Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಶೂನ್ಯತೆ, ನಿರ್ಥಕತೆ, ಖಾಲಿತನದ ನಿಜವಾದ ಅರ್ಥ

ಒಂದು ದಿನ ಸುಭುತಿಯು ಮರವೊಂದರ ಕೆಳಗಡೆ ಸ್ಥಿತಪ್ರಜ್ಞನಂತೆ ಧ್ಯಾನದಲ್ಲಿ ಮುಳುಗಿದ್ದನು. ಆಗ ಇದ್ದಕ್ಕಿದ್ದಂತೆ ಪ್ರತ್ಯಕ್ಷರಾದ ದೇವತೆಗಳು ಆತನ ಮೇಲೆ ಪುಷ್ಪ ವೃಷ್ಟಿ ಮಾಡಲು ಶುರು ಮಾಡಿದರು. ಇದರಿಂದ ಸುಭುತಿಯ ಏಕಾಂತ ಕಡಿತಗೊಂಡಿತು ಮತ್ತು ಆತನಿಗೆ ಆಶ್ಚರ್ಯವೋ ಆಶ್ಚರ್ಯ. ಸುತ್ತ ಮುತ್ತ ನೋಡಿದಾಗ ಆತನಿಗೆ ದೇವತೆಗಳು ಹೂಮಳೆ ಸುರಿಸಿದ್ದು ಕಂಡುಬಂದಿತು.
"ಇದೇಕೆ ನನ್ನ ಮೇಲೆ ಪುಷ್ಪ ವೃಷ್ಟಿ ಮಾಡಿದಿರಿ?" ಎಂದು ಸುಭುತಿ ವಿನಮ್ರವಾಗಿ ದೇವರನ್ನು ಪ್ರಶ್ನಿಸಿದ.
"ಶೂನ್ಯತೆ, ಖಾಲಿತನದ ಬಗ್ಗೆ ನಿನ್ನ ಮಾತುಗಳನ್ನು, ಉಪದೇಶಗಳನ್ನು, ನಿನ್ನ ಚಿಂತನೆಯನ್ನು ನಾವು ಮೆಚ್ಚಿದ್ದೇವೆ. ಆದ್ದರಿಂದಲೇ ಈ ಹೂ ಮಳೆ" ಎಂದು ದೇವತೆಗಳು ಉಸುರಿದರು.
"ಆದರೆ..." ಸುಭುತಿ ಹೇಳಿದ, "ನಾನು ಶೂನ್ಯತೆ ಬಗ್ಗೆ ನಿಮ್ಮ ಜೊತೆ ಮಾತನಾಡಿಯೇ ಇಲ್ಲವಲ್ಲ?"
"ನೀನು ಶೂನ್ಯತೆ ಬಗ್ಗೆ ಮಾತನಾಡಿಯೂ ಇಲ್ಲ, ನಾವು ಶೂನ್ಯತೆ ಬಗ್ಗೆ ಕೇಳಿಯೂ ಇಲ್ಲ" ಎಂದು ದೇವತೆಗಳು ಸುಭುತಿಯನ್ನು ಪ್ರಶಂಶಿಸಿದರು.
ಬುದ್ಧನ ಅನುಯಾಯಿಯಾಗಿದ್ದ ಸುಭುತಿಯ ಮೇಲೆ ಮತ್ತೆ ಯತೇಚ್ಛವಾಗಿ ಹೂವಿನ ಸುರಿಮಳೆಯಾಯ್ತು.



Click it and Unblock the Notifications
