ದೇಶಕ್ಕೆ ವಿಜಯದಶಮಿಯಿಂದ ಸಂಕ್ರಾಂತಿವರೆಗೆ ಕಂಟಕವಿದೆ ಎಂದ ಕೋಡಿಮಠ ಸ್ವಾಮೀಜಿ

ಕೋಡಿಮಠ ಸ್ವಾಮೀಜಿಯ ಭವಿಷ್ಯವಾಣಿ ಕುರಿತು ಜನರಲ್ಲಿ ಅಪಾರ ನಂಬಿಕೆ, ಕಾರಣ ಅವರು ಹೇಳಿರುವ ಎಷ್ಟೋ ಭವಿಷ್ಯಗಳು ನಿಜವಾಗಿದೆ. ಅವರು ಹೇಳಿದಂತೆ ನಡೆಯಲಿದೆ ಎಂಬುವುದನ್ನು ಜನ ಕೂಡ ನಂಬುತ್ತಾರೆ, ಹೀಗಾಗಿ ಅವರು ಏನಾದರೂ ಭವಿಷ್ಯ ನುಡಿದರೆ ಸಂಚಲನವೇ ಉಂಟಾಗಿ ಬಿಡುತ್ತದೆ. ಇದೀಗ ಅವರು ನುಡಿದಿರುವ ಭವಿಷ್ಯವಾಣಿ ತುಂಬಾನೇ ಸಂಚಲನ ಮೂಡಿಸಿದೆ. ಅಷ್ಟಕ್ಕೂ ಅವರು ಹೇಳಿರುವ ಭವಿಷ್ಯವೇನು? ಎಂದು ನೋಡೋಣ ಬನ್ನಿ:

kodimatha swamiji prediction

ದೇಶಕ್ಕೆ ಕಾದಿದೆಯೇ ಮಹಾನ್ ಕಂಟಕ
ಕೋಡಿಮಠ ಸ್ವಾಮೀಜಿಗಳಾದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ದೇಶದ ಮಹಾನ್‌ ವ್ಯಕ್ತಿಗಳಿಗೆ ಕಂಟಕ ವಿದೆ ಎಂಬ ಭವಿಷ್ಯ ಹೇಳಿದ್ದಾರೆ. 2024ರ ಯುಗಾದಿ ವೇಳೆಗೆ ದುರ್ಘಟನೆ ಸಂಭವಿಸಲಿದೆ. ಆಳುವವರು ಈ ಕುರಿತು ಎಚ್ಚರವಹಿಸಿದರೆ ಈ ಕಂಟಕ ತಪ್ಪಿಸಬಹುದಾಗಿದೆ ಎಂಬುವುದಾಗಿ ಹೇಳಿದ್ದಾರೆ.

ದೊಡ್ಡ ನಗರಗಳಿಗೂ ಆಪತ್ತಿದೆ
ಇವರು ದೊಡ್ಡ ಪಟ್ಟಣಗಳಿಗೆ ಅಪಾಯದ ಸೂಚನೆಯಿದೆ, ದೊಡ್ಡ ದೊಡ್ಡ ಕಟ್ಟಡಗಳು ಕುಸಿಯಬಹುದು, ಜಗತ್ತೇ ತಲ್ಲಣವಾಗಲಿದೆ ಎಂಬುವುದಾಗಿ ಹೇಳಿದ್ದಾರೆ. ವಿಜಯದಶಮಿಯಿಂದ ಸಂಕ್ರಾಂತಿಯವರೆಗೆ ದುರ್ಘಟನೆಗಳು ಸಂಭವಿಸಲಿದೆ ಎಂಬುವುದಾಗಿ ಭವಿಷ್ಯ ಹೇಳಿದ್ದಾರೆ.

ಜಲಪ್ರಳಯದ ಬಗ್ಗೆ ಮೊದಲೇ ಭವಿಷ್ಯ ನುಡಿದ್ದರು
ರಾಹ್ಯದಲ್ಲ ಭಾರಿ ಮಳೆ ಬಂದು ಜಲಪ್ರಳಯವಾಗಲಿದೆ ಎಂಬುವುದಾಗಿ ಹೇಳಿದ್ದರು. ಈ ವರ್ಷ ರಾಜ್ಯದಲ್ಲಿ ಮಳೆಯ ಪ್ರಮಾಣ ತುಂಬಾ ಕಡಿಮೆ ಇದೆ, ಆದರೆ ಇತ್ತೀಚೆಗೆ ಸುರಿದ ಮಳೆ ಹಲವು ಕಡೆ ಪ್ರಳಯ ಉಂಟು ಮಾಡಿ ಸಾಕಷ್ಟು ಸಂಕಷ್ಟಗಳನ್ನು ತಂದಿದೆ.

