Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗರುಡ ಪುರಾಣ : ಮಹಿಳೆ ಈ ಕೆಲಸಗಳನ್ನು ಮಾಡುವಾಗ ಪುರುಷ ನೋಡಲೇಬಾರದು
ಹಿಂದೂ ಧರ್ಮದಲ್ಲಿ ಗರುಡ ಪುರಾಣಕ್ಕೆ ಮಹತ್ವದ ಸ್ಥಾನ ಕಲ್ಪಿಸಲಾಗಿದೆ. ಗರುಡ ಪುರಾಣದ ಹತ್ತೊಂಬತ್ತು ಪದ್ಯಗಳಲ್ಲಿ ಪಾಪ-ಕರ್ಮಗಳ ಬಗ್ಗೆ ಉಲ್ಲೇಖಿಸಲಾಗಿದೆ. ಗರುಡ ಪುರಾಣದ ಪ್ರಕಾರ ಮಹಿಳೆಯರು ಈ ಕೆಲಸಗಳನ್ನು ಮಾಡುವಾಗ ಪುರುಷರು ನೋಡಲೇಬಾರದು. ಒಂದು ವೇಳೆ ನೋಡಿದರೆ ಅವರಿಗೆ ನರಕ ಪಾಪ್ತಿಯಾಗುತ್ತಂತೆ. ಹಾಗಾದ್ರೆ ಆ ಕೆಲಸಗಳು ಯಾವುದು ಅನ್ನೋದನ್ನ ಹೇಳ್ತೀವಿ.
ನಾವು ಹಿಂದಿನ ಜನ್ಮದಲ್ಲಿ ಮಾಡಿರೋ ಕೆಲಸಗಳಿಂದ ಮುಂದಿನ ಜನ್ಮದಲ್ಲಿ ನಮಗೆ ಕೆಟ್ಟದ್ದು ಆಗಬಹುದು ಅಥವಾ ಒಳ್ಳೆಯದ್ದು ಆಗಬಹುದು. ಒಳ್ಳೆಯ ಕೆಲಸ ಮಾಡಿದ್ರೆ ಒಳ್ಳೆಯದ್ದನ್ನೇ ಅನುಭವಿಸುತ್ತೇವೆ. ಇನ್ನೂ ಕೆಟ್ಟ ಕೆಲಸ ಮಾಡಿದ್ರೆ ಖಂಡಿತ ಕೆಟ್ಟದಾಗುತ್ತದೆ. ಹಾಗೂ ನರಕದಲ್ಲೂ ನಮಗೆ ಆತ್ಮ ತೃಪ್ತಿ ಅನ್ನೋದು ಇರೋದಿಲ್ಲ.

ವಿಷ್ಣುವು ಗರುಡ ಪುರಾಣವನ್ನು ಗರುಡನಿಗೆ ಹೇಳುತ್ತಿರಬೇಕಾದರೆ ಕೆಲವೊಂದು ವಿಚಾರಗಳ ಬಗ್ಗೆ ಸ್ಪಷ್ಟವಾಗಿ ವಿವರಿಸಲಾಗಿದೆ. ಅದ್ರಲ್ಲೂ ಮಹಿಳೆಯರ ಬಗ್ಗೆ ಕೆಲವೊಂದು ಕೌತುಕದ ಸಂಗತಿಗಳ ಬಗ್ಗೆಯೂ ತಿಳಿಸಲಾಗಿದೆ. ಮಹಿಳೆಯರು ಈ ಎರಡು ಕೆಲಸಗಳನ್ನು ಮಾಡುವಾಗ ಪುರುಷರು ಅಪ್ಪಿ ತಪ್ಪಿಯೂ ನೋಡಬಾರದಂತೆ. ಒಂದು ಸಾರಿ ತಪ್ಪಿ ನೋಡಿದ್ರು ಕೂಡ ಆತನಿಗೆ ನರಕ ಪ್ರಾಪ್ತಿಯಾಗುವುದನ್ನು ಯಾರಿಂದಲೂ ತಪ್ಪಿಸೋದಕ್ಕೆ ಆಗೋದಿಲ್ವಂತೆ.
1. ಮಗುವಿಗೆ ಹಾಲುಣಿಸುವಾಗ
ಗರುಡ ಪುರಾಣದ ಪ್ರಕಾರ ಮಹಿಳೆಯರು ಮಗುವಿಗೆ ಹಾಲುಣಿಸುವಾಗ ಪುರುಷರು ನೋಡಬಾರದಂತೆ. ಸಾಮಾನ್ಯವಾಗಿ ಮಗು ಹಾಲು ಕುಡಿಯುವಾಗ ಮುಗ್ಧತೆಯಿಂದಿರುತ್ತೆ ಹಾಗೂ ಹಾಲು ಕುಡಿಯುವುದರಲ್ಲೇ ತಲ್ಲೀನವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಯಾವುದಾದರೂ ಪುರುಷ ಆಕೆಯನ್ನು ಕೆಟ್ಟ ದೃಷ್ಟಿಯಿಂದ ನೋಡಿದರೆ ಆತನಿಗೆ ಖಂಡಿತ ಪಾಪ ಪ್ರಾಪ್ತಿಯಾಗುತ್ತದೆ. ಇಂತಹ ನಾಚಿಕೆಯಿಲ್ಲದ ಮನುಷ್ಯನ ನರಕದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಾನಂತೆ.
