Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಕೂವಾಗಂ ಹಬ್ಬ: ಬಂದಿರುವ ಅಷ್ಟೂ ಮಂಗಳಮುಖಿಯರಿಗೆ ತಾಳಿ ಕಟ್ಟುವ ಪೂಜಾರಿ, ಈ ಹಬ್ಬದ ವಿಶೇಷತೆಯೇನು?
ಮೇ 18ಕ್ಕೆ ಮಂಗಳಮುಖಿಯರ ಪ್ರಮುಖ ಆಚರಣೆಯಾದ ಕೂವಾಗಂ ಹಬ್ಬವನ್ನು ಆಚರಿಸಲಾಗುವುದು. ಈ ದಿನದ ವಿಶೇಷತೆಯೆಂದರೆ ಈ ದಿನ ಮಂಗಳಮುಖಿಯರು ಇಲ್ಲಿಗೆ ಬಂದು ಮದುವೆಯಾಗುತ್ತಾರೆ. ಮದುಮಗಳಂತೆ ಅಲಂಕಾರ ಮಾಡಿಕೊಂಡು ತಮ್ಮ ದೇವರಾದ ಅರಾವಣವನ್ನು ಮದುವೆಯಾಗುವ ಪದ್ಧತಿಯಿದೆ.
ಕೂವಾಗಂ ಎಂಬುವುದು ಚಿಕ್ಕದಾದ ಗ್ರಾಮವಾಗಿದೆ. ತಮಿಳುನಾಡಿನ ವಿಲ್ಲೂಪುರಂ ಜಿಲ್ಲೆಯ 25 ಕಿ.ಮೀ ದೂರದಲ್ಲಿ ಈ ಗ್ರಾಮವಿದೆ. ಈ ಗ್ರಾಮವನ್ನು ನಿದ್ದೆಯ ಊರು ಎಂದು ಕರೆಯಲಾಗುವುದು. ಈ ಗ್ರಾಮಕ್ಕೆ ಜೀವಕಳೆ ಬರುವುದೇ ಮಂಗಳಮುಖಿಯರ 18 ದಿನಗಳ ಹಬ್ಬ ಶುರುವಾದಾಗ. ಈ ಹಬ್ಬ ತುಂಬಾನೇ ವಿಶಿಷ್ಠವಾಗಿದ್ದು ಈ ಹಬ್ಬದ ಕುರಿತ ಆಸಕ್ತಿದಾಯಕ ವಿಷಯಗಳ ಬಗ್ಗೆ ನೋಡುವುದಾದರೆ:

ಮಂಗಳಮುಖಿಯರ ಆಚರಣೆ ಅವರು ಪಾಲಿಸಿಕೊಂಡು ಬರುವ ಪದ್ಧತಿಗಳು ಭಿನ್ನವಾಗಿರುತ್ತದೆ
ಈ ಕೋವಾಗಂ ಹಬ್ಬದಲ್ಲಿ ತಮ್ಮ ದೇವರಾದ ಅವರಾವಣನನ್ನು ಮದುವೆಯಾಗುತ್ತಾರೆ.
ಈ ಹಬ್ಬದ ಸಮಯದಲ್ಲಿ ದೇಶದ ವಿವಿಧ ಮೂಲೆಗಳಿಂದ ಮಂಗಳಮುಖಿಯರು ಈ ಗ್ರಾಮಕ್ಕೆ ಬರುತ್ತಾರೆ. ಈ ಗ್ರಾಮ ಪೂರ್ತಿ ಇವರಿಂದಲೇ ತುಂಬಿ ತುಳುಕುತ್ತಿರುತ್ತದೆ. ಇವರು ಭಗವಾನ್ ಅವಾರಣನನ್ನು ಪೂಜಿಸಿ ಅಲ್ಲಿರುವ ಪೂಜಾರಿ ಕೈಯಿಂದ ತಾಳಿ ಕಟ್ಟಿಸಿಕೊಳ್ಳುತ್ತಾರೆ. ಈ ಹಬ್ಬದ 17ನೇ ದಿನವೇ ಎಲ್ಲಾ ಮಂಗಳಮುಖಿಯರು ಮದುಮಗಳಂತೆ ಅಲಂಕಾರ ಮಾಡಿಕೊಳ್ಳುತ್ತಾರೆ. ಕೂತವಂದಾರ್ ದೇವಾಲಯದ ಪೂಜಾರಿ ಎಲ್ಲಾ ಮಂಗಳಮುಖಿಯರಿಗೆ ತಾಳಿ ಕಟ್ಟುತ್ತಾನೆ. ಮಂಗಳಮುಖಿಯರು ಅರಾವಣನ ಹೆಸರಿನಲ್ಲಿ ತಾಳಿ ಕಟ್ಟಿಕೊಂಡು ವಿವಾಹವನ್ನು ಸಂಭ್ರಮಿಸುತ್ತಾರೆ.
