Latest Updates
-
ರಕ್ಷಾಬಂಧನ ವಿಶೇಷ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ; ಪ್ರಯಾಣಕ್ಕೂ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಖೇಲೋ ಇಂಡಿಯಾ ಸಂವಾದ ವೀಕ್ಷಿಸುವಾಗ ಜಡತ್ವ ಬೇಡ: 12 ನಿಮಿಷಗಳ ಈ ಸಿಂಪಲ್ ವರ್ಕೌಟ್ ಟ್ರೈ ಮಾಡಿ! -
ಆಗಸ್ಟ್ 27 ಅಥವಾ 28? ರಾಖಿ ಹಬ್ಬದ ಗೊಂದಲಕ್ಕೆ ಇಲ್ಲಿದೆ ಬೆಸ್ಟ್ ಪ್ಲಾನ್! -
ಗುಡುಗು-ಸಿಡಿಲು ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು 15 ನಿಮಿಷಗಳ ತುರ್ತು ಕ್ರಮಗಳು -
ರಕ್ಷಾಬಂಧನಕ್ಕೆ ಸಿಹಿ ಖರೀದಿಸ್ತಿದ್ದೀರಾ? ಈ ತಪ್ಪು ಮಾಡಿದ್ರೆ ಆರೋಗ್ಯಕ್ಕೆ ಕುತ್ತು, ನಕಲಿ ಸ್ವೀಟ್ಸ್ ಪತ್ತೆ! -
ರಕ್ಷಾಬಂಧನಕ್ಕೆ ಚಿನ್ನ ಖರೀದಿಸುವ ಮುನ್ನ ಎಚ್ಚರ! ಇಂದಿನ ದರ ಮತ್ತು ಲಾಭದಾಯಕ ಟಿಪ್ಸ್ ಇಲ್ಲಿದೆ -
ರಾಷ್ಟ್ರೀಯ ಕ್ರೀಡಾ ದಿನ: 29 ನಿಮಿಷಗಳ ಸರಳ ವರ್ಕೌಟ್ ಮೂಲಕ ಫಿಟ್ ಆಗಿ! -
ಕುಟುಂಬದಲ್ಲಿ ಉಡುಪಿನ ಬಗ್ಗೆ ಟೀಕೆಗಳೇ? ಈ 7 ವಾಕ್ಯಗಳ ಮೂಲಕ ಗೌರವಯುತವಾಗಿ ಉತ್ತರಿಸಿ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಉಳಿಸಲು ಸರಳ ಟಿಪ್ಸ್ ಮತ್ತು ಪರ್ಯಾಯಗಳು! -
ಪ್ಯಾಕೆಟ್ ಆಹಾರದ ಮೇಲೆ ಕಡ್ಡಾಯ ಎಚ್ಚರಿಕೆ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಅಂತಿಮ ಗಡುವು!
ಗುರು ಪೂರ್ಣಿಮಾ 2023 : ದಿನಾಂಕ, ಪೂಜೆಯ ಮುಹೂರ್ತ ಯಾವಾಗ?
ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನವನ್ನು ಆಷಾಢ ಪೂರ್ಣಿಮಾ, ಗುರು ಪೂರ್ಣಿಮಾ ಅಥವಾ ವ್ಯಾಸ ಪೂರ್ಣಿಮಾ ಎಂತಲೂ ಕರೆಯಲಾಗುತ್ತದೆ. ಈ ದಿನದಿಂದ ಆಷಾಢ ಮಾಸವು ಕೊನೆಗೊಳ್ಳುತ್ತದೆ. ಮತ್ತು ಉತ್ತರ ಭಾರತದಲ್ಲಿ ಶ್ರಾವಣ ಮಾಸ ಶುರುವಾಗುತ್ತದೆ. ಅಂದಹಾಗೆ ಪ್ರತಿ ಹುಣ್ಣಿಮೆಯ ಪುಣ್ಯವು ಫಲಪ್ರದವಾಗಿದೆ.
ಆದರೆ ಗುರುವಿಗೆ ಸಮರ್ಪಿತವಾಗಿರುವ ಗುರು ಪೂರ್ಣಿಮದಂದು ಮಾಡುವ ಪೂಜೆ ಮತ್ತು ಉಪವಾಸವನ್ನು ಬಹಳ ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಈ ದಿನ ಶಿಷ್ಯನು ಗುರುವನ್ನು ಪೂಜಿಸುತ್ತಾನೆ. ಮತ್ತು ಅವರಿಂದ ಆಶೀರ್ವಾದವನ್ನು ಪಡೆಯುತ್ತಾರೆ. ಗುರುವು ನಮ್ಮನ್ನು ಅಜ್ಞಾನದ ಕತ್ತಲೆಯಿಂದ ಹೊರತೆಗೆದು ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುತ್ತಾನೆ.

