Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದಿನವಿಡಿ ಒಂದೇ ಕಾಲಿನಲ್ಲಿ ನಿಂತು ದೋಸೆ ಮಾಡುವ ಯುವತಿ..! ಆಕೆ ಕಥೆ ನೀವು ಓದಿ.!
ಜೀವನ ಅನ್ನೋದು ಎಲ್ಲರಿಗೂ ಸುಖದ ಸುಪ್ಪತ್ತಿಗೆ ಆಗಿರುವುದಿಲ್ಲ ಹಲವರು ಒಂದು ಹೊತ್ತಿನ ಊಟಕ್ಕೂ ಹೋರಾಟದ ಬದುಕು ನಡೆಸಬೇಕಿದೆ. ಅತ್ಯಂತ ಕಷ್ಟದ ದಿನಗಳು, ಕೂಲಿ, ದಿನವೆಲ್ಲಾ ದುಡಿದ ಬಳಿಕ ಒಂದೊತ್ತಿನ ಊಟ ಮಾಡವವರು ಸಹ ನಮ್ಮ ನಡುವೆ ಇದ್ದಾರೆ.
ಇವರಷ್ಟೇ ಅಲ್ಲ ಊಟವನ್ನೇ ಮಾಡದೆ ದಿನ ದೂಡುವ ಮಂದಿಯನ್ನು ಸಹ ನಾವು ನೋಡಬಹುದು. ಆದ್ರೆ ಇಲ್ಲೊಬ್ಬಾಕೆಯ ಕಥೆ ಈಗ ಇಂಟರ್ನೆಟ್ನಲ್ಲಿ ಭಾರಿ ಪ್ರಶಂಸೆ ಹಾಗೂ ಭಾರಿ ಮೆಚ್ಚುಗೆ ಗಳಿಸಿದೆ. ಆಕೆಗೆ ಒಂದು ಕಾಲಿಲ್ಲದಿದ್ದರೂ ದಿನವೆಲ್ಲಾ ನಿಂತುಕೊಂಡೆ ದುಡಿಯುವ ಆಕೆಯ ಆತ್ಮಸ್ಥೈರ್ಯಕ್ಕೆ ಜನ ಫಿದಾ ಆಗಿದ್ದಾರೆ. ಆಕೆಯನ್ನು ಕಂಡು ಕ್ರಿಕೆಟ್ ದಿಗ್ಗಜ ವಿವಿಎಸ್ ಲಕ್ಷ್ಮಣ್ ಸಹ ಫ್ಯಾನ್ ಆಗಿದ್ದಾರೆ.

ಜೀವನದಲ್ಲಿ ಏನಾದರು ಸಾಧಿಸಬೇಕು ಎಂಬ ಛಲ ಒಂದಿದ್ದರೆ ಎಂತಹ ಕಠಿಣ ಸವಾಲುಗಳನ್ನು ಬೇಕಾಧರು ಎದುರಿಸಬಹುದು ಎಂಬುದಕ್ಕೆ ಆಕೆ ಸಾಕ್ಷಿಯಾಗಿದ್ದಾಳೆ. ವೀಣಾ ಅಂಬರೀಶ್ ಎಂಬ 17 ವರ್ಷದ ಈ ಯುವತಿ ಸಾವಿರಾರು ಮಂದಿಗೆ ಈಗ ಸ್ಪೂರ್ತಿಯ ಚಿಲುಮೆ ಆಗಿದ್ದಾಳೆ.
ಮನಸ್ಸು ಇದ್ದರೆ ಯಾವುದು ಅಸಾಧ್ಯವಲ್ಲ ಎಂಬುದನ್ನು ಆಕೆ ಮತ್ತೆ ಮತ್ತೆ ನಿರೂಪಿಸಿದ್ದಾಳೆ. ಭರತನಾಟ್ಯ ಕಲಾವಿದೆಯಾದ ವೀಣಾ ತನ್ನ 17 ನೇ ವಯಸ್ಸಿನಲ್ಲಿ ಬಸ್ ಅಪಘಾತವೊಂದರಲ್ಲಿ ಬಲಗಾಲನ್ನು ಕಳೆದುಕೊಳ್ಳುತ್ತಾಳೆ. ಆದರೆ ಛಲ ಬಿಡದ ಆಕೆ ಬದುಕಬೇಕೆಂಬ ಹಠ ಆಕೆಗೆ ಕರಿ ದೋಸಾ ಎಂಬ ಪುಟ್ಟ ಅಂಗಡಿ ತೆರೆಯಲು ಸ್ಪೂರ್ತಿಯಾಗುತ್ತದೆ.
