Latest Updates
-
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ! -
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ತೋರಿಸುವ ಹೊಸ ಟ್ರೆಂಡ್: 'ಸಾಫ್ಟ್ ಲಾಂಚ್' ಮೂಲಕ ನಿಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಿ! -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಲ್ಲೂ ನಿಮ್ಮ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಟಿಪ್ಸ್ ಸಾಕು! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ! -
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ! -
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ದಿನನಿತ್ಯ ಚಪಾತಿಯನ್ನು ಗೋವುಗಳಿಗೆ ಅರ್ಪಿಸಿದ್ರೆ ಪಿತೃದೋಷ ಪರಿಹಾರ !
ಚಪಾತಿ ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಅದ್ರಲ್ಲೂ ಇದು ಡಯೇಟ್ ಫುಡ್ ಅಲ್ವಾ? ಹೀಗಾಗಿ ಜನ ಇದನ್ನು ಬಯಸಿ ಬಯಸಿ ತಿನ್ನುತ್ತಾರೆ. ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟಕ್ಕೂ ಚಪಾತಿ ಸೇವಿಸುವವರು ಅನೇಕ ಮಂದಿಯಿದ್ದಾರೆ.
ನಿಮಗೊತ್ತಾ ಚಪಾತಿಯನ್ನು ಹೇಗಂದರೆ ಹಾಗೆ ಮಾಡೋ ಹಾಕಿಲ್ಲ. ಚಪಾತಿಯನ್ನು ತಯಾರಿಸೋದು ಕೂಡ ಒಂದು ಸೂಕ್ಷ್ಮ ವಿಚಾರ. ಅಷ್ಟಕ್ಕು ಚಪಾತಿಯ ಬಗ್ಗೆ ನಿಮಗೆ ಗೊತ್ತಿರದ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳ ಬಗ್ಗೆ ಇಂದು ತಿಳಿಕೊಳ್ಳೋಣ.

1. ಚಪಾತಿ ಮಾಡೋ ಮುಂಚೆ ಎಣಿಸಬಾರದು
ಸಾಮಾನ್ಯವಾಗಿ ನಾವು ಚಪಾತಿ ಮಾಡೋ ಮುಂಚೆ ಮನೆಯಲ್ಲಿ ಎಷ್ಟು ಜನರಿದ್ದಾರೆ ಎಂದು ಲೆಕ್ಕ ಹಾಕಿ ಆನಂತರ ಚಪಾತಿಯನ್ನು ತಯಾರಿಸುತ್ತೇವೆ. ಆದ್ರೆ ಈ ರೀತಿ ಮಾಡಬಾರದಂತೆ. ಗೋಧಿಯು ಸೂರ್ಯ ದೇವನಿಗೆ ಸಂಬಂಧಿಸಿದ್ದು, ಚಪಾತಿಯನ್ನು ಮಾಡೋ ಮುಂಚೆ ಎಣಿಸಿದರೆ ಅದು ಸೂರ್ಯ ದೇವನಿಗೆ ಅವಮಾನ ಮಾಡಿದಂತಾಗುತ್ತಂತೆ. ಇದರ ಪರಿಣಾಮ ನಮ್ಮ ಜಾತಕದಲ್ಲಿ ಸೂರ್ಯನ ಪ್ರಭಾವ ಕಡಿಮೆಯಾಗುತ್ತಂತೆ. ಇನ್ನೂ ವಾಸ್ತು ಶಾಸ್ತ್ರದ ಪ್ರಕಾರ ಚಪಾತಿ ಎಣಿಸಿ ನಂತರ ತಯಾರಿಸೋದ್ರಿಂದ ಕುಟುಂಬದಲ್ಲಿ ಸುಖ, ಸಮೃದ್ಧಿ ಕಡಿಮೆಯಾಗುತ್ತಂತೆ.
2. ಉಳಿದ ಹಿಟ್ಟಿನಿಂದ ಚಪಾತಿ ಮಾಡಿದ್ರೆ ರಾಹು ಧೋಷ ಕಾಡುತ್ತೆ
ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲಿಯೂ ರಾತ್ರಿ ಗೋಧಿ ಹಿಟ್ಟು ಕಲಸಿ ಫ್ರಿಡ್ಜ್ನಲ್ಲಿಟ್ಟು ಮಾರನೇ ದಿನ ಅದರಿಂದ ಚಪಾತಿಯನ್ನು ತಯಾರು ಮಾಡುತ್ತೇವೆ. ಇಲ್ಲದಿದ್ರೆ ಅದೇ ದಿನ ಚಪಾತಿ ಹಿಟ್ಟು ಕಲಸಿ ಚಪಾತಿ ಮಾಡಿ ಉಳಿದ ಹಿಟ್ಟನ್ನು ಮಾರನೇ ದಿನ ಬಳಸುತ್ತೇವೆ. ಹೀಗೆ ಮಾಡಲೇ ಬಾರದಂತೆ. ಹೀಗೆ ಮಾಡಿದ್ರೆ ರಾಹುವಿನ ಧೋಷ ಕಾಡುತ್ತಂತೆ.
ಹೌದು, ರಾಹು ಆ ಮನೆಯವರ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತಾನಂತೆ. ಇನ್ನೂ ಇದರ ಹಿಂದೆ ಒಂದು ವೈಜ್ಞಾನಿಕ ಕಾರಣವು ಕೂಡ ಇದೆ. ಹಿಂದಿನ ದಿನ ಕಲಸಿಟ್ಟ ಗೋಧಿ ಹಿಟ್ಟಿನಲ್ಲಿ ಬ್ಯಾಕ್ಟೀರಿಯಾ ಬೆಳೆಯುತ್ತದೆ. ಇದನ್ನು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತಂತೆ.
