Just In
- 1 hr ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 2 hrs ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- 15 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 15 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
Don't Miss
- Automobiles ಫ್ಯಾಮಿಲಿ ಕಾರಾಗಿ ಜನರ ಮನಗೆದ್ದ ಹ್ಯುಂಡೈ ಅಲ್ಕಾಜರ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- News Tirupati Darshan Ticket: ತಿರುಪತಿ ದರ್ಶನಕ್ಕೆ ವಿಶೇಷ ಟಿಕೆಟ್ ಬಿಡುಗಡೆ: ಪೂಜಾ ಸೇವೆಯಲ್ಲಿ ಬಾಗವಹಿಸಲು ದಿನಾಂಕ ಆಯ್ಕೆ ಮಾಡಿ...
- Finance ಕಬ್ಬನ್ ಪಾರ್ಕ್ನಲ್ಲಿ ಮರ ಅಪ್ಪಿಕೊಳ್ಳುವ ಕಾರ್ಯಕ್ರಮಕ್ಕೆ ತಲಾ 1,500 ರೂ. ಶುಲ್ಕವಿಟ್ಟ ಕಂಪನಿ!
- Technology Itel: ಐಟೆಲ್ ಸೂಪರ್ ಗುರು 4G ಫೋನ್ ಲಾಂಚ್! ಯುಪಿಐ ಬೆಂಬಲ
- Movies ನಟಿ ಪ್ರೀತಿ ಜಿಂಟಾ ಮದುವೆ ಮುನ್ನವೇ 34 ಮಕ್ಕಳಿಗೆ ತಾಯಿ ಪ್ರೀತಿ ನೀಡಿದ ವಿಷಯ ನಿಮಗೆ ಗೊತ್ತೇ?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೃಷ್ಣ ಜನ್ಮಾಷ್ಠಮಿ 2020: ಅವತಾರ ಪುರುಷ 'ಶ್ರೀ ಕೃಷ್ಣ' ಎಲ್ಲವನ್ನೂ ಬಲ್ಲ ಜಗದ ಸೂತ್ರಧಾರ
ಶ್ರೀಕೃಷ್ಣ ಪರಮಾತ್ಮನ ಬಾಲ್ಯದ ತುಂಟಾಟಗಳನ್ನು ಯಾರಿಂದ ಮರೆಯಲು ಸಾಧ್ಯ ಹೇಳಿ? ಮನೆಯಲ್ಲಿ ತುಂಟ ಮಕ್ಕಳಿದ್ದರೆ ಅವರನ್ನು ಕೃಷ್ಣನಿಗೆ ಹೋಲಿಸಿ ಮಾತನಾಡುವುದುಂಟು. ಹೀಗೆ ಬಾಲ್ಯದಲ್ಲಿ ಎಲ್ಲರನ್ನೂ ಗೋಳಾಡಿಸುತ್ತಲೇ ಎಲ್ಲರಿಗೂ ಆನಂದವನ್ನುಂಟು ಮಾಡುತ್ತಿದ್ದ ಭಗವಾನ್ ಕೃಷ್ಣನು ತುಂಟಾಟದಿಂದಲೇ ಎಲ್ಲರ ಮನವನ್ನೂ ಮುದಗೊಳಿಸುತ್ತಿದ್ದನು.
ಬಾಲ್ಯದಲ್ಲಿಯೇ ತನ್ನ ಲೀಲಾವಿನೋದಗಳ ಮೂಲಕ ತನ್ನ ಶ್ರೇಷ್ಠತೆಯನ್ನು ಪರಮಾತ್ಮನು ಎಲ್ಲರಿಗೂ ಮನದಟ್ಟು ಮಾಡಿಸುತ್ತಿದ್ದನು. ಕೃಷ್ಣನ ತಾಯಿಗೆ ತನ್ನ ಮಗ ಸಾಮಾನ್ಯದವನಲ್ಲ ಎಂಬ ಮನವರಿಕೆಯನ್ನು ಕೃಷ್ಣನು ಮಾಡಿಸಿದ್ದನು. ಈ ಕುರಿತು ಹಲವಾರು ಕಥೆಗಳನ್ನು ನೀವು ಕಂಡುಕೊಳ್ಳಬಹುದಾಗಿದೆ.
