ಭಾರತದಲ್ಲಿ ನೋಡಲೇಬೇಕಾದ ವಿಶೇಷ ಹಾಗೂ ಕಾರ್ಣಿಕ ದೇವಾಲಯಗಳು ಇವು

ಭಾರತವು ಅತ್ಯಂತ ಶ್ರೇಷ್ಠವಾದ ಸಂಸ್ಕೃತಿ ಹಾಗೂ ಇತಿಹಾಸವನ್ನು ಪಡೆದುಕೊಂಡಿದೆ. ಸುಸಂಸ್ಕೃತವಾದ ಆಚಾರ ವಿಚಾರಗಳು, ವಾಸ್ತುಶಿಲ್ಪಗಳ ಶ್ರೀಮಂತಿಕೆಯನ್ನು ಪಡೆದುಕೊಂಡಿದೆ. ವಿಶೇಷ ಸಂಸ್ಕೃತಿ ಹಾಗೂ ಶಿಲ್ಪಕಲೆಯನ್ನು ಹೊಂದಿರುವ ರಾಜ ಮಹರಾಜರ ಧೈರ್ಯದ ಕಥೆಗಳ ಜೊತೆಗೆ ಅವರು ನಿರ್ಮಿಸಿದ ದೊಡ್ಡ ಅರಮನೆಗಳು ಮತ್ತು ದೇವಾಲಯಗಳು ಭಾರತದ ಸೌಂದರ್ಯವನ್ನು ಹೆಚ್ಚಿಸುತ್ತವೆ. ವಿಶೇಷವಾದ ಇತಿಹಾಸ ಹಾಗೂ ಹಿನ್ನೆಲೆಗಳು ರಾಜರ ಆಡಳಿತವನ್ನು ವಿವರಿಸುತ್ತವೆ.

ರಾಜರ ಕಾಲದಲ್ಲಿ ನಡೆಸಿದ ಜೀವನ, ವಸ್ತುಗಳ ಬಳಕೆ, ವಾಸ್ತುಶಿಲ್ಪಗಳು, ಕೆತ್ತನೆ, ಆಡಳಿತ, ದೇವಾಲಯಗಳು ದೇವಾಲಯದ ಇತಿಹಾಸ ಎಲ್ಲವೂ ವಿಸ್ಮಯ ಹಾಗೂ ಶ್ರೇಷ್ಠತೆಯನ್ನು ಪಡೆದುಕೊಂಡಿವೆ. ಅವುಗಳಲ್ಲಿ ಕೆಲವು ಪುರಾವೆಗಳು ಹಾಗೂ ದೇವಾಲಯಗಳು ಇಂದಿಗೂ ಜೀವಂತವಾಗಿರುವುದನ್ನು ಕಾಣಬಹುದು. ಅವುಗಳಲ್ಲಿ ಕೆಲವೊಂದು ಜಗತ್ತಿನಲ್ಲಿಯೇ ಶ್ರೇಷ್ಠತೆಯನ್ನು ಪಡೆದುಕೊಂಡಿದೆ. ಅವು ಜಗತ್ತಿನ ಉದ್ದಗಲಕ್ಕೂ ಭಾರತದ ಶ್ರೇಷ್ಠತೆಯನ್ನು ಸಾರುತ್ತವೆ.

Incredible Temples

ಅವುಗಳಲ್ಲಿ ಕೆಲವು ಪ್ರಸಿದ್ಧ ದೇವಾಲಯಗಳು ಅತ್ಯಂತ ಶಕ್ತಿಯುತವಾದ ಧಾರ್ಮಿಕ ಹಿನ್ನೆಲೆಯನ್ನು ಪಡೆದುಕೊಂಡಿವೆ. ಆ ದೇವಾಲಯಗಳನ್ನು ಭೇಟಿ ನೀಡುವುದು, ದೇವರ ದರ್ಶನ ಹಾಗೂ ಸೇವೆಯನ್ನು ಕೈಗೊಳ್ಳುವುದರಿಂದ ಜೀವನದ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಅಲ್ಲದೆ ಪುಣ್ಯ ಪ್ರಾಪ್ತಿಯಾಗುವುದರ ಮೂಲಕ ಜೀವನದ ಉದ್ದಕ್ಕೂ ಸಂತೋಷ ಹಾಗೂ ಸಮೃದ್ಧಿ ದೊರೆಯುವುದು ಎನ್ನುವ ನಂಬಿಕೆಯನ್ನು ಪಡೆದುಕೊಂಡಿವೆ. ನೀವು ಇಂತಹ ದೇಗುಲವನ್ನು ನೋಡುವ ತವಕವನ್ನು ಹೊಂದಿದ್ದರೆ ಈ ಮುಂದೆ ವಿವರಿಸಲಾದ ದೇಗುಲಗಳ ವಿವರಣೆಯನ್ನು ಪರಿಶೀಲಿಸಿ.

