Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಬುದ್ಧ ಪೂರ್ಣಿಮೆಯಂದೇ ಚಂದ್ರಗ್ರಹಣ: ಈ ದಿನ ಹೀಗೆ ಮಾಡಿದರೆ ಪುಣ್ಯಫಲ ದೊರೆಯುವುದು
ವರ್ಷದ ಎರಡನೇ ಗ್ರಹಣ, ಮೊದಲ ಚಂದ್ರಗ್ರಹಣ ಮೇ 5ರಂದು ಸಂಭವಿಸಲಿದೆ. ಏಪ್ರಿಲ್ 20ಕ್ಕೆ ಸೂರ್ಯಗ್ರಹಣ ಸಂಭವಿಸಿದ 15 ದಿನದಲ್ಲಿ ವೈಶಾಖ ಮಾಸದ ಶುಕ್ಲಪಕ್ಷದ ಪೂರ್ಣಿಮೆಯೆಂದು ಚಂದ್ರಗ್ರಹಣ ಸಂಭವಿಸಲಿದೆ. ಈ ಚಂದ್ರಗ್ರಹಣ ಬುದ್ಧ ಪೂರ್ಣಿಮೆ ದಿನವೇ ಸಂಭವಿಸಲಿರುವುದು ಕಾಕತಾಳೀಯವೇ ಸರಿ. ಹಿಂದೂ ಧರ್ಮದಲ್ಲಿ ಬುದ್ಧ ಪೂರ್ಣಿಮೆಯನ್ನು ತುಂಬಾ ವಿಶೇಷವಾದ ದಿನವೆಂದು ಪರಿಗಣಿಸಲಾಗಿದೆ.
ಮನುಕುಲಕ್ಕೆ ಉಪಯುಕ್ತವಾಗುವ ಅನೇಕ ಸಿದ್ಧಾಂತಗಳನ್ನು ನೀಡಿರುವ ಮಹಾನ್ ಗೌತಮ ಬುದ್ಧ. ಗೌತಮ ಬುದ್ಧ ವೈಶಾಖ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯೆಂದು ಜನಿಸಿದರು. ಹಿಂದೂ ನಂಬಿಕೆಗಳ ಪ್ರಕಾರ ವಿಷ್ಣುವಿನ ದಶ ಅವತಾರಗಳನ್ನು ಬುದ್ಧನ ಅವತಾರ ಕೂಡ ಒಂದು ಎಂದು ಹೇಳಲಾಗುವುದು.

ಬುದ್ಧನ ತತ್ವಗಳು ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ.ಇದನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ನಡೆದರೆ ಬದುಕು ತುಂಬಾನೇ ಸುಂದರವಾಗುವುದು. ಇದೀಗ ಎರಡು ಮಹತ್ವದ ಘಟನೆಗಳು ಒಂದೇ ದಿನ ಸಂಭವಿಸಿರುವುದರಿಂದ ಮೇ 5 ತುಂಬಾನೇ ವಿಶೇಷವಾಗಿದೆ. ಈ ದಿನ ಮಾಡುವ ದಾನ ಧರ್ಮಗಳಿಂದ ವಿಶೇಷ ಫಲ ಪಡೆಯುವಿರಿ.
ಈ ದಿನ ಪುಣ್ಯ ಸ್ನಾನ ಹಾಗೂ ದಾನದ ಮಹತ್ವ
ನೀವು ಈ ದಿನ ಪುಣ್ಯ ನದಿಯಲ್ಲಿ ಸ್ನಾನ ಮಾಡಿ ಬಡವರಿಗೆ ದಾನ ಮಾಡುವುದರಿಂದ ಬುದ್ಧ ಆದರ್ಶ ಪಾಲಿಸಿದಂತಾಗುವುದು ಅಲ್ಲದೆ ಚಂದ್ರಗ್ರಹಣದಂದು ದಾನ ಮಾಡಿದ ಶುಭ ಫಲವನ್ನು ಪಡೆಯುತ್ತೀರಿ. ಈ ದಿನ ದಾನಗಳನ್ನು ಮಾಡುವುದರಿಂದ ನಿಮ್ಮ ಕಷ್ಟಗಳು ದೂರಾಗುವುದು ಎಂಬ ನಂಬಿಕೆ ಇದೆ.
