Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಶ್ರೀಕೃಷ್ಣನ ಕಿರೀಟದಲ್ಲಿರುವ 'ನವಿಲಿನ ಗರಿಯ' ಹಿಂದಿರುವ ರಹಸ್ಯ
ಶ್ರೀಕೃಷ್ಣನನ್ನು ಮನದಲ್ಲಿ ನೆನೆದೊಡನೆ ನಮಗೆ ಮೊದಲು ನೆನಪಿಗೆ ಬರುವುದು ಅವರ ನೀಲ ವರ್ಣ, ತುಂಟಾಟ, ಸ್ನಿಗ್ಧ ಸೌಂದರ್ಯ, ಮಾಸದ ನಗು, ಕೈಯಲ್ಲಿ ಹಿಡಿದುಕೊಂಡಿರುವ ಕೊಳಲು, ಕಿರೀಟದಲ್ಲಿರುವ ನವಿಲು ಗರಿಯಾಗಿದೆ.
ಮೇಘ ವರ್ಣನೆಂಬ ಹೆಸರೂ ಕೃಷ್ಣನಿಗಿದ್ದು ಹೊಳಪಿನಿಂದ ಕೂಡಿದ ಕಣ್ಣುಗಳನ್ನು ಕೃಷ್ಣ ಪರಮಾತ್ಮ ಹೊಂದಿದ್ದಾರೆ. ರೇಷ್ಮೆ ವಸ್ತ್ರಗಳು, ಬೆಣ್ಣೆ ಕದಿಯುವ ತುಂಟ ನೋಟ, ಸಖಿಯರನ್ನು ಗೋಳಾಡಿಸುವ ಪ್ರಿಯ ಸಖ ಹೀಗೆ ಕೃಷ್ಣನನ್ನು ವಿಧವಿಧವಾಗಿ ಬಣ್ಣಿಸಲಾಗುತ್ತದೆ. ಭಗವಾನ್ ಕೃಷ್ಣ ಹೇಳಿದಂತೆ ದಿನ ಬೆಳಿಗ್ಗೆ ಹೀಗೆ ಮಾಡಿ, ಸಂಕಷ್ಟ ದೂರವಾಗುತ್ತೆ
ಅದಾಗ್ಯೂ ಇದೆಲ್ಲದಕ್ಕಿಂತ ಕೃಷ್ಣನೆಡೆಗೆ ನಮ್ಮನ್ನು ಆಕರ್ಷಿಸುವ ವಿಧ ಅವರು ತಲೆಯಲ್ಲಿ ಧರಿಸಿರುವ ನವಿಲು ಗರಿಯಾಗಿದೆ. ನವಿಲಿನ ಗರಿಯನ್ನು ಧರಿಸಿದರು 'ಮೋರ್ ಮುಕುಟ್ ಧಾರಿ' ಎಂಬ ಹೆಸರಿನಿಂದಲೂ ಭಕ್ತರು ದೇವರನ್ನು ಕರೆಯುತ್ತಾರೆ. ಅವತಾರ ಪುರುಷ ಶ್ರೀ ಕೃಷ್ಣ ಜಗತ್ತಿಗೆ ಸಾರಿದ ಉಪದೇಶ
ಆದರೆ ಕೃಷ್ಣನು ಈ ಗರಿಯನ್ನು ಕಿರೀಟದಲ್ಲಿ ಏಕೆ ಧರಿಸಿದ್ದಾರೆ ಎಂಬುದರ ಹಿಂದಿರುವ ಹಿನ್ನೆಲೆ ನಿಮಗೆ ತಿಳಿದಿದೆಯೇ? ಹಾಗಿದ್ದರೆ ಇಂದಿನ ಲೇಖನದಲ್ಲಿ ಇದರ ಮಹತ್ವವನ್ನು ನಾವು ತಿಳಿಸಲಿದ್ದೇವೆ...

ಕೃಷ್ಣ ಮತ್ತು ನವಿಲಿನ ನೃತ್ಯ
ಒಮ್ಮೆ ಕೃಷ್ಣ ಮತ್ತು ಅವರ ಗೆಳೆಯರು ಅರಣ್ಯದಲ್ಲಿ ನಿದ್ದೆಯನ್ನು ಮಾಡುತ್ತಿದ್ದರು. ಮಧ್ಯಾಹ್ನದ ಸಮಯವಾದ್ದರಿಂದ ಗೋವುಗಳು ಮೇಯುತ್ತಿದ್ದವು. ನಿದ್ದೆಯಿಂದ ಎಚ್ಚೆತ್ತವರು ಮೊದಲು ಕೃಷ್ಣ ದೇವರಾಗಿದ್ದರು. ಸುತ್ತಲಿನ ಪರಿಸರ ಆನಂದಮಯವಾಗಿತ್ತು. ಕೃಷ್ಣನು ಕೊಳಲನ್ನು ನುಡಿಸಲು ಆರಂಭಿಸಿದರು. ಸುತ್ತಲಿನ ಪ್ರಾಣಿ ಪಕ್ಷಿಗಳು, ಗಿಡ ಮರಗಳು ಕೊಳಲಿನ ಹಾಡಿಗೆ ತಲೆದೂಗಿ ಮೈಮರೆತು ನೃತ್ಯಮಾಡಲು ಆರಂಭಿಸಿದವು.

