Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದಿನನಿತ್ಯ ಚಪಾತಿಯನ್ನು ಗೋವುಗಳಿಗೆ ಅರ್ಪಿಸಿದ್ರೆ ಪಿತೃದೋಷ ಪರಿಹಾರ !
ಚಪಾತಿ ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಅದ್ರಲ್ಲೂ ಇದು ಡಯೇಟ್ ಫುಡ್ ಅಲ್ವಾ? ಹೀಗಾಗಿ ಜನ ಇದನ್ನು ಬಯಸಿ ಬಯಸಿ ತಿನ್ನುತ್ತಾರೆ. ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟಕ್ಕೂ ಚಪಾತಿ ಸೇವಿಸುವವರು ಅನೇಕ ಮಂದಿಯಿದ್ದಾರೆ.
ನಿಮಗೊತ್ತಾ ಚಪಾತಿಯನ್ನು ಹೇಗಂದರೆ ಹಾಗೆ ಮಾಡೋ ಹಾಕಿಲ್ಲ. ಚಪಾತಿಯನ್ನು ತಯಾರಿಸೋದು ಕೂಡ ಒಂದು ಸೂಕ್ಷ್ಮ ವಿಚಾರ. ಅಷ್ಟಕ್ಕು ಚಪಾತಿಯ ಬಗ್ಗೆ ನಿಮಗೆ ಗೊತ್ತಿರದ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳ ಬಗ್ಗೆ ಇಂದು ತಿಳಿಕೊಳ್ಳೋಣ.

1. ಚಪಾತಿ ಮಾಡೋ ಮುಂಚೆ ಎಣಿಸಬಾರದು
ಸಾಮಾನ್ಯವಾಗಿ ನಾವು ಚಪಾತಿ ಮಾಡೋ ಮುಂಚೆ ಮನೆಯಲ್ಲಿ ಎಷ್ಟು ಜನರಿದ್ದಾರೆ ಎಂದು ಲೆಕ್ಕ ಹಾಕಿ ಆನಂತರ ಚಪಾತಿಯನ್ನು ತಯಾರಿಸುತ್ತೇವೆ. ಆದ್ರೆ ಈ ರೀತಿ ಮಾಡಬಾರದಂತೆ. ಗೋಧಿಯು ಸೂರ್ಯ ದೇವನಿಗೆ ಸಂಬಂಧಿಸಿದ್ದು, ಚಪಾತಿಯನ್ನು ಮಾಡೋ ಮುಂಚೆ ಎಣಿಸಿದರೆ ಅದು ಸೂರ್ಯ ದೇವನಿಗೆ ಅವಮಾನ ಮಾಡಿದಂತಾಗುತ್ತಂತೆ. ಇದರ ಪರಿಣಾಮ ನಮ್ಮ ಜಾತಕದಲ್ಲಿ ಸೂರ್ಯನ ಪ್ರಭಾವ ಕಡಿಮೆಯಾಗುತ್ತಂತೆ. ಇನ್ನೂ ವಾಸ್ತು ಶಾಸ್ತ್ರದ ಪ್ರಕಾರ ಚಪಾತಿ ಎಣಿಸಿ ನಂತರ ತಯಾರಿಸೋದ್ರಿಂದ ಕುಟುಂಬದಲ್ಲಿ ಸುಖ, ಸಮೃದ್ಧಿ ಕಡಿಮೆಯಾಗುತ್ತಂತೆ.
2. ಉಳಿದ ಹಿಟ್ಟಿನಿಂದ ಚಪಾತಿ ಮಾಡಿದ್ರೆ ರಾಹು ಧೋಷ ಕಾಡುತ್ತೆ
ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲಿಯೂ ರಾತ್ರಿ ಗೋಧಿ ಹಿಟ್ಟು ಕಲಸಿ ಫ್ರಿಡ್ಜ್ನಲ್ಲಿಟ್ಟು ಮಾರನೇ ದಿನ ಅದರಿಂದ ಚಪಾತಿಯನ್ನು ತಯಾರು ಮಾಡುತ್ತೇವೆ. ಇಲ್ಲದಿದ್ರೆ ಅದೇ ದಿನ ಚಪಾತಿ ಹಿಟ್ಟು ಕಲಸಿ ಚಪಾತಿ ಮಾಡಿ ಉಳಿದ ಹಿಟ್ಟನ್ನು ಮಾರನೇ ದಿನ ಬಳಸುತ್ತೇವೆ. ಹೀಗೆ ಮಾಡಲೇ ಬಾರದಂತೆ. ಹೀಗೆ ಮಾಡಿದ್ರೆ ರಾಹುವಿನ ಧೋಷ ಕಾಡುತ್ತಂತೆ.
ಹೌದು, ರಾಹು ಆ ಮನೆಯವರ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತಾನಂತೆ. ಇನ್ನೂ ಇದರ ಹಿಂದೆ ಒಂದು ವೈಜ್ಞಾನಿಕ ಕಾರಣವು ಕೂಡ ಇದೆ. ಹಿಂದಿನ ದಿನ ಕಲಸಿಟ್ಟ ಗೋಧಿ ಹಿಟ್ಟಿನಲ್ಲಿ ಬ್ಯಾಕ್ಟೀರಿಯಾ ಬೆಳೆಯುತ್ತದೆ. ಇದನ್ನು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತಂತೆ.
