Latest Updates
-
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ
ಪತ್ನಿಯ ಬಳಿ ಈ ನಾಲ್ಕು ವಿಚಾರಗಳ ಬಗ್ಗೆ ಹೇಳಲೇಬೇಡಿ ಅಂತಾರೆ ಚಾಣಕ್ಯ
ಚಾಣಕ್ಯನು ಸಾಮಾನ್ಯ ಜನರ ಜೀವನಕ್ಕೆ ಬೇಕಾಗಿರುವ ಕೆಲವೊಂದು ನೀತಿಗಳನ್ನು ರೂಪಿಸಿದ್ದಾರೆ. ಇಂದಿಗೂ ಜನ ಅದನ್ನು ಪಾಲಿಸುತ್ತಿದ್ದಾರೆ. ಚಾಣಕ್ಯ ನೀತಿಯಂತೆ ಜೀವನವನ್ನು ನಡೆಸಿದವರು ಬದುಕಿನಲ್ಲಿ ಯಶಸ್ವಿಯಾಗಿದ್ದಾರೆ.
ಸುಖ ಸಂಸಾರ ನಡೆಸೋದಕ್ಕೂ ಚಾಣಕ್ಯ ಕೆಲವೊಂದು ನೀತಿಗಳನ್ನು ರೂಪಿಸಿದ್ದಾರೆ. ಅವರ ಪ್ರಕಾರ ಗಂಡ-ಹೆಂಡತಿ ಒಬ್ಬರಿಗೊಬ್ಬರು ಪ್ರಶಂಸೆ ನೀಡಬೇಕು. ಸಮಸ್ಯೆ ಬಂದಾಗ ಅದನ್ನು ಒಟ್ಟಾಗಿ ಎದುರಿಸಬೇಕು. ಇನ್ನೂ ಕೆಲವೊಂದು ವಿಚಾರಗಳು ಗಂಡ-ಹೆಂಡತಿಯ ಮಧ್ಯೆ ಇರಬೇಕೇ ಹೊರತು ಅದನ್ನು ಬೇರೆ ಯಾರೊಂದಿಗೂ ಹಂಚಿಕೊಳ್ಳ ಬಾರದು ಅಂತ ಹೇಳಿದ್ದಾರೆ.

ಅದ್ರಲ್ಲೂ ಚಾಣಕ್ಯನ ಪ್ರಕಾರ ಕೆಲವೊಂದು ವಿಚಾರಗಳನ್ನು ಪತ್ನಿಯ ಬಳಿ ಹೇಳಲೇ ಬಾರದು. ಹಾಗಾದ್ರೆ ಪತ್ನಿಯ ಬಳಿ ಹೇಳಬಾರದಂತಹ ವಿಚಾರಗಳು ಯಾವುದು ಅನ್ನೋದನ್ನ ಹೇಳ್ತೀವಿ.
1. ಅವಮಾನ
ಮನುಷ್ಯ ಅಂದಮೇಲೆ ಆತನಿಗೆ ಅವಮಾನ, ದುಃಖ, ನೋವುಗಳಾಗೋದು ಸಹಜ. ಅದ್ರಲ್ಲೂ ಚಾಣಕ್ಯನ ಪ್ರಕಾರ ಪುರುಷರು ಮನೆ ಹೊರಗಡೆ ಹೋಗಿ ಕೆಲಸ ಮಾಡೋದ್ರಿಂದ ಕೆಲವೊಂದು ಸಾರಿ ಅವಮಾನಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಎಲ್ಲಾ ವಿಚಾರವನ್ನು ನಿಮ್ಮ ಪತ್ನಿಯ ಬಳಿ ಬಂದು ಹೇಳಿಕೊಳ್ಳಬೇಡಿ. ಯಾಕಂದ್ರೆ ಕೆಲವೊಂದು ಮನೆಗಳಲ್ಲಿ ಪತ್ನಿಯು ಗಂಡಂದಿರ ನೋವುಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವು ಕಡೆ ಪತಿಯೇನಾದರೂ ತನಗಾದ ಅವಮಾನವನ್ನು ಹೇಳಿಕೊಂಡರೆ ಪತ್ನಿಯು ಪದೇ ಪದೇ ಅದನ್ನೇ ಹೇಳಿ ಆತನ ಮನಸ್ಸಿಗೆ ನೋವು ಮಾಡುತ್ತಾಳೆ.
