Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಪತ್ನಿಯ ಬಳಿ ಈ ನಾಲ್ಕು ವಿಚಾರಗಳ ಬಗ್ಗೆ ಹೇಳಲೇಬೇಡಿ ಅಂತಾರೆ ಚಾಣಕ್ಯ
ಚಾಣಕ್ಯನು ಸಾಮಾನ್ಯ ಜನರ ಜೀವನಕ್ಕೆ ಬೇಕಾಗಿರುವ ಕೆಲವೊಂದು ನೀತಿಗಳನ್ನು ರೂಪಿಸಿದ್ದಾರೆ. ಇಂದಿಗೂ ಜನ ಅದನ್ನು ಪಾಲಿಸುತ್ತಿದ್ದಾರೆ. ಚಾಣಕ್ಯ ನೀತಿಯಂತೆ ಜೀವನವನ್ನು ನಡೆಸಿದವರು ಬದುಕಿನಲ್ಲಿ ಯಶಸ್ವಿಯಾಗಿದ್ದಾರೆ.
ಸುಖ ಸಂಸಾರ ನಡೆಸೋದಕ್ಕೂ ಚಾಣಕ್ಯ ಕೆಲವೊಂದು ನೀತಿಗಳನ್ನು ರೂಪಿಸಿದ್ದಾರೆ. ಅವರ ಪ್ರಕಾರ ಗಂಡ-ಹೆಂಡತಿ ಒಬ್ಬರಿಗೊಬ್ಬರು ಪ್ರಶಂಸೆ ನೀಡಬೇಕು. ಸಮಸ್ಯೆ ಬಂದಾಗ ಅದನ್ನು ಒಟ್ಟಾಗಿ ಎದುರಿಸಬೇಕು. ಇನ್ನೂ ಕೆಲವೊಂದು ವಿಚಾರಗಳು ಗಂಡ-ಹೆಂಡತಿಯ ಮಧ್ಯೆ ಇರಬೇಕೇ ಹೊರತು ಅದನ್ನು ಬೇರೆ ಯಾರೊಂದಿಗೂ ಹಂಚಿಕೊಳ್ಳ ಬಾರದು ಅಂತ ಹೇಳಿದ್ದಾರೆ.

ಅದ್ರಲ್ಲೂ ಚಾಣಕ್ಯನ ಪ್ರಕಾರ ಕೆಲವೊಂದು ವಿಚಾರಗಳನ್ನು ಪತ್ನಿಯ ಬಳಿ ಹೇಳಲೇ ಬಾರದು. ಹಾಗಾದ್ರೆ ಪತ್ನಿಯ ಬಳಿ ಹೇಳಬಾರದಂತಹ ವಿಚಾರಗಳು ಯಾವುದು ಅನ್ನೋದನ್ನ ಹೇಳ್ತೀವಿ.
1. ಅವಮಾನ
ಮನುಷ್ಯ ಅಂದಮೇಲೆ ಆತನಿಗೆ ಅವಮಾನ, ದುಃಖ, ನೋವುಗಳಾಗೋದು ಸಹಜ. ಅದ್ರಲ್ಲೂ ಚಾಣಕ್ಯನ ಪ್ರಕಾರ ಪುರುಷರು ಮನೆ ಹೊರಗಡೆ ಹೋಗಿ ಕೆಲಸ ಮಾಡೋದ್ರಿಂದ ಕೆಲವೊಂದು ಸಾರಿ ಅವಮಾನಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಎಲ್ಲಾ ವಿಚಾರವನ್ನು ನಿಮ್ಮ ಪತ್ನಿಯ ಬಳಿ ಬಂದು ಹೇಳಿಕೊಳ್ಳಬೇಡಿ. ಯಾಕಂದ್ರೆ ಕೆಲವೊಂದು ಮನೆಗಳಲ್ಲಿ ಪತ್ನಿಯು ಗಂಡಂದಿರ ನೋವುಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವು ಕಡೆ ಪತಿಯೇನಾದರೂ ತನಗಾದ ಅವಮಾನವನ್ನು ಹೇಳಿಕೊಂಡರೆ ಪತ್ನಿಯು ಪದೇ ಪದೇ ಅದನ್ನೇ ಹೇಳಿ ಆತನ ಮನಸ್ಸಿಗೆ ನೋವು ಮಾಡುತ್ತಾಳೆ.