ಮದುಮಗಳಂತೆ ತಾಳಿ ಕಟ್ಟಿಸಿಕೊಂಡು ವಿಧವೆಯರಂತೆ ಹಿಂತಿರುಗುತ್ತಾರೆ
ಸಂಜೆ ತಾಳಿಯನ್ನು ಕಿತ್ತು, ಕುಂಕುಮ ಅಳಿಸಿ, ಬಳೆಗಳನ್ನು ಒಡೆದು. ಅಳುತ್ತಾ ವಿಧವೆಯ ವೇಷದಲ್ಲಿರುತ್ತಾರೆ. ಪತಿ ಅರಾವಣ ಸತ್ತು ಹೋಗುತ್ತಾನೆ, ಹೀಗಾಗಿ ಈ ರೀತಿ ವಿಧವೆಯರಾಗುತ್ತಾರೆ ಎಂದು ನಂಬಿಕೆ.
ಇವರ ಈ ಆಚಾರಣೆಯ ಪೌರಾಣಿಕ ಹಿನ್ನೆಲೆ ನೋಡುವುದಾದರೆ
ಅರಾವಣ ಅರ್ಜುನನ ಮಗ, ಕುರುಕ್ಷೇತ್ರ ಯುದ್ಧದಲ್ಲಿ ಯುದ್ಧವನ್ನು ಗೆಲ್ಲಲು ತಾಯಿ ಕಾಳಿಗೆ ತನ್ನ ಪ್ರಾಣತ್ಯಾಗ ಮಾಡಲು ಮುಂದಾಗುತ್ತಾನೆ ಅರಾವಣ, ಆದರೆ ತಾನು ಸಾಯುವ ಮೊದಲು ವೈವಾಹಿಕ ಜೀವನ ನಡೆಸಲು ಆಸೆಪಡುತ್ತಾನೆ. ತೃತೀಯ ಲಿಂಗಿಗಳು ಅರಾವಣನನ್ನು ತಮ್ಮ ಸಂಗಾತಿಯನ್ನಾಗಿ ಭಾವಿಸುತ್ತಾರೆ. ಹೀಗಾಗಿ ಈ ಆಚರಣೆ ಬಂದಿದೆ.
ಈ ಹಬ್ಬದಲ್ಲಿ ಇತರ ಆಸಕ್ತಿದಾಯಕ ಕಾರ್ಯಕ್ರಮಗಳು ಇರುತ್ತದೆ
ಮಂಗಳಮುಖಿಯರ ಸೌಂದರ್ಯ ಸ್ಪರ್ಧೆ ಕೂಡ ಇಡಲಾಗುವುದು
ಈ ಹಬ್ಬದಲ್ಲಿ ಅನೇಕ ಕಾರ್ಯಕ್ರಮಗಳನ್ನು ಇಡಲಾಗುವುದು, ಸೌಂದರ್ಯ ಸ್ಪರ್ಧೆ ಕೂಡ ನಡೆಸಲಾಗುವುದು. ಇದರ ಜೊತೆಗೆ ಅನೇಕ ಮನರಂಜನೆಯ ಕಾರ್ಯಕ್ರಮ ಆಯೋಜಿಸಲಾಗುವುದು. ಈ 18 ದಿನ ಮಂಗಳಮುಖಿಯರು ಸಂಭ್ರಮದಿಂದ ಭಾಗಿಯಾಗಿ ನಂತರ ತಮ್ಮ-ತಮ್ಮ ಊರುಗಳಿಗೆ ಮರಳುತ್ತಾರೆ.
