Latest Updates
-
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ
ಭಾರತದ ಕರೆನ್ಸಿಯಲ್ಲಿ ಮಹಾತ್ಮ ಗಾಂಧಿ ನಗುತ್ತಿರುವ ಫೋಟೋ: ಇದರ ಹಿಂದಿದೆ ಸ್ವಾರಸ್ಯಕರ ಸಂಗತಿಗಳು
ಭಾರತದ ಕರೆನ್ಸಿಯಲ್ಲಿ ಮಹಾತ್ಮ ಗಾಂಧಿ ನಗುತ್ತಿರುವ ಫೋಟೋವಿರುತ್ತದೆ. ಗಾಂಧಿಯ ಫೋಟೋವಿದ್ದರೆ ಮಾತ್ರ ಆ ನೋಟಿಗೆ ಬೆಲೆ. ಗಾಂಧಿ ನಗುತ್ತಿರುವ ನೋಟುಗಳು ನಮ್ಮ ಕೈಯಲ್ಲಿದ್ದರೆ ಮಾತ್ರ ನಮ್ಮ ಮುಖದಲ್ಲೂ ನಗು ಇರುವುದು ಅಲ್ವಾ. ನೋಟಿನಲ್ಲಿ ಗಾಂಧಿಜೀ ನಗುತ್ತಿರುವಂತೆ ಇರುವ ಪೋಟೋವಿದೆ. ಈ ಫೋಟೋದ ಹಿಂದಿನ ಸ್ವಾರಸ್ಯಕರ ಸಂಗತಿಗಳನ್ನು ತಿಳಿಯೋಣ:

ಭಾರತದ ಕರೆನ್ಸಿಯನ್ನು 1987ರಲ್ಲಿ ತಂದರು, ಆವಾಗ ಅಶೋಕ ಸ್ತಂಭ ಹಾಗೂ ಮಹಾತ್ಮಗಾಂಧಿ ಫೋಟೋವಿತ್ತು. ಅದಾದ ಬಳಿಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಹಾತ್ಮ ಗಾಂಧಿ ಸರಣಿ ಕರೆನ್ಸಿ ನೋಟುಗಳನ್ನು 1996ರಿಂದ ಪ್ರಿಂಟ್ ಮಾಡಲಾರಂಭಿಸಿತು. ಆದ್ದರಿಂದ ಗಾಂಧಿಜೀಯ ಫೋಟೋಗಳನ್ನು ನೋಟಿನಲ್ಲಿ ಕಾಣಬಹುದು.
ಮಹಾತ್ಮ ಗಾಂಧಿಜೀಯವರ ನಗುತ್ತಿರುವ ಫೋಟೋವನ್ನೇ ಏಕೆ ಬಳಸಲಾಯಿತು?
ಕೆಲವರು ಇದನ್ನು ಮಹಾತ್ಮ ಗಾಂಧಿಜೀಯವರ ಚಿತ್ರ ಬಿಡಿಸಿ ನಂತರ ನೋಟು ಅಚ್ಚ ಮಾಡಲಾಯಿತು ಎಂದು ಯೋಚಿಸುತ್ತಾರೆ, ಆದರೆ ವಾಸ್ತವ ಅದಲ್ಲ, ಮಹಾತ್ಮ ಗಾಂಧಿಜೀಯವರ ಫೋಟೋ ಇದಾಗಿದೆ. ಈ ಫೋಟೋವನ್ನು ಫೆಡ್ರಿಕ್ ಪೆಥಿಕ್ ಲಾರೆನ್ಸ್ ಕ್ಲಿಕ್ಕಿಸಿದರು.
ಇಲ್ಲಿ ನೀಡಲಾಗಿದೆಯೆಲ್ಲಾ ಅದುವೇ ಒರ್ಜಿನಲ್ ಫೋಟೋ. ಗಾಂಧಿಜೀಯವರು ಯಾರನ್ನೋ ನೋಡಿ ನಗುತ್ತಿರುವ ಫೋಟೋ ಅದಾಗಿದೆ.ಈ ಫೋಟೋವನ್ನೇ ಕ್ರಾಪ್ ಮಾಡಿ ಭಾರತದ ಕರೆನ್ಸಿಗೆ ಬಳಸಲಾಗಿದೆ.
ಈ ಫೋಟೋವನ್ನು ಮಾಜಿ ವೈಸ್ ರಾಯ್ ಮನೆಯಲ್ಲಿ 1946ರಲ್ಲಿ ತೆಗೆಯಲಾಯಿತು. ಇದೀಗ ರಾಷ್ಟ್ರಪತಿ ಭವನವಾಗಿದೆ.
ಭಾರತದ ಕರೆನ್ಸಿಯಲ್ಲಿ ಮಹಾತ್ಮಗಾಂಧಿ ಫೋಟೋವನ್ನು ಯಾವ ಉದ್ದೇಶದಿಂದ ಬಳಸಲಾಯಿತು?
ಸ್ವಾತಂತ್ರ್ಯ ಹೋರಾಟಕ್ಕೆ ಭಾರತದ ಮೂಲೆ-ಮೂಲೆಯಿಂದ ಜನರು ಸ್ವಾತಂತ್ರ್ಯ ಹೋರಾಟ ಮಾಡಿದ್ದರು. ಅನೇಕ ಮಹಾ ನಾಯಕರ ತ್ಯಾಗದ ಫಲ ನಮಗೆ ಸಿಕ್ಕ ಸ್ವಾತಂತ್ರ್ಯ. ಸ್ವಾತಂತ್ರ್ಯ ಹೋರಾಟದಲ್ಲಿ ಕೆಲವರು ಅಹಿಂಸಾ ಮಾರ್ಗ ಅನುಸರಿಸಿದರೆ ಇನ್ನು ಕೆಲವರು ಬ್ರಿಟಿಷರ ಮಣಿಸಲು ರಕ್ತ ಹರಿಸಲೂ ಸಿದ್ಧವಾಗಿದ್ದರು. ಆದರೆ ಎಲ್ಲರೂ ಒಪ್ಪಿಕೊಂಡ ನಾಯಕ ಮಹಾತ್ಮಗಾಂಧಿ ಆಗಿದ್ದರು. ಇವರನ್ನು ಭಾರತದ ಪಿತಾಮಹಾ ಎಂದು ಕರೆಯುತ್ತಿದ್ದರು, ಹೀಗಾಗಿ ಭಾರತದ ಕರೆನ್ಸಿಯಲ್ಲಿ ಮಹಾತ್ಮಗಾಂಧಿಯವರ ಫೋಟೋವನ್ನೇ ಬಳಸಲಾಯಿತು.



Click it and Unblock the Notifications