ವೈಶಾಖ ಮಾಸದ ಪೂರ್ಣಿಮೆಯಂದು ಏನು ಮಾಡಬೇಕು?
* ಸೂರ್ಯೋದಕ್ಕೆ ಮುನ್ನವೇ ಎದ್ದೇಳಿ
* ಪುಣ್ಯ ನದಿಯಲ್ಲಿ ಅಥವಾ ನಿಮ್ಮ ಸ್ನಾನದ ನೀರಿಗೆ ಸ್ವಲ್ಪ ಗಂಗಾ ಜಲ ಸೇರಿಸಿ ಪುಣ್ಯ ಸ್ನಾನ ಮಾಡಿ
* ಈ ದಿನ ಶ್ರೀ ವಿಷ್ಣುವಿಗೆ ತುಪ್ಪದ ದೀಪ ಹಚ್ಚಿ ಆರಾಧನೆ ಮಾಡಿ.
* ಮನೆಯ ಮುಂದುಗಡೆ ಅರಿಶಿಣದಿಂದ ಸ್ವಸ್ತಿಕ ಬಿಡಿಸಿ.
* ಬೋಧಿ ವೃಕ್ಷದ ಸುತ್ತ ದೀಪ ಹಚ್ಚಿ, ಹೂಗಳನ್ನು ಅರ್ಪಿಸಿ
* ನಿರ್ಗತಿಕರಿಗೆ ಆಹಾರ, ಬಟ್ಟೆಗಳನ್ನು ದಾನ ಮಾಡಿ.
* ಮನೆಯಲ್ಲಿ ಗೂಡಿನಲ್ಲಿ ಪಕ್ಷಿಯಿದ್ದರೆ ಬಂಧ ಮುಕ್ತಗೊಳಿಸಿ
* ನಂತರ ಚಂದ್ರನಿಗೆ ಆರ್ಘ್ಯ ಅರ್ಪಿಸಿ.
ಏನು ಮಾಡಬಾರದು?
* ಈ ದಿನ ಮಾಂಸ, ಮದ್ಯ ಸೇವಿಸಬಾರದು
* ಯಾರಿಗೂ ತೊಂದರೆ ನೀಡಬೇಡಿ
* ಕೆಟ್ಟ ಪದಗಳಿಂದ ನಿಂದಿಸಬಾರದು
* ಸುಳ್ಳು ಹೇಳಬಾರದು
ಭಾರತದಲ್ಲಿ ಚಂದ್ರಗ್ರಹಣ ಗೋಚರಿಸುವುದೇ?
2023ರ ಮೊದಲ ಚಂದ್ರಗ್ರಹಣ ಬಾರತದಲ್ಲಿ ಗೋಚರಿಸುವುದಿಲ್ಲ, ಆದ್ದರಿಂದ ಭಾರತದಲ್ಲಿ ಇದರ ಸೂತಕವಿಲ್ಲ. ಆದರೆ ಈ ದಿನ ದಾನಗಳನ್ನು ಮಾಡುವುದರಿಂದ ಇದರ ಪುಣ್ಯದ ಫಲ ದೊರೆಯಲಿದೆ. ವರ್ಷದ ಮೊದಲ ಚಂದ್ರಗ್ರಹಣವು ಮೇ 5 ರಂದು ರಾತ್ರಿ 08.44 ಕ್ಕೆ ಪ್ರಾರಂಭವಾಗಲಿದ್ದು, ರಾತ್ರಿ 01.02 ಕ್ಕೆ ಕೊನೆಗೊಳ್ಳಲಿದೆ. ಈ ನೆರಳು ಚಂದ್ರಗ್ರಹಣದ ಒಟ್ಟು ಅವಧಿ 4 ಗಂಟೆ 15 ನಿಮಿಷಗಳು. ಈ ಪೆನಂಬ್ರಾಲ್ ಚಂದ್ರಗ್ರಹಣವು ಏಷ್ಯಾ, ಯುರೋಪ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಆಗ್ನೇಯ ಯುರೋಪ್ನಲ್ಲಿ ಗೋಚರಿಸುತ್ತದೆ.



Click it and Unblock the Notifications