ಏಕಂಬರೇಶ್ವರ ದೇವಸ್ಥಾನ

ಏಕಂಬರೇಶ್ವರ ದೇವಸ್ಥಾನ

ಕಾಂಚೀಪುರಂ ಇದು ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯಲ್ಲಿರುವ ವಿಶ್ವಪ್ರಸಿದ್ಧ ದೇವಾಲಯವಾಗಿದೆ. ಈ ದೇವಾಲಯವು ಶಿವನಿಗೆ ಅರ್ಪಿತವಾಗಿದೆ, ಅಲ್ಲಿ ಮರಳಿನಿಂದ ಮಾಡಿದ ಶಿವಲಿಂಗವನ್ನು ಕಾಣಬಹುದು. ದೇವಾಲಯದ ಬಗ್ಗೆ ಅತ್ಯಂತ ಮಹತ್ವದ ಸಂಗತಿಯೆಂದರೆ, ಇದು ಪಾರ್ವತಿ ದೇವಿಯೆಂದು ನಂಬಲಾಗಿದೆ. ಈ ದೇವಾಲಯದ ಅದ್ಭುತ ಶೈಲಿಯ ವಾಸ್ತುಶಿಲ್ಪ ಹಾಗೂ ಕೆತ್ತನೆಗಳು ಭಾರತದ ಕಲಾ ಶ್ರೀಮಂತಿಕೆಯನ್ನು ಎತ್ತಿಹಿಡಿಯುತ್ತವೆ. ಅವರ ಮೇಲ್ವಿಚಾರಣೆಯಲ್ಲಿ ಇದರ ನಿರ್ಮಾಣವನ್ನು ಮಾಡಲಾಯಿತು ಎನ್ನಲಾಗುವುದು. ಇಲ್ಲಿ ವಿಶೇಷ ಪೂಜೆ ಹಾಗೂ ಭೇಟಿ ನೀಡುವುದರಿಂದ ಪಾಪಗಳು ಕಳೆದು, ಪುಣ್ಯ ಪ್ರಾಪ್ತಿಯಾಗುವುದು ಎನ್ನಲಾಗುತ್ತದೆ.

ವಿರೂಪಾಕ್ಷ ದೇವಸ್ಥಾನ

ವಿರೂಪಾಕ್ಷ ದೇವಸ್ಥಾನ

ಕರ್ನಾಟಕದ ಹಂಪಿಯಲ್ಲಿರುವ ಈ ದೇವಾಲಯ ರಾಜ್ಯದ ಅತ್ಯಂತ ಜನಪ್ರಿಯ ದೇವಾಲಯಗಳಲ್ಲಿ ಒಂದಾಗಿದೆ. ಇದನ್ನು 1509 ರಲ್ಲಿ ರಾಜ ಕೃಷ್ಣ ದೇವ್ ರಾಯರ ಕಾಲದಲ್ಲಿ ನಿರ್ಮಾಣಗೊಂಡ ದೇವಾಲಯ ಎನ್ನುವ ಇತಿಹಾಸವನ್ನು ಪಡೆದುಕೊಂಡಿದೆ. ಕೈಗೊಂಡ ಪೂಜಾ ಕ್ರಮಗಳು ಹಾಗೂ ವಿಧಿ ವಿಧಾನಗಳನ್ನು ಇಂದಿಗೂ ಮಾಡಲಾಗುತ್ತಿದೆ. ಅವೇ ಇಲ್ಲಿಯ ಇನ್ನೊಂದು ವಿಶೇಷ ಸಂಗತಿ ಎನ್ನಲಾಗುವುದು.

