Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಅಕ್ಷಯ ತೃತೀಯಯಂದು ಸಂಪತ್ತು ವೃದ್ಧಿಗೆ ಚಿನ್ನದ ಬದಲಿಗೆ ಈ ಆಹಾರ ವಸ್ತುಗಳನ್ನು ಖರೀದಿಸಬಹುದು
ಏಪ್ರಿಲ್ 22ಕ್ಕೆ ಅಕ್ಷಯ ತೃತೀಯ. ಈ ಶುಭ ದಿನಕ್ಕಾಗಿ ತುಂಬಾ ಜನ ಕಾಯುತ್ತಿರುತ್ತಾರೆ. ಏಕೆಂದರೆ ಈ ದಿನ ಶುಭ ದಿನದಂದು ಚಿನ್ನ, ಆಸ್ತಿ, ಮನೆ ಖರೀದಿಗೆ ತುಂಬಾನೇ ಶ್ರೇಷ್ಠವಾಗಿದೆ. ಈ ದಿನ ಈ ವಸ್ತುಗಳನ್ನು ಖರೀದಿಸಿದರೆ ನಮ್ಮ ಸಂಪತ್ತು ವೃದ್ಧಿಸುವುದು ಎಂಬ ನಂಬಿಕೆ.
ಅಕ್ಷಯ ಪಾತ್ರದಂತೆ ನಮ್ಮ ಸಂಪತ್ತು ವೃದ್ಧಿಸಲಿ ಎಂದು ಅಕ್ಷಯ ತೃತೀಯ ಶುಭ ದಿನದಂದು ಒಂದು ಗ್ರಾಂ ಚಿನ್ನವನ್ನು ಖರೀದಿಸೋಣ ಎಂದು ಜನರು ಯೋಚಿಸುತ್ತಾರೆ. ಆದರೆ ಈಗ ಚಿನ್ನದ ಬೆಲೆ ದುಬಾರಿಯಾಗಿರುವುದರಿಂದ ಒಂದು ಗ್ರಾಂ ಚಿನ್ನ ಖರೀದಿಸಲು ಮಧ್ಯಮವರ್ಗದವರು ಯೋಚಿಸಬೇಕಾಗಿದೆ. ಅಕ್ಷಯ ತೃತೀಯದಂದು ಚಿನ್ನ ಖರೀದಿಸಲು ಸಾಧ್ಯವಾಗದಿದ್ದರೆ ತೊಂದರೆಯಿಲ್ಲ ನೀವು ಕೆಲವೊಂದು ಆಹಾರ ವಸ್ತುಗಳನ್ನು ಖರೀದಿಸಿದರೂ ಲಕ್ಷ್ಮಿ ಕೃಪೆಗೆ ಪಾತ್ರರಾಗುವಿರಿ.

ಅಕ್ಷಯ ತೃತೀಯ ದಿನದಂದು ಧಾನ್ಯಗಳನ್ನು ಖರೀದಿಸಿ:
ಈ ದಿನ ಧಾನ್ಯಗಳನ್ನು ಖರೀದಿಸುವುದು ಶುಭವೆಂದು ಪರಿಗಣಿಸಲಾಗಿದೆ. ಇದರಿಂದ ಸಂಪತ್ತು ವೃದ್ಧಿಸುವುದು, ಇದರಿಂದ ಮನೆಯ ಆರ್ಥಿಕ ಸುಧಾರಣೆಯಾಗುವುದು ಎಂಬ ನಂಬಿಕೆ ಇದೆ.
ಸೊಪ್ಪು
ಈ ದಿನ ಮನೆಗೆ ಹಸಿರು ಸೊಪ್ಪು ತರುವುದು ಶುಭ, ಹಸಿರು ಶುಭದ ಸಂಕೇತ, ಈ ದಿನ ಸೊಪ್ಪು, ಹಸಿರು ತರಕಾರಿ, ಹಸಿರು ಬಣ್ಣದ ಕಾಳುಗಳನ್ನು ತನ್ನಿ.
ಅಕ್ಕಿ, ರಾಗಿ, ನವಣೆ ಖರೀದಿಸಿ
ಅಕ್ಷಯ ತೃತೀಯದಂದು ಮನೆಯ ಅಡುಗೆ ಮನೆಯಲ್ಲಿ ಯಾವ ವಸ್ತುವಿಗೂ ಕೊರತೆ ಇಲ್ಲದಂತೆ ನೋಡಿಕೊಳ್ಳಿ. ಈ ದಿನ ಮನೆ ಅಕ್ಕಿ, ರಾಗಿ, ನವಣೆ, ಬೇಳೆ-ಕಾಳುಗಳನ್ನು ತನ್ನಿ.
ತುಪ್ಪ
ಹಿಂದೂ ನಂಬಿಕೆ ಪ್ರಕಾರ ತುಪ್ಪ ದುಷ್ಟ ಶಕ್ತಿ, ನಕಾರಾತ್ಮಕ ಶಕ್ತಿ ಹೊರಗಿಡುತ್ತದೆ ಎಂದು ನಂಬಲಾಗಿದೆ. ಈ ದಿನ ಮನೆಗೆ ತುಪ್ಪ ತನ್ನ ಅಲ್ಲದೆ ಈ ದಿನ ತುಪ್ಪದ ದೀಪ ಹಚ್ಚಿ ಶ್ರೀ ವಿಷ್ಣು ಹಾಗೂ ಲಕ್ಷ್ಮಿಯನ್ನು ಆರಾಧಿಸಿ.
ಇವುಗಳನ್ನು ದಾನ ಮಾಡಿ
ಚಂದನ
ಈ ದಿನ ಚಂದನ ಅಥವಾ ಶ್ರೀಗಂಧದ ಸುಗಂಧ ದ್ರವ್ಯವನ್ನು ದಾನ ಮಾಡಿ.
ತೆಂಗಿನಕಾಯಿ
ಈ ದಿನ ಬ್ರಾಹ್ಮಣರಿಗೆ ತೆಂಗಿನಕಾಯಿ ದಾನ ಮಾಡಿದರೆ ನಮ್ಮ ಪೂರ್ವಜರಿಗೆ ಮೋಕ್ಷ ಸಿಗುವುದು ಎಂದು ಹೇಳಲಾಗುವುದು.
ಮಜ್ಜಿಗೆ
ಅಕ್ಷಯ ತೃತೀಯದಂದು ಮಜ್ಜಿಗೆ ದಾನ ಮಾಡಿದರೆ ಲಕ್ಷ್ಮಿ ಕೃಪೆಗೆ ಪಾತ್ರರಾಗುವಿರಿ.
ವೀಳ್ಯೆದೆಲೆ ಮತ್ತು ನೀರು
ಅಕ್ಷಯ ತೃತೀಯದಂದು ವೀಳ್ಯೆದೆಲೆ ಮತ್ತು ನೀರನ್ನು ದಾನ ಮಾಡುವುದರಿಂದ ಕೂಡ ಸಂಪತ್ತು ವೃದ್ಧಿಸುವುದು.



Click it and Unblock the Notifications