ಮಂಗಳಮುಖಿಯರು ನಮ್ಮಂತೆಯೇ ಮನುಷ್ಯರೇ, ಆದರೆ ಅವರಿಗೆ ಈ ಸಮಾಜದಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ, ಈ ಸಮಾಜದ ಜೊತೆ ಬೆರೆಯಲು ಅವಕಾಶ ದೊರೆಯುತ್ತಿಲ್ಲ. ಮನೆಯಲ್ಲಿ ಮಗನಾಗಿ ಅಥವಾ ಮಗಳಾಗಿ ಜನಿಸುವ ಇವರು ಒಂದು ಪ್ರಾಯದಲ್ಲಿ ನನ್ನ ಲಿಂಗಕ್ಕೂ, ನನ್ನಲ್ಲಿರುವ ಭಾವನೆಗಳಿಗೂ ಸಂಬಂಧವಿಲ್ಲ ಎಂದರಿತಾಗ ಮನೆಯಲ್ಲಿ, ಸಮಾಜದಲ್ಲಿ ಇವರ ಭಾವನೆಗಳಿಗೆ ಸೂಕ್ತ ಮನ್ನಣೆ ಸಿಗದೇ ಇರುವ ಕಾರಣಕ್ಕೆ ತಮ್ಮದೇ ಗುಂಪು ಸೇರಿಕೊಳ್ಳುತ್ತಾರೆ. ಎಷ್ಟೋ ಕುಟುಂಬಗಳು ಇವರನ್ನು ತಮ್ಮ ಮಕ್ಕಳಾಗಿ ಒಪ್ಪಿಕೊಳ್ಳುವುದೇ ಇಲ್ಲ, ಹೀಗೆ ತಮ್ಮದೇ ಸಮುದಾಯಕ್ಕೆ ಸೇರಿಕೊಳ್ಳುವ ಇವರು ಅಲ್ಲಿ ತಮ್ಮದೇ ಆದ ಆಚಾರ-ವಿಚಾರ, ಪದ್ಧತಿಗಳನ್ನು ಪಾಲಿಸಿಕೊಂಡು ಬರಬೇಕಾಗುತ್ತದೆ, ಅಲ್ಲದೆ ಅವರ ಪದ್ಧತಿಗಳನ್ನು ತಿರಸ್ಕರಿಸುವಂತಿರಲ್ಲ. ಇಂಥವರು ಸಮಾಜದಲ್ಲಿ ತೃತೀಯ ಲಿಂಗಿಗಳು, ಮಂಗಳಮುಖಿಯರು, ಕೋಜಾಗಳು ಹೀಗೆ ಮುಂತಾದ ಹೆಸರಿನಿಂದ ಕರೆಯಲ್ಪಡುತ್ತಾರೆ.
ಸಾಮಾನ್ಯವಾಗಿ ಇಂಥವರಿಗೆ ಮದುವೆ, ಮಕ್ಕಳು ಅಂತ ಆಗುವುದಿಲ್ಲ, ಮದುವೆಯ ಹೆಸರಿನಲ್ಲಿ ಮೋಸ ಮಾಡುವವರೇ ಅಧಿಕ. ಭಿಕ್ಷೆಬೇಡಿ ಅಥವಾ ಲೈಂಗಿಕಕಾರ್ಯಕರ್ತೆಯರಾಗುವ ಮೂಲಕ ತಮ್ಮ ಜೀವನ ನಡೆಸಬೇಕಾಗುತ್ತದೆ. ಈಗೀಗ ಸಮಾಜದಲ್ಲಿ ಉತ್ತಮ ಬದಲಾವಣೆ ಕಂಡು ಬರುತ್ತಿದೆ, ತಮ್ಮ ಮಗ/ಮಗಳು ಲಿಂಗ ಬದಲಾಯಿಸಿದಾಗ ಆ ಮಗ/ಮಗಳನ್ನು ಹೊರಹಾಕದೆ ಅವರ ಆಸೆಗೆ ಒತ್ತಾಸೆಯಾಗಿ ನಿಲ್ಲುವ ಪೋಷಕರ ಸಂಖ್ಯೆ ಹೆಚ್ಚಾಗುತ್ತಿದೆ, ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಈ ರೀತಿ ತಮ್ಮ ಮಕ್ಕಳಿಗೆ ಬೆಂಬಲ ನೀಡಿದರೆ ಮಂಗಳಮುಖಿಯರಾಗಿ ಭಿಕ್ಷೆ ಬೇಡುವುದು, ಲೈಂಗಿಕಕಾರ್ಯಕರ್ತೆಯರಾಗಿ ಜೀವನ ನಡೆಸಬೇಕಾದ ಅನಿವಾರ್ಯತೆ ತಪ್ಪುತ್ತೆ. ಅವರು ಕೂಡ ಸಮಾಜದಲ್ಲಿ ಗೌರವದಿಂದ ಬಾಳಲು ಸಾಧ್ಯವಾಗುವುದು.



Click it and Unblock the Notifications