Latest Updates
-
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ!
ಭಾರತದ ಕರೆನ್ಸಿಯಲ್ಲಿ ಮಹಾತ್ಮ ಗಾಂಧಿ ನಗುತ್ತಿರುವ ಫೋಟೋ: ಇದರ ಹಿಂದಿದೆ ಸ್ವಾರಸ್ಯಕರ ಸಂಗತಿಗಳು
ಭಾರತದ ಕರೆನ್ಸಿಯಲ್ಲಿ ಮಹಾತ್ಮ ಗಾಂಧಿ ನಗುತ್ತಿರುವ ಫೋಟೋವಿರುತ್ತದೆ. ಗಾಂಧಿಯ ಫೋಟೋವಿದ್ದರೆ ಮಾತ್ರ ಆ ನೋಟಿಗೆ ಬೆಲೆ. ಗಾಂಧಿ ನಗುತ್ತಿರುವ ನೋಟುಗಳು ನಮ್ಮ ಕೈಯಲ್ಲಿದ್ದರೆ ಮಾತ್ರ ನಮ್ಮ ಮುಖದಲ್ಲೂ ನಗು ಇರುವುದು ಅಲ್ವಾ. ನೋಟಿನಲ್ಲಿ ಗಾಂಧಿಜೀ ನಗುತ್ತಿರುವಂತೆ ಇರುವ ಪೋಟೋವಿದೆ. ಈ ಫೋಟೋದ ಹಿಂದಿನ ಸ್ವಾರಸ್ಯಕರ ಸಂಗತಿಗಳನ್ನು ತಿಳಿಯೋಣ:

ಭಾರತದ ಕರೆನ್ಸಿಯನ್ನು 1987ರಲ್ಲಿ ತಂದರು, ಆವಾಗ ಅಶೋಕ ಸ್ತಂಭ ಹಾಗೂ ಮಹಾತ್ಮಗಾಂಧಿ ಫೋಟೋವಿತ್ತು. ಅದಾದ ಬಳಿಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಹಾತ್ಮ ಗಾಂಧಿ ಸರಣಿ ಕರೆನ್ಸಿ ನೋಟುಗಳನ್ನು 1996ರಿಂದ ಪ್ರಿಂಟ್ ಮಾಡಲಾರಂಭಿಸಿತು. ಆದ್ದರಿಂದ ಗಾಂಧಿಜೀಯ ಫೋಟೋಗಳನ್ನು ನೋಟಿನಲ್ಲಿ ಕಾಣಬಹುದು.
ಮಹಾತ್ಮ ಗಾಂಧಿಜೀಯವರ ನಗುತ್ತಿರುವ ಫೋಟೋವನ್ನೇ ಏಕೆ ಬಳಸಲಾಯಿತು?
ಕೆಲವರು ಇದನ್ನು ಮಹಾತ್ಮ ಗಾಂಧಿಜೀಯವರ ಚಿತ್ರ ಬಿಡಿಸಿ ನಂತರ ನೋಟು ಅಚ್ಚ ಮಾಡಲಾಯಿತು ಎಂದು ಯೋಚಿಸುತ್ತಾರೆ, ಆದರೆ ವಾಸ್ತವ ಅದಲ್ಲ, ಮಹಾತ್ಮ ಗಾಂಧಿಜೀಯವರ ಫೋಟೋ ಇದಾಗಿದೆ. ಈ ಫೋಟೋವನ್ನು ಫೆಡ್ರಿಕ್ ಪೆಥಿಕ್ ಲಾರೆನ್ಸ್ ಕ್ಲಿಕ್ಕಿಸಿದರು.
ಇಲ್ಲಿ ನೀಡಲಾಗಿದೆಯೆಲ್ಲಾ ಅದುವೇ ಒರ್ಜಿನಲ್ ಫೋಟೋ. ಗಾಂಧಿಜೀಯವರು ಯಾರನ್ನೋ ನೋಡಿ ನಗುತ್ತಿರುವ ಫೋಟೋ ಅದಾಗಿದೆ.ಈ ಫೋಟೋವನ್ನೇ ಕ್ರಾಪ್ ಮಾಡಿ ಭಾರತದ ಕರೆನ್ಸಿಗೆ ಬಳಸಲಾಗಿದೆ.
ಈ ಫೋಟೋವನ್ನು ಮಾಜಿ ವೈಸ್ ರಾಯ್ ಮನೆಯಲ್ಲಿ 1946ರಲ್ಲಿ ತೆಗೆಯಲಾಯಿತು. ಇದೀಗ ರಾಷ್ಟ್ರಪತಿ ಭವನವಾಗಿದೆ.
ಭಾರತದ ಕರೆನ್ಸಿಯಲ್ಲಿ ಮಹಾತ್ಮಗಾಂಧಿ ಫೋಟೋವನ್ನು ಯಾವ ಉದ್ದೇಶದಿಂದ ಬಳಸಲಾಯಿತು?
ಸ್ವಾತಂತ್ರ್ಯ ಹೋರಾಟಕ್ಕೆ ಭಾರತದ ಮೂಲೆ-ಮೂಲೆಯಿಂದ ಜನರು ಸ್ವಾತಂತ್ರ್ಯ ಹೋರಾಟ ಮಾಡಿದ್ದರು. ಅನೇಕ ಮಹಾ ನಾಯಕರ ತ್ಯಾಗದ ಫಲ ನಮಗೆ ಸಿಕ್ಕ ಸ್ವಾತಂತ್ರ್ಯ. ಸ್ವಾತಂತ್ರ್ಯ ಹೋರಾಟದಲ್ಲಿ ಕೆಲವರು ಅಹಿಂಸಾ ಮಾರ್ಗ ಅನುಸರಿಸಿದರೆ ಇನ್ನು ಕೆಲವರು ಬ್ರಿಟಿಷರ ಮಣಿಸಲು ರಕ್ತ ಹರಿಸಲೂ ಸಿದ್ಧವಾಗಿದ್ದರು. ಆದರೆ ಎಲ್ಲರೂ ಒಪ್ಪಿಕೊಂಡ ನಾಯಕ ಮಹಾತ್ಮಗಾಂಧಿ ಆಗಿದ್ದರು. ಇವರನ್ನು ಭಾರತದ ಪಿತಾಮಹಾ ಎಂದು ಕರೆಯುತ್ತಿದ್ದರು, ಹೀಗಾಗಿ ಭಾರತದ ಕರೆನ್ಸಿಯಲ್ಲಿ ಮಹಾತ್ಮಗಾಂಧಿಯವರ ಫೋಟೋವನ್ನೇ ಬಳಸಲಾಯಿತು.



Click it and Unblock the Notifications