2. ಸಂಪಾದನೆ
ಚಾಣಕ್ಯನ ಪ್ರಕಾರ ಪತಿಯಾದವನು ತನ್ನ ದುಡಿಮೆಯ ಬಗ್ಗೆ ಪತ್ನಿಯ ಬಳಿ ಹೇಳಿಕೊಳ್ಳಬಾರದು. ಹೇಳಿಕೊಂಡರೂ ಕೂಡ ಇಷ್ಟೇ ಅಂಪಾದನೆ ಇದೆ ಅಂತ ಸರಿಯಾದ ಲೆಕ್ಕ ಕೊಡಬಾರದು. ಯಾಕಂದ್ರೆ ಮುಂದೆ ಆಕೆ ನಿಮ್ಮ ಸಂಪಾದನೆಯ ಲೆಕ್ಕ ಇಟ್ಟು. ನೀವು ಅಗತ್ಯ ಕೆಲಸಕ್ಕೆ ಖರ್ಚು ಮಾಡುತ್ತಿದ್ದರೆ ಅದಕ್ಕೆ ಖರ್ಚು ಮಾಡದಂತೆ ಆಕೆ ನಿಮ್ಮ ಕೈ ಕಟ್ಟಿ ಹಾಕಬಹುದು. ನೀವು ನಿಮ್ಮವರಿಗೆ ಸಹಾಯ ಮಾಡುತ್ತಿದ್ದರೆ ಅದಕ್ಕೂ ಆಕೆ ಅಡ್ಡಗಾಲು ಹಾಕಬಹುದು. ಇದರಿಂದಾಗಿ ಮುಂದೆ ನೀವು ತೊಂದರೆ ಅನುಭವಿಸಬೇಕಾಗುತ್ತದೆ.
3. ದಾನ
ಚಾಣಕ್ಯನ ಪ್ರಕಾರ ನೀವು ಮಾಡುವ ದಾನದ ಬಗ್ಗೆ ನಿಮ್ಮ ಪತ್ನಿಯ ಬಳಿ ಹೇಳಿಕೊಳ್ಳಲೇಬಾರದು. ಯಾಕಂದ್ರೆ ನಾವು ಮಾಡುವ ದಾನ ಯಾವಾಗಲೂ ರಹಸ್ಯವಾಗಿ ಇರಬೇಕು. ನಾವು ಬಲಗೈಯಲ್ಲಿ ಮಾಡಿದ ದಾನ ಎಡಗೈಗೆ ತಿಳಿಯಬಾರದು. ದಾನದ ಬಗ್ಗೆ ನಾವು ಎಲ್ಲರ ಬಳಿಯೂ ಹೇಳಿಕೊಂಡು ತಿರುಗಾಡಿದರೆ ದಾನ ಅದರ ಪ್ರಾಮುಖ್ಯತೆಯನ್ನು ಕಳೆದುಕೊಂಡು ಬಿಡುತ್ತದೆ. ಅದೇ ರೀತಿ ಪತ್ನಿಯ ಬಳಿ ಕೂಡ ಈ ವಿಚಾರದ ಬಗ್ಗೆ ಮಾತನಾಡಲೇ ಬೇಡಿ. ಯಾಕಂದ್ರೆ ಆಕೆ ನೀವು ಮಾಡುವ ಪುಣ್ಯ ಕಾರ್ಯಕ್ಕೆ ಅಡ್ಡಗಾಲು ಹಾಕುವ ಸಾಧ್ಯತೆ ಇದೆ.
4. ದೌರ್ಬಲ್ಯ
ಚಾಣಕ್ಯನ ಪ್ರಕಾರ ನಿಮ್ಮ ದೌರ್ಬಲ್ಯಗಳು ಏನೇ ಇರಬಹುದು. ಆದರೆ ಅದರ ಬಗ್ಗೆ ಇತರರ ಬಳಿ ಹಂಚಿಕೊಳ್ಳಲೇ ಬಾರದು. ಅಷ್ಟೇ ಅಲ್ಲ, ನಿಮ್ಮ ಪತ್ನಿಯ ಬಳಿಯೂ ಹೇಳಿಕೊಳ್ಳಬೇಡಿ. ಯಾಕಂದ್ರೆ ಆಕೆ ನಿಮ್ಮ ದೌರ್ಬಲ್ಯವನ್ನು ಅಸ್ತ್ರವಾಗಿಸಿಕೊಂಡರೆ ಕಷ್ಟ. ನಿಮ್ಮ ದೌರ್ಬಲ್ಯದ ವಿಚಾರವನ್ನೇ ಇಟ್ಟುಕೊಂಡು ಆಕೆ ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸುವ ಸಾಧ್ಯತೆ ಇದೆ. ಎಲ್ಲರೂ ಈ ರೀತಿ ಮಾಡುತ್ತಾರೆ ಅಂತಲ್ಲ. ಆದರೆ ಹೆಚ್ಚಿನವರು ನಿಮ್ಮ ದೌರ್ಬಲ್ಯದ ಪ್ರಯೋಜನ ಪಡೆದುಕೊಳ್ಳುತ್ತಾರೆ. ಹೀಗಾಗಿ ಮುಂಜಾಗರೂಕತೆಯಿಂದ ಇರೋದು ನಿಮ್ಮ ಕರ್ತವ್ಯ.
ಅದೆಂತಹ ಪರಿಸ್ಥಿತಿ ಬಂದರೂ ಕೂಡ ಇಂತಹ ವಿಚಾರಗಳ ಬಗ್ಗೆ ನಿಮ್ಮ ಪತ್ನಿಯ ಬಳಿ ಹೇಳಿಕೊಳ್ಳಲೇಬೇಡಿ. ಯಾಕಂದ್ರೆ ಒಂದಲ್ಲ ಒಂದು ದಿನ ನಿಮಗೆ ಮುಳುವಾಗುವ ಸಾಧ್ಯತೆ ಇದೆ.



Click it and Unblock the Notifications