ಗೌರಿಶಂಕರ ಶಿಖರ, ಜೋಶಿಮಠಕ್ಕೆ ಕಂಟಕವಿದೆ ಎಂಬ ಭವಿಷ್ಯ
ಇತ್ತೀಚೆಗೆ ಹಿಮಾಲಯದ ಜೋಶಿಮಠ ಮುಳುಗುವ ಮುನ್ನವೇ ಅಲ್ಲಿ ಕಂಟಕವಿದೆ ಎಂಬುವುದಾಗಿ ಹೇಳಿದ್ದರು. ಇವರು ಈ ಕುರಿತು ಹೇಳುವಾಗ ಅವರು ಧ್ಯಾನದಲ್ಲಿದ್ದಾಗಾಗ ಅವರ ಹೊಟ್ಟೆ ಮೇಲೆ ಬೆಂಕಿ ಬಿತ್ತು, ಇದರಿಂದ ಜೋಶಿಮಠಕ್ಕೆ ಕಂಟಕವಿದೆ ಎಂಬುವುದು ಗೊತ್ತಾಯ್ತು ಎಂಬುವುದಾಗಿ ಹೇಳಿದ್ದಾರೆ. ಇವರು ಭವಿಷ್ಯವನ್ನು ಸುಮ್ಮನೆ ನುಡಿಯಲ್ಲ. ಇವರು ಧ್ಯಾನ ಮಾಡುವಾಗ ಪಂಚಾಗ್ನಿ, ಜಲಾಗ್ನಿ, ವಾಯಾಗ್ನಿ ಸೇರಿದಂತೆ ತಮ್ಮ ನಾಲ್ಕೂ ಸುತ್ತಲೂ ಅಗ್ನಿಯನ್ನು ಇಟ್ಟು, ತಲೆಯ ಮೇಲೆ ಬೆಂಕಿಕುಂಡವಿಟ್ಟು ಧ್ಯಾನ ಮಾಡುತ್ತಾರೆ, ಆವಾಗ ಅವರಿಗೆ ಮುಂಬರುವ ಅಪಾಯದ ಸೂಚನೆ ಸಿಗುವುದು, ಅದರಂತೆ ಭವಿಷ್ಯ ನುಡಿಯುತ್ತಾರೆ.

ಕರ್ನಾಟಕದ ಕುರಿತ ಇವರು ನುಡಿದ ಭವಿಷ್ಯ ನಿಜವಾಗಿದೆ
ಇವರು ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಬರಲ್ಲ, ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರಲಿದೆ ಎಂಬುವುದಾಗಿ ಹೇಳಿದ್ದರು, ಅದರಂತೆಯೇ ಆಗಿದೆ.

ಕರ್ನಾಟಕದ ಸರ್ಕಾರದ ಕುರಿತ ಭವಿಷ್ಯ
ರಾಜ್ಯ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ, ಆದರೆ ಬೇಗ ಹಣ ಮಾಡುವ ದುರಾಸೆಯಿಂದ ತೊಂದರೆ ತಂದುಕೊಳ್ಳುತ್ತಾರೆ ಎಂಬುವುದಾಗಿ ಹೇಳಿದ್ದಾರೆ. ಇದರಿಂದಾಗಿ ಅಲ್ಲೋಲ ಕಲ್ಲೋಲ ಸಂಭವಿಸಲಿದೆ ಎಂಬುವುದಾಗಿ ಹೇಳಿದ್ದಾರೆ.

English summary

Kodimatha Swamiji Says There Is Kantaka From Vijayadashami To Sankranti

Kodimatha Swamiji Prediction: he says There is Kantaka for Nation's Most Famous people, read on...
Story first published: Monday, August 14, 2023, 14:30 [IST]
X
Desktop Bottom Promotion