ಒಂದೇ ಕಾಲು ಎಂಬ ಕೊರಗು ಇಲ್ಲದ ಆಕೆ ಅದನ್ನೆ ಸವಾಲಾಗಿ ಸ್ವೀಕರಿಸಿ 'ಕರಿ ದೋಸೆ' ಅಂಗಡಿ ಮುನ್ನಡೆಸಲು ಮುಂದಾಗುತ್ತಾಳೆ. ಎಂಬಿಎ ಪದವಿ ಪಡೆದಿದ್ದ ಆಕೆ ಅಪಘಾತದ ಬಳಿಕ ಖಿನ್ನತೆಗೆ ಒಳಗಾಗಿದ್ದಳು, ಆದ್ರೆ ಬದುಕಬೇಕು, ಏನಾದರು ಮಾಡಬೇಕು ಎಂಬ ಆಕೆಯ ಹಠ ಇಲ್ಲಿಯವರೆಗೆ ಆಕೆಯನ್ನು ಕರೆದುಕೊಂಡು ಬಂದಿದೆ.
ಅಡುಗೆ ಮಾಡುವುದರಲ್ಲಿ ಆಸಕ್ತಿ ಹೊಂದಿದ್ದ ಆಕೆ ಅದನ್ನೇ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾಳೆ. 2023ರಲ್ಲಿ ಆಕೆ ಕರಿ ದೋಸೆ ಎಂಬ ಅಂಗಡಿ ತೆರೆಯುತ್ತಾಳೆ. ಬೆಳಗ್ಗೆಯಿಂಸ ನಿಂತುಕೊಂಡೆ ದೋಸೆ ಮಾಡಿಕೊಡುವ ಕಾರ್ಯವದು. ಎಷ್ಟೆ ಕಷ್ಟಗಳು ಎದುರಾದರು ನಿತ್ಯವೂ ಅಂಗಡಿ ತೆರೆದು ರುಚಿ ರುಚಿಯ ಖಾದ್ಯ ಸವಿಯಲು ಕೊಡುವುದು ಆಕೆ ಕೆಲಸವಾಗಿ ಬಿಡುತ್ತದೆ. ಈಗ ಆಕೆಗೆ ಈ ಅಂಗಡಿಯೇ ಮೂಲಾಧಾರವಾಗಿದೆ.
ಈ ಯಶಸ್ಸಿನ ಕಥೆ ಕುರಿತು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಧೃತಿಗೆಡದೆ ಗಟ್ಟಿಯಾಗಿ ನಿಲ್ಲಬೇಕು ಎಂಬ ವೀಣಾ ನಿಲುವು ನಮಗೆಲ್ಲರಿಗೂ ಸ್ಫೂರ್ತಿ ಎಂದಿದ್ದಾರೆ. ಅವರ ಈ ಪೋಸ್ಟ್ ಹಂಚಿಕೊಂಡ ಬಳಿಕ ಆಕೆಯ ಕಥೆ ಎಲ್ಲೆಡೆ ವೈರಲ್ ಆಗಿದೆ. ಜೊತೆಗೆ ಸಾವಿರಾರು ಮಂದಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈಗ ವೀಣಾ ಸಾವಿರಾರು ಮಂದಿಗೆ ರುಚಿಯ ಅಡುಗೆ ನೀಡುವ ಜೊತೆಗೆ ಸ್ಪೂರ್ತಿಯಾಗಿದ್ದಾರೆ.
ಆಕೆಯ ಯಶಸ್ಸಿನ ಕಥಗೆ ಬಳಕೆದಾರರು ಮೆಚ್ಚುಗೆಯ ಮಾತು ಆಡಿದ್ದಾರೆ. ಈ ಯುವತಿ ಸಾವಿರಾರು ನಿರುದ್ಯೋಗಿ ಯುವಕ ಯುವತಿಯರಿಗೆ ಸ್ಫೂರ್ತಿ. ಇವರಂತೆ ಎಲ್ಲರೂ ಕಷ್ಟಗಳ ಮೆಟ್ಟಿನಿಂತ ತಮ್ಮ ಜೀವನ ರೂಪಿಸಿಕೊಳ್ಳುವ ಛಲದೊಂದಿಗೆ ಬದುಕಿದರೆ ಸಾಕು ಎಂತವರ ಜೀವನವಾದರೂ ಬೆಳಕಾಗುತ್ತದೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.



Click it and Unblock the Notifications