Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಕೃಷ್ಣ ಜನ್ಮಾಷ್ಠಮಿ 2020: ಅವತಾರ ಪುರುಷ 'ಶ್ರೀ ಕೃಷ್ಣ' ಎಲ್ಲವನ್ನೂ ಬಲ್ಲ ಜಗದ ಸೂತ್ರಧಾರ
ಶ್ರೀಕೃಷ್ಣ ಪರಮಾತ್ಮನ ಬಾಲ್ಯದ ತುಂಟಾಟಗಳನ್ನು ಯಾರಿಂದ ಮರೆಯಲು ಸಾಧ್ಯ ಹೇಳಿ? ಮನೆಯಲ್ಲಿ ತುಂಟ ಮಕ್ಕಳಿದ್ದರೆ ಅವರನ್ನು ಕೃಷ್ಣನಿಗೆ ಹೋಲಿಸಿ ಮಾತನಾಡುವುದುಂಟು. ಹೀಗೆ ಬಾಲ್ಯದಲ್ಲಿ ಎಲ್ಲರನ್ನೂ ಗೋಳಾಡಿಸುತ್ತಲೇ ಎಲ್ಲರಿಗೂ ಆನಂದವನ್ನುಂಟು ಮಾಡುತ್ತಿದ್ದ ಭಗವಾನ್ ಕೃಷ್ಣನು ತುಂಟಾಟದಿಂದಲೇ ಎಲ್ಲರ ಮನವನ್ನೂ ಮುದಗೊಳಿಸುತ್ತಿದ್ದನು.
ಬಾಲ್ಯದಲ್ಲಿಯೇ ತನ್ನ ಲೀಲಾವಿನೋದಗಳ ಮೂಲಕ ತನ್ನ ಶ್ರೇಷ್ಠತೆಯನ್ನು ಪರಮಾತ್ಮನು ಎಲ್ಲರಿಗೂ ಮನದಟ್ಟು ಮಾಡಿಸುತ್ತಿದ್ದನು. ಕೃಷ್ಣನ ತಾಯಿಗೆ ತನ್ನ ಮಗ ಸಾಮಾನ್ಯದವನಲ್ಲ ಎಂಬ ಮನವರಿಕೆಯನ್ನು ಕೃಷ್ಣನು ಮಾಡಿಸಿದ್ದನು. ಈ ಕುರಿತು ಹಲವಾರು ಕಥೆಗಳನ್ನು ನೀವು ಕಂಡುಕೊಳ್ಳಬಹುದಾಗಿದೆ.
ಈ ಸಾಲಿನ (2020) ಆಗಸ್ಟ 11ರಂದು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ. ಇದರ ವಿಶೇಷ ಕೃಷ್ಣನ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಯೋಣ.

ಒಮ್ಮೆ ಪುಟ್ಟ ಬಾಲಕ ಕೃಷ್ಣನು ಸ್ವಲ್ಪ ಮಣ್ಣನ್ನು ಬಾಯಿಗೆ ತುರುಕಿಕೊಳ್ಳುತ್ತಾನೆ, ಈ ಸಮಯದಲ್ಲಿ ಓಡಿ ಬಂದ ತಾಯಿ ಯಶೋಧೆಯು ಮಗನು ಮಣ್ಣು ತಿನ್ನುತ್ತಿದ್ದುದನ್ನು ನೋಡಿ ಬಾಯೊ ತೆರೆದು ತೋರಿಸುವಂತೆ ಹೇಳುತ್ತಾಳೆ. ಪುಟ್ಟ ಬಾಲಕನು ತನ್ನ ಬಾಯಿಯನ್ನು ತೆರೆದಾಗ ನಿಬ್ಬೆರಗಾಗುತ್ತಾಳೆ ತಾಯಿ ಯಶೋಧೆ. ಏಕೆಂದರೆ ಕೃಷ್ಣನ ಪುಟ್ಟ ಬಾಯಿಯಲ್ಲಿ ಯಶೋಧೆಯು ಸಂಪೂರ್ಣ ವಿಶ್ವವನ್ನೇ ನೋಡುತ್ತಾಳೆ.
ಈ ಬಗೆಯಲ್ಲಿ ತಾಯಿ ಯಶೋಧೆಯು ಮಗನ ಲೀಲಾವಿನೋದವನ್ನು ಕಂಡುಕೊಳ್ಳುತ್ತಾಳೆ. ಭಗವಂತನೇ ಮಾನವ ರೂಪದಲ್ಲಿ ಜನ್ಮತಾಳಿ ಭಕ್ತರ ಉದ್ಧಾರವನ್ನು ಮಾಡುತ್ತಿದ್ದಾನೆ ಎಂಬುದನ್ನು ಆಕೆ ಅರಿತುಕೊಳ್ಳುತ್ತಾಳೆ.
ಮಣ್ಣಾಗಿದ್ದ ಮಗುವಿನ ಬಾಯಿಯನ್ನು ಯಶೋಧೆ ನೀರಿನಿಂದ ತೊಳೆದು ಶುದ್ಧ ಮಾಡುತ್ತಾಳೆ. ಈ ಸಮಯದಲ್ಲಿ ಸಾಮಾನ್ಯ ಮಗುವಿನಂತೆಯೇ ಇನ್ನು ಮುಂದೆ ಹೀಗೆ ಮಾಡಬಾರದೆಂದು ಪುಟ್ಟ ಕಂದಮ್ಮನಿಗೆ ಯಶೋಧೆ ಎಚ್ಚರಿಕೆಯನ್ನು ನೀಡುತ್ತಾಳೆ. ಹೊರಗಿನ ವಿಶ್ವವನ್ನೇ ಭಗವಂತ ತನ್ನಲ್ಲಿ ಆವಾಹಿಸಿಕೊಂಡಿದ್ದಾನೆ ಎಂಬ ಸತ್ಯವನ್ನು ಈ ಅಂಶವು ನಮಗೆ ಮನದಟ್ಟು ಮಾಡಿಕೊಡುತ್ತಿದೆ. ಇಡಿಯ ವಿಶ್ವದಲ್ಲಿ ಹುಲುಮಾನವರು ಅರಿತುಕೊಳ್ಳಲೇಬೇಕಾದ ಸತ್ಯವು ಇದಾಗಿದೆ.



Click it and Unblock the Notifications
