Latest Updates
-
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ! -
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ!
ಈ ಸಂಕ್ರಾಂತಿಗೆ ಎಳ್ಳು-ಬೆಲ್ಲ ಬೀರೋಣ ಒಳ್ಳೆಯ ಮಾತನಾಡೋಣ
ಎಳ್ಳು ಬೆಲ್ಲ ಬೀರುವುದು ಕನ್ನಡಿಗರು ಸಂಕ್ರಾಂತಿಯ ದಿನ ನಡೆಸಿಕೊಂಡು ಬರುತ್ತಿರುವ ಅರ್ಥಪೂರ್ಣ ಆಚರಣೆ. "ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡಿ" ಎಂದು ಹಿರಿಯರು ಸಂಕ್ರಾಂತಿಯ ದಿನ ತಪ್ಪದೆ ಹೇಳುತ್ತಿರುತ್ತಾರೆ.
ಸಂಕ್ರಾಂತಿ ಎನ್ನುವುದು ಸಮೃದ್ಧಿಯ ಸಂಕೇತ. ಈ ಹಬ್ಬವು ಪೌರಾಣಿಕವಾಗಿಯೂ, ಸೂರ್ಯನ ಪಥ ಬದಲಾವಣೆಯ ಗುರುತಿಗಾಗಿಗೂ, ನಮ್ಮ ಅನ್ನದಾತ ರೈತರ ಸುಗ್ಗಿ ಹಾಗೂ ಕೊಯ್ಲಿನ ಸಂಕೇತವಾಗಿಯೂ ಆಚರಿಸುತ್ತೇವೆ. ಎಳ್ಳು ಬೆಲ್ಲ ಸಂಕ್ರಾಂತಿಯ ಬಹು ಮುಖ್ಯ ಭಾಗ. ಎಳ್ಳು ಬೆಲ್ಲ ಬೀರುವುದು ಕನ್ನಡಿಗರು ಸಂಕ್ರಾಂತಿಯ ದಿನ ನಡೆಸಿಕೊಂಡು ಬರುತ್ತಿರುವ ಅರ್ಥಪೂರ್ಣ ಆಚರಣೆ. "ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡಿ" ಎಂದು ಹಿರಿಯರು ಸಂಕ್ರಾಂತಿಯ ದಿನ ತಪ್ಪದೆ ಹೇಳುತ್ತಿರುತ್ತಾರೆ. ಮಕರ ಸಂಕ್ರಾಂತಿಗೆ ಎಳ್ಳು, ಸಕ್ಕರೆ ಅಚ್ಚು, ಹುಗ್ಗಿ

ಏನಿದು ಎಳ್ಳು-ಬೆಲ್ಲ? ಏತಕ್ಕೆ ಇಷ್ಟು ಮುಖ್ಯ ಎಂಬೆಲ್ಲ ಪ್ರಶ್ನೆಗಳಿಗೆ ವಿವರಣೆ ಹೀಗಿದೆ. ಇದೆಲ್ಲ ಓದಿದ ನಂತರ ತಯಾರು ಮಾಡುವ ವಿಧಾನವನ್ನು ಸಹ ತಿಳಿಸಿದ್ದೇವೆ. ಎಳ್ಳಿನಲ್ಲಿ ವಿಟಮಿನ್ಸ್, ಮಿನರಲ್ಸ್, ಕಾಪರ್, ಮ್ಯಾಂಗನೀಸ್, ಜಿಂಕ್, ಫೈಬೆರ್ ಹೀಗೆ ನಮ್ಮ ದೇಹಕ್ಕೆ ಬೇಕಾದ ಅನೇಕಾನೇಕ ಪೋಷಕಾಂಶಗಳು ಇವೆ. ಎಳ್ಳು ಶರೀರಕ್ಕೆ ಉಷ್ಣತೆಯನ್ನು ನೀಡುತ್ತದೆ. ಎಳ್ಳನ್ನು ನಾವು ಸಾಮಾನ್ಯವಾಗಿ ಮುಖ್ಯ ಪದಾರ್ಥವಾಗಿ ಯಾವ ಅಡುಗೆಯಲ್ಲೂ ಬಳಸುವುದಿಲ್ಲ. ಸ್ನೇಹ, ಪ್ರೀತಿಯ ಸಂಕೇತ ಪೊಂಗಲ್ ಹಬ್ಬದ ವೈಶಿಷ್ಟ್ಯ