ದುಲಾ ದೇವ್ ದೇವಸ್ಥಾನ

ದುಲಾ ದೇವ್ ದೇವಸ್ಥಾನ

ಖಜುರಾಹೊದಲ್ಲಿನ ದುಲಾ ದೇವ್ ದೇವಸ್ಥಾನವು ಮಧ್ಯಪ್ರದೇಶದ ಪ್ರಮುಖ ಆಕರ್ಷಣೆಯಾಗಿದೆ. ಭಾರತದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾದ ಇದು ಶಿವನಿಗೆ ಅರ್ಪಿತವಾಗಿದೆ. 10 ಮತ್ತು 12 ನೇ ಶತಮಾನದ ನಡುವೆ ಚಂದೇಲ್ ದೊರೆಗಳು ಈ ದೇವಾಲಯವನ್ನು ನಿರ್ಮಿಸಿದರು. ಇದನ್ನು ಇತಿಹಾಸಕಾರರು ಕುನ್ವರ್ ನಾಥ ದೇವಾಲಯ ಎಂದೂ ಕರೆಯುತ್ತಾರೆ. ಈ ದೇವಾಲಯದ ಅದ್ಭುತ ಶೈಲಿಯ ವಾಸ್ತುಶಿಲ್ಪ ಹಾಗೂ ಕೆತ್ತನೆಗಳು ಭಾರತದ ಕಲಾ ಶ್ರೀಮಂತಿಕೆಯನ್ನು ಎತ್ತಿಹಿಡಿಯುತ್ತವೆ. ಇಲ್ಲಿ ವಿಶೇಷ ಪೂಜೆ ಹಾಗೂ ಭೇಟಿ ನೀಡುವುದರಿಂದ ಪಾಪಗಳು ಕಳೆದು, ಪುಣ್ಯ ಪ್ರಾಪ್ತಿಯಾಗುವುದು ಎನ್ನಲಾಗುತ್ತದೆ.

ಒಡಿಶಾ ಕೊನಾರ್ಕ್ ದೇವಾಲಯ

ಒಡಿಶಾ ಕೊನಾರ್ಕ್ ದೇವಾಲಯ

ಇದು ವಿಶ್ವ ದೇವರಿಗೆ ಅರ್ಪಿತವಾದ ವಿಶ್ವಪ್ರಸಿದ್ಧ ದೇವಾಲಯವಾಗಿದೆ. ಇದು ಪ್ರತಿವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ದೇವಾಲಯದ ಆಶ್ಚರ್ಯಕರ ಸಂಗತಿಯೆಂದರೆ ದೇವಾಲಯದ ಹೊರಗಿನ ಗೋಡೆಗಳ ವಾಸ್ತುಶಿಲ್ಪ. ಸಂಭೋಗದ ಚಿತ್ರಗಳನ್ನು ಗೋಡೆಗಳ ಮೇಲೆ ಕೆತ್ತಲಾಗಿದೆ. ಈ ದೇವಾಲಯವನ್ನು ಸೂರ್ಯ ದೇವ್ ರಥ ರೂಪದಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ದೇವಾಲಯದ ಅದ್ಭುತ ಶೈಲಿಯ ವಾಸ್ತುಶಿಲ್ಪ ಹಾಗೂ ಕೆತ್ತನೆಗಳು ಭಾರತದ ಕಲಾ ಶ್ರೀಮಂತಿಕೆಯನ್ನು ಎತ್ತಿಹಿಡಿಯುತ್ತವೆ. ಇಲ್ಲಿ ವಿಶೇಷ ಪೂಜೆ ಹಾಗೂ ಭೇಟಿ ನೀಡುವುದರಿಂದ ಪಾಪಗಳು ಕಳೆದು, ಪುಣ್ಯ ಪ್ರಾಪ್ತಿಯಾಗುವುದು ಎನ್ನಲಾಗುತ್ತದೆ.

ಮಹಾರಾಷ್ಟ್ರದ ಎಲಿಫೆಂಟಾ ದೇವಾಲಯ

ಮಹಾರಾಷ್ಟ್ರದ ಎಲಿಫೆಂಟಾ ದೇವಾಲಯ

ಮಹಾರಾಷ್ಟ್ರದ ಎಲಿಫೆಂಟ ಗುಹೆಗಳನ್ನು ದೇವಾಲಯಗಳೆಂದು ಪರಿಗಣಿಸಲಾಗಿದೆ. ಅದರಲ್ಲಿ ಏಳು ಗುಹೆಗಳಿವೆ. ಅವುಗಳಲ್ಲಿ ಐದು ಹಿಂದೂಗಳಿಗೆ ಮತ್ತು ಉಳಿದ ಎರಡು ಬೌದ್ಧರಿಗೆ ಸೇರಿವೆ. ಎರಡು ಧರ್ಮಗಳ ದೇವಾಲಯಗಳನ್ನು ಒಟ್ಟಿಗೆ ಸ್ಥಾಪಿಸುವುದು ಆಕರ್ಷಕವಾಗಿದೆ. ಗುಹೆಗಳ ಒಳಗೆ ಶಿವನ ವಿಗ್ರಹಗಳು ಇದ್ದರೆ, ಮಹೇಶ್ ಮೂರ್ತಿ ಗುಹೆ ಅತ್ಯಂತ ಜನಪ್ರಿಯವಾಗಿದೆ.

