Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭಾರತದ ಕರೆನ್ಸಿಯಲ್ಲಿ ಮಹಾತ್ಮ ಗಾಂಧಿ ನಗುತ್ತಿರುವ ಫೋಟೋ: ಇದರ ಹಿಂದಿದೆ ಸ್ವಾರಸ್ಯಕರ ಸಂಗತಿಗಳು
ಭಾರತದ ಕರೆನ್ಸಿಯಲ್ಲಿ ಮಹಾತ್ಮ ಗಾಂಧಿ ನಗುತ್ತಿರುವ ಫೋಟೋವಿರುತ್ತದೆ. ಗಾಂಧಿಯ ಫೋಟೋವಿದ್ದರೆ ಮಾತ್ರ ಆ ನೋಟಿಗೆ ಬೆಲೆ. ಗಾಂಧಿ ನಗುತ್ತಿರುವ ನೋಟುಗಳು ನಮ್ಮ ಕೈಯಲ್ಲಿದ್ದರೆ ಮಾತ್ರ ನಮ್ಮ ಮುಖದಲ್ಲೂ ನಗು ಇರುವುದು ಅಲ್ವಾ. ನೋಟಿನಲ್ಲಿ ಗಾಂಧಿಜೀ ನಗುತ್ತಿರುವಂತೆ ಇರುವ ಪೋಟೋವಿದೆ. ಈ ಫೋಟೋದ ಹಿಂದಿನ ಸ್ವಾರಸ್ಯಕರ ಸಂಗತಿಗಳನ್ನು ತಿಳಿಯೋಣ:

ಭಾರತದ ಕರೆನ್ಸಿಯನ್ನು 1987ರಲ್ಲಿ ತಂದರು, ಆವಾಗ ಅಶೋಕ ಸ್ತಂಭ ಹಾಗೂ ಮಹಾತ್ಮಗಾಂಧಿ ಫೋಟೋವಿತ್ತು. ಅದಾದ ಬಳಿಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಹಾತ್ಮ ಗಾಂಧಿ ಸರಣಿ ಕರೆನ್ಸಿ ನೋಟುಗಳನ್ನು 1996ರಿಂದ ಪ್ರಿಂಟ್ ಮಾಡಲಾರಂಭಿಸಿತು. ಆದ್ದರಿಂದ ಗಾಂಧಿಜೀಯ ಫೋಟೋಗಳನ್ನು ನೋಟಿನಲ್ಲಿ ಕಾಣಬಹುದು.
ಮಹಾತ್ಮ ಗಾಂಧಿಜೀಯವರ ನಗುತ್ತಿರುವ ಫೋಟೋವನ್ನೇ ಏಕೆ ಬಳಸಲಾಯಿತು?
ಕೆಲವರು ಇದನ್ನು ಮಹಾತ್ಮ ಗಾಂಧಿಜೀಯವರ ಚಿತ್ರ ಬಿಡಿಸಿ ನಂತರ ನೋಟು ಅಚ್ಚ ಮಾಡಲಾಯಿತು ಎಂದು ಯೋಚಿಸುತ್ತಾರೆ, ಆದರೆ ವಾಸ್ತವ ಅದಲ್ಲ, ಮಹಾತ್ಮ ಗಾಂಧಿಜೀಯವರ ಫೋಟೋ ಇದಾಗಿದೆ. ಈ ಫೋಟೋವನ್ನು ಫೆಡ್ರಿಕ್ ಪೆಥಿಕ್ ಲಾರೆನ್ಸ್ ಕ್ಲಿಕ್ಕಿಸಿದರು.
ಇಲ್ಲಿ ನೀಡಲಾಗಿದೆಯೆಲ್ಲಾ ಅದುವೇ ಒರ್ಜಿನಲ್ ಫೋಟೋ. ಗಾಂಧಿಜೀಯವರು ಯಾರನ್ನೋ ನೋಡಿ ನಗುತ್ತಿರುವ ಫೋಟೋ ಅದಾಗಿದೆ.ಈ ಫೋಟೋವನ್ನೇ ಕ್ರಾಪ್ ಮಾಡಿ ಭಾರತದ ಕರೆನ್ಸಿಗೆ ಬಳಸಲಾಗಿದೆ.
ಈ ಫೋಟೋವನ್ನು ಮಾಜಿ ವೈಸ್ ರಾಯ್ ಮನೆಯಲ್ಲಿ 1946ರಲ್ಲಿ ತೆಗೆಯಲಾಯಿತು. ಇದೀಗ ರಾಷ್ಟ್ರಪತಿ ಭವನವಾಗಿದೆ.
ಭಾರತದ ಕರೆನ್ಸಿಯಲ್ಲಿ ಮಹಾತ್ಮಗಾಂಧಿ ಫೋಟೋವನ್ನು ಯಾವ ಉದ್ದೇಶದಿಂದ ಬಳಸಲಾಯಿತು?
ಸ್ವಾತಂತ್ರ್ಯ ಹೋರಾಟಕ್ಕೆ ಭಾರತದ ಮೂಲೆ-ಮೂಲೆಯಿಂದ ಜನರು ಸ್ವಾತಂತ್ರ್ಯ ಹೋರಾಟ ಮಾಡಿದ್ದರು. ಅನೇಕ ಮಹಾ ನಾಯಕರ ತ್ಯಾಗದ ಫಲ ನಮಗೆ ಸಿಕ್ಕ ಸ್ವಾತಂತ್ರ್ಯ. ಸ್ವಾತಂತ್ರ್ಯ ಹೋರಾಟದಲ್ಲಿ ಕೆಲವರು ಅಹಿಂಸಾ ಮಾರ್ಗ ಅನುಸರಿಸಿದರೆ ಇನ್ನು ಕೆಲವರು ಬ್ರಿಟಿಷರ ಮಣಿಸಲು ರಕ್ತ ಹರಿಸಲೂ ಸಿದ್ಧವಾಗಿದ್ದರು. ಆದರೆ ಎಲ್ಲರೂ ಒಪ್ಪಿಕೊಂಡ ನಾಯಕ ಮಹಾತ್ಮಗಾಂಧಿ ಆಗಿದ್ದರು. ಇವರನ್ನು ಭಾರತದ ಪಿತಾಮಹಾ ಎಂದು ಕರೆಯುತ್ತಿದ್ದರು, ಹೀಗಾಗಿ ಭಾರತದ ಕರೆನ್ಸಿಯಲ್ಲಿ ಮಹಾತ್ಮಗಾಂಧಿಯವರ ಫೋಟೋವನ್ನೇ ಬಳಸಲಾಯಿತು.



Click it and Unblock the Notifications