Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಕೃಷ್ಣ ಜನ್ಮಾಷ್ಠಮಿ 2020: ಅವತಾರ ಪುರುಷ 'ಶ್ರೀ ಕೃಷ್ಣ' ಎಲ್ಲವನ್ನೂ ಬಲ್ಲ ಜಗದ ಸೂತ್ರಧಾರ
ಶ್ರೀಕೃಷ್ಣ ಪರಮಾತ್ಮನ ಬಾಲ್ಯದ ತುಂಟಾಟಗಳನ್ನು ಯಾರಿಂದ ಮರೆಯಲು ಸಾಧ್ಯ ಹೇಳಿ? ಮನೆಯಲ್ಲಿ ತುಂಟ ಮಕ್ಕಳಿದ್ದರೆ ಅವರನ್ನು ಕೃಷ್ಣನಿಗೆ ಹೋಲಿಸಿ ಮಾತನಾಡುವುದುಂಟು. ಹೀಗೆ ಬಾಲ್ಯದಲ್ಲಿ ಎಲ್ಲರನ್ನೂ ಗೋಳಾಡಿಸುತ್ತಲೇ ಎಲ್ಲರಿಗೂ ಆನಂದವನ್ನುಂಟು ಮಾಡುತ್ತಿದ್ದ ಭಗವಾನ್ ಕೃಷ್ಣನು ತುಂಟಾಟದಿಂದಲೇ ಎಲ್ಲರ ಮನವನ್ನೂ ಮುದಗೊಳಿಸುತ್ತಿದ್ದನು.
ಬಾಲ್ಯದಲ್ಲಿಯೇ ತನ್ನ ಲೀಲಾವಿನೋದಗಳ ಮೂಲಕ ತನ್ನ ಶ್ರೇಷ್ಠತೆಯನ್ನು ಪರಮಾತ್ಮನು ಎಲ್ಲರಿಗೂ ಮನದಟ್ಟು ಮಾಡಿಸುತ್ತಿದ್ದನು. ಕೃಷ್ಣನ ತಾಯಿಗೆ ತನ್ನ ಮಗ ಸಾಮಾನ್ಯದವನಲ್ಲ ಎಂಬ ಮನವರಿಕೆಯನ್ನು ಕೃಷ್ಣನು ಮಾಡಿಸಿದ್ದನು. ಈ ಕುರಿತು ಹಲವಾರು ಕಥೆಗಳನ್ನು ನೀವು ಕಂಡುಕೊಳ್ಳಬಹುದಾಗಿದೆ.
ಈ ಸಾಲಿನ (2020) ಆಗಸ್ಟ 11ರಂದು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ. ಇದರ ವಿಶೇಷ ಕೃಷ್ಣನ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಯೋಣ.

ಒಮ್ಮೆ ಪುಟ್ಟ ಬಾಲಕ ಕೃಷ್ಣನು ಸ್ವಲ್ಪ ಮಣ್ಣನ್ನು ಬಾಯಿಗೆ ತುರುಕಿಕೊಳ್ಳುತ್ತಾನೆ, ಈ ಸಮಯದಲ್ಲಿ ಓಡಿ ಬಂದ ತಾಯಿ ಯಶೋಧೆಯು ಮಗನು ಮಣ್ಣು ತಿನ್ನುತ್ತಿದ್ದುದನ್ನು ನೋಡಿ ಬಾಯೊ ತೆರೆದು ತೋರಿಸುವಂತೆ ಹೇಳುತ್ತಾಳೆ. ಪುಟ್ಟ ಬಾಲಕನು ತನ್ನ ಬಾಯಿಯನ್ನು ತೆರೆದಾಗ ನಿಬ್ಬೆರಗಾಗುತ್ತಾಳೆ ತಾಯಿ ಯಶೋಧೆ. ಏಕೆಂದರೆ ಕೃಷ್ಣನ ಪುಟ್ಟ ಬಾಯಿಯಲ್ಲಿ ಯಶೋಧೆಯು ಸಂಪೂರ್ಣ ವಿಶ್ವವನ್ನೇ ನೋಡುತ್ತಾಳೆ.
ಈ ಬಗೆಯಲ್ಲಿ ತಾಯಿ ಯಶೋಧೆಯು ಮಗನ ಲೀಲಾವಿನೋದವನ್ನು ಕಂಡುಕೊಳ್ಳುತ್ತಾಳೆ. ಭಗವಂತನೇ ಮಾನವ ರೂಪದಲ್ಲಿ ಜನ್ಮತಾಳಿ ಭಕ್ತರ ಉದ್ಧಾರವನ್ನು ಮಾಡುತ್ತಿದ್ದಾನೆ ಎಂಬುದನ್ನು ಆಕೆ ಅರಿತುಕೊಳ್ಳುತ್ತಾಳೆ.
ಮಣ್ಣಾಗಿದ್ದ ಮಗುವಿನ ಬಾಯಿಯನ್ನು ಯಶೋಧೆ ನೀರಿನಿಂದ ತೊಳೆದು ಶುದ್ಧ ಮಾಡುತ್ತಾಳೆ. ಈ ಸಮಯದಲ್ಲಿ ಸಾಮಾನ್ಯ ಮಗುವಿನಂತೆಯೇ ಇನ್ನು ಮುಂದೆ ಹೀಗೆ ಮಾಡಬಾರದೆಂದು ಪುಟ್ಟ ಕಂದಮ್ಮನಿಗೆ ಯಶೋಧೆ ಎಚ್ಚರಿಕೆಯನ್ನು ನೀಡುತ್ತಾಳೆ. ಹೊರಗಿನ ವಿಶ್ವವನ್ನೇ ಭಗವಂತ ತನ್ನಲ್ಲಿ ಆವಾಹಿಸಿಕೊಂಡಿದ್ದಾನೆ ಎಂಬ ಸತ್ಯವನ್ನು ಈ ಅಂಶವು ನಮಗೆ ಮನದಟ್ಟು ಮಾಡಿಕೊಡುತ್ತಿದೆ. ಇಡಿಯ ವಿಶ್ವದಲ್ಲಿ ಹುಲುಮಾನವರು ಅರಿತುಕೊಳ್ಳಲೇಬೇಕಾದ ಸತ್ಯವು ಇದಾಗಿದೆ.



Click it and Unblock the Notifications