3. ಒಂದು ಪ್ಲೇಟ್ನಲ್ಲಿ ಮೂರು ಚಪಾತಿ ತಿನ್ನಬಾರದು
ಅನೇಕ ಜನ ಚಪಾತಿ ಸೇವಿಸೋವಾಗ ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ಗಮನಿಸೋದಿಲ್ಲ. ನಿಮಗೊತ್ತಾ ಒಂದು ಪ್ಲೇಟ್ನಲ್ಲಿ ಮೂರು ಚಪಾತಿಗಳನ್ನು ಹಾಕಿಕೊಂಡು ಸೇವಿಸಬಾರದಂತೆ. ಹಿಂದೂ ಧರ್ಮದ ಪ್ರಕಾರ ಒರ್ವ ವ್ಯಕ್ತಿ ಸತ್ತ 13 ನೇ ದಿನಕ್ಕೆ ಆತನಿಗೆ ಸಂತಾಪ ಸೂಚಿಸಲು ಒಂದು ಪ್ಲೇಟ್ನಲ್ಲಿ ಮೂರು ಚಪಾತಿಗಳನ್ನು ಹಾಕಿಡಲಾಗುತ್ತದೆ. ಇದು ಆ ವ್ಯಕ್ತಿಗೆ ಸಂತಾಪವನ್ನು ಸೂಚಿಸುವ ಸಲುವಾಗಿ ಇಡಲಾಗುತ್ತದೆ. ಹೀಗಾಗಿ ಯಾವತ್ತೂ ಕೂಡ ಮೂರು ಚಪಾತಿ, ದೋಸೆಯನ್ನು ಪ್ಲೇಟ್ನಲ್ಲಿ ಹಾಕಿ ಸೇವಿಸಬಾರದು. ಮೂರರ ನಂತರ ಅದಕ್ಕೊಂದು ಚಿಕ್ಕ ತುಂಡು ಚಪಾತಿಯನ್ನು ಸೇರಿಸಿ.
4. ಗೋವಿಗೆ ಚಪಾತಿ ಅರ್ಪಿಸಿದ್ರೆ ಪಿತೃದೋಷ ಪರಿಹಾರ
ಸಾಮಾನ್ಯವಾಗಿ ನಾವು ನಮಗೋಸ್ಕರ ಚಪಾತಿ ಮಾಡುತ್ತೇವೆ. ಯಾರು ಪ್ರತಿನಿತ್ಯ ಚಪಾತಿ ಮಾಡಿ ಗೋವುಗಳಿಗೆ ಅರ್ಪಿಸುತ್ತಾರೋ ಅವರ ಪಿತೃದೋಷ ಪರಿಹಾರವಾಗುತ್ತಂತೆ. ಅದೇ ರೀತಿ ಮನೆಯಲ್ಲಿ ಮಾಡಿದ ಕೊನೆಯ ಚಪಾತಿಯನ್ನು ನಾಯಿಗೆ ನೀಡಬೇಕು. ಇದರಿಂದ ಶತ್ರುಗಳ ಭಯವು ದೂರವಾಗುತ್ತೆ ಎನ್ನಲಾಗ್ತಿದೆ.
5. ಮನೆಯಲ್ಲಿ 2-4 ಚಪಾತಿ ಹೆಚ್ಚುವರಿಯಾಗಿ ಮಾಡಿ
ಭಾರತದಲ್ಲಿ "ಅತಿಥಿ ದೇವೋಭವಾ" ಎಂಬ ಪರಿಕಲ್ಪನೆ ಇದೆ. ಇಲ್ಲಿ ಅತಿಥಿಗಳನ್ನು ದೇವರಿಗೆ ಹೋಲಿಕೆ ಮಾಡಲಾಗುತ್ತದೆ. ಮನೆಗೆ ಬಂದ ಅತಿಥಿಗಳನ್ನು ಯಾವತ್ತಿಗೂ ಖಾಲಿ ಹೊಟ್ಟೆಯಲ್ಲಿ ಕಳುಹಿಸಲೇಬಾರದು. ಹೀಗಾಗಿ ಮನೆಯಲ್ಲಿ ಚಪಾತಿ ಮಾಡೋವಾಗ 2-4 ಚಪಾತಿಗಳನ್ನು ಹೆಚ್ಚುವರಿಯಾಗಿ ಮಾಡಬೇಕು. ಇದರಿಂದ ಮನೆಗೆ ಯಾರಾದರೂ ಬಂದಾಗ ಅವರಿಗೆ ಕೊಡಬಹುದು.
ಅನೇಕ ಜನರಿಗೆ ಈ ವಿಚಾರದ ಬಗ್ಗೆ ಗೊತ್ತಿರ್ಲಿಕ್ಕಿಲ್ಲ. ಹೀಗಾಗಿ ಇನ್ನು ಮುಂದೆ ಚಪಾತಿ ಮಾಡೋವಾಗ, ತಿನ್ನೋವಾಗ ಈ ವಿಚಾರದ ಬಗ್ಗೆ ಗಮನ ಹರಿಸಿ.



Click it and Unblock the Notifications
