Latest Updates
-
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ! -
ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಎಳ್ಳುಂಡೆ ಮಾಡಿ: ತಿಂಗಳ ಕಾಲ ಇಟ್ಟು ಸವಿಯಬಹುದು! -
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ! -
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು! -
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ! -
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ!
ಪತ್ನಿಯ ಬಳಿ ಈ ನಾಲ್ಕು ವಿಚಾರಗಳ ಬಗ್ಗೆ ಹೇಳಲೇಬೇಡಿ ಅಂತಾರೆ ಚಾಣಕ್ಯ
ಚಾಣಕ್ಯನು ಸಾಮಾನ್ಯ ಜನರ ಜೀವನಕ್ಕೆ ಬೇಕಾಗಿರುವ ಕೆಲವೊಂದು ನೀತಿಗಳನ್ನು ರೂಪಿಸಿದ್ದಾರೆ. ಇಂದಿಗೂ ಜನ ಅದನ್ನು ಪಾಲಿಸುತ್ತಿದ್ದಾರೆ. ಚಾಣಕ್ಯ ನೀತಿಯಂತೆ ಜೀವನವನ್ನು ನಡೆಸಿದವರು ಬದುಕಿನಲ್ಲಿ ಯಶಸ್ವಿಯಾಗಿದ್ದಾರೆ.
ಸುಖ ಸಂಸಾರ ನಡೆಸೋದಕ್ಕೂ ಚಾಣಕ್ಯ ಕೆಲವೊಂದು ನೀತಿಗಳನ್ನು ರೂಪಿಸಿದ್ದಾರೆ. ಅವರ ಪ್ರಕಾರ ಗಂಡ-ಹೆಂಡತಿ ಒಬ್ಬರಿಗೊಬ್ಬರು ಪ್ರಶಂಸೆ ನೀಡಬೇಕು. ಸಮಸ್ಯೆ ಬಂದಾಗ ಅದನ್ನು ಒಟ್ಟಾಗಿ ಎದುರಿಸಬೇಕು. ಇನ್ನೂ ಕೆಲವೊಂದು ವಿಚಾರಗಳು ಗಂಡ-ಹೆಂಡತಿಯ ಮಧ್ಯೆ ಇರಬೇಕೇ ಹೊರತು ಅದನ್ನು ಬೇರೆ ಯಾರೊಂದಿಗೂ ಹಂಚಿಕೊಳ್ಳ ಬಾರದು ಅಂತ ಹೇಳಿದ್ದಾರೆ.

ಅದ್ರಲ್ಲೂ ಚಾಣಕ್ಯನ ಪ್ರಕಾರ ಕೆಲವೊಂದು ವಿಚಾರಗಳನ್ನು ಪತ್ನಿಯ ಬಳಿ ಹೇಳಲೇ ಬಾರದು. ಹಾಗಾದ್ರೆ ಪತ್ನಿಯ ಬಳಿ ಹೇಳಬಾರದಂತಹ ವಿಚಾರಗಳು ಯಾವುದು ಅನ್ನೋದನ್ನ ಹೇಳ್ತೀವಿ.
1. ಅವಮಾನ
ಮನುಷ್ಯ ಅಂದಮೇಲೆ ಆತನಿಗೆ ಅವಮಾನ, ದುಃಖ, ನೋವುಗಳಾಗೋದು ಸಹಜ. ಅದ್ರಲ್ಲೂ ಚಾಣಕ್ಯನ ಪ್ರಕಾರ ಪುರುಷರು ಮನೆ ಹೊರಗಡೆ ಹೋಗಿ ಕೆಲಸ ಮಾಡೋದ್ರಿಂದ ಕೆಲವೊಂದು ಸಾರಿ ಅವಮಾನಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಎಲ್ಲಾ ವಿಚಾರವನ್ನು ನಿಮ್ಮ ಪತ್ನಿಯ ಬಳಿ ಬಂದು ಹೇಳಿಕೊಳ್ಳಬೇಡಿ. ಯಾಕಂದ್ರೆ ಕೆಲವೊಂದು ಮನೆಗಳಲ್ಲಿ ಪತ್ನಿಯು ಗಂಡಂದಿರ ನೋವುಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವು ಕಡೆ ಪತಿಯೇನಾದರೂ ತನಗಾದ ಅವಮಾನವನ್ನು ಹೇಳಿಕೊಂಡರೆ ಪತ್ನಿಯು ಪದೇ ಪದೇ ಅದನ್ನೇ ಹೇಳಿ ಆತನ ಮನಸ್ಸಿಗೆ ನೋವು ಮಾಡುತ್ತಾಳೆ.
