Latest Updates
-
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಆರ್ಭಟ: ಹೊರಗೆ ಹೋಗುವ ಮುನ್ನ ಎಚ್ಚರ, ಮನೆಯಲ್ಲೇ ಫಿಟ್ ಆಗಿರಲು ಈ 8 ನಿಮಿಷದ ಟಿಪ್ಸ್! -
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ!
ಜನ್ಮಾಷ್ಟಮಿ 2020: ಪೂಜೆಗೆ ಶುಭ ಮುಹೂರ್ತ, ಪೂಜಾ ವಿಧಾನ
ಶ್ರೀ ವಿಷ್ಣುವಿನ ಎಂಟನೇ ಅವತಾರ ಭಗವಾನ್ ಕೃಷ್ಣ. ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿಯಂದು ಕೃಷ್ಣನು ಹುಟ್ಟಿದನು. ಅಷ್ಟಮಿಯ ಮಧ್ಯರಾತ್ರಿ ಮಥುರೆಯ ಕಾರಗೃಹದಲ್ಲಿ ಕೃಷ್ಣನ ಜನನವಾಯಿತು. ಕೃಷ್ಣನನ್ನು ಸೋದರ ಮಾವ ಕಂಸ ಕೊಲ್ಲುತ್ತಾನೆ ಎಂಬ ಭಯದಿಂದ ತಂದೆ ವಸುದೇವ ಗೋಕುಲಕ್ಕೆ ತಂದು ಬಿಡುತ್ತಾನೆ. ಹೀಗಾಗಿ ದೇವಕ್ಕಿ ಕೃಷ್ಣನನ್ನು ಹೆತ್ತ ತಾಯಿಯಾದರೆ ಯಶೋದೆ ಅವನನ್ನು ಸಾಕಿ ಬೆಳೆಸಿದ ತಾಯಿ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುವುದು.

2020ರಲ್ಲಿ ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುವುದು?
ಈ ವರ್ಷ ಕೃಷ್ಣ ಜನ್ಮಾಷ್ಟಮಿ ಆಗಸ್ಟ್ 11, 12ಕ್ಕೆ ಬಂದಿದೆ. ಕೆಲವು ಕಡೆ 11ಕ್ಕೆ, ಕೆಲವು ಕಡೆ 12ಕ್ಕೆ ಆಚರಿಸಲಾಗುವುದು.
ಅಷ್ಟಮಿ ತಿಥಿ ಪ್ರಾರಂಭ: ಆಗಸ್ಟ್ 11 ಬೆಳಗ್ಗೆ 9.6ಕ್ಕೆ
ಅಷ್ಟಮಿ ತಿಥಿ ಅಂತ್ಯ: ಆಗಸ್ಟ್ 12 ಬೆಳಗ್ಗೆ 11.16ಕ್ಕೆ

ಪೂಜಾ ಸಮಯ
ನಿಶಿತಾ ಕಾಲದ ಪೂಜಾ ಸಮಯ ( ಶ್ರೀ ಕೃಷ್ಣ ಮಧ್ಯರಾತ್ರಿ ಹುಟ್ಟಿದ ಕಾರಣ ಪೂಜೆಯನ್ನು ನಿಶಿತಾ ಕಾಲದಲ್ಲಿ ಮಾಡಲಾಗುವುದು)
ಆಗಸ್ಟ್ 12, 2020: ಬೆಳಗ್ಗೆ 11: 51ರಿಂದ ಮಧ್ಯರಾತ್ರಿ 12: 37ರವರೆಗೆ ಇರಲಿದೆ.

