Latest Updates
-
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು!
ಜನ್ಮಾಷ್ಟಮಿ 2020: ಪೂಜೆಗೆ ಶುಭ ಮುಹೂರ್ತ, ಪೂಜಾ ವಿಧಾನ
ಶ್ರೀ ವಿಷ್ಣುವಿನ ಎಂಟನೇ ಅವತಾರ ಭಗವಾನ್ ಕೃಷ್ಣ. ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿಯಂದು ಕೃಷ್ಣನು ಹುಟ್ಟಿದನು. ಅಷ್ಟಮಿಯ ಮಧ್ಯರಾತ್ರಿ ಮಥುರೆಯ ಕಾರಗೃಹದಲ್ಲಿ ಕೃಷ್ಣನ ಜನನವಾಯಿತು. ಕೃಷ್ಣನನ್ನು ಸೋದರ ಮಾವ ಕಂಸ ಕೊಲ್ಲುತ್ತಾನೆ ಎಂಬ ಭಯದಿಂದ ತಂದೆ ವಸುದೇವ ಗೋಕುಲಕ್ಕೆ ತಂದು ಬಿಡುತ್ತಾನೆ. ಹೀಗಾಗಿ ದೇವಕ್ಕಿ ಕೃಷ್ಣನನ್ನು ಹೆತ್ತ ತಾಯಿಯಾದರೆ ಯಶೋದೆ ಅವನನ್ನು ಸಾಕಿ ಬೆಳೆಸಿದ ತಾಯಿ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುವುದು.

2020ರಲ್ಲಿ ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುವುದು?
ಈ ವರ್ಷ ಕೃಷ್ಣ ಜನ್ಮಾಷ್ಟಮಿ ಆಗಸ್ಟ್ 11, 12ಕ್ಕೆ ಬಂದಿದೆ. ಕೆಲವು ಕಡೆ 11ಕ್ಕೆ, ಕೆಲವು ಕಡೆ 12ಕ್ಕೆ ಆಚರಿಸಲಾಗುವುದು.
ಅಷ್ಟಮಿ ತಿಥಿ ಪ್ರಾರಂಭ: ಆಗಸ್ಟ್ 11 ಬೆಳಗ್ಗೆ 9.6ಕ್ಕೆ
ಅಷ್ಟಮಿ ತಿಥಿ ಅಂತ್ಯ: ಆಗಸ್ಟ್ 12 ಬೆಳಗ್ಗೆ 11.16ಕ್ಕೆ

ಪೂಜಾ ಸಮಯ
ನಿಶಿತಾ ಕಾಲದ ಪೂಜಾ ಸಮಯ ( ಶ್ರೀ ಕೃಷ್ಣ ಮಧ್ಯರಾತ್ರಿ ಹುಟ್ಟಿದ ಕಾರಣ ಪೂಜೆಯನ್ನು ನಿಶಿತಾ ಕಾಲದಲ್ಲಿ ಮಾಡಲಾಗುವುದು)
ಆಗಸ್ಟ್ 12, 2020: ಬೆಳಗ್ಗೆ 11: 51ರಿಂದ ಮಧ್ಯರಾತ್ರಿ 12: 37ರವರೆಗೆ ಇರಲಿದೆ.

ಜನ್ಮಾಷ್ಟಮಿ 2020, ಪಾರಣ ಸಮಯ
ಅಷ್ಟಮಿಯಂದು ಕೃಷ್ಣ ಭಕ್ತರು ನೀರೂ, ಆಹಾರ ಸೇವಿಸದೆ ಉಪವಾಸ ಇರುತ್ತಾರೆ. ರಾತ್ರಿ ಕೃಷ್ಣನಿಗೆ ಅಘ್ರ್ಯ ಕೊಟ್ಟ ನಂತರ ಫಲಾಹಾರ ಸೇವಿಸಲಾಗುವುದು. ಇದನ್ನು ನಿರ್ಜಲ ಉಪವಾಸ ಎಂದು ಕರೆಯಲಾಗುವುದು. ಭಜನೆ, ಕೃಷ್ಣನ ಕೀರ್ತನೆಗಳ ಮೂಲಕ ಮನೆ, ಮನಗಳಲ್ಲಿ ಸಕಾರಾತ್ಮಕ ಶಕ್ತಿ ತುಂಬುವಂತೆ ಪ್ರಾರ್ಥನೆ ಮಾಡಲಾಗುವುದು. ನಂತರ ಕೃಷ್ಣನಿಗೆ ಪ್ರಿಯವಾದ ತಿನಿಸುಗಳನ್ನು ಮಾಡಿ ನೈವೇದ್ಯ ಇಡಲಾಗುವುದು. ಮಧ್ಯರಾತ್ರಿ ಕೃಷ್ಣನಿಗೆ ಅರ್ಘ್ಯ ಕೊಟ್ಟ ಬಳಿಕವಷ್ಟೇ ಉಪವಾಸ ಮುರಿಯುತ್ತಾರೆ. ಇದನ್ನು ಪಾರಣೆ ಎನ್ನುತ್ತಾರೆ.
ಇಸ್ಕಾನ್ ಪ್ರಕಾರ ಪಾರಣ ಸಮಯ ಆಗಸ್ಟ್ 13, ಬೆಳಗ್ಗೆ 5:56ರ ನಂತರ ಆಹಾರ ಸೇವಿಸಬಹುದು.

