Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಈ ಸಂಕ್ರಾಂತಿಗೆ ಎಳ್ಳು-ಬೆಲ್ಲ ಬೀರೋಣ ಒಳ್ಳೆಯ ಮಾತನಾಡೋಣ
ಎಳ್ಳು ಬೆಲ್ಲ ಬೀರುವುದು ಕನ್ನಡಿಗರು ಸಂಕ್ರಾಂತಿಯ ದಿನ ನಡೆಸಿಕೊಂಡು ಬರುತ್ತಿರುವ ಅರ್ಥಪೂರ್ಣ ಆಚರಣೆ. "ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡಿ" ಎಂದು ಹಿರಿಯರು ಸಂಕ್ರಾಂತಿಯ ದಿನ ತಪ್ಪದೆ ಹೇಳುತ್ತಿರುತ್ತಾರೆ.
ಸಂಕ್ರಾಂತಿ ಎನ್ನುವುದು ಸಮೃದ್ಧಿಯ ಸಂಕೇತ. ಈ ಹಬ್ಬವು ಪೌರಾಣಿಕವಾಗಿಯೂ, ಸೂರ್ಯನ ಪಥ ಬದಲಾವಣೆಯ ಗುರುತಿಗಾಗಿಗೂ, ನಮ್ಮ ಅನ್ನದಾತ ರೈತರ ಸುಗ್ಗಿ ಹಾಗೂ ಕೊಯ್ಲಿನ ಸಂಕೇತವಾಗಿಯೂ ಆಚರಿಸುತ್ತೇವೆ. ಎಳ್ಳು ಬೆಲ್ಲ ಸಂಕ್ರಾಂತಿಯ ಬಹು ಮುಖ್ಯ ಭಾಗ. ಎಳ್ಳು ಬೆಲ್ಲ ಬೀರುವುದು ಕನ್ನಡಿಗರು ಸಂಕ್ರಾಂತಿಯ ದಿನ ನಡೆಸಿಕೊಂಡು ಬರುತ್ತಿರುವ ಅರ್ಥಪೂರ್ಣ ಆಚರಣೆ. "ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡಿ" ಎಂದು ಹಿರಿಯರು ಸಂಕ್ರಾಂತಿಯ ದಿನ ತಪ್ಪದೆ ಹೇಳುತ್ತಿರುತ್ತಾರೆ. ಮಕರ ಸಂಕ್ರಾಂತಿಗೆ ಎಳ್ಳು, ಸಕ್ಕರೆ ಅಚ್ಚು, ಹುಗ್ಗಿ

ಏನಿದು ಎಳ್ಳು-ಬೆಲ್ಲ? ಏತಕ್ಕೆ ಇಷ್ಟು ಮುಖ್ಯ ಎಂಬೆಲ್ಲ ಪ್ರಶ್ನೆಗಳಿಗೆ ವಿವರಣೆ ಹೀಗಿದೆ. ಇದೆಲ್ಲ ಓದಿದ ನಂತರ ತಯಾರು ಮಾಡುವ ವಿಧಾನವನ್ನು ಸಹ ತಿಳಿಸಿದ್ದೇವೆ. ಎಳ್ಳಿನಲ್ಲಿ ವಿಟಮಿನ್ಸ್, ಮಿನರಲ್ಸ್, ಕಾಪರ್, ಮ್ಯಾಂಗನೀಸ್, ಜಿಂಕ್, ಫೈಬೆರ್ ಹೀಗೆ ನಮ್ಮ ದೇಹಕ್ಕೆ ಬೇಕಾದ ಅನೇಕಾನೇಕ ಪೋಷಕಾಂಶಗಳು ಇವೆ. ಎಳ್ಳು ಶರೀರಕ್ಕೆ ಉಷ್ಣತೆಯನ್ನು ನೀಡುತ್ತದೆ. ಎಳ್ಳನ್ನು ನಾವು ಸಾಮಾನ್ಯವಾಗಿ ಮುಖ್ಯ ಪದಾರ್ಥವಾಗಿ ಯಾವ ಅಡುಗೆಯಲ್ಲೂ ಬಳಸುವುದಿಲ್ಲ. ಸ್ನೇಹ, ಪ್ರೀತಿಯ ಸಂಕೇತ ಪೊಂಗಲ್ ಹಬ್ಬದ ವೈಶಿಷ್ಟ್ಯ
