Latest Updates
-
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ! -
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ! -
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲ ಬೇಗೆಯಲ್ಲಿ ಮದುವೆ ಸಂಭ್ರಮ ಹಾಳಾಗದಿರಲಿ: ಅತಿಥಿಗಳ ಆರೋಗ್ಯ ಕಾಪಾಡಲು ಇಲ್ಲಿವೆ ಸೀಕ್ರೆಟ್ ಟಿಪ್ಸ್! -
ಬಿಸಿಗಾಳಿಯ ಆರ್ಭಟ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ರೆಡ್ ಅಲರ್ಟ್: ಆಯುಷ್ ಸಚಿವಾಲಯದ ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು, ದೇಹ ತಂಪಾಗಿರುತ್ತೆ! -
ಬಿಸಿಲಿನ ಬೇಗೆಯಿಂದ ತತ್ತರಿಸಿದ ಕರ್ನಾಟಕ: ಮನೆಯಲ್ಲೇ ತಂಪಾಗಿರಲು ನೀವು ಮಾಡಬೇಕಾದ ಆ 5 ಬದಲಾವಣೆಗಳೇನು? -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಯಾವ ರಾಶಿಯವರು ಯಾವ ರೀತಿ ಪೂಜೆ ಮಾಡಿದ್ರೆ ಶಿವ ಒಲಿಯುತ್ತಾನೆ?
ಶಿವ ಶಕ್ತಿಯ ಮಹತ್ವ ಎಂತಹದ್ದು ಅನ್ನೋದು ಇಡೀ ಜಗತ್ತಿಗೆ ಗೊತ್ತಿದೆ. ಮಹಾಶಿವರಾತ್ರಿಯನ್ನು ಕೇವಲ ಶಿವನಿಗೆ ಮಾತ್ರವಲ್ಲ ಆ ದಿನವನ್ನು ಪಾರ್ವತಿಗೂ ಅರ್ಪಣೆ ಮಾಡಲಾಗುತ್ತದೆ. ಶಿವ ರಾತ್ರಿಯ ದಿನ ಶಿವ-ಶಕ್ತಿಯನ್ನು ನೆನದರೆ ನಮ್ಮ ಕಷ್ಟಗಳೆಲ್ಲಾ ಪರಿಹಾರವಾಗಿ ಇಷ್ಟಾರ್ಥಗಳೆಲ್ಲಾ ನೆರವೇರುತ್ತೆ ಅನ್ನೋ ನಂಬಿಕೆಯಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶಿವನನ್ನು ಒಲಿಸಿಕೊಳ್ಳೋದಕ್ಕೆ ಒಂದೊಂದು ರಾಶಿಯವರು ಒಂದೊಂದು ವಿಧಾನವನ್ನು ಅನುಸರಿಸೋದ್ರ ಮೂಲಕ ಶಿವನನ್ನು ಒಲಿಸಿಕೊಳ್ಳಬಹುದುದಂತೆ. ಹಾಗಾದ್ರೆ ಯಾವ ರಾಶಿಯವರು ಯಾವ ರೀತಿ ಶಿವನನ್ನು ಭಕ್ತಿಯಿಂದ ಪೂಜಿಸಬೇಕು ಅನ್ನೋದನ್ನು ತಿಳಿಯೋಣ.

ಮೇಷ ರಾಶಿ
ಮೇಷ ರಾಶಿಯ ಅಧಿಪತಿ ಮಂಗಳ. ಹೀಗಾಗಿ ಕೆಂಪು ಬಣ್ಣವನ್ನು ಮೇಷ ರಾಶಿಯವರಿಗೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮೇಷ ರಾಶಿಯವರು ಮಹಾಶಿವರಾತ್ರಿಯ ದಿನದಂದು ಮಹಾದೇವನಿಗೆ ಕೆಂಪು ಚಂದನ ಮತ್ತು ಕೆಂಪು ಬಣ್ಣದ ಹೂವುಗಳನ್ನು ಅರ್ಪಿಸಬೇಕು. ಇದಾದ ಬಳಿಕ ಓಂ ನಾಗೇಶ್ವರಾಯ ನಮಃ ಮಂತ್ರವನ್ನು 51 ಅಥವಾ 108 ಬಾರಿ ಜಪಿಸಬೇಕು.
