Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಕಷ್ಟ-ಕಾರ್ಪಣ್ಯಗಳ ದೂರಮಾಡೋ ಅಪರಾ ಏಕಾದಶಿ ಯಾವಾಗ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ
ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಅಪರಾ ಅಥವಾ ಅಚಲ ಏಕಾದಶಿ ಎನ್ನುವರು. ಈ ಏಕಾದಶಿಯಂದು ಶ್ರೀವಿಷ್ಣುವಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಈ ಬಾರಿ ಅಪರಾ ಏಕಾದಶಿಯನ್ನು ಇದೇ ಜೂನ್ 6, ಬಾನುವಾರದಂದು ಆಚರಿಸಲಾಗುತ್ತಿದೆ. ಈ ದಿನದಂದು ಉಪವಾಸವನ್ನು ಆಚರಿಸಿದರೆ ನಮ್ಮ ದುಃಖ, ಕಷ್ಟ, ಕಾರ್ಪಣ್ಯಗಳೆಲ್ಲವೂ ದೂರಾಗುತ್ತದೆ ಎಂಬ ನಂಬಿಕೆಯಿದೆ. ಈ ಅಪರಾ ಏಕಾದಶಿಯನ್ನು ಸಾಮಾನ್ಯವಾಗಿ ಜಲಕ್ರಿದ ಏಕಾದಶಿ, ಅಚಲ ಏಕಾದಶಿ ಮತ್ತು ಭದ್ರಕಾಳಿ ಏಕಾದಶಿ ಎಂದೂ ಕೂಡ ಕರೆಯಲಾಗುತ್ತದೆ.
ಅಪರಾ ಏಕಾದಶಿಯ ಶುಭ ಮುಹೂರ್ತ, ಉಪವಾಸದ ಸಮಯ, ಮಹತ್ವ ಸಂಪೂರ್ಣ ಮಾಹಿತಿ:

ಶುಭ ಮುಹೂರ್ತ:
ಈ ಬಾರಿ ಏಕಾದಶಿಯು 2021 ರ ಜೂನ್ 05 ರ ಶನಿವಾರ ಬೆಳಿಗ್ಗೆ 04:07 ರಿಂದ ಪ್ರಾರಂಭವಾಗಲಿದ್ದು, 2021 ರ ಜೂನ್ 06 ರ ಭಾನುವಾರ ಬೆಳಿಗ್ಗೆ 06.19 ಕ್ಕೆ ಕೊನೆಗೊಳ್ಳುತ್ತದೆ.

ಉಪವಾಸದ ಸಮಯ:
ಅಪರಾ ಏಕಾದಶಿ ಉಪವಾಸದ ಶುಭ ಸಮಯವು 2021 ಜೂನ್ 07 ರ ಸೋಮವಾರ ಬೆಳಿಗ್ಗೆ 06 ರಿಂದ ಪ್ರಾರಂಭವಾಗಿ ರಾತ್ರಿ 08.39 ಕ್ಕೆ ಕೊನೆಗೊಳ್ಳುತ್ತದೆ.

ಅಪರಾ ಏಕಾದಶಿಯನ್ನು ಏಕೆ ಆಚರಿಸಬೇಕು?:
ಪೌರಾಣಿಕ ನಂಬಿಕೆಗಳ ಪ್ರಕಾರ, ಅಪರಾ ಏಕಾದಶಿ ಎಂದರೆ ಅಪಾರ ಸದ್ಗುಣ. ವಿಷ್ಣುವನ್ನು ಪೂಜಿಸಿ, ಈ ದಿನದಂದು ಉಪವಾಸವನ್ನು ಆಚರಿಸುವ ಮೂಲಕ ಒಬ್ಬನು ಅಪಾರವಾದ ಸದ್ಗುಣವನ್ನು ಪಡೆಯುತ್ತಾನೆ. ಆದ್ದರಿಂದ ಇದನ್ನು ಅಪರಾ ಏಕಾದಶಿ ಎಂದು ಕರೆಯಲಾಗುತ್ತದೆ. ಅಪರಾ ಏಕಾದಶಿ ದಿನದಂದು ಪೂಜೆ ಮಾಡುವುದರಿಂದ ಮನುಷ್ಯನ ಎಲ್ಲಾ ಆಸೆಗಳನ್ನು ಈಡೇರುತ್ತದೆ ಮತ್ತು ಜೀವನದಲ್ಲಿ ಗೌರವ, ಸಂಪತ್ತು, ವೈಭವ ಮತ್ತು ಆರೋಗ್ಯ ಸಿಗುತ್ತದೆ ಎಂದು ಹೇಳಲಾಗುತ್ತದೆ.

ಅಪರಾ ಏಕಾದಶಿಯ ಮಹತ್ವ:
ಮಹಾಭಾರತ ಯುದ್ಧದಲ್ಲಿ ವಿಜಯದತ್ತ ಸಾಗಿದ ಭಗವಾನ್ ಶ್ರೀ ಕೃಷ್ಣನ ಆಜ್ಞೆಯ ಮೇರೆಗೆ ಪಾಂಡವರು ಅಪರಾ ಏಕಾದಶಿಯಂದು ಉಪವಾಸ ಮಾಡಿದರು ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಅಪರಾ ಏಕಾದಶಿ ಉಪವಾಸವನ್ನು ಆಚರಿಸುವ ಮೂಲಕ, ಭಕ್ತನ ಎಲ್ಲಾ ದುಃಖಗಳು ದೂರವಾಗುತ್ತದೆ ಮತ್ತು ಅವನ ಎಲ್ಲಾ ಪಾಪಗಳು ಕೊನೆಗೊಳ್ಳುತ್ತವೆ ಎಂದು ನಂಬಲಾಗಿದೆ.



Click it and Unblock the Notifications