ಅದೇನಿದ್ದರೂ ಇತರೆ ಆಹಾರ ಅಥವಾ ಸಿಹಿ ತಿಂಡಿಗಳಲ್ಲಿ ಒಂದು ಸಣ್ಣ ಭಾಗ ವಷ್ಟೇ. ಎಳ್ಳಿನ ಉಂಡೆ ಎಂದು ಮಾಡುತ್ತೇವೆಯಾದರೂ ಅವುಗಳನ್ನು ಹೆಚ್ಚು ಸೇವಿಸುವುದಿಲ್ಲ. ನವಗ್ರಹಗಳಿಗೆ ನೈವೇದ್ಯ ನೀಡುವ ನವ ಧಾನ್ಯಗಳಲ್ಲಿ ಎಳ್ಳು ಕೂಡ ಸೇರಿದೆ. ಇದರಿಂದ ತಯಾರಿಸುವ ಎಣ್ಣೆಯನ್ನು ಅಡಿಗೆಗೆ ಬಳಸುತ್ತೇವೆಯಾದರೂ ದೇವರಿಗೆ ಹಚ್ಚುವ ದೀಪಕ್ಕೆ ಶ್ರೇಷ್ಠವಾಗಿ ಬಳಸುತ್ತೇವೆ.
ಎಳ್ಳು ತಿನ್ನುವುದರಿಂದ ಉಷ್ಣತೆ ಹಾಗೂ ಪಿತ್ತ ದೇಹದಲ್ಲಿ ಹೆಚ್ಚಾಗುತ್ತದೆ. ಆದರೂ ಈ ಜನವರಿ ಕಾಲದಲ್ಲಿ ನಮ್ಮ ದೇಹಕ್ಕೆ ಎಳ್ಳು ಬೇಕಾಗಿದೆ. ಆದ್ದರಿಂದ ನಮ್ಮ ಪೂರ್ವಿಕರು ಎಳ್ಳನ್ನು ಬೆಲ್ಲದ ಜೊತೆ ಮಾಡಿ ಸೇವಿಸಲು ಹೇಳಿದರು. ಎಲ್ಲರಿಗೂ ತಿಳಿದಂತೆ ಬೆಲ್ಲ ಪಿತ್ತ ಶಮನಕಾರಿ.
ಬೆಲ್ಲದ ಪೋಷಕಾಂಶಗಳಲ್ಲಿ ಕೊರತೆಯೆ ಇಲ್ಲ. ಎಳ್ಳು ಹಾಗೂ ಬೆಲ್ಲ ಜೊತೆಗೂಡಿ ನಮಗೆ ಒಳ್ಳೆಯ ಪೋಷಕಾಂಶಗಳನ್ನು ನೀಡುತ್ತವೆ ಹಾಗೂ ಯಾವುದೇ ಹಾನಿಕಾರಕ ಪ್ರತಿಕ್ರಿಯೆಗಳನ್ನು ಉಂಟು ಮಾಡುವುದಿಲ್ಲ.
ಎಳ್ಳು ಬೆಲ್ಲಗಳ ಜೊತೆಯಲ್ಲಿ ಹುರಿದ ಕಡಲೆ ಬೀಜ, ಹುರಿಕಡಲೆ, ಒಣ ಕೊಬ್ಬರಿಯ ತುಂಡುಗಳನ್ನು ಸೇರಿಸಲಾಗುತ್ತದೆ. ಮನೆಯಲ್ಲಿ ಸುಲಭವಾಗಿ ತಯಾರಿಸಲ್ಪಡುವ ಎಳ್ಳು ಬೆಲ್ಲವನ್ನು ಸಕ್ಕರೆ ಅಚ್ಚು, ಕಬ್ಬಿನ ತುಂಡುಗಳೊಂದಿಗೆ ನೆಂಟರ, ಸ್ನೇಹಿತರ ಮನೆ ಮನೆಗೆ ಹೋಗಿ ಸಂಕ್ರಾಂತಿಯ ಶುಭಾಶಯ ಕೋರಿ ನೀಡಿ ಬರುವುದು ಕನ್ನಡಿಗರ ಸಂಪ್ರದಾಯ.



Click it and Unblock the Notifications