ಜನ್ಮಾಷ್ಟಮಿ 2020, ಪಾರಣ ಸಮಯ
ಅಷ್ಟಮಿಯಂದು ಕೃಷ್ಣ ಭಕ್ತರು ನೀರೂ, ಆಹಾರ ಸೇವಿಸದೆ ಉಪವಾಸ ಇರುತ್ತಾರೆ. ರಾತ್ರಿ ಕೃಷ್ಣನಿಗೆ ಅಘ್ರ್ಯ ಕೊಟ್ಟ ನಂತರ ಫಲಾಹಾರ ಸೇವಿಸಲಾಗುವುದು. ಇದನ್ನು ನಿರ್ಜಲ ಉಪವಾಸ ಎಂದು ಕರೆಯಲಾಗುವುದು. ಭಜನೆ, ಕೃಷ್ಣನ ಕೀರ್ತನೆಗಳ ಮೂಲಕ ಮನೆ, ಮನಗಳಲ್ಲಿ ಸಕಾರಾತ್ಮಕ ಶಕ್ತಿ ತುಂಬುವಂತೆ ಪ್ರಾರ್ಥನೆ ಮಾಡಲಾಗುವುದು. ನಂತರ ಕೃಷ್ಣನಿಗೆ ಪ್ರಿಯವಾದ ತಿನಿಸುಗಳನ್ನು ಮಾಡಿ ನೈವೇದ್ಯ ಇಡಲಾಗುವುದು. ಮಧ್ಯರಾತ್ರಿ ಕೃಷ್ಣನಿಗೆ ಅರ್ಘ್ಯ ಕೊಟ್ಟ ಬಳಿಕವಷ್ಟೇ ಉಪವಾಸ ಮುರಿಯುತ್ತಾರೆ. ಇದನ್ನು ಪಾರಣೆ ಎನ್ನುತ್ತಾರೆ.
ಇಸ್ಕಾನ್ ಪ್ರಕಾರ ಪಾರಣ ಸಮಯ ಆಗಸ್ಟ್ 13, ಬೆಳಗ್ಗೆ 5:56ರ ನಂತರ ಆಹಾರ ಸೇವಿಸಬಹುದು.

ಈ ಬಾರಿ ಅಷ್ಟಮಿ ತಿಥಿ ಹಾಗೂ ರೋಹಿಣಿ ನಕ್ಷತ್ರ ಒಟ್ಟಿಗೆ ಸೇರುವುದಿಲ್ಲ
ಶ್ರೀಕೃಷ್ಣನು ಅಷ್ಟಮಿ ತಿಥಿಯಂದು ರೋಹಿಣಿ ನಕ್ಷತ್ರದಲ್ಲಿ ಜನಿಸಿದನು. ಈ ಬಾರಿ ಅಷ್ಟಮಿ ತಿಥಿ, ರೋಹಿಣಿ ನಕ್ಷತ್ರ ಒಟ್ಟಿಗೆ ಬಂದಿಲ್ಲ. ಈ ವರ್ಷ ಅಷ್ಟಮಿ ತಿಥಿ ಆಗಸ್ಟ್ 11 ಬೆಳಗ್ಗೆ 9.6ರಿಂದ ಪ್ರಾರಂಭವಾಗಿ, ಆಗಸ್ಟ್ 12ರಂದು 11:16ಕ್ಕೆ ಅಂತ್ಯವಾಗಲಿದೆ.
ರೋಹಿಣಿ ನಕ್ಷತ್ರವು ಆಗಸ್ಟ್ 13ರಂದು ಬೆಳಗ್ಗೆ 3.27ಕ್ಕೆ ಪ್ರಾರಂಭವಾಗಿ, ಆಗಸ್ಟ್ 14, ಬೆಳಗ್ಗೆ 5: 22ಕ್ಕೆ ಅಂತ್ಯವಾಗಲಿದೆ.

ಕೃಷ್ಣನಿಗೆ ಪೂಜೆ ಮಾಡುವ ವಿಧಾನ
ಜನ್ಮಾಷ್ಟಮಿಯ ದಿನ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ಬಾಲಕೃಷ್ಣನ ಪುಟ್ಟ ಮೂರ್ತಿಯನ್ನು ತಂದು ತೊಟ್ಟಿಲಿನಲ್ಲಿಟ್ಟು ಪೂಜಿಸಲಾಗುವುದು. ಮೂರ್ತಿ ಇಲ್ಲದಿದ್ದರೆ ಬಾಲ ಕೃಷ್ಣನ ಫೋಟೋ ಇಡಲಾಗುವುದು. ನಂತರ ಕೃಷ್ಣನಿಗೆ ಬಟ್ಟೆ, ಆಸನ, ಪಂಚಾಮೃತ, ತುಪ್ಪದ ದೀಪ, ಚಂದನ, ತುಳಸಿ, ಪಾರಿಜಾತ ಹೂ ಇವುಗಳನ್ನು ಅರ್ಪಿಸಲಾಗುವುದು.
ಕೃಷ್ಣ ವಿಗ್ರಹವನ್ನು ಹೊಸದಾದ ಬಟ್ಟೆಯ ಮೇಲೆ ಇಟ್ಟು, ದೀಪ ಬೆಳಗಿ, ನಂತರ ಕೃಷ್ಣನ ಕೀರ್ತನೆಗಳನ್ನು ಹೇಳಲಾಗುವುದು. ಪೂಜೆಗೆ ಕೃಷ್ಣನಿಗೆ ಪ್ರಿಯವಾದ ಬೆಣ್ಣೆ, ಮೊಸರು, ಹಾಲನ್ನು ಅರ್ಪಿಸಿ.



Click it and Unblock the Notifications