Just In
- 21 min ago ಹುಟ್ಟುಹಬ್ಬದ ಕೇಕ್ ತಿಂದು ಬಾಲಕಿ ಸಾವು..! ಕೇಕ್ನಲ್ಲಿತ್ತು ಕೃತಕ ಸಿಹಿ ಸಾಕ್ರರಿನ್..!
- 1 hr ago ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- 2 hrs ago ಮಂಗಳ ಗೋಚಾರ ಫಲ 2024: ಇನ್ನು 38 ದಿನಗಳ ಕಾಲ ನಿಮ್ಮ ರಾಶಿಯಲ್ಲಿ ಮಂಗಳದ ಪ್ರಭಾವ ಹೇಗಿರಲಿದೆ?
- 3 hrs ago ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
Don't Miss
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Movies ನಿರಂತರ ಪ್ಲಾಫ್ ಸಿನಿಮಾಳನ್ನ ನೀಡಿದ ಈ ವಿಶ್ವಸುಂದರಿ ಯಾರು ಗೊತ್ತಾ...?
- Sports CSK vs LSG IPL 2024: ಚೆನ್ನೈ vs ಲಕ್ನೋ ಹೈ-ವೋಲ್ಟೇಜ್ ಪಂದ್ಯದ ಟಾಸ್ ವರದಿ; ಆಡುವ 11ರ ಬಳಗ
- News Delhi Rain: ದೆಹಲಿಯಲ್ಲಿ ದಾರಾಕಾರ ಮಳೆ: ಬಿಸಿಲಿನ ಶಾಖದಿಂದ ಪರಿಹಾರ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿವಲಿಂಗವನ್ನು ಸ್ಪರ್ಶಿಸಲು ಮಹಿಳೆಯರಿಗೆ ಏಕೆ ಅವಕಾಶವಿಲ್ಲ?
ಶಿವಲಿಂಗವನ್ನು ಶಿವ (ಲೋಕವಿನಾಶಕ) ಮತ್ತು ಪಾರ್ವತಿ (ಶಕ್ತಿಯ ದೇವತೆ)ಯರ ಸಂಗಮವೆಂದು ಭಾವಿಸಲಾಗುತ್ತದೆ. ಈ ಶಿವಲಿಂಗವನ್ನು ಪೂಜಿಸುವವರು ಪುರುಷರು ಮಾತ್ರ ನೆರವೇರಿಸಬೇಕು ಎಂಬ ನಂಬಿಕೆ ಪ್ರಚಲಿತವಾಗಿದೆ.
ಮಹಿಳೆಯರು,
ಅದರಲ್ಲೂ
ವಿಶೇಷವಾಗಿ
ಅವಿವಾಹಿತ
ಕನ್ಯೆಯರು
ಈ
ಪೂಜೆಯನ್ನು
ನಡೆಸಬಾರದು
ಎಂಬ
ನಂಬಿಕೆ
ಬೆಳೆದುಬಂದಿದೆ.
ಇದು
ಸತ್ಯವೇ?
ಈ
ಬಗ್ಗೆ
ಕೆಲವು
ಅಮೂಲ್ಯ
ಮಾಹಿತಿಗಳನ್ನು
ನೀಡಲಾಗಿದೆ.
ಭಗವಾನ್
ಶಿವನನ್ನು
ಲಿಂಗರೂಪದಲ್ಲಿ
ಏಕೆ
ಆರಾಧಿಸುತ್ತಾರೆ?
ಶಿವಲಿಂಗದ ಪೂಜೆ
ಶಿವಲಿಂಗವನ್ನು ಕನ್ಯೆಯರು ಮುಟ್ಟುವುದು ಅಥವಾ ಇದಕ್ಕೆ ಪ್ರದಕ್ಷಿಣೆ ಬರುವುದರಿಂದ ಭಗವಂತ ಶಿವನ ತಪಸ್ಸು ಭಂಗಗೊಳ್ಳಬಹುದು ಮತ್ತು ಲಿಂಗದ ಪಾವಿತ್ರ್ಯತೆ ಕೆಡಬಹುದು ಎಂಬ ನಂಬಿಕೆಯಿಂದ ಕೇವಲ ಪುರುಷರಿಗೆ ಇದರ ಪೂಜೆಯನ್ನು ಅರ್ಹಗೊಳಿಸಲಾಗಿದೆ.