ಮಹಾಬಲಿಪುರಂ ಶೋರ್ ದೇವಾಲಯ

ಮಹಾಬಲಿಪುರಂ ಶೋರ್ ದೇವಾಲಯ

ಮಹಾಬಲಿಪುರಂನಲ್ಲಿರುವ ತೀರ ದೇವಾಲಯ ತಮಿಳುನಾಡಿನಲ್ಲಿದೆ. ಇದು ದಕ್ಷಿಣ ಭಾರತದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಇದನ್ನು ಮೂರು ದೇವಾಲಯಗಳಾಗಿ ವಿಂಗಡಿಸಲಾಗಿದೆ. ಮಧ್ಯದಲ್ಲಿ ವಿಷ್ಣುವಿನ ದೇವಾಲಯವಿದ್ದರೆ, ಶಿವನ ದೇವಾಲಯಗಳು ಅದರ ಎರಡೂ ಬದಿಗಳಲ್ಲಿವೆ. ದೇವಾಲಯದ ಒಳಗೆ ದುರ್ಗಾ ದೇವಿಯ ಸಣ್ಣ ದೇವಾಲಯವಿದೆ. ಅದರ ಹತ್ತಿರ ದೇವಿಯ ಸಿಂಹದ ಪ್ರತಿಮೆಯನ್ನೂ ಕಾಣಬಹುದು. ಈ ದೇವಾಲಯದ ಅದ್ಭುತ ಶೈಲಿಯ ವಾಸ್ತುಶಿಲ್ಪ ಹಾಗೂ ಕೆತ್ತನೆಗಳು ಭಾರತದ ಕಲಾ ಶ್ರೀಮಂತಿಕೆಯನ್ನು ಎತ್ತಿಹಿಡಿಯುತ್ತವೆ. ಇಲ್ಲಿ ವಿಶೇಷ ಪೂಜೆ ಹಾಗೂ ಭೇಟಿ ನೀಡುವುದರಿಂದ ಪಾಪಗಳು ಕಳೆದು, ಪುಣ್ಯ ಪ್ರಾಪ್ತಿಯಾಗುವುದು ಎನ್ನಲಾಗುತ್ತದೆ.

ಮಹಾರಾಷ್ಟ್ರ ಎಲ್ಲೋರಾ ಗುಹೆಗಳು

ಮಹಾರಾಷ್ಟ್ರ ಎಲ್ಲೋರಾ ಗುಹೆಗಳು

ಎಲ್ಲೋರಾ ಗುಹೆಗಳನ್ನು ಒಂದನೇ ಕೃಷ್ಣನು ಇಂದಿನ ಮಹಾರಾಷ್ಟ್ರದ ನಿರ್ಮಿಸಿದ್ದಾರೆ. ಅದು ಇಂದಿನ ರಂಗಾಬಾದ್. ಈ ದೇವಾಲಯವು ಶಿವನಿಗೆ ಅರ್ಪಿತವಾಗಿದೆ. ಇದು ವಿಶ್ವಪ್ರಸಿದ್ಧ ತಾಣವಾಗಿದ್ದು, ದೇವಾಲಯದ ಅತ್ಯಂತ ಆಕರ್ಷಕ ಲಕ್ಷಣವೆಂದರೆ ಇಲ್ಲಿರುವ ದೊಡ್ಡ ವಿಗ್ರಹವನ್ನು ಕೇವಲ ಒಂದು ಕಲ್ಲಿನಿಂದ ಕೆತ್ತಲಾಗಿದೆ. ಇಲ್ಲಿ ವಿಶೇಷ ಪೂಜೆ ಹಾಗೂ ಭೇಟಿ ನೀಡುವುದರಿಂದ ಪಾಪಗಳು ಕಳೆದು, ಪುಣ್ಯ ಪ್ರಾಪ್ತಿಯಾಗುವುದು ಎನ್ನಲಾಗುತ್ತದೆ.

