ಶೂನ್ಯತೆ, ನಿರ್ಥಕತೆ, ಖಾಲಿತನದ ನಿಜವಾದ ಅರ್ಥ

By Prasad

Zen story : Importance of emptiness
ಸುಭುತಿ ಬುದ್ಧನ ಕಟ್ಟಾ ಶಿಷ್ಯನಾಗಿದ್ದ. ಶೂನ್ಯತೆ, ನಿರ್ಥಕತೆ, ಖಾಲಿತನದ ನಿಜವಾದ ಅರ್ಥವನ್ನು ಸುಭುತಿ ತಿಳಿದಿದ್ದ. ಜಗತ್ತಿನಲ್ಲಿ ಎಲ್ಲವೂ ಶೂನ್ಯಕ್ಕೆ ಸಮಾನ. ಆದರೆ, ಒಂದು ಸಂಗತಿಯೊಡನೆ ಇನ್ನೊಂದು ಸಂಗತಿಯ ಸಾಂಗತ್ಯವೇರ್ಪಟ್ಟಾಗ ಅದಕ್ಕೆ ಅರ್ಥವಿರುತ್ತದೆ ಎಂದು ಸುಭುತಿ ಬಲವಾಗಿ ಪ್ರತಿಪಾದಿಸುತ್ತಿದ್ದ.

ಒಂದು ದಿನ ಸುಭುತಿಯು ಮರವೊಂದರ ಕೆಳಗಡೆ ಸ್ಥಿತಪ್ರಜ್ಞನಂತೆ ಧ್ಯಾನದಲ್ಲಿ ಮುಳುಗಿದ್ದನು. ಆಗ ಇದ್ದಕ್ಕಿದ್ದಂತೆ ಪ್ರತ್ಯಕ್ಷರಾದ ದೇವತೆಗಳು ಆತನ ಮೇಲೆ ಪುಷ್ಪ ವೃಷ್ಟಿ ಮಾಡಲು ಶುರು ಮಾಡಿದರು. ಇದರಿಂದ ಸುಭುತಿಯ ಏಕಾಂತ ಕಡಿತಗೊಂಡಿತು ಮತ್ತು ಆತನಿಗೆ ಆಶ್ಚರ್ಯವೋ ಆಶ್ಚರ್ಯ. ಸುತ್ತ ಮುತ್ತ ನೋಡಿದಾಗ ಆತನಿಗೆ ದೇವತೆಗಳು ಹೂಮಳೆ ಸುರಿಸಿದ್ದು ಕಂಡುಬಂದಿತು.

"ಇದೇಕೆ ನನ್ನ ಮೇಲೆ ಪುಷ್ಪ ವೃಷ್ಟಿ ಮಾಡಿದಿರಿ?" ಎಂದು ಸುಭುತಿ ವಿನಮ್ರವಾಗಿ ದೇವರನ್ನು ಪ್ರಶ್ನಿಸಿದ.

"ಶೂನ್ಯತೆ, ಖಾಲಿತನದ ಬಗ್ಗೆ ನಿನ್ನ ಮಾತುಗಳನ್ನು, ಉಪದೇಶಗಳನ್ನು, ನಿನ್ನ ಚಿಂತನೆಯನ್ನು ನಾವು ಮೆಚ್ಚಿದ್ದೇವೆ. ಆದ್ದರಿಂದಲೇ ಈ ಹೂ ಮಳೆ" ಎಂದು ದೇವತೆಗಳು ಉಸುರಿದರು.

"ಆದರೆ..." ಸುಭುತಿ ಹೇಳಿದ, "ನಾನು ಶೂನ್ಯತೆ ಬಗ್ಗೆ ನಿಮ್ಮ ಜೊತೆ ಮಾತನಾಡಿಯೇ ಇಲ್ಲವಲ್ಲ?"

"ನೀನು ಶೂನ್ಯತೆ ಬಗ್ಗೆ ಮಾತನಾಡಿಯೂ ಇಲ್ಲ, ನಾವು ಶೂನ್ಯತೆ ಬಗ್ಗೆ ಕೇಳಿಯೂ ಇಲ್ಲ" ಎಂದು ದೇವತೆಗಳು ಸುಭುತಿಯನ್ನು ಪ್ರಶಂಶಿಸಿದರು.

ಬುದ್ಧನ ಅನುಯಾಯಿಯಾಗಿದ್ದ ಸುಭುತಿಯ ಮೇಲೆ ಮತ್ತೆ ಯತೇಚ್ಛವಾಗಿ ಹೂವಿನ ಸುರಿಮಳೆಯಾಯ್ತು.

English summary

Zen story : Importance of emptiness | Inspirational short story | ಝೆನ್ ಕಥೆ : ಶೂನ್ಯತೆ, ನಿರ್ಥಕತೆ, ಖಾಲಿತನದ ನಿಜವಾದ ಅರ್ಥ

Zen stories : Subhuti was disciple of lord Buddha. Subhuti understood emptiness in the true sense. One day with emptiness he was sitting under the tree meditating. Suddenly showers of flowers fell about him.
Story first published: Thursday, June 14, 2012, 15:43 [IST]
X
Desktop Bottom Promotion