Latest Updates
-
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಈ ಸಂಕ್ರಾಂತಿಗೆ ಎಳ್ಳು-ಬೆಲ್ಲ ಬೀರೋಣ ಒಳ್ಳೆಯ ಮಾತನಾಡೋಣ
ಎಳ್ಳು ಬೆಲ್ಲ ಬೀರುವುದು ಕನ್ನಡಿಗರು ಸಂಕ್ರಾಂತಿಯ ದಿನ ನಡೆಸಿಕೊಂಡು ಬರುತ್ತಿರುವ ಅರ್ಥಪೂರ್ಣ ಆಚರಣೆ. "ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡಿ" ಎಂದು ಹಿರಿಯರು ಸಂಕ್ರಾಂತಿಯ ದಿನ ತಪ್ಪದೆ ಹೇಳುತ್ತಿರುತ್ತಾರೆ.
ಸಂಕ್ರಾಂತಿ ಎನ್ನುವುದು ಸಮೃದ್ಧಿಯ ಸಂಕೇತ. ಈ ಹಬ್ಬವು ಪೌರಾಣಿಕವಾಗಿಯೂ, ಸೂರ್ಯನ ಪಥ ಬದಲಾವಣೆಯ ಗುರುತಿಗಾಗಿಗೂ, ನಮ್ಮ ಅನ್ನದಾತ ರೈತರ ಸುಗ್ಗಿ ಹಾಗೂ ಕೊಯ್ಲಿನ ಸಂಕೇತವಾಗಿಯೂ ಆಚರಿಸುತ್ತೇವೆ. ಎಳ್ಳು ಬೆಲ್ಲ ಸಂಕ್ರಾಂತಿಯ ಬಹು ಮುಖ್ಯ ಭಾಗ. ಎಳ್ಳು ಬೆಲ್ಲ ಬೀರುವುದು ಕನ್ನಡಿಗರು ಸಂಕ್ರಾಂತಿಯ ದಿನ ನಡೆಸಿಕೊಂಡು ಬರುತ್ತಿರುವ ಅರ್ಥಪೂರ್ಣ ಆಚರಣೆ. "ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡಿ" ಎಂದು ಹಿರಿಯರು ಸಂಕ್ರಾಂತಿಯ ದಿನ ತಪ್ಪದೆ ಹೇಳುತ್ತಿರುತ್ತಾರೆ. ಮಕರ ಸಂಕ್ರಾಂತಿಗೆ ಎಳ್ಳು, ಸಕ್ಕರೆ ಅಚ್ಚು, ಹುಗ್ಗಿ

ಏನಿದು ಎಳ್ಳು-ಬೆಲ್ಲ? ಏತಕ್ಕೆ ಇಷ್ಟು ಮುಖ್ಯ ಎಂಬೆಲ್ಲ ಪ್ರಶ್ನೆಗಳಿಗೆ ವಿವರಣೆ ಹೀಗಿದೆ. ಇದೆಲ್ಲ ಓದಿದ ನಂತರ ತಯಾರು ಮಾಡುವ ವಿಧಾನವನ್ನು ಸಹ ತಿಳಿಸಿದ್ದೇವೆ. ಎಳ್ಳಿನಲ್ಲಿ ವಿಟಮಿನ್ಸ್, ಮಿನರಲ್ಸ್, ಕಾಪರ್, ಮ್ಯಾಂಗನೀಸ್, ಜಿಂಕ್, ಫೈಬೆರ್ ಹೀಗೆ ನಮ್ಮ ದೇಹಕ್ಕೆ ಬೇಕಾದ ಅನೇಕಾನೇಕ ಪೋಷಕಾಂಶಗಳು ಇವೆ. ಎಳ್ಳು ಶರೀರಕ್ಕೆ ಉಷ್ಣತೆಯನ್ನು ನೀಡುತ್ತದೆ. ಎಳ್ಳನ್ನು ನಾವು ಸಾಮಾನ್ಯವಾಗಿ ಮುಖ್ಯ ಪದಾರ್ಥವಾಗಿ ಯಾವ ಅಡುಗೆಯಲ್ಲೂ ಬಳಸುವುದಿಲ್ಲ. ಸ್ನೇಹ, ಪ್ರೀತಿಯ ಸಂಕೇತ ಪೊಂಗಲ್ ಹಬ್ಬದ ವೈಶಿಷ್ಟ್ಯ
