Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಶೂನ್ಯತೆ, ನಿರ್ಥಕತೆ, ಖಾಲಿತನದ ನಿಜವಾದ ಅರ್ಥ

ಒಂದು ದಿನ ಸುಭುತಿಯು ಮರವೊಂದರ ಕೆಳಗಡೆ ಸ್ಥಿತಪ್ರಜ್ಞನಂತೆ ಧ್ಯಾನದಲ್ಲಿ ಮುಳುಗಿದ್ದನು. ಆಗ ಇದ್ದಕ್ಕಿದ್ದಂತೆ ಪ್ರತ್ಯಕ್ಷರಾದ ದೇವತೆಗಳು ಆತನ ಮೇಲೆ ಪುಷ್ಪ ವೃಷ್ಟಿ ಮಾಡಲು ಶುರು ಮಾಡಿದರು. ಇದರಿಂದ ಸುಭುತಿಯ ಏಕಾಂತ ಕಡಿತಗೊಂಡಿತು ಮತ್ತು ಆತನಿಗೆ ಆಶ್ಚರ್ಯವೋ ಆಶ್ಚರ್ಯ. ಸುತ್ತ ಮುತ್ತ ನೋಡಿದಾಗ ಆತನಿಗೆ ದೇವತೆಗಳು ಹೂಮಳೆ ಸುರಿಸಿದ್ದು ಕಂಡುಬಂದಿತು.
"ಇದೇಕೆ ನನ್ನ ಮೇಲೆ ಪುಷ್ಪ ವೃಷ್ಟಿ ಮಾಡಿದಿರಿ?" ಎಂದು ಸುಭುತಿ ವಿನಮ್ರವಾಗಿ ದೇವರನ್ನು ಪ್ರಶ್ನಿಸಿದ.
"ಶೂನ್ಯತೆ, ಖಾಲಿತನದ ಬಗ್ಗೆ ನಿನ್ನ ಮಾತುಗಳನ್ನು, ಉಪದೇಶಗಳನ್ನು, ನಿನ್ನ ಚಿಂತನೆಯನ್ನು ನಾವು ಮೆಚ್ಚಿದ್ದೇವೆ. ಆದ್ದರಿಂದಲೇ ಈ ಹೂ ಮಳೆ" ಎಂದು ದೇವತೆಗಳು ಉಸುರಿದರು.
"ಆದರೆ..." ಸುಭುತಿ ಹೇಳಿದ, "ನಾನು ಶೂನ್ಯತೆ ಬಗ್ಗೆ ನಿಮ್ಮ ಜೊತೆ ಮಾತನಾಡಿಯೇ ಇಲ್ಲವಲ್ಲ?"
"ನೀನು ಶೂನ್ಯತೆ ಬಗ್ಗೆ ಮಾತನಾಡಿಯೂ ಇಲ್ಲ, ನಾವು ಶೂನ್ಯತೆ ಬಗ್ಗೆ ಕೇಳಿಯೂ ಇಲ್ಲ" ಎಂದು ದೇವತೆಗಳು ಸುಭುತಿಯನ್ನು ಪ್ರಶಂಶಿಸಿದರು.
ಬುದ್ಧನ ಅನುಯಾಯಿಯಾಗಿದ್ದ ಸುಭುತಿಯ ಮೇಲೆ ಮತ್ತೆ ಯತೇಚ್ಛವಾಗಿ ಹೂವಿನ ಸುರಿಮಳೆಯಾಯ್ತು.



Click it and Unblock the Notifications