3. ಒಂದು ಪ್ಲೇಟ್ನಲ್ಲಿ ಮೂರು ಚಪಾತಿ ತಿನ್ನಬಾರದು
ಅನೇಕ ಜನ ಚಪಾತಿ ಸೇವಿಸೋವಾಗ ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ಗಮನಿಸೋದಿಲ್ಲ. ನಿಮಗೊತ್ತಾ ಒಂದು ಪ್ಲೇಟ್ನಲ್ಲಿ ಮೂರು ಚಪಾತಿಗಳನ್ನು ಹಾಕಿಕೊಂಡು ಸೇವಿಸಬಾರದಂತೆ. ಹಿಂದೂ ಧರ್ಮದ ಪ್ರಕಾರ ಒರ್ವ ವ್ಯಕ್ತಿ ಸತ್ತ 13 ನೇ ದಿನಕ್ಕೆ ಆತನಿಗೆ ಸಂತಾಪ ಸೂಚಿಸಲು ಒಂದು ಪ್ಲೇಟ್ನಲ್ಲಿ ಮೂರು ಚಪಾತಿಗಳನ್ನು ಹಾಕಿಡಲಾಗುತ್ತದೆ. ಇದು ಆ ವ್ಯಕ್ತಿಗೆ ಸಂತಾಪವನ್ನು ಸೂಚಿಸುವ ಸಲುವಾಗಿ ಇಡಲಾಗುತ್ತದೆ. ಹೀಗಾಗಿ ಯಾವತ್ತೂ ಕೂಡ ಮೂರು ಚಪಾತಿ, ದೋಸೆಯನ್ನು ಪ್ಲೇಟ್ನಲ್ಲಿ ಹಾಕಿ ಸೇವಿಸಬಾರದು. ಮೂರರ ನಂತರ ಅದಕ್ಕೊಂದು ಚಿಕ್ಕ ತುಂಡು ಚಪಾತಿಯನ್ನು ಸೇರಿಸಿ.
4. ಗೋವಿಗೆ ಚಪಾತಿ ಅರ್ಪಿಸಿದ್ರೆ ಪಿತೃದೋಷ ಪರಿಹಾರ
ಸಾಮಾನ್ಯವಾಗಿ ನಾವು ನಮಗೋಸ್ಕರ ಚಪಾತಿ ಮಾಡುತ್ತೇವೆ. ಯಾರು ಪ್ರತಿನಿತ್ಯ ಚಪಾತಿ ಮಾಡಿ ಗೋವುಗಳಿಗೆ ಅರ್ಪಿಸುತ್ತಾರೋ ಅವರ ಪಿತೃದೋಷ ಪರಿಹಾರವಾಗುತ್ತಂತೆ. ಅದೇ ರೀತಿ ಮನೆಯಲ್ಲಿ ಮಾಡಿದ ಕೊನೆಯ ಚಪಾತಿಯನ್ನು ನಾಯಿಗೆ ನೀಡಬೇಕು. ಇದರಿಂದ ಶತ್ರುಗಳ ಭಯವು ದೂರವಾಗುತ್ತೆ ಎನ್ನಲಾಗ್ತಿದೆ.
5. ಮನೆಯಲ್ಲಿ 2-4 ಚಪಾತಿ ಹೆಚ್ಚುವರಿಯಾಗಿ ಮಾಡಿ
ಭಾರತದಲ್ಲಿ "ಅತಿಥಿ ದೇವೋಭವಾ" ಎಂಬ ಪರಿಕಲ್ಪನೆ ಇದೆ. ಇಲ್ಲಿ ಅತಿಥಿಗಳನ್ನು ದೇವರಿಗೆ ಹೋಲಿಕೆ ಮಾಡಲಾಗುತ್ತದೆ. ಮನೆಗೆ ಬಂದ ಅತಿಥಿಗಳನ್ನು ಯಾವತ್ತಿಗೂ ಖಾಲಿ ಹೊಟ್ಟೆಯಲ್ಲಿ ಕಳುಹಿಸಲೇಬಾರದು. ಹೀಗಾಗಿ ಮನೆಯಲ್ಲಿ ಚಪಾತಿ ಮಾಡೋವಾಗ 2-4 ಚಪಾತಿಗಳನ್ನು ಹೆಚ್ಚುವರಿಯಾಗಿ ಮಾಡಬೇಕು. ಇದರಿಂದ ಮನೆಗೆ ಯಾರಾದರೂ ಬಂದಾಗ ಅವರಿಗೆ ಕೊಡಬಹುದು.
ಅನೇಕ ಜನರಿಗೆ ಈ ವಿಚಾರದ ಬಗ್ಗೆ ಗೊತ್ತಿರ್ಲಿಕ್ಕಿಲ್ಲ. ಹೀಗಾಗಿ ಇನ್ನು ಮುಂದೆ ಚಪಾತಿ ಮಾಡೋವಾಗ, ತಿನ್ನೋವಾಗ ಈ ವಿಚಾರದ ಬಗ್ಗೆ ಗಮನ ಹರಿಸಿ.



Click it and Unblock the Notifications