ಈ ಬಾರಿ ಅಷ್ಟಮಿ ತಿಥಿ ಹಾಗೂ ರೋಹಿಣಿ ನಕ್ಷತ್ರ ಒಟ್ಟಿಗೆ ಸೇರುವುದಿಲ್ಲ
ಶ್ರೀಕೃಷ್ಣನು ಅಷ್ಟಮಿ ತಿಥಿಯಂದು ರೋಹಿಣಿ ನಕ್ಷತ್ರದಲ್ಲಿ ಜನಿಸಿದನು. ಈ ಬಾರಿ ಅಷ್ಟಮಿ ತಿಥಿ, ರೋಹಿಣಿ ನಕ್ಷತ್ರ ಒಟ್ಟಿಗೆ ಬಂದಿಲ್ಲ. ಈ ವರ್ಷ ಅಷ್ಟಮಿ ತಿಥಿ ಆಗಸ್ಟ್ 11 ಬೆಳಗ್ಗೆ 9.6ರಿಂದ ಪ್ರಾರಂಭವಾಗಿ, ಆಗಸ್ಟ್ 12ರಂದು 11:16ಕ್ಕೆ ಅಂತ್ಯವಾಗಲಿದೆ.
ರೋಹಿಣಿ ನಕ್ಷತ್ರವು ಆಗಸ್ಟ್ 13ರಂದು ಬೆಳಗ್ಗೆ 3.27ಕ್ಕೆ ಪ್ರಾರಂಭವಾಗಿ, ಆಗಸ್ಟ್ 14, ಬೆಳಗ್ಗೆ 5: 22ಕ್ಕೆ ಅಂತ್ಯವಾಗಲಿದೆ.

ಕೃಷ್ಣನಿಗೆ ಪೂಜೆ ಮಾಡುವ ವಿಧಾನ
ಜನ್ಮಾಷ್ಟಮಿಯ ದಿನ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ಬಾಲಕೃಷ್ಣನ ಪುಟ್ಟ ಮೂರ್ತಿಯನ್ನು ತಂದು ತೊಟ್ಟಿಲಿನಲ್ಲಿಟ್ಟು ಪೂಜಿಸಲಾಗುವುದು. ಮೂರ್ತಿ ಇಲ್ಲದಿದ್ದರೆ ಬಾಲ ಕೃಷ್ಣನ ಫೋಟೋ ಇಡಲಾಗುವುದು. ನಂತರ ಕೃಷ್ಣನಿಗೆ ಬಟ್ಟೆ, ಆಸನ, ಪಂಚಾಮೃತ, ತುಪ್ಪದ ದೀಪ, ಚಂದನ, ತುಳಸಿ, ಪಾರಿಜಾತ ಹೂ ಇವುಗಳನ್ನು ಅರ್ಪಿಸಲಾಗುವುದು.
ಕೃಷ್ಣ ವಿಗ್ರಹವನ್ನು ಹೊಸದಾದ ಬಟ್ಟೆಯ ಮೇಲೆ ಇಟ್ಟು, ದೀಪ ಬೆಳಗಿ, ನಂತರ ಕೃಷ್ಣನ ಕೀರ್ತನೆಗಳನ್ನು ಹೇಳಲಾಗುವುದು. ಪೂಜೆಗೆ ಕೃಷ್ಣನಿಗೆ ಪ್ರಿಯವಾದ ಬೆಣ್ಣೆ, ಮೊಸರು, ಹಾಲನ್ನು ಅರ್ಪಿಸಿ.



Click it and Unblock the Notifications