ನವಿಲಿನ ನೃತ್ಯ
ನವಿಲಿನ ನೃತ್ಯ ಇದರಲ್ಲಿ ಮನಮೋಹಕವಾಗಿತ್ತು. ಕೃಷ್ಣನ ಕೊಳಲಿನ ನಾದ ನಿಂತೊಡನೆ ನವಿಲುಗಳ ರಾಜ ಕೃಷ್ಣನ ಬಳಿಗೆ ಹೋಗಿ ತನ್ನ ಗರಿಯನ್ನು ಉದುರಿಸುತ್ತದೆ. ಇದನ್ನು ಅವುಗಳು ಗುರುದಕ್ಷಿಣೆಯ ರೂಪದಲ್ಲಿ ನೀಡುತ್ತವೆ. ಕೃಷ್ಣನು ಪ್ರೀತಿಯಿಂದ ಅದನ್ನು ಕೈಗೆತ್ತಿಕೊಂಡು ತಮ್ಮ ಕಿರೀಟದಲ್ಲಿ ಇಟ್ಟುಕೊಳ್ಳುತ್ತಾರೆ. ತಾವು ಯಾವಾಗಲೂ ಇದನ್ನು ಧರಿಸುವುದಾಗಿ ಕೃಷ್ಣನು ಹೇಳುತ್ತಾರೆ.

ಏಳು ಬಣ್ಣಗಳು
ನವಿಲಿನ ಗರಿಯಲ್ಲಿ ಏಳು ಬಣ್ಣಗಳು ಕಂಡುಬರುತ್ತವೆ ಎಂದು ಹೇಳಲಾಗಿದೆ. ಜೀವನದ ಪ್ರತಿಯೊಂದು ಬಣ್ಣಗಳನ್ನು ತಾನು ಧರಿಸಿಕೊಂಡಿದ್ದೇನೆ ಎಂಬುದನ್ನು ಕೃಷ್ಣನು ಈ ಮೂಲಕ ತೋರಿಸುತ್ತಿದ್ದಾರೆ. ಸಂಪೂರ್ಣ ವಿಶ್ವವನ್ನೇ ಕಾಪಾಡುವ ಕೃಷ್ಣನು ಬದುಕಿನ ಏಳು ಬಣ್ಣಗಳಿರುವ ನವಿಲಿನ ಗರಿಯನ್ನು ಕಿರೀಟದಲ್ಲಿ ಇರಿಸಿಕೊಂಡು ಭಕ್ತರನ್ನು ಸಲಹುತ್ತಿದ್ದಾರೆ.

ಸ್ಕಂದನ ಶುಭಾಕಾಂಕ್ಷಿ
ಪಾರ್ವತಿ ದೇವಿಯ ಸಹೋದರನೆಂದು ಮಹಾವಿಷ್ಣುವನ್ನು ಕರೆಯಲಾಗುತ್ತದೆ. ಶಿವ ಪಾರ್ವತಿ ವಿವಾಹ ಸಮಯದಲ್ಲಿ ಸಹೋದರನ ಸ್ಥಾನದಲ್ಲಿ ನಿಂತು ವಿಷ್ಣುವು ಪಾರ್ವತಿಯನ್ನು ಧಾರೆಯೆರೆದು ಕೊಡುತ್ತಾರೆ. ಹೀಗಾಗಿ ಕಾರ್ತೀಕೇಯನಿಗೆ ವಿಷ್ಣುವು ಸೋದರ ಮಾವನೆನಿಸಿಕೊಂಡಿದ್ದಾರೆ. ಕಾರ್ತೀಕೇಯನು ನವಿಲನ್ನು ತಮ್ಮ ವಾಹನವನ್ನಾಗಿ ಮಾಡಿಕೊಂಡಿದ್ದಾರೆ. ನವಿಲಿನ ಗರಿಯನ್ನು ತನ್ನ ಕಿರೀಟದಲ್ಲಿ ಇರಿಸಿಕೊಂಡು ಕೃಷ್ಣನು ತನ್ನ ಸೋದರಳಿಯನಿಗೆ ಶುಭವನ್ನು ಬಯಸುತ್ತಿದ್ದಾರೆ ಎಂಬ ಅರ್ಥವನ್ನು ಇದು ಹೊಂದಿದೆ.

ಶ್ರೀರಾಮ ಮತ್ತು ನವಿಲುಗಳು
ತ್ರೇತಾಯುಗದಲ್ಲಿ ರಾಮನು ಭೂಮಿಯ ಮೇಲೆ ನಡೆದಾಡುವ ಸಂದರ್ಭದಲ್ಲಿ ನವಿಲಿನ ಹಿಂಡುಗಳು ತಮ್ಮ ಗರಿಗಳಿಂದ ರಾಮನ ಬರುವ ನೆಲವನ್ನು ಶುದ್ಧಗೊಳಿಸುತ್ತಾರೆ. ನವಿಲುಗಳು ಈ ಆದರಪೂರ್ಣ ಸ್ವಾರ್ಥ ರಹಿತ ಮನಸ್ಸಿಗೆ ಮರುಳಾಗುತ್ತಾರೆ. ದ್ವಾಪರಯುಗದಲ್ಲಿ ತಾನು ಜನ್ಮವೆತ್ತಿದಾಗ ನಿಮ್ಮ ಗರಿಗಳನ್ನು ತಲೆಯ ಮೇಲೆ ಇರಿಸಿಕೊಂಡು ನಿಮಗೆ ಗೌರವವನ್ನು ನೀಡುತ್ತೇನೆ ಎಂದು ಭಾಷೆ ಕೊಡುತ್ತಾರೆ. ತಾವು ಕೃಷ್ಣನಾಗಿ ಜನ್ಮವೆತ್ತಿದಾಗ ನವಿಲುಗಳಿಗೆ ತಾವು ನೀಡಿದ ಪ್ರತಿಜ್ಞೆಯನ್ನು ಅವರು ಪೂರ್ಣಗೊಳಿಸುತ್ತಾರೆ.



Click it and Unblock the Notifications