Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಹಾಸನಾಂಬೆ ಪವಾಡ: ಜೋರು ಮಳೆಯಲ್ಲೂ ನಂದಿ ಹೋಗದೆ ಉರಿದ ಕರ್ಪೂರ!
ಹಾಸನಾಂಬೆಯ ದೇವಿಯ ಪವಾಡಗಳ ಬಗ್ಗೆ ಸಾಕಷ್ಟು ಕೇಳಿದ್ದೇವೆ. ಈ ದೇವಾಲಯದ ಪವಾಡದ ಕಾರಣದಿಂದಾಗಿ ಸಾವಿರಾರು ಭಕ್ತರು ಈ ದೇವಾಲಯಕ್ಕೆ ಬಂದು ದೇವಿಯ ದರ್ಶನ ಪಡೆದು ಹೋಗುತ್ತಿದ್ದಾರೆ. ವರ್ಷಕ್ಕೊಮ್ಮೆ ಮಾತ್ರ ಈ ದೇವಾಲಯ ಬಾಗಿಲು ತೆಗೆಯಲಾಗುವುದು.
ಹಾಸನಾಂಬೆ ದೇಗುಲದ ಪ್ರಮುಖ ವಿಶೇಷವೆಂದರೆ ಈ ದೇವಾಲಯಬನ್ನು ವರ್ಷಕ್ಕೊಮ್ಮೆ ಮಾತ್ರ ತೆರೆದು ಪೂಜೆಯನ್ನು ಸಲ್ಲಿಸಲಾಗುವುದು. ಈ ವರ್ಷ ನವೆಂಬರ್ 3ಕ್ಕೆ ದೇವಾಲಯದ ಬಾಗಿಲು ತೆರೆಯಲಾಗಿದೆ. ಬಲಿಪಾಡ್ಯಮಿ ದಿನದಂದು ಮುಚ್ಚಲಾಗುವುದು. ಅಲ್ಲಿಯವರೆಗೆ ಪ್ರತಿನಿತ್ಯ ಸಾವಿರಾರು ಭಕ್ತರು ಪ್ರತಿನಿತ್ಯ ಇಲ್ಲಿಗೆ ಬಂದು ದೇವಿಯ ದರ್ಶನ ಪಡೆದು ಹೋಗುತ್ತಾರೆ.

ಹಾಸನಾಂಬೆಯ ಪವಾಡ
ಹಾಸನಾಂಬೆಯ ಪವಾಡದವೆಂದರೆ ಈ ದೇವಾಲಯದಲ್ಲಿ ಬಾಗಿಲು ಮುಚ್ಚುವ ಮುನ್ನ ತುಪ್ಪದ ದೀಪ ಹಚ್ಚಿ, ಹೂಗಳು ಹಾಗೂ ನೈವೇದ್ಯ ಅರ್ಪಿಸಿ ಬಾಗಿಲು ಹಾಕಲಾಗುವುದು, ನಂತರ ಆ ಬಾಗಿಲು ಮುಂದಿನ ವರ್ಷವಷ್ಟೇ ತೆರೆಯಲಾಗುವುದು. ಬಾಗಿಲು ತೆಗೆಯುವಾಗ ವರ್ಷದ ಹಿಂದೆ ಹಚ್ಚಿಟ್ಟ ದೀಪ ಉರಿಯುತ್ತಿರುತ್ತದೆ, ಹೂಗಳು ಬಾಡಿರುವುದಿಲ್ಲ, ನೈವೇದ್ಯ ಹಾಳಾಗಿರುವುದಿಲ್ಲ, ಈ ಪವಾಡದ ಕಾರಣಕ್ಕೆ ಹಾಸನಾಂಬೆಯ ದರ್ಶನಕ್ಕೆ ಗಣ್ಯ ವ್ಯಕ್ತಿಗಳಿಂದ ಹಿಡಿದು ಸಾಮಾನ್ಯ ಜನರವರೆಗೆ ಬಂದು ದೇವಿಯ ಆಶೀರ್ವಾದ ಪಡೆಯುತ್ತಾರೆ. ಇಲ್ಲಿಯ ಜಾತ್ರೆಯ ಸಮಯದಲ್ಲಿ ಇಲ್ಲಿ ಬಂದಾಗ ಸಾವಿರಾರು ಭಕ್ತರಿಂದಾಗಿ ಈ ದೇವಾಲಯದ ಎತ್ತ ನೋಡಿದರೂ ಜನ ಸಾಗರವೇ ಕಾಣುವುದು.