ಪವಿತ್ರ ವಿಧಿಗಳು
ಶಿವಲಿಂಗದ ಪೂಜೆ ಪವಿತ್ರವಾದ ವಿಧಿಯಾಗಿದ್ದು ಇದರಲ್ಲಿ ಯಾವುದೇ ಲೌಕಿಕ ಕಾಮನೆ ಅಥವಾ ಬಯಕೆಗಳಿರಬಾರದು. ಶಿವಲಿಂಗಗಳಿರುವ ಈ ಸ್ಥಳಗಳು ಸಾಮಾನ್ಯವಾಗಿ ದುರ್ಗಮ ಪ್ರದೇಶದಲ್ಲಿದ್ದು ನಶ್ವರದೇಹಿಗಳಾದ ಮನುಷ್ಯರು ಬಳಿಬರುವುದನ್ನು ತಡೆಯಲಾಗಿದೆ. ಆದರೆ ಪೂಜೆಯನ್ನು ನಡೆಸುವುದು ಅನಿವಾರ್ಯವಾದುದರಿಂದ ಪುರುಷರು ಮಾತ್ರ ಬಳಿ ಬರಬಹುದು ಎಂದು ಹೇಳಲಾಗಿದೆ.
ಪೂಜೆಯ ವೇಳೆಯಲ್ಲಿ ವಹಿಸಬೇಕಾದ ಅತಿ ಕಾಳಜಿ
ತಪಸ್ಸಿನಲ್ಲಿರುವ ಶಿವನ ಏಕಾಗ್ರತೆಯನ್ನು ಭಂಗಗೊಳಿಸದಿರಲು ಅತಿಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಇಂದ್ರಲೋಕದ ಅಪ್ಸರೆಯರು ಮತ್ತು ದೇವಿಯರೇ ಶಿವನ ತಪಸ್ಸನ್ನು ಭಂಗಗೊಳಿಸದಿರಲು ಎಚ್ಚರಿಕೆ ವಹಿಸುತ್ತಿರುವಾಗ ಮನುಷ್ಯರಂತೂ ಇನ್ನೂ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.
ಪೂಜೆಗೆ ಸಂಬಂಧಿಸಿದ ದಂತಕಥೆ
ತಪಸ್ಸಿನಲ್ಲಿರುವ ಶಿವನಿಗೆ ಉದ್ದೇಶಪೂರ್ವಕವಲ್ಲದ ಯಾವುದೇ ಚಟುವಟಿಕೆ ಭಂಗ ತಂದರೂ ಆತನ ಕೋಪವನ್ನು ಈ ಭೂಮಿ ತಾಳಿಕೊಳ್ಳಲು ಸಾಧ್ಯವಿಲ್ಲದಿರುವುದರಿಂದ ಮಹಿಳೆಯರಿಗೆ ಶಿವಲಿಂಗದ ಬಳಿ ಬರುವುದನ್ನು ನಿಷೇಧಿಸಲಾಗಿದೆ ಎಂದು ಒಂದು ದಂತಕಥೆ ಹೇಳುತ್ತದೆ.
ಕನ್ಯೆಯರು ಪೂಜೆ ನೆರವೇರಿಸುವಂತಿಲ್ಲ
ಕನ್ಯೆಯರು ಶಿವನ ಪೂಜೆಯನ್ನು ನೆರವೇರಿಸುವಂತಿಲ್ಲವೇ? ಇದೆ, ಆದರೆ ಕೇವಲ ಶಿವನನ್ನು ಮಾತ್ರ ಪೂಜಿಸುವಂತಿಲ್ಲ, ಶಿವ ಮತ್ತು ಪಾರ್ವತಿಯರು ಜೊತೆಗಿರುವಂತಿದ್ದಾಗ ಮಾತ್ರ ಪೂಜಿಸಬಹುದು.
