Latest Updates
-
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು! -
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ!
ಭಾರತದ ಕರೆನ್ಸಿಯಲ್ಲಿ ಮಹಾತ್ಮ ಗಾಂಧಿ ನಗುತ್ತಿರುವ ಫೋಟೋ: ಇದರ ಹಿಂದಿದೆ ಸ್ವಾರಸ್ಯಕರ ಸಂಗತಿಗಳು
ಭಾರತದ ಕರೆನ್ಸಿಯಲ್ಲಿ ಮಹಾತ್ಮ ಗಾಂಧಿ ನಗುತ್ತಿರುವ ಫೋಟೋವಿರುತ್ತದೆ. ಗಾಂಧಿಯ ಫೋಟೋವಿದ್ದರೆ ಮಾತ್ರ ಆ ನೋಟಿಗೆ ಬೆಲೆ. ಗಾಂಧಿ ನಗುತ್ತಿರುವ ನೋಟುಗಳು ನಮ್ಮ ಕೈಯಲ್ಲಿದ್ದರೆ ಮಾತ್ರ ನಮ್ಮ ಮುಖದಲ್ಲೂ ನಗು ಇರುವುದು ಅಲ್ವಾ. ನೋಟಿನಲ್ಲಿ ಗಾಂಧಿಜೀ ನಗುತ್ತಿರುವಂತೆ ಇರುವ ಪೋಟೋವಿದೆ. ಈ ಫೋಟೋದ ಹಿಂದಿನ ಸ್ವಾರಸ್ಯಕರ ಸಂಗತಿಗಳನ್ನು ತಿಳಿಯೋಣ:

ಭಾರತದ ಕರೆನ್ಸಿಯನ್ನು 1987ರಲ್ಲಿ ತಂದರು, ಆವಾಗ ಅಶೋಕ ಸ್ತಂಭ ಹಾಗೂ ಮಹಾತ್ಮಗಾಂಧಿ ಫೋಟೋವಿತ್ತು. ಅದಾದ ಬಳಿಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಹಾತ್ಮ ಗಾಂಧಿ ಸರಣಿ ಕರೆನ್ಸಿ ನೋಟುಗಳನ್ನು 1996ರಿಂದ ಪ್ರಿಂಟ್ ಮಾಡಲಾರಂಭಿಸಿತು. ಆದ್ದರಿಂದ ಗಾಂಧಿಜೀಯ ಫೋಟೋಗಳನ್ನು ನೋಟಿನಲ್ಲಿ ಕಾಣಬಹುದು.
ಮಹಾತ್ಮ ಗಾಂಧಿಜೀಯವರ ನಗುತ್ತಿರುವ ಫೋಟೋವನ್ನೇ ಏಕೆ ಬಳಸಲಾಯಿತು?
ಕೆಲವರು ಇದನ್ನು ಮಹಾತ್ಮ ಗಾಂಧಿಜೀಯವರ ಚಿತ್ರ ಬಿಡಿಸಿ ನಂತರ ನೋಟು ಅಚ್ಚ ಮಾಡಲಾಯಿತು ಎಂದು ಯೋಚಿಸುತ್ತಾರೆ, ಆದರೆ ವಾಸ್ತವ ಅದಲ್ಲ, ಮಹಾತ್ಮ ಗಾಂಧಿಜೀಯವರ ಫೋಟೋ ಇದಾಗಿದೆ. ಈ ಫೋಟೋವನ್ನು ಫೆಡ್ರಿಕ್ ಪೆಥಿಕ್ ಲಾರೆನ್ಸ್ ಕ್ಲಿಕ್ಕಿಸಿದರು.
ಇಲ್ಲಿ ನೀಡಲಾಗಿದೆಯೆಲ್ಲಾ ಅದುವೇ ಒರ್ಜಿನಲ್ ಫೋಟೋ. ಗಾಂಧಿಜೀಯವರು ಯಾರನ್ನೋ ನೋಡಿ ನಗುತ್ತಿರುವ ಫೋಟೋ ಅದಾಗಿದೆ.ಈ ಫೋಟೋವನ್ನೇ ಕ್ರಾಪ್ ಮಾಡಿ ಭಾರತದ ಕರೆನ್ಸಿಗೆ ಬಳಸಲಾಗಿದೆ.
ಈ ಫೋಟೋವನ್ನು ಮಾಜಿ ವೈಸ್ ರಾಯ್ ಮನೆಯಲ್ಲಿ 1946ರಲ್ಲಿ ತೆಗೆಯಲಾಯಿತು. ಇದೀಗ ರಾಷ್ಟ್ರಪತಿ ಭವನವಾಗಿದೆ.
ಭಾರತದ ಕರೆನ್ಸಿಯಲ್ಲಿ ಮಹಾತ್ಮಗಾಂಧಿ ಫೋಟೋವನ್ನು ಯಾವ ಉದ್ದೇಶದಿಂದ ಬಳಸಲಾಯಿತು?
ಸ್ವಾತಂತ್ರ್ಯ ಹೋರಾಟಕ್ಕೆ ಭಾರತದ ಮೂಲೆ-ಮೂಲೆಯಿಂದ ಜನರು ಸ್ವಾತಂತ್ರ್ಯ ಹೋರಾಟ ಮಾಡಿದ್ದರು. ಅನೇಕ ಮಹಾ ನಾಯಕರ ತ್ಯಾಗದ ಫಲ ನಮಗೆ ಸಿಕ್ಕ ಸ್ವಾತಂತ್ರ್ಯ. ಸ್ವಾತಂತ್ರ್ಯ ಹೋರಾಟದಲ್ಲಿ ಕೆಲವರು ಅಹಿಂಸಾ ಮಾರ್ಗ ಅನುಸರಿಸಿದರೆ ಇನ್ನು ಕೆಲವರು ಬ್ರಿಟಿಷರ ಮಣಿಸಲು ರಕ್ತ ಹರಿಸಲೂ ಸಿದ್ಧವಾಗಿದ್ದರು. ಆದರೆ ಎಲ್ಲರೂ ಒಪ್ಪಿಕೊಂಡ ನಾಯಕ ಮಹಾತ್ಮಗಾಂಧಿ ಆಗಿದ್ದರು. ಇವರನ್ನು ಭಾರತದ ಪಿತಾಮಹಾ ಎಂದು ಕರೆಯುತ್ತಿದ್ದರು, ಹೀಗಾಗಿ ಭಾರತದ ಕರೆನ್ಸಿಯಲ್ಲಿ ಮಹಾತ್ಮಗಾಂಧಿಯವರ ಫೋಟೋವನ್ನೇ ಬಳಸಲಾಯಿತು.



Click it and Unblock the Notifications