಾರಿಗಾದರೂ ನೀರು ತುಂಬಿದ ಎರಡು ಮಡಿಕೆಯನ್ನು ದಾನ ಮಾಡಿದರೆ, ನೀವು ಶ್ರೀಮಂತರಾಗಬಹುದು. ಮೊದಲ ಮಡಿಕೆಯನ್ನು ದಾನ ಮಾಡಿದರೆ, ನಿಮ್ಮ ಪೂರ್ವಜರು ನಿಮ್ಮೊಂದಿಗೆ ಸಂತೋಷಪಡುತ್ತಾರೆ. ಅವರ ಶಾಂತಿಗಾಗಿ ಹೂಜಿಯನ್ನು ದಾನ ಮಾಡಿ. ಇದಲ್ಲದೆ ಎರಡನೇ ಮಡಿಕೆಯನ್ನು ವಿಷ್ಣುವಿನ ಹೆಸರಿನಲ್ಲಿ ದಾನ ಮಾಡಿ. ಈ ಹೂಜಿಗೆ ಬೆಲ್ಲ ಅಥವಾ ಸಕ್ಕರೆ ಹಾಕಿ. ದಾನ ಮಾಡುವ ಮೊದಲು ಬೆಲ್ಲ, ಮಾವಿನ ಹಣ್ಣು, ಎಳ್ಳು, ನೀರು ಸೇವಿಸಿ ದೇವರ ಧ್ಯಾನ ಮಾಡಿ.

ಬೆಲ್ಲ:
ಜ್ಯೋತಿಷ್ಯದಲ್ಲಿ, ಬೆಲ್ಲವು ಸೂರ್ಯನಿಗೆ ಸಂಬಂಧಿಸಿದೆ. ಒಬ್ಬ ವ್ಯಕ್ತಿಯ ಜಾತಕದಲ್ಲಿ ಸೂರ್ಯ ಗ್ರಹದ ಸ್ಥಾನ ಸರಿಯಿಲ್ಲದಿದ್ದರೆ ಬೆಲ್ಲವನ್ನು ದಾನ ಮಾಡುವುದರಿಂದ ಆ ವ್ಯಕ್ತಿಗೆ ತುಂಬಾ ಅನುಕೂಲವಾಗುತ್ತದೆ. ಬೆಲ್ಲವನ್ನು ದಾನ ಮಾಡುವುದರಿಂದ ಸೂರ್ಯನ ದುಷ್ಪರಿಣಾಮಗಳನ್ನು ಕಡಿಮೆ ಮಾಡಬಹುದು. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೂರ್ಯನು ಗ್ರಹಗಳ ರಾಜ. ಸೂರ್ಯ ದೇವನಿಂದ ಆಶೀರ್ವಾದ ಪಡೆದ ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಾನೆ. ಇದರೊಂದಿಗೆ ಸಮಾಜದಲ್ಲಿಯೂ ಸಾಕಷ್ಟು ಹೆಸರು ಪಡೆಯುತ್ತಾರೆ.

ಹುರಿಗಡಲೆ ಹಿಟ್ಟು:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರು ಮತ್ತು ಸೂರ್ಯನೊಂದಿಗೆ ಹುರಿಗಡಲೆ ಹಿಟ್ಟು ಸಂಬಂಧವನ್ನು ಹೊಂದಿದೆ. ಅಲ್ಲದೆ, ಇದನ್ನು ತುಂಬಾ ಶುದ್ಧವಾಗಿದೆ ಎಂದು ಹೇಳಲಾಗುತ್ತದೆ. ಗುರು ಗ್ರಹವು ಸಂಪತ್ತಿನ ಅಂಶವಾಗಿದೆ. ಆದ್ದರಿಂದ, ಬೇಸಿಗೆಯಲ್ಲಿ ಹುರಿಗಡಲೆ ಹಿಟ್ಟು ದಾನ ಮಾಡುವುದರಿಂದ ವ್ಯಕ್ತಿಯು ಶ್ರೀಮಂತನಾಗುತ್ತಾನೆ, ಹಾಗೆಯೇ ಜಾತಕದಲ್ಲಿ ಗುರು ಮತ್ತು ಸೂರ್ಯನ ಸ್ಥಾನವು ಸರಿಯಾಗಿಲ್ಲದಿದ್ದರೆ ಇದನ್ನು ದಾನ ಮಾಡುವುದರಿಂದ ಅವರ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ. ಗುರುವು ಭಗವಾನ್ ವಿಷ್ಣುವಿಗೆ ಸಂಬಂಧಿಸಿದ್ದು, ಆದ್ದರಿಂದ ಹುರಿಗಡಲೆ ಹಿಟ್ಟು ದಾನ ಮಾಡುವುದರಿಂದ ವಿಷ್ಣುವಿನ ಕೃಪೆಯು ವ್ಯಕ್ತಿಯ ಮೇಲೆ ಉಳಿಯುತ್ತದೆ ಎನ್ನಲಾಗುವುದು.

ಮಾವು:
ಶಾಸ್ತ್ರಗಳಲ್ಲಿ ಹಣ್ಣುಗಳ ದಾನವನ್ನು ಬಹಳ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಈ ಋತುವಿನ ಹಣ್ಣು ಮಾವು. ಇದು ಸೂರ್ಯನಿಗೆ ಸಂಬಂಧಿಸಿದೆ. ಮಾವಿನ ಹಣ್ಣನ್ನು ದಾನ ಮಾಡುವುದರಿಂದ ವ್ಯಕ್ತಿಯ ಜೀವನದಲ್ಲಿ ಸೂರ್ಯನ ಸ್ಥಾನವನ್ನು ಬಲಪಡಿಸುತ್ತದೆ. ಇದರಿಂದ ಸಂಪತ್ತು ವೃದ್ಧಿಯಾಗುವುದು.



Click it and Unblock the Notifications











