Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಅಕ್ಷಯ ತೃತೀಯಯಂದು ಸಂಪತ್ತು ವೃದ್ಧಿಗೆ ಚಿನ್ನದ ಬದಲಿಗೆ ಈ ಆಹಾರ ವಸ್ತುಗಳನ್ನು ಖರೀದಿಸಬಹುದು
ಏಪ್ರಿಲ್ 22ಕ್ಕೆ ಅಕ್ಷಯ ತೃತೀಯ. ಈ ಶುಭ ದಿನಕ್ಕಾಗಿ ತುಂಬಾ ಜನ ಕಾಯುತ್ತಿರುತ್ತಾರೆ. ಏಕೆಂದರೆ ಈ ದಿನ ಶುಭ ದಿನದಂದು ಚಿನ್ನ, ಆಸ್ತಿ, ಮನೆ ಖರೀದಿಗೆ ತುಂಬಾನೇ ಶ್ರೇಷ್ಠವಾಗಿದೆ. ಈ ದಿನ ಈ ವಸ್ತುಗಳನ್ನು ಖರೀದಿಸಿದರೆ ನಮ್ಮ ಸಂಪತ್ತು ವೃದ್ಧಿಸುವುದು ಎಂಬ ನಂಬಿಕೆ.
ಅಕ್ಷಯ ಪಾತ್ರದಂತೆ ನಮ್ಮ ಸಂಪತ್ತು ವೃದ್ಧಿಸಲಿ ಎಂದು ಅಕ್ಷಯ ತೃತೀಯ ಶುಭ ದಿನದಂದು ಒಂದು ಗ್ರಾಂ ಚಿನ್ನವನ್ನು ಖರೀದಿಸೋಣ ಎಂದು ಜನರು ಯೋಚಿಸುತ್ತಾರೆ. ಆದರೆ ಈಗ ಚಿನ್ನದ ಬೆಲೆ ದುಬಾರಿಯಾಗಿರುವುದರಿಂದ ಒಂದು ಗ್ರಾಂ ಚಿನ್ನ ಖರೀದಿಸಲು ಮಧ್ಯಮವರ್ಗದವರು ಯೋಚಿಸಬೇಕಾಗಿದೆ. ಅಕ್ಷಯ ತೃತೀಯದಂದು ಚಿನ್ನ ಖರೀದಿಸಲು ಸಾಧ್ಯವಾಗದಿದ್ದರೆ ತೊಂದರೆಯಿಲ್ಲ ನೀವು ಕೆಲವೊಂದು ಆಹಾರ ವಸ್ತುಗಳನ್ನು ಖರೀದಿಸಿದರೂ ಲಕ್ಷ್ಮಿ ಕೃಪೆಗೆ ಪಾತ್ರರಾಗುವಿರಿ.

ಅಕ್ಷಯ ತೃತೀಯ ದಿನದಂದು ಧಾನ್ಯಗಳನ್ನು ಖರೀದಿಸಿ:
ಈ ದಿನ ಧಾನ್ಯಗಳನ್ನು ಖರೀದಿಸುವುದು ಶುಭವೆಂದು ಪರಿಗಣಿಸಲಾಗಿದೆ. ಇದರಿಂದ ಸಂಪತ್ತು ವೃದ್ಧಿಸುವುದು, ಇದರಿಂದ ಮನೆಯ ಆರ್ಥಿಕ ಸುಧಾರಣೆಯಾಗುವುದು ಎಂಬ ನಂಬಿಕೆ ಇದೆ.
ಸೊಪ್ಪು
ಈ ದಿನ ಮನೆಗೆ ಹಸಿರು ಸೊಪ್ಪು ತರುವುದು ಶುಭ, ಹಸಿರು ಶುಭದ ಸಂಕೇತ, ಈ ದಿನ ಸೊಪ್ಪು, ಹಸಿರು ತರಕಾರಿ, ಹಸಿರು ಬಣ್ಣದ ಕಾಳುಗಳನ್ನು ತನ್ನಿ.
ಅಕ್ಕಿ, ರಾಗಿ, ನವಣೆ ಖರೀದಿಸಿ
ಅಕ್ಷಯ ತೃತೀಯದಂದು ಮನೆಯ ಅಡುಗೆ ಮನೆಯಲ್ಲಿ ಯಾವ ವಸ್ತುವಿಗೂ ಕೊರತೆ ಇಲ್ಲದಂತೆ ನೋಡಿಕೊಳ್ಳಿ. ಈ ದಿನ ಮನೆ ಅಕ್ಕಿ, ರಾಗಿ, ನವಣೆ, ಬೇಳೆ-ಕಾಳುಗಳನ್ನು ತನ್ನಿ.
ತುಪ್ಪ
ಹಿಂದೂ ನಂಬಿಕೆ ಪ್ರಕಾರ ತುಪ್ಪ ದುಷ್ಟ ಶಕ್ತಿ, ನಕಾರಾತ್ಮಕ ಶಕ್ತಿ ಹೊರಗಿಡುತ್ತದೆ ಎಂದು ನಂಬಲಾಗಿದೆ. ಈ ದಿನ ಮನೆಗೆ ತುಪ್ಪ ತನ್ನ ಅಲ್ಲದೆ ಈ ದಿನ ತುಪ್ಪದ ದೀಪ ಹಚ್ಚಿ ಶ್ರೀ ವಿಷ್ಣು ಹಾಗೂ ಲಕ್ಷ್ಮಿಯನ್ನು ಆರಾಧಿಸಿ.
ಇವುಗಳನ್ನು ದಾನ ಮಾಡಿ
ಚಂದನ
ಈ ದಿನ ಚಂದನ ಅಥವಾ ಶ್ರೀಗಂಧದ ಸುಗಂಧ ದ್ರವ್ಯವನ್ನು ದಾನ ಮಾಡಿ.
ತೆಂಗಿನಕಾಯಿ
ಈ ದಿನ ಬ್ರಾಹ್ಮಣರಿಗೆ ತೆಂಗಿನಕಾಯಿ ದಾನ ಮಾಡಿದರೆ ನಮ್ಮ ಪೂರ್ವಜರಿಗೆ ಮೋಕ್ಷ ಸಿಗುವುದು ಎಂದು ಹೇಳಲಾಗುವುದು.
ಮಜ್ಜಿಗೆ
ಅಕ್ಷಯ ತೃತೀಯದಂದು ಮಜ್ಜಿಗೆ ದಾನ ಮಾಡಿದರೆ ಲಕ್ಷ್ಮಿ ಕೃಪೆಗೆ ಪಾತ್ರರಾಗುವಿರಿ.
ವೀಳ್ಯೆದೆಲೆ ಮತ್ತು ನೀರು
ಅಕ್ಷಯ ತೃತೀಯದಂದು ವೀಳ್ಯೆದೆಲೆ ಮತ್ತು ನೀರನ್ನು ದಾನ ಮಾಡುವುದರಿಂದ ಕೂಡ ಸಂಪತ್ತು ವೃದ್ಧಿಸುವುದು.



Click it and Unblock the Notifications