ನವೆಂಬರ್ 9ರಂದು ಭಕ್ತರ ಕಣ್ಣಿಗೆ ಬಿದ್ದ ಪವಾಡ
ಹಾಸನ ಸೇರಿದಂತೆ ರಾಜ್ಯದ ಹಲವು ಕಡೆ ಅಕಾಲಿಕ ಮಳೆ ಬಂದಿತ್ತು, ಹಾಸನದಲ್ಲಿ ಜೋರಾಗಿ ಮಳೆ ಸುರಿಯುತ್ತಿತ್ತು, ಹಾಸನಾಂಬೆಯ ದೇವಾಲಯದ ಆವರಣದಲ್ಲಿ ಭಕ್ತರೊಬ್ಬರು ಹಚ್ಚಿಟ್ಟ ಕರ್ಪೂರ ಆ ಜೋರು ಮಳೆಯಲ್ಲೂ ನಂದಿ ಹೋಗದೆ ಉರಿಯುತ್ತಿತ್ತು. ಅಲ್ಲದೆ ಸಾಮಾನ್ಯವಾಗಿ ಕರ್ಪೂರ ಕೆಲವು ಸೆಕೆಂಡ್ಗಳಷ್ಟೇ ಉರಿಯುತ್ತದೆ, ಆದರೆ ಅಷ್ಟು ಜೋರು ಮಳೆ ಸುರಿಯುತ್ತಿತ್ತು, ಕೆಲವು ನಿಮಿಷಗಳವರೆಗೆ ಕರ್ಪೂರ ಉರಿಯುತ್ತಲೇ ಇತ್ತು. ಈ ದೃಶ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದ್ದು ಭಕ್ತರು ದೇವಿಯ ಪವಾಡವೆಂದೇ ಹೇಳುತ್ತಿದ್ದಾರೆ.
ವೈಜ್ಞಾನಿಕ ವಿಶ್ಲೇಷಣೆ ಮಾಡುತ್ತಿದ್ದಾರೆ ಕೆಲವರು
ಈ ವೀಡಿಯೋದ ಬಗ್ಗೆ ಕೆಲವರು ವೈಜ್ಞಾನಿ ವಿಶ್ಲೇಷಣೆ ಮಾಡುತ್ತಿದ್ದಾರೆ.ಕರ್ಪೂರ ಮಳೆಯಲ್ಲಿ ಹೊತ್ತಿ ಉರಿದಿದ್ದು ದೊಡ್ಡ ಪವಾಡವೇನೂ ಇಲ್ಲ ಎಂದು ಪ್ರಯೋಗದ ಮೂಲಕ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನಮ್ಮ ಧಾರ್ಮಿಕ ಭಾವನೆಗಳನ್ನು ನೋಯಿಸುವ ಪ್ರಯತ್ನ ಮಾಡಬೇಡಿ ಎಂಬುವುದು ಭಕ್ತರ ಅಭಿಪ್ರಾಯವಾಗಿದೆ.