2. ಮಹಿಳೆ ಸ್ನಾನ ಮಾಡುವಾಗ
ಗರುಡ ಪುರಾಣದ ಪ್ರಕಾರ ಮಹಿಳೆ ಸ್ನಾನ ಮಾಡುವಾಗ ಪರ ಪುರುಷ ಕೆಟ್ಟ ದೃಷ್ಟಿಯಿಂದ ನೋಡುವುದು ಮಹಾ ಪಾಪ. ಇಂತಹ ಕೆಟ್ಟ ಮನಸ್ಥಿತಿ ಇರುವ ಪುರುಷ ಸತ್ತ ನಂತರ ನೇರವಾಗಿ ನರಕಕ್ಕೆ ಹೋಗುತ್ತಾನಂತೆ. ಇಲ್ಲಿ ಆತನಿಗೆ ಚಿತ್ರ ಹಿಂಸೆಯನ್ನು ನೀಡಲಾಗುತ್ತಂತೆ. ಹೀಗಾಗಿ ಮಹಿಳೆಯರ ಮೇಲೆ ಪುರುಷರು ಗೌರವವನ್ನು ಕಾಪಾಡುವುದು ತುಂಬಾನೇ ಮುಖ್ಯ.
ಪಾಪ-ಕರ್ಮಗಳ ಲೆಕ್ಕ ಚುಕ್ತಾ ಮಾಡೋದ್ಹೇಗೆ?
ಗರುಡ ಪುರಾಣದ ಪ್ರಕಾರ ಯಾರು ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೋ ? ಅವರಿಗೆ ಪಾಪ ಪ್ರಾಪ್ತಿಯಾಗುತ್ತಂತೆ. ಹಾಗೂ ಅಂತವರು ದೀರ್ಘಕಾಲದವರೆಗೂ ನರಕದಲ್ಲೇ ಕಳೆಯಬೇಕಾಗುತ್ತದೆ. ಪಾಪಗಳ ಪಟ್ಟಿ ಅಧಿಕವಾಗಿದ್ರೆ ಸತ್ತ ಮೇಲೂ ಅಂತವರು ನಿರಂತರವಾಗಿ ದು:ಖ, ನೋವನ್ನೇ ಅನುಭವಿಸಬೇಕಾಗುತ್ತದೆ. ಇನ್ನೂ ನರಕದಲ್ಲಿ ಯಮಧೂತರು ಚಿತ್ರಹಿಂಸೆ ನೀಡುತ್ತಾರೆ. ಗರುಡ ಪುರಾಣ ಪ್ರಕಾರ ಸಾವಿನ ನಂತರ ಯಮಧೂತರು ಆತ್ಮವನ್ನು ಚಿತ್ರ ಗುಪ್ತನಿದ್ದಲ್ಲಿಗೆ ತೆಗೆದುಕೊಂಡು ಹೋಗುತ್ತಾರೆ. ನೀವು ಮಾಡಿದ ಒಳ್ಳೆಯ ಹಾಗೂ ಕೆಟ್ಟ ಕೆಲಸಕ್ಕೆ ಅನುಗುಣವಾಗಿ ನಿಮಗೆ ಸ್ವರ್ಗ ಹಾಗೂ ನರಕ ಪ್ರಾಪ್ತಿಯಾಗುತ್ತಾ ಅನ್ನೋದನ್ನ ನಿರ್ಧರಿಸಲಾಗುತ್ತದೆ. ಒಂದು ವೇಳೆ ನರಕ ಪ್ರಾಪ್ತಿಯಾದರೆ ಅಲ್ಲಿ ನಿಮ್ಮನ್ನು ಉರಿಯುತ್ತಿರುವ ಬೆಂಕಿಯ ಹತ್ತಿರ ದೈತ್ಯ ಶಾಲ್ಮಲಿ ಮರಕ್ಕೆ ಕಟ್ಟಲಾಗುತ್ತದೆ. ನಂತರ ಯಮಧೂತರು ಹಿಂಸೆ ನೀಡಲು ಶುರು ಮಾಡುತ್ತಾರೆ ಅನ್ನೋ ನಂಬಿಕೆಯಿದೆ.
ಮಹಿಳೆಯರಿಗೆ ಗೌರವ ಸಲ್ಲಿಸೋದು ಪುರುಷನಾದ ಕರ್ತವ್ಯ. ಅದೇ ರೀತಿ ಆಕೆಯ ಮರ್ಯಾದಿ ಕಾಪಾಡುವುದು ತುಂಬಾನೇ ಮುಖ್ಯವಾಗುತ್ತದೆ.



Click it and Unblock the Notifications