ಧರ್ಮಗ್ರಂಥಗಳ ಪ್ರಕಾರ ಮಹರ್ಷಿ ವೇದವ್ಯಾಸರು ಈ ದಿನದಂದೇ ಜನಿಸಿದರಂತೆ. ವ್ಯಾಸರಿಗೆ ಮೊದಲ ಗುರು ಎಂಬ ಬಿರುದನ್ನು ಸಹ ನೀಡಲಾಗಿದೆ. ಏಕೆಂದರೆ ಮೊದಲ ಬಾರಿಗೆ ನಾಲ್ಕು ವೇದಗಳ ಜ್ಞಾನವನ್ನು ಮನುಕುಲಕ್ಕೆ ನೀಡಿದ ಗುರುಗಳು ವ್ಯಾಸರು. ಗುರು ತನ್ನ ಜ್ಞಾನದಿಂದ ಶಿಷ್ಯನನ್ನು ಸರಿದಾರಿಯಲ್ಲಿ ಕರೆದುಕೊಂಡು ಹೋಗಿ ದೇವರನ್ನು ಸಂದರ್ಶಿಸುವಂತೆ ಮಾಡುತ್ತಾನೆ. ಹೀಗಾಗಿ ಗುರುಗಳ ಗೌರವಾರ್ಥವಾಗಿ ಈ ಹಬ್ಬವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಅಷ್ಟಕ್ಕು ಗುರು ಪೂರ್ಣಿಮವನ್ನು ಯಾವಾಗ ಆಚರಣೆ ಮಾಡಲಾಗುತ್ತದೆ? ಶುಭ ಮುಹೂರ್ತ, ಪೂಜಾ ವಿಧಾನ ಹಾಗೂ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳೋಣ.
ಗುರು ಪೂರ್ಣಿಮಾ ದಿನಾಂಕ ಮತ್ತು ಶುಭ ಮುಹೂರ್ತ
ಗುರು ಪೂರ್ಣಿಮಾವನ್ನು ಜುಲೈ 2 ರ ರಾತ್ರಿ 8.21 ಕ್ಕೆ ಪ್ರಾರಂಭವಾಗುತ್ತದೆ. ಇದು ಜುಲೈ 3 ರಂದು ಸಂಜೆ 5.08 ಕ್ಕೆ ಕೊನೆಗೊಳ್ಳುತ್ತದೆ. ಸೂರ್ಯ ಉದಯತಿಥಿ ಪ್ರಕಾರ ಗುರು ಪೂರ್ಣಿಮೆಯನ್ನು ಜುಲೈ 3 ರಂದು ಆಚರಿಸಲಾಗುತ್ತದೆ.
ಪೂಜಾ ವಿಧಾನ
ಗುರು ಪೂರ್ಣಿಮೆಯ ದಿನದಂದು ಗುರುಗಳ ಆರಾಧನೆಗೆ ವಿಶೇಷ ಮಹತ್ವವಿದೆ. ಗುರು ಪೂರ್ಣಿಮೆಯಂದು ಬೆಳಿಗ್ಗೆ ಸ್ನಾನ ಮಾಡಿ ಶುಭ್ರವಾದ ಬಟ್ಟೆಗಳನ್ನು ಧರಿಸಿದ ನಂತರ ಮನೆಯ ಪೂಜಾ ಸ್ಥಳದಲ್ಲಿ ಪ್ರತಿಷ್ಠಾಪಿಸಲಾದ ಎಲ್ಲಾ ದೇವತೆಗಳಿಗೆ ಭಕ್ತಿಯಿಂದ ನಮಸ್ಕರಿಸಿ. ಒಂದು ವೇಳೆ ನೀವು ನಿಮ್ಮ ಗುರುವಿನ ಮೂರ್ತಿ ಮಾಡಿದ್ದರೆ, ನೀವು ಅದಕ್ಕೆ ಪೂಜಿಸಿ, ನಿಮ್ಮ ಗುರುಗಳ ಆಶೀರ್ವಾದವನ್ನು ಪಡೆಯಬೇಕು.
ಈ ದಿನ ಗುರುವಿನ ಜೊತೆಗೆ ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನೂ ಪೂಜಿಸಲಾಗುತ್ತದೆ. ಅಷ್ಟೇ ಅಲ್ಲ, ಇದರ ಜೊತೆಗೆ ಈ ದಿನ ಗೋವನ್ನು ಪೂಜಿಸಿ ಸೇವೆ ಮಾಡುವುದರಿಂದ ಮತ್ತು ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತಂತೆ. ಮತ್ತು ನಮ್ಮ ಆರೋಗ್ಯ ಕೂಡ ವೃದ್ಧಿಯಾಗುತ್ತಂತೆ. ಇನ್ನೂ ಈ ದಿನ ವೇದಗಳ ಸೃಷ್ಟಿಕರ್ತ ವೇದವ್ಯಾಸರ ಪಾರಾಯಣವನ್ನು ಮಾಡಬೇಕು.
ಮಂತ್ರಗಳು :
ಗುರುರ್ ಬ್ರಹ್ಮ ಗುರುರ್ ವಿಷ್ಣು
ಗುರುರ್ ದೇವೋ ಮಹೇಶ್ವರ
ಗುರು ಸಾಕ್ಷಾತ್ ಪರ ಬ್ರಹ್ಮ
ತಸ್ಮೇ ಶ್ರೀ ಗುರವೇ ನಮಃ
ಗುರುವನ್ನು ಭಕ್ತಿಯಿಂದ ಪೂಜಿಸಿದ್ರೆ ನಿಮ್ಮ ಜೀವನದ ಕತ್ತಲೆ ದೂರವಾಗುತ್ತದೆ. ಸದ್ಗುರುವಿನಿಂದ ಭಗವಂತನ ಸಾಕ್ಷಾತ್ಕಾರ ಸಾಧ್ಯ. ಶಿಕ್ಷಕರನ್ನು ಅಷ್ಟೇ ಅಲ್ಲ, ಅದರ ಜೊತೆಗೆ ತನಗಿಂತ ಹಿರಿಯರಾದವರನ್ನು ಮತ್ತು ತಂದೆ-ತಾಯಿಯನ್ನು ಶಿಕ್ಷಕರೆಂದು ಪರಿಗಣಿಸಿ. ಯಾಕಂದ್ರೆ ಅವರಿಂದ ಕಲಿಯೋದು ಸಾಕಷ್ಟಿದೆ.



Click it and Unblock the Notifications