ಹದಿನಾರು ಸೋಮವಾರ ವ್ರತ
ಕನ್ಯೆಯರು ಪ್ರತಿ ಸೋಮವಾರದಂದು ಒಟ್ಟು ಹದಿನಾರು ವಾರಗಳ ಕಾಲ ಪೂಜಿಸುವ ವ್ರತ ಪಾಲಿಸಿದರೆ ಶುಭವಾಗುವುದೆಂದು ನಂಬಲಾಗಿದೆ.
ಸೋಮವಾರ ಶಿವನಿಗೆ ಪ್ರಿಯವಾದ ದಿನ
ಶಿವನಿಗೆ ಸೋಮವಾರ ಪ್ರಿಯವಾದ ದಿನವೆಂದು ನಂಬಲಾಗಿದೆ. ಶಿವನೊಬ್ಬ ಮಾದರಿ ಪತಿಯೆಂದು ಪರಿಗಣಿಸಲಾಗುತ್ತದೆ. ಅಂತೆಯೇ ಸೋಮವಾರದಂದು ಉಪವಾಸವಿದ್ದು ಪೂಜಿಸುವ ಮೂಲಕ ಶಿವನಂತಹ ಪತಿಯೇ ದೊರಕುತ್ತಾನೆ ಎಂಬ ನಂಬಿಕೆ ಪ್ರಚಲಿತವಾಗಿದೆ.
ಭೋಲೆನಾಥನಿಗಾಗಿ ಉಪವಾಸ
ಸೋಮವಾರದಂದು ಉಪವಾಸವಿರುವುದರ ಜೊತೆಗೇ ಹಿಂದೂ ಕ್ಯಾಲೆಂಡರ್ ನ ಶ್ರಾವಣ ಮಾಸದಲ್ಲಿಯೂ ಉಪವಾಸವಿರುವುದರಿಂದ ಜೀವನದಲ್ಲಿ ಸಮೃದ್ಧಿ ಮತ್ತು ಸಂತೋಷ ಲಭಿಸುವುದು ಎಂದು ನಂಬಲಾಗಿದೆ.
ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಗಳು
ಶಿವನ ಪೂಜೆ ಪ್ರತಿ ರಾಜ್ಯದಲ್ಲಿಯೂ ಬೇರೆ ಬೇರೆ ತೆರನಾಗಿರುತ್ತದೆ. ದಕ್ಷಿಣ ಭಾರತದಲ್ಲಿ ಗರ್ಭಗುಡಿಯಲ್ಲಿ ಪೂಜಾರಿಯನ್ನು ಬಿಟ್ಟು ಬೇರಾರಿಗೂ ಪ್ರವೇಶವಿಲ್ಲ. ಅದೇ ಉತ್ತರ ಭಾರತದಲ್ಲಿ ವಿಂಧ್ಯಪರ್ವತದಲ್ಲಿರುವ ದೇವಾಲಯಗಳಲ್ಲಿ ಭಕ್ತರಿಗೆ ಶಿವಲಿಂಗದ ದರ್ಶನ ಲಭ್ಯವಿದೆ ಮತ್ತು ಪೂಜೆಗೂ ಅವಕಾಶವಿದೆ.
ಮನೆಯಲ್ಲಿಯೇ ಪೂಜೆ
ದಕ್ಷಿಣ ಭಾರತದಲ್ಲಿ ಮನೆಯಲ್ಲಿಯೇ ಪುರುಷರು ಶಿವಲಿಂಗಕ್ಕೆ ಅಭಿಶೇಕ ನೀಡುವ ಮೂಲಕ ಪೂಜೆ ನಡೆಸಬಹುದು. ಪೂಜೆಯಲ್ಲಿ ಸಾಲಿಗ್ರಾಮ ಅಥವಾ ವಿಗ್ರಹಗಳನ್ನು ಅರ್ಪಿಸಬಹುದು. ಮಹಿಳೆಯರು ಇವರ ಪೂಜೆಗೆ ನೆರವಾಗಬಹುದು ಹಾಗೂ ಪೂಜೆಗೆ ಅಗತ್ಯವಿರುವ ಪರಿಕರಗಳನ್ನು ಒದಗಿಸಬಹುದು.