2. ಸಂಪಾದನೆ
ಚಾಣಕ್ಯನ ಪ್ರಕಾರ ಪತಿಯಾದವನು ತನ್ನ ದುಡಿಮೆಯ ಬಗ್ಗೆ ಪತ್ನಿಯ ಬಳಿ ಹೇಳಿಕೊಳ್ಳಬಾರದು. ಹೇಳಿಕೊಂಡರೂ ಕೂಡ ಇಷ್ಟೇ ಅಂಪಾದನೆ ಇದೆ ಅಂತ ಸರಿಯಾದ ಲೆಕ್ಕ ಕೊಡಬಾರದು. ಯಾಕಂದ್ರೆ ಮುಂದೆ ಆಕೆ ನಿಮ್ಮ ಸಂಪಾದನೆಯ ಲೆಕ್ಕ ಇಟ್ಟು. ನೀವು ಅಗತ್ಯ ಕೆಲಸಕ್ಕೆ ಖರ್ಚು ಮಾಡುತ್ತಿದ್ದರೆ ಅದಕ್ಕೆ ಖರ್ಚು ಮಾಡದಂತೆ ಆಕೆ ನಿಮ್ಮ ಕೈ ಕಟ್ಟಿ ಹಾಕಬಹುದು. ನೀವು ನಿಮ್ಮವರಿಗೆ ಸಹಾಯ ಮಾಡುತ್ತಿದ್ದರೆ ಅದಕ್ಕೂ ಆಕೆ ಅಡ್ಡಗಾಲು ಹಾಕಬಹುದು. ಇದರಿಂದಾಗಿ ಮುಂದೆ ನೀವು ತೊಂದರೆ ಅನುಭವಿಸಬೇಕಾಗುತ್ತದೆ.
3. ದಾನ
ಚಾಣಕ್ಯನ ಪ್ರಕಾರ ನೀವು ಮಾಡುವ ದಾನದ ಬಗ್ಗೆ ನಿಮ್ಮ ಪತ್ನಿಯ ಬಳಿ ಹೇಳಿಕೊಳ್ಳಲೇಬಾರದು. ಯಾಕಂದ್ರೆ ನಾವು ಮಾಡುವ ದಾನ ಯಾವಾಗಲೂ ರಹಸ್ಯವಾಗಿ ಇರಬೇಕು. ನಾವು ಬಲಗೈಯಲ್ಲಿ ಮಾಡಿದ ದಾನ ಎಡಗೈಗೆ ತಿಳಿಯಬಾರದು. ದಾನದ ಬಗ್ಗೆ ನಾವು ಎಲ್ಲರ ಬಳಿಯೂ ಹೇಳಿಕೊಂಡು ತಿರುಗಾಡಿದರೆ ದಾನ ಅದರ ಪ್ರಾಮುಖ್ಯತೆಯನ್ನು ಕಳೆದುಕೊಂಡು ಬಿಡುತ್ತದೆ. ಅದೇ ರೀತಿ ಪತ್ನಿಯ ಬಳಿ ಕೂಡ ಈ ವಿಚಾರದ ಬಗ್ಗೆ ಮಾತನಾಡಲೇ ಬೇಡಿ. ಯಾಕಂದ್ರೆ ಆಕೆ ನೀವು ಮಾಡುವ ಪುಣ್ಯ ಕಾರ್ಯಕ್ಕೆ ಅಡ್ಡಗಾಲು ಹಾಕುವ ಸಾಧ್ಯತೆ ಇದೆ.
4. ದೌರ್ಬಲ್ಯ
ಚಾಣಕ್ಯನ ಪ್ರಕಾರ ನಿಮ್ಮ ದೌರ್ಬಲ್ಯಗಳು ಏನೇ ಇರಬಹುದು. ಆದರೆ ಅದರ ಬಗ್ಗೆ ಇತರರ ಬಳಿ ಹಂಚಿಕೊಳ್ಳಲೇ ಬಾರದು. ಅಷ್ಟೇ ಅಲ್ಲ, ನಿಮ್ಮ ಪತ್ನಿಯ ಬಳಿಯೂ ಹೇಳಿಕೊಳ್ಳಬೇಡಿ. ಯಾಕಂದ್ರೆ ಆಕೆ ನಿಮ್ಮ ದೌರ್ಬಲ್ಯವನ್ನು ಅಸ್ತ್ರವಾಗಿಸಿಕೊಂಡರೆ ಕಷ್ಟ. ನಿಮ್ಮ ದೌರ್ಬಲ್ಯದ ವಿಚಾರವನ್ನೇ ಇಟ್ಟುಕೊಂಡು ಆಕೆ ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸುವ ಸಾಧ್ಯತೆ ಇದೆ. ಎಲ್ಲರೂ ಈ ರೀತಿ ಮಾಡುತ್ತಾರೆ ಅಂತಲ್ಲ. ಆದರೆ ಹೆಚ್ಚಿನವರು ನಿಮ್ಮ ದೌರ್ಬಲ್ಯದ ಪ್ರಯೋಜನ ಪಡೆದುಕೊಳ್ಳುತ್ತಾರೆ. ಹೀಗಾಗಿ ಮುಂಜಾಗರೂಕತೆಯಿಂದ ಇರೋದು ನಿಮ್ಮ ಕರ್ತವ್ಯ.
ಅದೆಂತಹ ಪರಿಸ್ಥಿತಿ ಬಂದರೂ ಕೂಡ ಇಂತಹ ವಿಚಾರಗಳ ಬಗ್ಗೆ ನಿಮ್ಮ ಪತ್ನಿಯ ಬಳಿ ಹೇಳಿಕೊಳ್ಳಲೇಬೇಡಿ. ಯಾಕಂದ್ರೆ ಒಂದಲ್ಲ ಒಂದು ದಿನ ನಿಮಗೆ ಮುಳುವಾಗುವ ಸಾಧ್ಯತೆ ಇದೆ.



Click it and Unblock the Notifications


