Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಜನ್ಮಾಷ್ಟಮಿ 2020: ಪೂಜೆಗೆ ಶುಭ ಮುಹೂರ್ತ, ಪೂಜಾ ವಿಧಾನ
ಶ್ರೀ ವಿಷ್ಣುವಿನ ಎಂಟನೇ ಅವತಾರ ಭಗವಾನ್ ಕೃಷ್ಣ. ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿಯಂದು ಕೃಷ್ಣನು ಹುಟ್ಟಿದನು. ಅಷ್ಟಮಿಯ ಮಧ್ಯರಾತ್ರಿ ಮಥುರೆಯ ಕಾರಗೃಹದಲ್ಲಿ ಕೃಷ್ಣನ ಜನನವಾಯಿತು. ಕೃಷ್ಣನನ್ನು ಸೋದರ ಮಾವ ಕಂಸ ಕೊಲ್ಲುತ್ತಾನೆ ಎಂಬ ಭಯದಿಂದ ತಂದೆ ವಸುದೇವ ಗೋಕುಲಕ್ಕೆ ತಂದು ಬಿಡುತ್ತಾನೆ. ಹೀಗಾಗಿ ದೇವಕ್ಕಿ ಕೃಷ್ಣನನ್ನು ಹೆತ್ತ ತಾಯಿಯಾದರೆ ಯಶೋದೆ ಅವನನ್ನು ಸಾಕಿ ಬೆಳೆಸಿದ ತಾಯಿ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುವುದು.

2020ರಲ್ಲಿ ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುವುದು?
ಈ ವರ್ಷ ಕೃಷ್ಣ ಜನ್ಮಾಷ್ಟಮಿ ಆಗಸ್ಟ್ 11, 12ಕ್ಕೆ ಬಂದಿದೆ. ಕೆಲವು ಕಡೆ 11ಕ್ಕೆ, ಕೆಲವು ಕಡೆ 12ಕ್ಕೆ ಆಚರಿಸಲಾಗುವುದು.
ಅಷ್ಟಮಿ ತಿಥಿ ಪ್ರಾರಂಭ: ಆಗಸ್ಟ್ 11 ಬೆಳಗ್ಗೆ 9.6ಕ್ಕೆ
ಅಷ್ಟಮಿ ತಿಥಿ ಅಂತ್ಯ: ಆಗಸ್ಟ್ 12 ಬೆಳಗ್ಗೆ 11.16ಕ್ಕೆ

ಪೂಜಾ ಸಮಯ
ನಿಶಿತಾ ಕಾಲದ ಪೂಜಾ ಸಮಯ ( ಶ್ರೀ ಕೃಷ್ಣ ಮಧ್ಯರಾತ್ರಿ ಹುಟ್ಟಿದ ಕಾರಣ ಪೂಜೆಯನ್ನು ನಿಶಿತಾ ಕಾಲದಲ್ಲಿ ಮಾಡಲಾಗುವುದು)
ಆಗಸ್ಟ್ 12, 2020: ಬೆಳಗ್ಗೆ 11: 51ರಿಂದ ಮಧ್ಯರಾತ್ರಿ 12: 37ರವರೆಗೆ ಇರಲಿದೆ.

ಜನ್ಮಾಷ್ಟಮಿ 2020, ಪಾರಣ ಸಮಯ
ಅಷ್ಟಮಿಯಂದು ಕೃಷ್ಣ ಭಕ್ತರು ನೀರೂ, ಆಹಾರ ಸೇವಿಸದೆ ಉಪವಾಸ ಇರುತ್ತಾರೆ. ರಾತ್ರಿ ಕೃಷ್ಣನಿಗೆ ಅಘ್ರ್ಯ ಕೊಟ್ಟ ನಂತರ ಫಲಾಹಾರ ಸೇವಿಸಲಾಗುವುದು. ಇದನ್ನು ನಿರ್ಜಲ ಉಪವಾಸ ಎಂದು ಕರೆಯಲಾಗುವುದು. ಭಜನೆ, ಕೃಷ್ಣನ ಕೀರ್ತನೆಗಳ ಮೂಲಕ ಮನೆ, ಮನಗಳಲ್ಲಿ ಸಕಾರಾತ್ಮಕ ಶಕ್ತಿ ತುಂಬುವಂತೆ ಪ್ರಾರ್ಥನೆ ಮಾಡಲಾಗುವುದು. ನಂತರ ಕೃಷ್ಣನಿಗೆ ಪ್ರಿಯವಾದ ತಿನಿಸುಗಳನ್ನು ಮಾಡಿ ನೈವೇದ್ಯ ಇಡಲಾಗುವುದು. ಮಧ್ಯರಾತ್ರಿ ಕೃಷ್ಣನಿಗೆ ಅರ್ಘ್ಯ ಕೊಟ್ಟ ಬಳಿಕವಷ್ಟೇ ಉಪವಾಸ ಮುರಿಯುತ್ತಾರೆ. ಇದನ್ನು ಪಾರಣೆ ಎನ್ನುತ್ತಾರೆ.
ಇಸ್ಕಾನ್ ಪ್ರಕಾರ ಪಾರಣ ಸಮಯ ಆಗಸ್ಟ್ 13, ಬೆಳಗ್ಗೆ 5:56ರ ನಂತರ ಆಹಾರ ಸೇವಿಸಬಹುದು.