ನಂಬಿಕೆಯೆಂಬುವುದು ಆ ವ್ಯಕ್ತಿಗೆ ಬಿಟ್ಟ ವಿಷಯ
ಎಲ್ಲಾ ನಂಬಿಕೆಗಳಿಗೆ ವೈಜ್ಞಾನಿಕ ದೃಷ್ಟಿಕೋನ ನೀಡಲು ಯತ್ನಿಸುವುದು ಒಳ್ಳೆಯದಲ್ಲ. ಆ ನಂಬಿಕೆಗಳಿಂದ ಯಾರಿಗೂ ಏನೂ ತೊಂದರೆಯಾಗುತ್ತಿಲ್ಲ ಎಂದಾದರೆ ಅವರ ಧಾರ್ಮಿಕ ಭಾವನೆಗಳನ್ನು ಗೌರವಿಸಿ. ಈ ದೇವಾಲಯಲ್ಲಿ ವರ್ಷವಿಡೀ ಏಕೆ ದೀಪ ಉರಿಯುತ್ತಿದೆ ಎಂದು ವೈಜ್ಞಾನಿಕವಾಗಿ ಹೇಳಲು ಪ್ರಯತ್ನಿಸಿ ಸೋತಿದ್ದಾರೆ. ಧರ್ಮದ ಅಡಿಪಾಯ ಇರುವುದು ಬಲವಾದ ನಂಬಿಕೆ, ಆ ನಂಬಿಕೆಯನ್ನು ಅಲುಗಾಡಿಸುವ ಪ್ರಯತ್ನ ಯಾರೂ ಮಾಡಬಾರದು. ಇಂಥ ಎಷ್ಟೋ ಪವಾಡಗಳು, ಶಕ್ತಿಗಳು ಈ ಪ್ರಕೃತಿಯಲ್ಲಿದೆ.
ವರ್ಷಕ್ಕೊಮ್ಮೆ ಮಾತ್ರ ದೇವಿಯ ದರ್ಶನ ಭಾಗ್ಯ
ಈ ದೇವಾಲಯದ ಬಾಗಿಲು ತೆರೆಯುವಾಗ ತಳವಾರ ಮನೆತನದವರು ಇರಬೇಕು, ಅವರು ಪೂಜೆಯನ್ನು ಮಾಡಿ ಬಾಳೆ ಕಂದನ್ನು ಕತ್ತರಿಸಿ ನಂತರವಷ್ಟೇ ಬಾಗಿಲು ತೆರೆಯಲಾಗುವುದು. ವರ್ಷ ಪೂರ್ತಿ ಬಾಗಿಲು ಮುಚ್ಚರುವುದರಿಂದ ದೇವಿಯ ದೃಷ್ಟಿ ತುಂಬಾ ಪ್ರಖರತೆಯಿಂದ ಕೂಡಿರುತ್ತದೆ ಎಂಬ ನಂಬಿಕೆ. ದೇವಿಯ ಪ್ರಖರ ದೃಷ್ಟಿ ತಡೆಯುವ ಶಕ್ತಿ ಭಕ್ತರಿಗಿರಲ್ಲ ಹಾಗಾಗಿ ಬಾಳೆದಿಂದು ಕಡಿದು ದೃಷ್ಟಿ ತೆಗೆದು ನಂತರ ಬಾಗಿಲನ್ನು ತೆರೆಯಲಾಗುವುದು. ಹೀಗೆ ಬಾಗಿಲು ತೆರೆದಾಗ ಹಿಂದಿನ ವರ್ಷ ಹಚ್ಚಿಟ್ಟ ದೀಪ ಹಾಗೆಯೇ ಇರಲಿದೆ.
ಮೊದೆಲೆಲ್ಲಾ ಹಾಸನಾಂಬೆ ಉತ್ಸವ ಆ ಊರಿಗಷ್ಟೇ ಸೀಮಿತವಾಗಿತ್ತು,ಈಗ ಈ ದೇವಾಲಯದ ಪ್ರಸಿದ್ಧಿ ಕರ್ನಾಟಕದ ಆಚೆಗೂ ಹರಡಿದೆ, ಹಾಸನಾಂಬೆಯ ದರ್ಶನಕ್ಕಾಗಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ವರ್ಷ ಸರ್ಕಾರ ಹೆಲಿ ಟೂರಿಸಂ ಕೂಡ ಪ್ರಾರಂಭಿಸಿದೆ. ನೀವು ಈ ದೇವಾಲಯ =ಕ್ಕೆ ಹೋಗಬೇಕೆಂದು ಬಯಸಿದರೆ ಬಲಿಪಾಡ್ಯಮಿಗೆ ಮುಂಚೆಯೇ ಹೋಗಿ ದರ್ಶನ ಪಡೆದು ಬನ್ನಿ.



Click it and Unblock the Notifications











