Just In
- 4 hrs ago ಮೀನ ರಾಶಿಗೆ ಮಂಗಳ ಸಂಚಾರ: ಈ 5 ರಾಶಿಯವರು ವೃತ್ತಿ ಬದುಕಿನಲ್ಲಿ ಜಾಗ್ರತೆ
- 4 hrs ago ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- 5 hrs ago ಬಿಲ್ಗೇಟ್ಸ್ ಟೀ ಕೇಳಿದ್ದಕ್ಕೆ ಟೀ ಮಾಡುತ್ತಿರುವ ನಾಯಿ: ಕ್ಯೂಟ್ ವೀಡಿಯೋ ವೈರಲ್
- 6 hrs ago ಬದಲಾಯ್ತು ಡಿಡಿ ಲೋಗೋ: ಕೇಸರಿ ಬಣ್ಣಕ್ಕೆ ತಿರುಗಿರುವುದಕ್ಕೆ ಕೆಲವರ ಮೆಚ್ಚುಗೆ, ಕೆಲವರ ಟೀಕೆ
Don't Miss
- Movies Srirasthu Shubhamasthu ; ಶಾರ್ವರಿ ಹಿನ್ನೆಲೆ ಹೇಳಿದ ಮಹೇಶ : ಅತ್ತೆಯನ್ನು ಅನಾಥೆ ಎಂದ ದೀಪಿಕಾ..!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿ ಕುರಿತ 5 ಆಸಕ್ತಿಕರ ಸಂಗತಿಗಳಿವು
ನಡೆದಾಡುವ ದೇವರೆಂದೇ ಗುರುತಿಸಿಕೊಂಡಿರುವ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ತಮ್ಮ 81ನೇ ವಯಸ್ಸಿಗೆ ವೈಕುಂಠ ಏಕಾದಶಿಯಂದೇ ವೈಕುಂಠ ಯಾತ್ರೆ ಮಾಡಿದ್ದಾರೆ. ನಡೆದಾಡುವ ದೇವರು, ಎರಡನೇ ಸ್ವಾಮಿ ವಿವೇಕಾನಂದ ಎಂದೇ ಗುರುತಿಸಿಕೊಂಡಿದ್ದ ಸಿದ್ಧೇಶ್ವರ ಸ್ವಾಮೀಜಿಗಳ ಬದುಕು ನಮ್ಮೆಲ್ಲರಿಗೂ ಆದರ್ಶ.
ಇವರು ಜನರ ಮನಸ್ಸನ್ನು ಅರಳಿಸುವ ಪ್ರಯತ್ನ ಮಾಡುತ್ತಿದ್ದರು.
ಎಲ್ಲರಿಗೂ ಸನ್ಮಾರ್ಗದ ಬಗ್ಗೆ ಬೋಧಿಸುತ್ತಿದ್ದರು. ತಾವು ನುಡಿಯುತ್ತಿದ್ದಂತೆ ಬದುಕಿದ ಮಹಾನ್ ಚೇತನ. ಜನರ ಜೀವನವನ್ನು ಪರಿಪೂರ್ಣ ಬದುಕಿನ್ತ ಸಾಗಿಸುವಲ್ಲಿ ನಿರಂತರ ಪ್ರಯತ್ನಿಸುತ್ತಿದ್ದರು. ಇವರು ತಮ್ಮ ಉಪನ್ಯಾಸದಿಂದ ಲಕ್ಷಾಂತರ ಜನರ ಬದುಕು ಬದಲಾಯಿಸಿದ್ದಾರೆ. ಇವರು ಮಾತನಾಡುತ್ತಿದ್ದರು ಮೋಡಿಗೆ ಒಳಗಾದಂತೆ ಜನ ಕೇಳುತ್ತಿದ್ದರು, ಅಷ್ಟೊಂದು ಅದ್ಭುತದ ಭಾಷಣಕಾರರಾಗಿದ್ದರು.
ಶ್ರೀಗಳ ಬಗ್ಗೆ ಕೆಲ ಆಸಕ್ತಿಕರ ವಿಷಯದ ಬಗ್ಗೆ ನೋಡುವುದಾದರೆ:
1. ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿ ಆಧ್ಯಾತ್ಮದಲ್ಲಿ ಸಾಧನೆ ಮಾಡಿದ ಯೋಗಿ:
ಸಿದ್ಧೇಶ್ವರರ ಬಾಲ್ಯದ ಹೆಸರು ಸಿದ್ಧಗೊಂಡಪ್ಪ, 1041ರಲ್ಲಿ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸುತ್ತಾರೆ. ಇವರು ನಾಲ್ಕನೇ ತರಗತಿ ಮುಗಿಸಿದ ಬಳಿಕ ಮಲ್ಲಿಕಾರ್ಜುನ ಸ್ವಾಮಿಗಳ ಬಳಿ ಬರುತ್ತಾರೆ. ಬಾಲಕನ ಚುರುಕುತನ ಮಲ್ಲಿಕಾರ್ಜುನ ಸ್ವಾಮಿಗಳ ಗಮನ ಸೆಳೆಯುತ್ತದೆ. ತಾವು ಪ್ರವಚನಕ್ಕೆ ಹೋಗುವ ಕಡೆಗಳಿಗೆ ಸಿದ್ದೇಶ್ವರರನ್ನೂ ಕರೆದುಕೊಂಡು ಹೋಗುತ್ತಿದ್ದರು. ಮಲ್ಲಿಕಾರ್ಜುನ ಸ್ವಾಮಿಗಳೇ ಇವರ ವಿದ್ಯಾಭ್ಯಾಸ ಮಾಡಿಸುತ್ತಾರೆ.
