Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಹಾವಿನಂತೆ ವಿಷಕಾರೋ ವ್ಯಕ್ತಿಗಳ ಜೊತೆ ಸ್ನೇಹ ಮಾಡಲೇಬೇಡಿ : ಚಾಣಕ್ಯ
ಆಚಾರ್ಯ ಚಾಣಕ್ಯರ ಪ್ರಕಾರ ನಮ್ಮ ಜೊತೆಗೆ ಇರುವ ಕೆಲವು ವ್ಯಕ್ತಿಗಳು ತುಂಬಾನೇ ಅಪಾಯಕಾರಿ. ಎಷ್ಟು ಅಪಾಯಕಾರಿಯಂದ್ರೆ ಹಾವು ಹಾಗೂ ಚೇಳಿಗಿಂತ ಅವರು ನಮ್ಮ ಜೊತೆಗಿದ್ದರೆ ನಮಗೆ ಆಪತ್ತು ತಪ್ಪಿದಲ್ಲ ಅಂತ ಚಾಣಕ್ಯ ಹೇಳಿದ್ದಾರೆ.
ಹೌದು, ಮನಸ್ಸಲ್ಲೇ ವಿಷಕಾರುವ ಕೆಟ್ಟ ಜನಗಳಿಂದ ನಾವು ದೂರವಿರಬೇಕು ಎಂದು ಚಾಣಕ್ಯ ಕಿವಿ ಮಾತು ಹೇಳಿದ್ದಾರೆ. ಹಾಗೂ ಅಂಥವರ ಬಳಿ ತಪ್ಪಿಯೂ ಸಹಾಯವನ್ನು ಕೇಳಲೇಬೇಡಿ.

ಹಾಗಾದ್ರೆ ನಾವು ನಮ್ಮ ಜೀವನದಲ್ಲಿ ಖುಷಿಯಿಂದ ಇರಬೇಕಾದರೆ ಎಂಥಹ ವ್ಯಕ್ತಿಗಳಿಂದ ದೂರವಿರಬೇಕು ಎಂದು ಚಾಣಕ್ಯ ಹೇಳಿದ್ದಾರೆ. ಆ ವ್ಯಕ್ತಿಗಳು ಯಾರು ಅನ್ನೋದನ್ನ ಹೇಳ್ತೀವಿ.
1. ಮಾತು ಮಾತಿಗೂ ಸಿಡುಕುವ ವ್ಯಕ್ತಿಗಳಿಂದ ದೂರವಿರಿ
ಚಾಣಕ್ಯನ ಪ್ರಕಾರ ಅತಿಯಾಗಿ ಸಿಟ್ಟು ಮಾಡಿಕೊಳ್ಳುವ ವ್ಯಕ್ತಿಗಳಿಂದ ದೂರವಿರಬೇಕು ಅಂತಾರೆ. ನಿಮಗೆಲ್ಲಾ ಗೊತ್ತಿರೋ ಹಾಗೇ ಕೋಪವೇ ಮನುಷ್ಯನ ಅತೀ ದೊಡ್ಡ ಶತ್ರು. ಅತಿಯಾಗಿ ಕೋಪ ಹೊಂದಿರುವ ವ್ಯಕ್ತಿ ಆ ಕ್ಷಣದಲ್ಲಿ ಯಾವ ಮಟ್ಟಕ್ಕಾದರೂ ಇಳಿಯುತ್ತಾನೆ. ಇದಿಷ್ಟೇ ಅಲ್ಲ, ಆತನ ಕೋಪ ಆತನ ಜೊತೆಗೆ ಇತರರಿಗೂ ಕೆಟ್ಟದ್ದನ್ನು ಮಾಡಬಹುದು. ಕೋಪ ಇದ್ದಾಗ ತಪ್ಪು ಯಾವುದು ಸರಿ ಯಾವುದು ಅನ್ನೋದನ್ನ ನಿರ್ಧಾರಿಸೋ ಪರಿಜ್ಞಾನವು ಕೂಡ ಇರೋದಿಲ್ಲ. ಇಂತಹ ವ್ಯಕ್ತಿಗಳು ಶತ್ರುಗಳಿಗಿಂತಾನೂ ಅಪಾಯಕಾರಿ ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ.