2. ಸಂಪಾದನೆ
ಚಾಣಕ್ಯನ ಪ್ರಕಾರ ಪತಿಯಾದವನು ತನ್ನ ದುಡಿಮೆಯ ಬಗ್ಗೆ ಪತ್ನಿಯ ಬಳಿ ಹೇಳಿಕೊಳ್ಳಬಾರದು. ಹೇಳಿಕೊಂಡರೂ ಕೂಡ ಇಷ್ಟೇ ಅಂಪಾದನೆ ಇದೆ ಅಂತ ಸರಿಯಾದ ಲೆಕ್ಕ ಕೊಡಬಾರದು. ಯಾಕಂದ್ರೆ ಮುಂದೆ ಆಕೆ ನಿಮ್ಮ ಸಂಪಾದನೆಯ ಲೆಕ್ಕ ಇಟ್ಟು. ನೀವು ಅಗತ್ಯ ಕೆಲಸಕ್ಕೆ ಖರ್ಚು ಮಾಡುತ್ತಿದ್ದರೆ ಅದಕ್ಕೆ ಖರ್ಚು ಮಾಡದಂತೆ ಆಕೆ ನಿಮ್ಮ ಕೈ ಕಟ್ಟಿ ಹಾಕಬಹುದು. ನೀವು ನಿಮ್ಮವರಿಗೆ ಸಹಾಯ ಮಾಡುತ್ತಿದ್ದರೆ ಅದಕ್ಕೂ ಆಕೆ ಅಡ್ಡಗಾಲು ಹಾಕಬಹುದು. ಇದರಿಂದಾಗಿ ಮುಂದೆ ನೀವು ತೊಂದರೆ ಅನುಭವಿಸಬೇಕಾಗುತ್ತದೆ.
3. ದಾನ
ಚಾಣಕ್ಯನ ಪ್ರಕಾರ ನೀವು ಮಾಡುವ ದಾನದ ಬಗ್ಗೆ ನಿಮ್ಮ ಪತ್ನಿಯ ಬಳಿ ಹೇಳಿಕೊಳ್ಳಲೇಬಾರದು. ಯಾಕಂದ್ರೆ ನಾವು ಮಾಡುವ ದಾನ ಯಾವಾಗಲೂ ರಹಸ್ಯವಾಗಿ ಇರಬೇಕು. ನಾವು ಬಲಗೈಯಲ್ಲಿ ಮಾಡಿದ ದಾನ ಎಡಗೈಗೆ ತಿಳಿಯಬಾರದು. ದಾನದ ಬಗ್ಗೆ ನಾವು ಎಲ್ಲರ ಬಳಿಯೂ ಹೇಳಿಕೊಂಡು ತಿರುಗಾಡಿದರೆ ದಾನ ಅದರ ಪ್ರಾಮುಖ್ಯತೆಯನ್ನು ಕಳೆದುಕೊಂಡು ಬಿಡುತ್ತದೆ. ಅದೇ ರೀತಿ ಪತ್ನಿಯ ಬಳಿ ಕೂಡ ಈ ವಿಚಾರದ ಬಗ್ಗೆ ಮಾತನಾಡಲೇ ಬೇಡಿ. ಯಾಕಂದ್ರೆ ಆಕೆ ನೀವು ಮಾಡುವ ಪುಣ್ಯ ಕಾರ್ಯಕ್ಕೆ ಅಡ್ಡಗಾಲು ಹಾಕುವ ಸಾಧ್ಯತೆ ಇದೆ.
4. ದೌರ್ಬಲ್ಯ
ಚಾಣಕ್ಯನ ಪ್ರಕಾರ ನಿಮ್ಮ ದೌರ್ಬಲ್ಯಗಳು ಏನೇ ಇರಬಹುದು. ಆದರೆ ಅದರ ಬಗ್ಗೆ ಇತರರ ಬಳಿ ಹಂಚಿಕೊಳ್ಳಲೇ ಬಾರದು. ಅಷ್ಟೇ ಅಲ್ಲ, ನಿಮ್ಮ ಪತ್ನಿಯ ಬಳಿಯೂ ಹೇಳಿಕೊಳ್ಳಬೇಡಿ. ಯಾಕಂದ್ರೆ ಆಕೆ ನಿಮ್ಮ ದೌರ್ಬಲ್ಯವನ್ನು ಅಸ್ತ್ರವಾಗಿಸಿಕೊಂಡರೆ ಕಷ್ಟ. ನಿಮ್ಮ ದೌರ್ಬಲ್ಯದ ವಿಚಾರವನ್ನೇ ಇಟ್ಟುಕೊಂಡು ಆಕೆ ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸುವ ಸಾಧ್ಯತೆ ಇದೆ. ಎಲ್ಲರೂ ಈ ರೀತಿ ಮಾಡುತ್ತಾರೆ ಅಂತಲ್ಲ. ಆದರೆ ಹೆಚ್ಚಿನವರು ನಿಮ್ಮ ದೌರ್ಬಲ್ಯದ ಪ್ರಯೋಜನ ಪಡೆದುಕೊಳ್ಳುತ್ತಾರೆ. ಹೀಗಾಗಿ ಮುಂಜಾಗರೂಕತೆಯಿಂದ ಇರೋದು ನಿಮ್ಮ ಕರ್ತವ್ಯ.
ಅದೆಂತಹ ಪರಿಸ್ಥಿತಿ ಬಂದರೂ ಕೂಡ ಇಂತಹ ವಿಚಾರಗಳ ಬಗ್ಗೆ ನಿಮ್ಮ ಪತ್ನಿಯ ಬಳಿ ಹೇಳಿಕೊಳ್ಳಲೇಬೇಡಿ. ಯಾಕಂದ್ರೆ ಒಂದಲ್ಲ ಒಂದು ದಿನ ನಿಮಗೆ ಮುಳುವಾಗುವ ಸಾಧ್ಯತೆ ಇದೆ.



Click it and Unblock the Notifications