ಬೃಹಸ್ದೀಶ್ವರ ದೇವಸ್ಥಾನ

ಬೃಹಸ್ದೀಶ್ವರ ದೇವಸ್ಥಾನ

ಈ ದೇವಾಲಯವು ಹಿಂದೂ ಧರ್ಮದ ಶೈವ ಸಂಪ್ರದಾಯದ ಅನುಯಾಯಿಗಳ ಆಕರ್ಷಣೆ, ಈ ದೇವಾಲಯವು ತಮಿಳುನಾಡಿನ ತಂಜೂರ್ ಜಿಲ್ಲೆಯಲ್ಲಿದೆ. ಇದನ್ನು 11 ನೇ ಶತಮಾನದಲ್ಲಿ ಚೋಳ ದೊರೆಗಳು ನಿರ್ಮಿಸಿದರು. ಈ ದೇವಾಲಯವು ವಿಶ್ವದ ಅತ್ಯಂತ ಪ್ರಸಿದ್ಧ ಗ್ರಾನೈಟ್ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯದ ಅದ್ಭುತ ಶೈಲಿಯ ವಾಸ್ತುಶಿಲ್ಪ ಹಾಗೂ ಕೆತ್ತನೆಗಳು ಭಾರತದ ಕಲಾ ಶ್ರೀಮಂತಿಕೆಯನ್ನು ಎತ್ತಿಹಿಡಿಯುತ್ತವೆ.

ಮೀನಾಕ್ಷಿ ದೇವಾಲಯ

ಮೀನಾಕ್ಷಿ ದೇವಾಲಯ

ಮೀನಾಕ್ಷಿ ದೇವಾಲಯದಲ್ಲಿ ಪಾರ್ವತಿ ದೇವಿಯ ಅವತಾರ ಮತ್ತು ವಿಷ್ಣುವಿನ ಸಹೋದರಿ ಮೂರ್ತಿಯನ್ನು ಕಾಣಬಹುದು. ತಾಯಿ ಮಿನಾಕ್ಷಿ ದೇವಿಗೆ ಸಮರ್ಪಿಸಲಾಗಿರುವ ಈ ದೇವಾಲಯವು ಮಧುರೈನಲ್ಲಿದೆ. ಮಿನಾಕ್ಷಿ ಅಮ್ಮನ್ ದೇವಸ್ಥಾನ ಎಂದು ಕರೆಯಲ್ಪಡುವ ಇದು ದೇಶದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯದ ಅದ್ಭುತ ಶೈಲಿಯ ವಾಸ್ತುಶಿಲ್ಪ ಹಾಗೂ ಕೆತ್ತನೆಗಳು ಭಾರತದ ಕಲಾ ಶ್ರೀಮಂತಿಕೆಯನ್ನು ಎತ್ತಿಹಿಡಿಯುತ್ತವೆ. ಇಲ್ಲಿ ವಿಶೇಷ ಪೂಜೆ ಹಾಗೂ ಭೇಟಿ ನೀಡುವುದರಿಂದ ಪಾಪಗಳು ಕಳೆದು, ಪುಣ್ಯ ಪ್ರಾಪ್ತಿಯಾಗುವುದು ಎನ್ನಲಾಗುತ್ತದೆ.

ವಿರೂಪಾಕ್ಷ ದೇವಸ್ಥಾನ

ವಿರೂಪಾಕ್ಷ ದೇವಸ್ಥಾನ

8 ನೇ ಶತಮಾನದಲ್ಲಿ ಮಹಾನ್ ಚಾಲುಕ್ಯ ದೊರೆಗಳು ನಿರ್ಮಿಸಿದ ವಿರೂಕ್ಷಾ ದೇವಾಲಯವು ಕರ್ನಾಟಕದ ಪಟ್ಟಡಕಲ್ಲು ಗ್ರಾಮದಲ್ಲಿದೆ. ಇದು ಭಾರತದ ದಕ್ಷಿಣ ಮತ್ತು ಉತ್ತರ ವಾಸ್ತುಶಿಲ್ಪಗಳಿಗೆ ಒಂದು ಸುಂದರ ಉದಾಹರಣೆಯಾಗಿದೆ. ಇಲ್ಲಿಯ ಕೆತ್ತನೆ ಹಾಗೂ ಶೈಲಿಯು ರಾಜರ ಕಾಲದ ಶ್ರೀಮಂತಿಕೆ ಹಾಗೂ ಆಡಳಿತವನ್ನು ವಿವರಿಸುತ್ತವೆ. ಇಲ್ಲಿಯ ವಾಸ್ತುಶಿಲ್ಪ ಹಾಗೂ ಕೆತ್ತನೆಗಳು ಮನಸ್ಸಿಗೆ ಸಂತೋಷ ಹಾಗೂ ಅದ್ಭುತ ಪರಿಕಲ್ಪನೆಯನ್ನು ಮನದಂಗಳಕ್ಕೆ ತಂದು ನಿಲ್ಲಿಸುತ್ತವೆ.

English summary

Incredible Temples To Visit In India

Temples were the true reflection of Indian culture thousands of years back. While the stories of the kings are like the songs of their bravery, the palaces and the temples they constructed added to the beauty of the Indian culture. Temples are more significant because of the attached faith of the masses with them and the associated devotees.
X
Desktop Bottom Promotion