ಈ ಸಾಲಿನ (2020) ಆಗಸ್ಟ 11ರಂದು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ. ಇದರ ವಿಶೇಷ ಕೃಷ್ಣನ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಯೋಣ.
ಒಮ್ಮೆ ಪುಟ್ಟ ಬಾಲಕ ಕೃಷ್ಣನು ಸ್ವಲ್ಪ ಮಣ್ಣನ್ನು ಬಾಯಿಗೆ ತುರುಕಿಕೊಳ್ಳುತ್ತಾನೆ, ಈ ಸಮಯದಲ್ಲಿ ಓಡಿ ಬಂದ ತಾಯಿ ಯಶೋಧೆಯು ಮಗನು ಮಣ್ಣು ತಿನ್ನುತ್ತಿದ್ದುದನ್ನು ನೋಡಿ ಬಾಯೊ ತೆರೆದು ತೋರಿಸುವಂತೆ ಹೇಳುತ್ತಾಳೆ. ಪುಟ್ಟ ಬಾಲಕನು ತನ್ನ ಬಾಯಿಯನ್ನು ತೆರೆದಾಗ ನಿಬ್ಬೆರಗಾಗುತ್ತಾಳೆ ತಾಯಿ ಯಶೋಧೆ. ಏಕೆಂದರೆ ಕೃಷ್ಣನ ಪುಟ್ಟ ಬಾಯಿಯಲ್ಲಿ ಯಶೋಧೆಯು ಸಂಪೂರ್ಣ ವಿಶ್ವವನ್ನೇ ನೋಡುತ್ತಾಳೆ.
ಈ ಬಗೆಯಲ್ಲಿ ತಾಯಿ ಯಶೋಧೆಯು ಮಗನ ಲೀಲಾವಿನೋದವನ್ನು ಕಂಡುಕೊಳ್ಳುತ್ತಾಳೆ. ಭಗವಂತನೇ ಮಾನವ ರೂಪದಲ್ಲಿ ಜನ್ಮತಾಳಿ ಭಕ್ತರ ಉದ್ಧಾರವನ್ನು ಮಾಡುತ್ತಿದ್ದಾನೆ ಎಂಬುದನ್ನು ಆಕೆ ಅರಿತುಕೊಳ್ಳುತ್ತಾಳೆ.
ಮಣ್ಣಾಗಿದ್ದ ಮಗುವಿನ ಬಾಯಿಯನ್ನು ಯಶೋಧೆ ನೀರಿನಿಂದ ತೊಳೆದು ಶುದ್ಧ ಮಾಡುತ್ತಾಳೆ. ಈ ಸಮಯದಲ್ಲಿ ಸಾಮಾನ್ಯ ಮಗುವಿನಂತೆಯೇ ಇನ್ನು ಮುಂದೆ ಹೀಗೆ ಮಾಡಬಾರದೆಂದು ಪುಟ್ಟ ಕಂದಮ್ಮನಿಗೆ ಯಶೋಧೆ ಎಚ್ಚರಿಕೆಯನ್ನು ನೀಡುತ್ತಾಳೆ. ಹೊರಗಿನ ವಿಶ್ವವನ್ನೇ ಭಗವಂತ ತನ್ನಲ್ಲಿ ಆವಾಹಿಸಿಕೊಂಡಿದ್ದಾನೆ ಎಂಬ ಸತ್ಯವನ್ನು ಈ ಅಂಶವು ನಮಗೆ ಮನದಟ್ಟು ಮಾಡಿಕೊಡುತ್ತಿದೆ. ಇಡಿಯ ವಿಶ್ವದಲ್ಲಿ ಹುಲುಮಾನವರು ಅರಿತುಕೊಳ್ಳಲೇಬೇಕಾದ ಸತ್ಯವು ಇದಾಗಿದೆ.