ವೃಷಭ
ವೃಷಭ ಮಹಾದೇವನ ವಾಹನವಾಗಿದೆ. ಮತ್ತು ವೃಷಭ ರಾಶಿಯ ಅಧಿಪತಿಯನ್ನು ಶುಕ್ರ ಎಂದು ಪರಿಗಣಿಸಲಾಗುತ್ತದೆ. ಬಿಳಿ ಬಣ್ಣವನ್ನು ವೃಷಭ ರಾಶಿಯವರಿಗೆ ಮಂಗಳಕರವಾಗಿದೆ. ವೃಷಭ ರಾಶಿಯವರು ಮಹಾಶಿವರಾತ್ರಿಯಂದು ಮಹಾದೇವನನ್ನು ಪೂಜಿಸುವಾಗ ಮಲ್ಲಿಗೆ ಹೂಗಳನ್ನು ಅರ್ಪಿಸಬೇಕು. ಇದರೊಂದಿಗೆ ಶಿವನ ರುದ್ರಾಷ್ಟಕವನ್ನು ಪಠಿಸಿ.
ಮಿಥುನ ರಾಶಿ
ಮಿಥುನ ರಾಶಿಯ ಅಧಿಪತಿ ಬುಧ. ಮಿಥುನ ರಾಶಿಯವರು ಮಹಾಶಿವರಾತ್ರಿಯ ದಿನದಂದು ಶಿವನಿಗೆ ಗೊರಟಿ ಹೂವು ಮತ್ತು ಗಾಂಜಾ ಅರ್ಪಿಸಿ. ಗೊರಟಿ ಹೂವನ್ನು ಅರ್ಪಿಸುವಾಗ ಓಂ ನಮಃ ಶಿವಾಯ ಮಂತ್ರವನ್ನು 108 ಬಾರಿ ಜಪಿಸಿ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯ ಅಧಿಪತಿ ಚಂದ್ರನಾಗಿದ್ದಾನೆ. ಚಂದ್ರನನ್ನು ಮಹಾದೇವನು ತನ್ನ ಕೇಶರಾಶಿಯಲ್ಲಿ ಇಟ್ಟುಕೊಂಡಿದ್ದಾನೆ. ಕರ್ಕಾಟಕ ರಾಶಿಯವರು ಮಹಾಶಿವರಾತ್ರಿಯ ದಿನದಂದು ಶಿವಲಿಂಗಕ್ಕೆ ಹಸುವಿನ ಹಾಲಿನ ಅಭಿಷೇಕ ಮಾಡಬೇಕು. ಮತ್ತು ರುದ್ರಷ್ಟಾಧ್ಯಾಯಿಯನ್ನು ಪಠಿಸಬೇಕು.
ಸಿಂಹ ರಾಶಿ
ಸಿಂಹ ರಾಶಿಯ ಅಧಿಪತಿ ಸೂರ್ಯ. ಈ ರಾಶಿಯವರು ಮಹಾಶಿವರಾತ್ರಿಯ ದಿನದಂದು ಮಹಾದೇವನ ಪೂಜೆಯಲ್ಲಿ ಕೆಂಪು ಬಣ್ಣದ ಹೂವುಗಳನ್ನು ಅರ್ಪಿಸಬೇಕು. ಮತ್ತು ಶೀವನಿಗೆ ಇಷ್ಟವಾದ ಮಂತ್ರವನ್ನು ಪಠಣೆ ಮಾಡಬೇಕು.
ಕನ್ಯಾರಾಶಿ
ಕನ್ಯಾ ರಾಶಿಯ ಅಧಿಪತಿ ಬುಧ ಎಂದು ಪರಿಗಣಿಸಲಾಗುತ್ತದೆ. ಕನ್ಯಾ ರಾಶಿಯವರು ಮಹಾದೇವನನ್ನು ಬಿಲ್ವಪತ್ರೆ, ಗೊರಟಿ ಹೂವು, ಮುಂತಾದ ವಸ್ತುಗಳೊಂದಿಗೆ ಪೂಜಿಸಿ. ಮತ್ತು ಪಂಚಾಕ್ಷರಿ ಮಂತ್ರ ಓಂ ನಮಃ ಶಿವಾಯ ಪಠಿಸಿ.
