Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ಅಕ್ಷಯ ತೃತೀಯಯಂದು ಸಂಪತ್ತು ವೃದ್ಧಿಗೆ ಚಿನ್ನದ ಬದಲಿಗೆ ಈ ಆಹಾರ ವಸ್ತುಗಳನ್ನು ಖರೀದಿಸಬಹುದು
ಏಪ್ರಿಲ್ 22ಕ್ಕೆ ಅಕ್ಷಯ ತೃತೀಯ. ಈ ಶುಭ ದಿನಕ್ಕಾಗಿ ತುಂಬಾ ಜನ ಕಾಯುತ್ತಿರುತ್ತಾರೆ. ಏಕೆಂದರೆ ಈ ದಿನ ಶುಭ ದಿನದಂದು ಚಿನ್ನ, ಆಸ್ತಿ, ಮನೆ ಖರೀದಿಗೆ ತುಂಬಾನೇ ಶ್ರೇಷ್ಠವಾಗಿದೆ. ಈ ದಿನ ಈ ವಸ್ತುಗಳನ್ನು ಖರೀದಿಸಿದರೆ ನಮ್ಮ ಸಂಪತ್ತು ವೃದ್ಧಿಸುವುದು ಎಂಬ ನಂಬಿಕೆ.
ಅಕ್ಷಯ ಪಾತ್ರದಂತೆ ನಮ್ಮ ಸಂಪತ್ತು ವೃದ್ಧಿಸಲಿ ಎಂದು ಅಕ್ಷಯ ತೃತೀಯ ಶುಭ ದಿನದಂದು ಒಂದು ಗ್ರಾಂ ಚಿನ್ನವನ್ನು ಖರೀದಿಸೋಣ ಎಂದು ಜನರು ಯೋಚಿಸುತ್ತಾರೆ. ಆದರೆ ಈಗ ಚಿನ್ನದ ಬೆಲೆ ದುಬಾರಿಯಾಗಿರುವುದರಿಂದ ಒಂದು ಗ್ರಾಂ ಚಿನ್ನ ಖರೀದಿಸಲು ಮಧ್ಯಮವರ್ಗದವರು ಯೋಚಿಸಬೇಕಾಗಿದೆ. ಅಕ್ಷಯ ತೃತೀಯದಂದು ಚಿನ್ನ ಖರೀದಿಸಲು ಸಾಧ್ಯವಾಗದಿದ್ದರೆ ತೊಂದರೆಯಿಲ್ಲ ನೀವು ಕೆಲವೊಂದು ಆಹಾರ ವಸ್ತುಗಳನ್ನು ಖರೀದಿಸಿದರೂ ಲಕ್ಷ್ಮಿ ಕೃಪೆಗೆ ಪಾತ್ರರಾಗುವಿರಿ.

ಅಕ್ಷಯ ತೃತೀಯ ದಿನದಂದು ಧಾನ್ಯಗಳನ್ನು ಖರೀದಿಸಿ:
ಈ ದಿನ ಧಾನ್ಯಗಳನ್ನು ಖರೀದಿಸುವುದು ಶುಭವೆಂದು ಪರಿಗಣಿಸಲಾಗಿದೆ. ಇದರಿಂದ ಸಂಪತ್ತು ವೃದ್ಧಿಸುವುದು, ಇದರಿಂದ ಮನೆಯ ಆರ್ಥಿಕ ಸುಧಾರಣೆಯಾಗುವುದು ಎಂಬ ನಂಬಿಕೆ ಇದೆ.
ಸೊಪ್ಪು
ಈ ದಿನ ಮನೆಗೆ ಹಸಿರು ಸೊಪ್ಪು ತರುವುದು ಶುಭ, ಹಸಿರು ಶುಭದ ಸಂಕೇತ, ಈ ದಿನ ಸೊಪ್ಪು, ಹಸಿರು ತರಕಾರಿ, ಹಸಿರು ಬಣ್ಣದ ಕಾಳುಗಳನ್ನು ತನ್ನಿ.
ಅಕ್ಕಿ, ರಾಗಿ, ನವಣೆ ಖರೀದಿಸಿ
ಅಕ್ಷಯ ತೃತೀಯದಂದು ಮನೆಯ ಅಡುಗೆ ಮನೆಯಲ್ಲಿ ಯಾವ ವಸ್ತುವಿಗೂ ಕೊರತೆ ಇಲ್ಲದಂತೆ ನೋಡಿಕೊಳ್ಳಿ. ಈ ದಿನ ಮನೆ ಅಕ್ಕಿ, ರಾಗಿ, ನವಣೆ, ಬೇಳೆ-ಕಾಳುಗಳನ್ನು ತನ್ನಿ.
ತುಪ್ಪ
ಹಿಂದೂ ನಂಬಿಕೆ ಪ್ರಕಾರ ತುಪ್ಪ ದುಷ್ಟ ಶಕ್ತಿ, ನಕಾರಾತ್ಮಕ ಶಕ್ತಿ ಹೊರಗಿಡುತ್ತದೆ ಎಂದು ನಂಬಲಾಗಿದೆ. ಈ ದಿನ ಮನೆಗೆ ತುಪ್ಪ ತನ್ನ ಅಲ್ಲದೆ ಈ ದಿನ ತುಪ್ಪದ ದೀಪ ಹಚ್ಚಿ ಶ್ರೀ ವಿಷ್ಣು ಹಾಗೂ ಲಕ್ಷ್ಮಿಯನ್ನು ಆರಾಧಿಸಿ.
ಇವುಗಳನ್ನು ದಾನ ಮಾಡಿ
ಚಂದನ
ಈ ದಿನ ಚಂದನ ಅಥವಾ ಶ್ರೀಗಂಧದ ಸುಗಂಧ ದ್ರವ್ಯವನ್ನು ದಾನ ಮಾಡಿ.
ತೆಂಗಿನಕಾಯಿ
ಈ ದಿನ ಬ್ರಾಹ್ಮಣರಿಗೆ ತೆಂಗಿನಕಾಯಿ ದಾನ ಮಾಡಿದರೆ ನಮ್ಮ ಪೂರ್ವಜರಿಗೆ ಮೋಕ್ಷ ಸಿಗುವುದು ಎಂದು ಹೇಳಲಾಗುವುದು.
ಮಜ್ಜಿಗೆ
ಅಕ್ಷಯ ತೃತೀಯದಂದು ಮಜ್ಜಿಗೆ ದಾನ ಮಾಡಿದರೆ ಲಕ್ಷ್ಮಿ ಕೃಪೆಗೆ ಪಾತ್ರರಾಗುವಿರಿ.
ವೀಳ್ಯೆದೆಲೆ ಮತ್ತು ನೀರು
ಅಕ್ಷಯ ತೃತೀಯದಂದು ವೀಳ್ಯೆದೆಲೆ ಮತ್ತು ನೀರನ್ನು ದಾನ ಮಾಡುವುದರಿಂದ ಕೂಡ ಸಂಪತ್ತು ವೃದ್ಧಿಸುವುದು.



Click it and Unblock the Notifications











