Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಜನ್ಮಾಷ್ಟಮಿ 2020: ಪೂಜೆಗೆ ಶುಭ ಮುಹೂರ್ತ, ಪೂಜಾ ವಿಧಾನ
ಶ್ರೀ ವಿಷ್ಣುವಿನ ಎಂಟನೇ ಅವತಾರ ಭಗವಾನ್ ಕೃಷ್ಣ. ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿಯಂದು ಕೃಷ್ಣನು ಹುಟ್ಟಿದನು. ಅಷ್ಟಮಿಯ ಮಧ್ಯರಾತ್ರಿ ಮಥುರೆಯ ಕಾರಗೃಹದಲ್ಲಿ ಕೃಷ್ಣನ ಜನನವಾಯಿತು. ಕೃಷ್ಣನನ್ನು ಸೋದರ ಮಾವ ಕಂಸ ಕೊಲ್ಲುತ್ತಾನೆ ಎಂಬ ಭಯದಿಂದ ತಂದೆ ವಸುದೇವ ಗೋಕುಲಕ್ಕೆ ತಂದು ಬಿಡುತ್ತಾನೆ. ಹೀಗಾಗಿ ದೇವಕ್ಕಿ ಕೃಷ್ಣನನ್ನು ಹೆತ್ತ ತಾಯಿಯಾದರೆ ಯಶೋದೆ ಅವನನ್ನು ಸಾಕಿ ಬೆಳೆಸಿದ ತಾಯಿ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುವುದು.

2020ರಲ್ಲಿ ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುವುದು?
ಈ ವರ್ಷ ಕೃಷ್ಣ ಜನ್ಮಾಷ್ಟಮಿ ಆಗಸ್ಟ್ 11, 12ಕ್ಕೆ ಬಂದಿದೆ. ಕೆಲವು ಕಡೆ 11ಕ್ಕೆ, ಕೆಲವು ಕಡೆ 12ಕ್ಕೆ ಆಚರಿಸಲಾಗುವುದು.
ಅಷ್ಟಮಿ ತಿಥಿ ಪ್ರಾರಂಭ: ಆಗಸ್ಟ್ 11 ಬೆಳಗ್ಗೆ 9.6ಕ್ಕೆ
ಅಷ್ಟಮಿ ತಿಥಿ ಅಂತ್ಯ: ಆಗಸ್ಟ್ 12 ಬೆಳಗ್ಗೆ 11.16ಕ್ಕೆ

ಪೂಜಾ ಸಮಯ
ನಿಶಿತಾ ಕಾಲದ ಪೂಜಾ ಸಮಯ ( ಶ್ರೀ ಕೃಷ್ಣ ಮಧ್ಯರಾತ್ರಿ ಹುಟ್ಟಿದ ಕಾರಣ ಪೂಜೆಯನ್ನು ನಿಶಿತಾ ಕಾಲದಲ್ಲಿ ಮಾಡಲಾಗುವುದು)
ಆಗಸ್ಟ್ 12, 2020: ಬೆಳಗ್ಗೆ 11: 51ರಿಂದ ಮಧ್ಯರಾತ್ರಿ 12: 37ರವರೆಗೆ ಇರಲಿದೆ.

ಜನ್ಮಾಷ್ಟಮಿ 2020, ಪಾರಣ ಸಮಯ
ಅಷ್ಟಮಿಯಂದು ಕೃಷ್ಣ ಭಕ್ತರು ನೀರೂ, ಆಹಾರ ಸೇವಿಸದೆ ಉಪವಾಸ ಇರುತ್ತಾರೆ. ರಾತ್ರಿ ಕೃಷ್ಣನಿಗೆ ಅಘ್ರ್ಯ ಕೊಟ್ಟ ನಂತರ ಫಲಾಹಾರ ಸೇವಿಸಲಾಗುವುದು. ಇದನ್ನು ನಿರ್ಜಲ ಉಪವಾಸ ಎಂದು ಕರೆಯಲಾಗುವುದು. ಭಜನೆ, ಕೃಷ್ಣನ ಕೀರ್ತನೆಗಳ ಮೂಲಕ ಮನೆ, ಮನಗಳಲ್ಲಿ ಸಕಾರಾತ್ಮಕ ಶಕ್ತಿ ತುಂಬುವಂತೆ ಪ್ರಾರ್ಥನೆ ಮಾಡಲಾಗುವುದು. ನಂತರ ಕೃಷ್ಣನಿಗೆ ಪ್ರಿಯವಾದ ತಿನಿಸುಗಳನ್ನು ಮಾಡಿ ನೈವೇದ್ಯ ಇಡಲಾಗುವುದು. ಮಧ್ಯರಾತ್ರಿ ಕೃಷ್ಣನಿಗೆ ಅರ್ಘ್ಯ ಕೊಟ್ಟ ಬಳಿಕವಷ್ಟೇ ಉಪವಾಸ ಮುರಿಯುತ್ತಾರೆ. ಇದನ್ನು ಪಾರಣೆ ಎನ್ನುತ್ತಾರೆ.
ಇಸ್ಕಾನ್ ಪ್ರಕಾರ ಪಾರಣ ಸಮಯ ಆಗಸ್ಟ್ 13, ಬೆಳಗ್ಗೆ 5:56ರ ನಂತರ ಆಹಾರ ಸೇವಿಸಬಹುದು.