ಇವರು ಕೊಲ್ಹಾಪುರ ವಿಶ್ವವಿದ್ಯಾನಿಲಯದಿಂದ ಎಂ. ಎ ತತ್ವಶಾಸ್ತ್ರದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಾರೆ.
2. ರಾಜಕೀಯ ವ್ಯಕ್ತಿಗಳಿಂದ ದೂರ ಉಳಿದಿದ್ದರು
ಸಿದ್ಧೇಶ್ವರ ಸ್ವಾಮೀಜಿಗಳು ರಾಜಕೀಯ ವ್ಯಕ್ತಿಗಳಿಂದ ತುಂಬಾನೇ ದೂರ ಉಳಿದಿದ್ದರು, ಅವರು ಯಾವುದೇ ರಾಜಕೀಯ ಸಮಾರಂಭಗಳಿಗೆ ಹೋಗುತ್ತಿರಲಿಲ್ಲ, ಆದರೆ ಪ್ರಧಾನಿ ಮೋದಿಜೀಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅವರ ಉಡುಪಿನಲ್ಲಿ ಪಾಕೆಟ್ಗಳಿವೆ, ಆದರೆ ಅದನ್ನು ಅವರು ತುಂಬಿಕೊಳ್ಳುವುದಿಲ್ಲ ಎಂಬುವುದಾಗಿ ಮೋದಿ ಕುರಿತು ಹೊಗಳಿದ್ದರು.
'ಸಿದ್ಧೇಶ್ವವರ ಸ್ವಾಮೀಜಿ ಯಾವಾಗಲೂ ಪಾಕೆಟ್ ಇಲ್ಲದ ಶರ್ಟ್ ಬಳಸುತ್ತಿದ್ದರು.
3. ಸಿದ್ಧೇಶ್ವರ ಸ್ವಾಮೀಜಿಗಳು ಪಂಚ ಭಾಷಾ ನಿಪುಣರಾಗಿದ್ದರು
ಇವರಿಗೆ ಕನ್ನಡ, ಸಂಸ್ಕೃತ, ಇಂಗ್ಲಿಷ್, ಮರಾಠಿ, ಹಿಂದಿ ಭಾಷೆಯಲ್ಲಿ ಒಳ್ಳೆಯ ಹಿಡಿತ ಹೊಂದಿದ್ದರು. ಇವರು ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರದಲ್ಲೂ ಪ್ರವಚನಗಳನ್ನು ನೀಡುತ್ತಿದ್ದರು. ಇವರ ಮಾತುಗಳು ಜನರ ಮೇಲೆ ಗಾಢ ಪ್ರಭಾವ ಬೀರುತ್ತಿತ್ತು. ಗ್ರಾಮೀಣ ಕಡೆಗಳಲ್ಲಿ ಬಡ ಮಕ್ಕಳಿ ವಿದ್ಯೆಗಾಗಿ ಕಷ್ಟಪಡುವುದನ್ನು ನೋಡಿ ಅನೇಕ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿದರು. ಇವರ ದೂರದೃಷ್ಟಿಯ ಪ್ರಭಾವ ಸಾವಿರಾರು ಮಕ್ಕಳು ಇಂದು ಒಳ್ಳೆಯ ಬದುಕು ಕಟ್ಟಿಕೊಂಡಿದ್ದಾರೆ.
4. ಪ್ರಶಸ್ತಿ, ಪುರಸ್ಕಾರಗಳನ್ನು ತಿರಸ್ಕಾರ ಮಾಡಿದ್ದ ಸ್ವಾಮೀಜಿ
ಭಾರತ ಸರ್ಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲು ಮುಂದಾಗಿತ್ತು, ಆಗ ಅವರು ಆ ಪ್ರಶಸ್ತಿಯನ್ನು ನಯವಾಗಿ ತಿರಸ್ಕರಿಸಿದ್ದರು. ಭಾರತ ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಗಳ ಮೇಲೆ ನನಗೆ ತುಂಬಾ ಗೌರವ ಇದೆ. ಆದರೆ ನಾನೊಬ್ಬ ಸರಳ ವ್ಯಕ್ತಿ, ಸಾಮಾನ್ಯ ಜೀವನ ನಡೆಸುತ್ತಾ ಆಧ್ಯಾತ್ಮಿಕ ಬೋಧನೆ ಮಾಡುವುದು ನನ್ನ ಉದ್ದೇಶ ಎಂದು ಪ್ರಶಸ್ತಿಯನ್ನು ನಯವಾಗಿ ಬೇಡ ಎಂದಿದ್ದರು. ಇವರನ್ನರಿಸಿ ಹಲವಾರು ಪ್ರಶಸ್ತಿಗಳು ಬಂದಿದ್ದೆವು, ಆದರೆ ಅದ್ಯಾವುದನ್ನೂ ಸ್ವೀಕರಿಸಲಿಲ್ಲ.