ಅದೇನಿದ್ದರೂ ಇತರೆ ಆಹಾರ ಅಥವಾ ಸಿಹಿ ತಿಂಡಿಗಳಲ್ಲಿ ಒಂದು ಸಣ್ಣ ಭಾಗ ವಷ್ಟೇ. ಎಳ್ಳಿನ ಉಂಡೆ ಎಂದು ಮಾಡುತ್ತೇವೆಯಾದರೂ ಅವುಗಳನ್ನು ಹೆಚ್ಚು ಸೇವಿಸುವುದಿಲ್ಲ. ನವಗ್ರಹಗಳಿಗೆ ನೈವೇದ್ಯ ನೀಡುವ ನವ ಧಾನ್ಯಗಳಲ್ಲಿ ಎಳ್ಳು ಕೂಡ ಸೇರಿದೆ. ಇದರಿಂದ ತಯಾರಿಸುವ ಎಣ್ಣೆಯನ್ನು ಅಡಿಗೆಗೆ ಬಳಸುತ್ತೇವೆಯಾದರೂ ದೇವರಿಗೆ ಹಚ್ಚುವ ದೀಪಕ್ಕೆ ಶ್ರೇಷ್ಠವಾಗಿ ಬಳಸುತ್ತೇವೆ.
ಎಳ್ಳು ತಿನ್ನುವುದರಿಂದ ಉಷ್ಣತೆ ಹಾಗೂ ಪಿತ್ತ ದೇಹದಲ್ಲಿ ಹೆಚ್ಚಾಗುತ್ತದೆ. ಆದರೂ ಈ ಜನವರಿ ಕಾಲದಲ್ಲಿ ನಮ್ಮ ದೇಹಕ್ಕೆ ಎಳ್ಳು ಬೇಕಾಗಿದೆ. ಆದ್ದರಿಂದ ನಮ್ಮ ಪೂರ್ವಿಕರು ಎಳ್ಳನ್ನು ಬೆಲ್ಲದ ಜೊತೆ ಮಾಡಿ ಸೇವಿಸಲು ಹೇಳಿದರು. ಎಲ್ಲರಿಗೂ ತಿಳಿದಂತೆ ಬೆಲ್ಲ ಪಿತ್ತ ಶಮನಕಾರಿ.
ಬೆಲ್ಲದ ಪೋಷಕಾಂಶಗಳಲ್ಲಿ ಕೊರತೆಯೆ ಇಲ್ಲ. ಎಳ್ಳು ಹಾಗೂ ಬೆಲ್ಲ ಜೊತೆಗೂಡಿ ನಮಗೆ ಒಳ್ಳೆಯ ಪೋಷಕಾಂಶಗಳನ್ನು ನೀಡುತ್ತವೆ ಹಾಗೂ ಯಾವುದೇ ಹಾನಿಕಾರಕ ಪ್ರತಿಕ್ರಿಯೆಗಳನ್ನು ಉಂಟು ಮಾಡುವುದಿಲ್ಲ.
ಎಳ್ಳು ಬೆಲ್ಲಗಳ ಜೊತೆಯಲ್ಲಿ ಹುರಿದ ಕಡಲೆ ಬೀಜ, ಹುರಿಕಡಲೆ, ಒಣ ಕೊಬ್ಬರಿಯ ತುಂಡುಗಳನ್ನು ಸೇರಿಸಲಾಗುತ್ತದೆ. ಮನೆಯಲ್ಲಿ ಸುಲಭವಾಗಿ ತಯಾರಿಸಲ್ಪಡುವ ಎಳ್ಳು ಬೆಲ್ಲವನ್ನು ಸಕ್ಕರೆ ಅಚ್ಚು, ಕಬ್ಬಿನ ತುಂಡುಗಳೊಂದಿಗೆ ನೆಂಟರ, ಸ್ನೇಹಿತರ ಮನೆ ಮನೆಗೆ ಹೋಗಿ ಸಂಕ್ರಾಂತಿಯ ಶುಭಾಶಯ ಕೋರಿ ನೀಡಿ ಬರುವುದು ಕನ್ನಡಿಗರ ಸಂಪ್ರದಾಯ.



Click it and Unblock the Notifications


