ಆರ್ಥಿಕ ಸಂಕಷ್ಟ ದೂರಾಗಲು ಶುಕ್ರವಾರ ಲಕ್ಷ್ಮಿಗೆ ಈ ಪರಿಹಾರ ಮಾಡಿ

ಲಕ್ಷ್ಮಿಯ ಆರಾಧನೆಗೆ ಶುಕ್ರವಾರ ಶ್ರೇಷ್ಠ ದಿನ. ಈ ದಿನ ಭಕ್ತಿಯಿಂದ ಲಕ್ಷ್ಮಿಯನ್ನು ಆರಾಧನೆ ಮಾಡಿದರೆ ಲಕ್ಷ್ಮಿ ಕೃಪೆಯಿಂದ ದಾರಿದ್ರ್ಯ, ಆರ್ಥಿಕ ಸಂಕಷ್ಟ ದೂರಾಗುವುದು. ಅದರಲ್ಲೂ ಸರಿಯಾದ ಪೂಜಾ ವಿಧಿಗಳಿಂದ ಲಕ್ಷ್ಮಿಯನ್ನು ಒಲಿಸಿಕೊಳ್ಳಬಹುದು. ಶುಕ್ರವಾರ ಏನು ಮಾಡಬೇಕು, ಈ ದಿನ ಏನು ಪರಿಹಾರ ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

Friday Remedies

ಶುಕ್ರವಾರ ಮಹಾಲಕ್ಷ್ಮಿ ಪೂಜಾ ವಿಧಿ
ನೀವು ಲಕ್ಷ್ಮಿ ಪೂಜೆಗೆ ಎಲ್ಲಾ ಸಾಮಗ್ರಿ ಮೊದಲೇ ಜೋಡಿಸಿ. ಮನೆ ಸ್ವಚ್ಛವಾಗಿರುವ ಕಡೆ ಲಕ್ಷ್ಮಿ ನೆಲೆಸಿರುತ್ತಾಳೆ ಎಂದ ನಂಬಿಕೆಯಿದೆ, ಆದ್ದರಿಂದ ಮನೆಯ ದೂಳು ತೆಗೆದು ಮನೆಯನ್ನು ಸ್ವಚ್ಛವಾಗಿಡಿ. ಬೆಳಗ್ಗೆ ಎದ್ದು ಸ್ನಾನ ಮಾಡಿ ಮನೆಮುಂದೆ ಹಾಗೂ ದೇವರ ಕೋಣೆಯಲ್ಲಿ ರಂಗೋಲಿ ಹಾಕಿ.
* ಲಕ್ಷ್ಮಿ ದೇವಿಯ ವಿಗ್ರಹ ಅಥವಾ ಫೋಟೋವನ್ನು ಒಂದು ಹಲಗೆಯ ಮೇಲೆ ಕೆಂಪು ಬಟ್ಟೆ ಹಾಸಿ ಅದರ ಮೇಲೆ ಇಡಿ.
* ದೇವಿಗೆ ಆಭರಣಗಳನ್ನು ತೊಡಿಸಿ ಅಲಂಕರಿಸಿ.
* ದೇವಿಯ ಮುಂದೆ ನೀರು ತುಂಬಿದ ಕಳಸ ಇಡಿ. ಕಳದಲ್ಲಿ ನಾಣ್ಯಗಳನ್ನು ಹಾಕಿರಿ.
* ಪೂಜೆಯ ನಂತರ ಲಕ್ಷ್ಮಿ ದೇವಿಯ ಮಂತ್ರ ಹೇಳುತ್ತಾ ಪ್ರಸಾದವನ್ನು ಅರ್ಪಿಸಿ.
* ನಂತರ ಆರತಿ ಬೆಳಗಿ
* ನೆರೆದವರಿಗೆ ಪ್ರಸಾದವನ್ನು ಹಂಚಿ.

ಶುಕ್ರವಾರ ಈ ಮಂತ್ರಗಳನ್ನು ಪಠಿಸಿ
* ಈ ದಿನ ಶ್ರೀ ಲಕ್ಷ್ಮಿ ಸ್ತೋತ್ರ ಪಠಿಸಿ. ಶ್ರೀ ಸುಕ್ತ ಅಥವಾ ಕನಕಾಧಾರ ಸ್ತೋತ್ರ ಪಠಿಸಿ. ಇದರಿಂದ ಸಂಪತ್ತು ವೃದ್ಧಿಸುವುದು.
* ಕೆಂಪು ಹೂಗಳನ್ನು ಲಕ್ಷ್ಮಿಗೆ ಅರ್ಪಿಸಿ. ಈ ದಿನ ದೇವಿಗೆ ಕೆಂಪು ಗುಲಾಬಿ ಅಥವಾ ಇತರ ಹೂಗಳನ್ನು ಅರ್ಪಿಸಿ.
* ನೀವು 4 ಕರ್ಪೂರ ಹಾಗೂ ಆರತಿಗೆ 2 ಲವಂಗ ಹಾಕಿ ಆರತಿ ಬೆಳಗಿ

ಶ್ರೀ ಲಕ್ಷ್ಮಿ ಮಂತ್ರ ಪಠಿಸಿ
"ಓಂ ಶ್ರಿಂಗ್ ಶ್ರಿಯೆ ನಮಃ"
"ಓಂ ಶ್ರೀಂ ಮಹಾ ಲಕ್ಷ್ಮೀಯೇ ನಮಃ".
"ಓಂ ಹ್ರೀಂ ಶ್ರೀಂ ಕ್ಲೀಂ ಮಹಾ ಲಕ್ಷ್ಮಿ ನಮಃ".

ಈ ವಸ್ತುಗಳನ್ನು ದಾನ ಮಾಡಿ
* ಶುಕ್ರವಾರ ಬಿಳಿ ಸಿಹಿ ಪದಾರ್ಥಗಳನ್ನು ದಾನ ಮಾಡಿ
* ಚಿಕ್ಕ ಹುಡುಗಿಯರಿಗೆ ಉಡುಗೊರೆ, ಹಣ್ಣುಗಳನ್ನು ನೀಡಿ
ನೀವು ನಿಯಮಿತವಾಗಿ 21 ವಾರಗಳವರೆಗೆ ನೀವು ಶ್ರೀ ಲಕ್ಷ್ಮಿಯನ್ನು ಈ ರೀತಿ ಪೂಜೆ ಸಲ್ಲಿಸಿದರೆ ನೀವು ಬಯಸಿದ ಫಲ ಸಿಗುವುದು.

English summary

Friday Remedies: Ways to Attain Maa Lakshmi's Blessings In Kannada

Friday Remedies 2023: These remedies helps to get rid from financial problem read on..
Story first published: Thursday, April 20, 2023, 20:01 [IST]
X
Desktop Bottom Promotion