ಈ ಬಾರಿ ಅಷ್ಟಮಿ ತಿಥಿ ಹಾಗೂ ರೋಹಿಣಿ ನಕ್ಷತ್ರ ಒಟ್ಟಿಗೆ ಸೇರುವುದಿಲ್ಲ
ಶ್ರೀಕೃಷ್ಣನು ಅಷ್ಟಮಿ ತಿಥಿಯಂದು ರೋಹಿಣಿ ನಕ್ಷತ್ರದಲ್ಲಿ ಜನಿಸಿದನು. ಈ ಬಾರಿ ಅಷ್ಟಮಿ ತಿಥಿ, ರೋಹಿಣಿ ನಕ್ಷತ್ರ ಒಟ್ಟಿಗೆ ಬಂದಿಲ್ಲ. ಈ ವರ್ಷ ಅಷ್ಟಮಿ ತಿಥಿ ಆಗಸ್ಟ್ 11 ಬೆಳಗ್ಗೆ 9.6ರಿಂದ ಪ್ರಾರಂಭವಾಗಿ, ಆಗಸ್ಟ್ 12ರಂದು 11:16ಕ್ಕೆ ಅಂತ್ಯವಾಗಲಿದೆ.
ರೋಹಿಣಿ ನಕ್ಷತ್ರವು ಆಗಸ್ಟ್ 13ರಂದು ಬೆಳಗ್ಗೆ 3.27ಕ್ಕೆ ಪ್ರಾರಂಭವಾಗಿ, ಆಗಸ್ಟ್ 14, ಬೆಳಗ್ಗೆ 5: 22ಕ್ಕೆ ಅಂತ್ಯವಾಗಲಿದೆ.

ಕೃಷ್ಣನಿಗೆ ಪೂಜೆ ಮಾಡುವ ವಿಧಾನ
ಜನ್ಮಾಷ್ಟಮಿಯ ದಿನ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ಬಾಲಕೃಷ್ಣನ ಪುಟ್ಟ ಮೂರ್ತಿಯನ್ನು ತಂದು ತೊಟ್ಟಿಲಿನಲ್ಲಿಟ್ಟು ಪೂಜಿಸಲಾಗುವುದು. ಮೂರ್ತಿ ಇಲ್ಲದಿದ್ದರೆ ಬಾಲ ಕೃಷ್ಣನ ಫೋಟೋ ಇಡಲಾಗುವುದು. ನಂತರ ಕೃಷ್ಣನಿಗೆ ಬಟ್ಟೆ, ಆಸನ, ಪಂಚಾಮೃತ, ತುಪ್ಪದ ದೀಪ, ಚಂದನ, ತುಳಸಿ, ಪಾರಿಜಾತ ಹೂ ಇವುಗಳನ್ನು ಅರ್ಪಿಸಲಾಗುವುದು.
ಕೃಷ್ಣ ವಿಗ್ರಹವನ್ನು ಹೊಸದಾದ ಬಟ್ಟೆಯ ಮೇಲೆ ಇಟ್ಟು, ದೀಪ ಬೆಳಗಿ, ನಂತರ ಕೃಷ್ಣನ ಕೀರ್ತನೆಗಳನ್ನು ಹೇಳಲಾಗುವುದು. ಪೂಜೆಗೆ ಕೃಷ್ಣನಿಗೆ ಪ್ರಿಯವಾದ ಬೆಣ್ಣೆ, ಮೊಸರು, ಹಾಲನ್ನು ಅರ್ಪಿಸಿ.



Click it and Unblock the Notifications