Latest Updates
-
ದೇವಶಯನಿ ಏಕಾದಶಿ: ದಂಪತಿಗಳ ಬಾಂಧವ್ಯ ಹೆಚ್ಚಿಸಲು ಈ ಉಪವಾಸದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶ: ನಿಮ್ಮ ದುಬಾರಿ ಸೀರೆ ಮತ್ತು ಶೂಗಳನ್ನು ಬೂಸ್ಟ್ನಿಂದ ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಸಾಕು! -
ಅಹಮದಾಬಾದ್ ಮಳೆ: ಪ್ರವಾಹದ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಮಾರ್ಗಸೂಚಿಗಳನ್ನು ಅನುಸರಿಸಿ -
ಕಾಮನ್ವೆಲ್ತ್ ಗೇಮ್ಸ್ 2026: 3ನೇ ದಿನ ಭಾರತದ ಆಟಗಾರರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ! -
ಮಳೆಗಾಲದ ಜಾರುವ ರಸ್ತೆಗಳಲ್ಲಿ ನಡೆಯುವಾಗ ಎಚ್ಚರ: ಸುರಕ್ಷಿತವಾಗಿರಲು 8 ನಿಮಿಷಗಳ ಈ ವ್ಯಾಯಾಮ ಮಾಡಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು 45 ನಿಮಿಷದಲ್ಲಿ ಟ್ಯಾಕ್ಸ್ ಫೈಲ್ ಮಾಡುವುದು ಹೇಗೆ? -
ಪ್ರವಾಹದ ನೀರು ಮನೆಯೊಳಗೆ ನುಗ್ಗಿದೆಯೇ? ಆಸ್ತಿ ಮತ್ತು ಆರೋಗ್ಯ ರಕ್ಷಣೆಗೆ ತಕ್ಷಣ ಮಾಡಬೇಕಾದ ಕೆಲಸಗಳಿವು -
ಬೆಂಗಳೂರಿನಲ್ಲಿ ಮೊಟ್ಟೆ ಬೆಲೆ ಏರಿಕೆ: ಬಜೆಟ್ ಉಳಿಸಲು ಇಲ್ಲಿದೆ ಬೆಸ್ಟ್ ಪ್ರೋಟೀನ್ ಆಯ್ಕೆಗಳು! -
ಇನ್ಸ್ಟಾಗ್ರಾಮ್ ಡೌನ್: ಆತಂಕ ಬೇಡ, ನಿಮ್ಮ ಅಕೌಂಟ್ ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಮಳೆ ರಜೆ ದಿನ ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ!
ಶೂನ್ಯತೆ, ನಿರ್ಥಕತೆ, ಖಾಲಿತನದ ನಿಜವಾದ ಅರ್ಥ

ಒಂದು ದಿನ ಸುಭುತಿಯು ಮರವೊಂದರ ಕೆಳಗಡೆ ಸ್ಥಿತಪ್ರಜ್ಞನಂತೆ ಧ್ಯಾನದಲ್ಲಿ ಮುಳುಗಿದ್ದನು. ಆಗ ಇದ್ದಕ್ಕಿದ್ದಂತೆ ಪ್ರತ್ಯಕ್ಷರಾದ ದೇವತೆಗಳು ಆತನ ಮೇಲೆ ಪುಷ್ಪ ವೃಷ್ಟಿ ಮಾಡಲು ಶುರು ಮಾಡಿದರು. ಇದರಿಂದ ಸುಭುತಿಯ ಏಕಾಂತ ಕಡಿತಗೊಂಡಿತು ಮತ್ತು ಆತನಿಗೆ ಆಶ್ಚರ್ಯವೋ ಆಶ್ಚರ್ಯ. ಸುತ್ತ ಮುತ್ತ ನೋಡಿದಾಗ ಆತನಿಗೆ ದೇವತೆಗಳು ಹೂಮಳೆ ಸುರಿಸಿದ್ದು ಕಂಡುಬಂದಿತು.
"ಇದೇಕೆ ನನ್ನ ಮೇಲೆ ಪುಷ್ಪ ವೃಷ್ಟಿ ಮಾಡಿದಿರಿ?" ಎಂದು ಸುಭುತಿ ವಿನಮ್ರವಾಗಿ ದೇವರನ್ನು ಪ್ರಶ್ನಿಸಿದ.
"ಶೂನ್ಯತೆ, ಖಾಲಿತನದ ಬಗ್ಗೆ ನಿನ್ನ ಮಾತುಗಳನ್ನು, ಉಪದೇಶಗಳನ್ನು, ನಿನ್ನ ಚಿಂತನೆಯನ್ನು ನಾವು ಮೆಚ್ಚಿದ್ದೇವೆ. ಆದ್ದರಿಂದಲೇ ಈ ಹೂ ಮಳೆ" ಎಂದು ದೇವತೆಗಳು ಉಸುರಿದರು.
"ಆದರೆ..." ಸುಭುತಿ ಹೇಳಿದ, "ನಾನು ಶೂನ್ಯತೆ ಬಗ್ಗೆ ನಿಮ್ಮ ಜೊತೆ ಮಾತನಾಡಿಯೇ ಇಲ್ಲವಲ್ಲ?"
"ನೀನು ಶೂನ್ಯತೆ ಬಗ್ಗೆ ಮಾತನಾಡಿಯೂ ಇಲ್ಲ, ನಾವು ಶೂನ್ಯತೆ ಬಗ್ಗೆ ಕೇಳಿಯೂ ಇಲ್ಲ" ಎಂದು ದೇವತೆಗಳು ಸುಭುತಿಯನ್ನು ಪ್ರಶಂಶಿಸಿದರು.
ಬುದ್ಧನ ಅನುಯಾಯಿಯಾಗಿದ್ದ ಸುಭುತಿಯ ಮೇಲೆ ಮತ್ತೆ ಯತೇಚ್ಛವಾಗಿ ಹೂವಿನ ಸುರಿಮಳೆಯಾಯ್ತು.



Click it and Unblock the Notifications