ಶಿವಾಲಯಗಳು
ಭಾರತದಾದ್ಯಂತ ಲಕ್ಷಗಟ್ಟಲೆ ಶಿವಾಲಯಗಳಿವೆ. ಇವುಗಳಲ್ಲಿ ಹೆಚ್ಚಿನವು ನದಿತಟದಲ್ಲಿದ್ದು ಮಹಿಳೆಯರು ನಿತ್ಯರೂ ಪೂಜೆ ಸಲ್ಲಿಸುತ್ತಾರೆ.
ಶಿವಲಿಂಗಕ್ಕೆ ನೀರಿನ ಅರ್ಚನೆ
ನದಿಯಲ್ಲಿ ಮುಳುಗು ಹಾಕಿದ ಬಳಿಕ ಶಿವಲಿಂಗಕ್ಕೆ ನೀರಿನಿಂದ ಅರ್ಚನೆ ಮಾಡುವುದು ಒಂದು ವಿಧಿಯಾಗಿದೆ. ಇದಕ್ಕೆ ಯಾವುದೇ ನಿರ್ಬಂಧವಿಲ್ಲ.
ಲಿಂಗಪುರಾಣ
ಲಿಂಗಪುರಾಣದ ಪ್ರಕಾರ ಪುರುಷರೆಲ್ಲರೂ ಶಿವನ ಅಂಶವಾಗಿದ್ದು ಮಹಿಳೆಯರೆಲ್ಲರೂ ಪಾರ್ವತಿಯ ಒಂದು ಅಂಶವಾಗಿದ್ದಾರೆ. ರಾಮಾಯಣದಲ್ಲಿಯೂ ಸೀತೆ ಶಿವ ಮತ್ತು ಕಾತ್ಯಾಯನಿಯ ರೂಪದ ಪಾರ್ವತಿಯನ್ನು ಆರಾಧಿಸುವುದನ್ನು ಬಣ್ಣಿಸಲಾಗಿದೆ.
ರಾಮೇಶ್ವರದ ಮರಳಿನ ಲಿಂಗ
ತಮಿಳುನಾಡಿನ ರಾಮೇಶ್ವರದಲ್ಲಿ ಮರಳಿನ ಲಿಂಗವೊಂದಿದೆ. ಇದು ಸೀತೆ ನಿರ್ಮಿಸಿದ್ದು ಎಂಬ ನಂಬಿಕೆ ಇದೆ. ಹನುಮಂತನು ಕಾಶಿಯಿಂದ ಶಿವಲಿಂಗವೊಂದನ್ನು ತರಲು ಹೋಗಿದ್ದಾಗ ಕಾಯುತ್ತಿದ್ದ ಶ್ರೀರಾಮ ಈ ವೇಳೆಯಲ್ಲಿ ಈ ಲಿಂಗವನ್ನು ಪೂಜಿಸಿದ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ.
ಭಕ್ತಿಯೇ ಪರಮಸತ್ಯ
ಶಿವನನ್ನು ಆರಾಧಿಸಲು ಪವಿತ್ರವಾದ ಹೃದಯ ಮತ್ತು ಭಕ್ತಿಯ ಅಗತ್ಯವಿದೆ. ಭಕ್ತಿಯಿಂದ ಆರಾಧಿಸಿದವರಿಗೆ ಶಿವ ಪ್ರಸನ್ನನಾಗುತ್ತಾನೆ. ಶಿವನಲ್ಲಿ ನಂಬಿಕೆ, ಅಚಲ ವಿಶ್ವಾಸ ಮತ್ತು ಶ್ರದ್ದೆ ಪೂಜೆ ಸಫಲಗೊಳ್ಳಲು ಅಗತ್ಯವಾಗಿವೆ.