ತುಲಾ ರಾಶಿ
ಶುಕ್ರನನ್ನು ತುಲಾ ರಾಶಿಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ತುಲಾ ರಾಶಿಯವರು ಮಹಾಶಿವರಾತ್ರಿಯ ದಿನ ಶಿವಾಷ್ಟಕವನ್ನು ಪಠಿಸಬೇಕು. ಇದರೊಂದಿಗೆ, ಮೊಸರು ಅಥವಾ ಸಕ್ಕರೆ ಮಿಠಾಯಿ ಹೊಂದಿರುವ ಹಾಲಿನಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಿ ಮತ್ತು ಶಿವನ ಸಹಸ್ರನಾಮವನ್ನು ಪಠಿಸಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಅಧಿಪತಿ ಮಂಗಳ. ವೃಶ್ಚಿಕ ರಾಶಿಯವರು ಗುಲಾಬಿ ಹೂವುಗಳು ಮತ್ತು ಬಿಲ್ವಪತ್ರೆಯಿಂದ ಮಹಾದೇವನ್ನು ಪೂಜಿಸಬೇಕು. ಮತ್ತು ನಂತರ ರುದ್ರಾಷ್ಟಕ ಸ್ತುತಿಯನ್ನು ಪಠಿಸಬೇಕು. ಇದರೊಂದಿಗೆ ಓಂ ಅಂಗರೇಶ್ವರಾಯ ನಮಃ ಮಂತ್ರವನ್ನು ಜಪಿಸಿ.
ಧನು ರಾಶಿ
ಗುರುವನ್ನು ಧನು ರಾಶಿಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಗುರುವಿಗೆ ಹಳದಿ ಬಣ್ಣ ಪ್ರಿಯವಾದ ಬಣ್ಣ. ಮಹಾಶಿವರಾತ್ರಿಯ ದಿನದಂದು ಧನು ರಾಶಿಯವರು ಬೆಳಿಗ್ಗೆ ಹಳದಿ ಬಣ್ಣದ ಹೂವುಗಳಿಂದ ಶಿವನನ್ನು ಪೂಜಿಸಬೇಕು. ನಂತರ ಪಾಯಸವನ್ನು ನೈವೇದ್ಯವಾಗಿ ಅರ್ಪಣೆ ಮಾಡಬೇಕು. ಇದಾದ ಬಳಿಕ ಶ್ರೀ ಶಿವಾಷ್ಟಕವನ್ನು ಪಠಿಸಿ.
ಮಕರ ರಾಶಿ
ಶನಿಯು ಮಕರ ರಾಶಿಯ ಅಧಿಪತಿ. ಮಕರ ರಾಶಿಯವರು ಶಿವನಿಗೆ ಗೊರಟಿ ಹೂವು, ಅಷ್ಟಗಂಧ ಇತ್ಯಾದಿಗಳಿಂದ ಪೂಜಿಸಬೇಕು. ಇದರ ಜೊತೆಗೆ ಓಂ ಪಾರ್ವತಿ ನಾಥಾಯ ನಮಃ ಮಂತ್ರವನ್ನು 108 ಬಾರಿ ಜಪಿಸಿ.
ಕುಂಭ ರಾಶಿ
ಶನಿಯು ಕುಂಭ ರಾಶಿಯ ಅಧಿಪತಿ. ಈ ರಾಶಿಯವರು ಹಾಲು, ಮೊಸರು, ಸಕ್ಕರೆ, ತುಪ್ಪ, ಜೇನುತುಪ್ಪದಿಂದ ಪ್ರತ್ಯೇಕವಾಗಿ ಶಿವನಿಗೆ ಅಭಿಷೇಕ ಮಾಡಬೇಕು. ಮತ್ತು ಓಂ ಶಿವಾಯ ನಮಃ ಮಂತ್ರವನ್ನು ಪಠಿಸಬೇಕು. ಇದರ ಜೊತೆಗೆ ಶಿವಾಷ್ಟಕವನ್ನು ಪಠಿಸಬೇಕು.
ಮೀನ ರಾಶಿ
ಮೀನ ರಾಶಿಯ ಅಧಿಪತಿ ಗುರು. ಮೀನ ರಾಶಿಯವರು ಮಹಾಶಿವರಾತ್ರಿಯ ದಿನದಂದು ಶಿವಲಿಂಗಕ್ಕೆ ಪಂಚಾಮೃತ, ಮೊಸರು, ಹಾಲು ಮತ್ತು ಹಳದಿ ಬಣ್ಣದ ಹೂವುಗಳನ್ನು ಅರ್ಪಿಸಬೇಕು. ಪೂಜೆ ಮುಗಿದ ನಂತರ ಶ್ರೀಗಂಧದ ಮಾಲೆಯೊಂದಿಗೆ ಓಂ ಭಾಮೇಶ್ವರಾಯ ನಮಃ ಮಂತ್ರವನ್ನು 108 ಬಾರಿ ಜಪಿಸಿ.



Click it and Unblock the Notifications