ಈ ಬಾರಿ ಅಷ್ಟಮಿ ತಿಥಿ ಹಾಗೂ ರೋಹಿಣಿ ನಕ್ಷತ್ರ ಒಟ್ಟಿಗೆ ಸೇರುವುದಿಲ್ಲ
ಶ್ರೀಕೃಷ್ಣನು ಅಷ್ಟಮಿ ತಿಥಿಯಂದು ರೋಹಿಣಿ ನಕ್ಷತ್ರದಲ್ಲಿ ಜನಿಸಿದನು. ಈ ಬಾರಿ ಅಷ್ಟಮಿ ತಿಥಿ, ರೋಹಿಣಿ ನಕ್ಷತ್ರ ಒಟ್ಟಿಗೆ ಬಂದಿಲ್ಲ. ಈ ವರ್ಷ ಅಷ್ಟಮಿ ತಿಥಿ ಆಗಸ್ಟ್ 11 ಬೆಳಗ್ಗೆ 9.6ರಿಂದ ಪ್ರಾರಂಭವಾಗಿ, ಆಗಸ್ಟ್ 12ರಂದು 11:16ಕ್ಕೆ ಅಂತ್ಯವಾಗಲಿದೆ.
ರೋಹಿಣಿ ನಕ್ಷತ್ರವು ಆಗಸ್ಟ್ 13ರಂದು ಬೆಳಗ್ಗೆ 3.27ಕ್ಕೆ ಪ್ರಾರಂಭವಾಗಿ, ಆಗಸ್ಟ್ 14, ಬೆಳಗ್ಗೆ 5: 22ಕ್ಕೆ ಅಂತ್ಯವಾಗಲಿದೆ.

ಕೃಷ್ಣನಿಗೆ ಪೂಜೆ ಮಾಡುವ ವಿಧಾನ
ಜನ್ಮಾಷ್ಟಮಿಯ ದಿನ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ಬಾಲಕೃಷ್ಣನ ಪುಟ್ಟ ಮೂರ್ತಿಯನ್ನು ತಂದು ತೊಟ್ಟಿಲಿನಲ್ಲಿಟ್ಟು ಪೂಜಿಸಲಾಗುವುದು. ಮೂರ್ತಿ ಇಲ್ಲದಿದ್ದರೆ ಬಾಲ ಕೃಷ್ಣನ ಫೋಟೋ ಇಡಲಾಗುವುದು. ನಂತರ ಕೃಷ್ಣನಿಗೆ ಬಟ್ಟೆ, ಆಸನ, ಪಂಚಾಮೃತ, ತುಪ್ಪದ ದೀಪ, ಚಂದನ, ತುಳಸಿ, ಪಾರಿಜಾತ ಹೂ ಇವುಗಳನ್ನು ಅರ್ಪಿಸಲಾಗುವುದು.
ಕೃಷ್ಣ ವಿಗ್ರಹವನ್ನು ಹೊಸದಾದ ಬಟ್ಟೆಯ ಮೇಲೆ ಇಟ್ಟು, ದೀಪ ಬೆಳಗಿ, ನಂತರ ಕೃಷ್ಣನ ಕೀರ್ತನೆಗಳನ್ನು ಹೇಳಲಾಗುವುದು. ಪೂಜೆಗೆ ಕೃಷ್ಣನಿಗೆ ಪ್ರಿಯವಾದ ಬೆಣ್ಣೆ, ಮೊಸರು, ಹಾಲನ್ನು ಅರ್ಪಿಸಿ.



Click it and Unblock the Notifications