5. 2014ರಲ್ಲಿಯೇ ಮರಣ ಶಾಸನ ಬರೆದಿದ್ದ ಸಿದ್ಧೇಶ್ವರ ಸ್ವಾಮೀಜಿ
ಇವರು ತಮ್ಮ ಮರಣ ಶಾಸನವನ್ನು 2014ರಲ್ಲಿಯೇ ಬರೆದಿದ್ದರು. ಅದರಲ್ಲಿ ನನ್ನನ್ನು ಹೂಳಬೇಡಿ, ಸುಡಬೇಕು, ನನ್ನ ಕುರುಹುಗಳು ಇರಬಾರದು ಎಂದು ಬರೆದಿದ್ದರು. ನನಗೋಸ್ಕರ ಗುಡಿ ಕಟ್ಟಬಾರದು, ಸಮಾದಿ ಮಾಡಬಾರದು ಎಂದು ಕೂಡ ಸೂಚಿಸಿದ್ದರು.
ತಮ್ಮ ಕೊನೆಯ ದಿನಗಳ ಕುರಿತು 2014ರಲ್ಲಿಯೇ ಈ ರೀತಿ ಬರೆದಿದ್ದಾರೆ.
ಅಂತಿಮ ನೆನಹು
ಸತ್ಯವೂ ಇಲ್ಲ, ಅಸತ್ಯವೂ ಇಲ್ಲ
ನಾನೂ ಇಲ್ಲ, ನೀನೂ ಇಲ್ಲ
ಇಲ್ಲ ಇಲ್ಲ ಎಂಬುವುದು ತಾನಿಲ್ಲ
ಗುಹೇಶ್ವರನೆಂಬುದು ತಾ ಬಯಲು
ಅಂತ್ಯಃ ಪ್ರಣಾಮಾಂಜಲಿಃ!
ಸ್ವಾಮಿ ಸಿದ್ಧೇಶ್ವರ
ಈ ಸತ್ಯಂ ಶಿವಂ ಸುಂದರಂ ಸೃಷ್ಟಿಯನ್ನು ಮತ್ತೆ ಮತ್ತೆ ನೋಡಲು ಬರುತ್ತೇನೆ, ಈ ಜಗತ್ತನ್ನು, ಈ ಜೀವನವನ್ನು ಇನ್ನಷ್ಟು ಸುಂದರಗೊಳಿಸುತ್ತೇನೆ ಎಂಬ ಉತ್ಸಾಹ ನಮ್ಮಲ್ಲಿರಬೇಕು
-ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ
5. 2014ರಲ್ಲಿಯೇ ಮರಣ ಶಾಸನ ಬರೆದಿದ್ದ ಸಿದ್ಧೇಶ್ವರ ಸ್ವಾಮೀಜಿ
ಇವರು ತಮ್ಮ ಮರಣ ಶಾಸನವನ್ನು 2014ರಲ್ಲಿಯೇ ಬರೆದಿದ್ದರು. ಅದರಲ್ಲಿ ನನ್ನನ್ನು ಹೂಳಬೇಡಿ, ಸುಡಬೇಕು, ನನ್ನ ಕುರುಹುಗಳು ಇರಬಾರದು ಎಂದು ಬರೆದಿದ್ದರು. ನನಗೋಸ್ಕರ ಗುಡಿ ಕಟ್ಟಬಾರದು, ಸಮಾದಿ ಮಾಡಬಾರದು ಎಂದು ಕೂಡ ಸೂಚಿಸಿದ್ದರು.
ತಮ್ಮ ಕೊನೆಯ ದಿನಗಳ ಕುರಿತು 2014ರಲ್ಲಿಯೇ ಈ ರೀತಿ ಬರೆದಿದ್ದಾರೆ.
ಅಂತಿಮ ನೆನಹು
ಸತ್ಯವೂ ಇಲ್ಲ, ಅಸತ್ಯವೂ ಇಲ್ಲ
ನಾನೂ ಇಲ್ಲ, ನೀನೂ ಇಲ್ಲ
ಇಲ್ಲ ಇಲ್ಲ ಎಂಬುವುದು ತಾನಿಲ್ಲ
ಗುಹೇಶ್ವರನೆಂಬುದು ತಾ ಬಯಲು
ಅಂತ್ಯಃ ಪ್ರಣಾಮಾಂಜಲಿಃ!
ಸ್ವಾಮಿ ಸಿದ್ಧೇಶ್ವರ