2. ದುರಾಸೆ ಉಳ್ಳವರು, ಕುತಂತ್ರಿಗಳಿಂದ ದೂರವಿರಿ
ಆಚಾರ್ಯ ಚಾಣಕ್ಯರ ಪ್ರಕಾರ ದುರಾಸೆ ಹಾಗೂ ಹೊಟ್ಟೆ ಕಿಚ್ಚು ಹೊಂದಿರುವ ವ್ಯಕ್ತಿಗಳಿಂದ ದೂರವಿರಬೇಕೆಂದು ಚಾಣಕ್ಯ ಹೇಳಿದ್ದಾರೆ. ಎಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ನೀವು ಇವರ ಸಹಾಯ ಪಡೆಯಲೇಬೇಡಿ. ಯಾಕಂದ್ರೆ ಇಂಥಹ ವ್ಯಕ್ತಿಗಳಿಗೆ ನಿಮಗೆ ಸಹಾಯ ಮಾಡುವ ಉದ್ದೇಶವಂತೂ ಖಂಡಿತ ಇರೋದಿಲ್ಲ. ಸಹಾಯ ಮಾಡಿದರೂ ನಿಮ್ಮ ಜೀವನ ಹಾಳಾಗಲಿ ಎಂದು ಮನಸ್ಸಲ್ಲೇ ಅಂದುಕೊಳ್ಳುತ್ತಾರೆ. ಹಾಗೂ ಅವರು ಎಂದಿಗೂ ನಿಮ್ಮ ಅಭಿವೃದ್ಧಿ ಹಾಗೂ ಯಶಸ್ಸನ್ನು ಬಯಸೋದೇ ಇಲ್ಲ. ಹಾಗೆಯೇ ಹೊಟ್ಟೆ ಕಿಚ್ಚು ಇರುವವರಿಗೆ ಸರಿ ಯಾವುದು? ತಪ್ಪು ಯಾವುದು? ಅನ್ನೋದನ್ನ ನಿರ್ಧರಿಸೋದಕ್ಕೂ ಸಾಧ್ಯವಾಗೋದಿಲ್ಲ. ಹೀಗಿರುವಾಗ ಇಂಥವರ ಸಂಘ ಬೇಡ ಎಂದು ಚಾಣಕ್ಯ ಹೇಳಿದ್ದಾರೆ.
3. ಸ್ವಾರ್ಥಿಗಳ ಸಂಘ ಬೇಡವೇ ಬೇಡ
ಆಚಾರ್ಯ ಚಾಣಕ್ಯರ ಪ್ರಕಾರ ನಾವು ಸ್ವಾರ್ಥಿಗಳ ಸಂಘ ಮಾಡಲೇಬಾರದು. ಯಾಕಂದ್ರೆ ಇಂಥಹ ವ್ಯಕ್ತಿಗಳಿಂದ ನಿಮಗೆ ಯಾವುದೇ ರೀತಿಯ ಪ್ರಯೋಜನವಿಲ್ಲ. ಇವರು ನಿಮ್ಮನ್ನು ಯಾವ ಸಮಯದಲ್ಲಾದರೂ ಸಂಕಷ್ಟಕ್ಕೆ ತಳ್ಳಿ ಬಿಡಬಹುದು. ಚಾಣಕ್ಯನ ಪ್ರಕಾರ ನಮ್ಮ ಶತ್ರುಗಳು ನಮ್ಮ ಮುಂದಿನಿಂದ ದಾಳಿ ನಡೆಸುತ್ತಾರೆ. ಆದ್ರೆ ಸ್ವಾರ್ಥಿಗಳು ಹಾಗಲ್ಲ ನಿಮ್ಮ ಜೊತೆಗೆ ಇದ್ದು, ನಿಮ್ಮ ಬಗ್ಗೆ ತಿಳಿದುಕೊಂಡು, ನಿಮ್ಮ ಬೆನ್ನಿಗೆ ಚೂರಿ ಹಾಕುವ ವ್ಯಕ್ತಿತ್ವ ಹೊಂದಿರುತ್ತಾರೆ. ಇಂಥಹ ವ್ಯಕ್ತಿಗಳನ್ನು ನಂಬೋದಕ್ಕೆ ಹೋಗಲೇಬೇಡಿ. ಸ್ವಾರ್ಥಿಗಳ ತಮಗೆ ಯಾವ ರೀತಿ ನಿಮ್ಮಿಂದ ಉಪಯೋಗ ಆಗುತ್ತೆ ಅನ್ನೋದನ್ನ ಯೋಚಿಸುತ್ತಾರೆಯೇ ಹೊರತು ಬೇರ್ಯಾವುದರ ಬಗ್ಗೆ ಅವರು ಯೋಚನೆ ಮಾಡೋದಿಲ್ಲ. ಹಾಗಾಗಿ ಇಂತಹ ವ್ಯಕ್ತಿಗಳ ಜಾಲದಲ್ಲಿ ಸಿಲುಕೋದಕ್ಕೆ ಹೋಗಲೇಬೇಡಿ.
ಒರ್ವ ವ್ಯಕ್ತಿಗೆ ಆತನ ಜೀವನದಲ್ಲಿ ಜೊತೆಗಾರರು ಕೂಡ ತುಂಬಾನೇ ಮುಖ್ಯವಾಗುತ್ತಾರೆ. ಹೀಗಾಗಿ ಸ್ನೇಹ ಮಾಡುವಾಗ ಅಳೆದು ತೂಗಿ ಮಾಡಬೇಕು. ಆತನ ಬಳಿ ದುಡ್ಡಿಲ್ಲದಿದ್ದರೂ ಪರವಾಗಿಲ್ಲ ನಿಷ್ಕಲ್ಮಷ ಮನಸ್ಸಿರುವ ವ್ಯಕ್ತಿಯ ಸ್ನೇಹ ಮಾಡಿದರೆ ಉತ್ತಮ.



Click it and Unblock the Notifications