ಅದೇನಿದ್ದರೂ ಇತರೆ ಆಹಾರ ಅಥವಾ ಸಿಹಿ ತಿಂಡಿಗಳಲ್ಲಿ ಒಂದು ಸಣ್ಣ ಭಾಗ ವಷ್ಟೇ. ಎಳ್ಳಿನ ಉಂಡೆ ಎಂದು ಮಾಡುತ್ತೇವೆಯಾದರೂ ಅವುಗಳನ್ನು ಹೆಚ್ಚು ಸೇವಿಸುವುದಿಲ್ಲ. ನವಗ್ರಹಗಳಿಗೆ ನೈವೇದ್ಯ ನೀಡುವ ನವ ಧಾನ್ಯಗಳಲ್ಲಿ ಎಳ್ಳು ಕೂಡ ಸೇರಿದೆ. ಇದರಿಂದ ತಯಾರಿಸುವ ಎಣ್ಣೆಯನ್ನು ಅಡಿಗೆಗೆ ಬಳಸುತ್ತೇವೆಯಾದರೂ ದೇವರಿಗೆ ಹಚ್ಚುವ ದೀಪಕ್ಕೆ ಶ್ರೇಷ್ಠವಾಗಿ ಬಳಸುತ್ತೇವೆ.
ಎಳ್ಳು ತಿನ್ನುವುದರಿಂದ ಉಷ್ಣತೆ ಹಾಗೂ ಪಿತ್ತ ದೇಹದಲ್ಲಿ ಹೆಚ್ಚಾಗುತ್ತದೆ. ಆದರೂ ಈ ಜನವರಿ ಕಾಲದಲ್ಲಿ ನಮ್ಮ ದೇಹಕ್ಕೆ ಎಳ್ಳು ಬೇಕಾಗಿದೆ. ಆದ್ದರಿಂದ ನಮ್ಮ ಪೂರ್ವಿಕರು ಎಳ್ಳನ್ನು ಬೆಲ್ಲದ ಜೊತೆ ಮಾಡಿ ಸೇವಿಸಲು ಹೇಳಿದರು. ಎಲ್ಲರಿಗೂ ತಿಳಿದಂತೆ ಬೆಲ್ಲ ಪಿತ್ತ ಶಮನಕಾರಿ.
ಬೆಲ್ಲದ ಪೋಷಕಾಂಶಗಳಲ್ಲಿ ಕೊರತೆಯೆ ಇಲ್ಲ. ಎಳ್ಳು ಹಾಗೂ ಬೆಲ್ಲ ಜೊತೆಗೂಡಿ ನಮಗೆ ಒಳ್ಳೆಯ ಪೋಷಕಾಂಶಗಳನ್ನು ನೀಡುತ್ತವೆ ಹಾಗೂ ಯಾವುದೇ ಹಾನಿಕಾರಕ ಪ್ರತಿಕ್ರಿಯೆಗಳನ್ನು ಉಂಟು ಮಾಡುವುದಿಲ್ಲ.
ಎಳ್ಳು ಬೆಲ್ಲಗಳ ಜೊತೆಯಲ್ಲಿ ಹುರಿದ ಕಡಲೆ ಬೀಜ, ಹುರಿಕಡಲೆ, ಒಣ ಕೊಬ್ಬರಿಯ ತುಂಡುಗಳನ್ನು ಸೇರಿಸಲಾಗುತ್ತದೆ. ಮನೆಯಲ್ಲಿ ಸುಲಭವಾಗಿ ತಯಾರಿಸಲ್ಪಡುವ ಎಳ್ಳು ಬೆಲ್ಲವನ್ನು ಸಕ್ಕರೆ ಅಚ್ಚು, ಕಬ್ಬಿನ ತುಂಡುಗಳೊಂದಿಗೆ ನೆಂಟರ, ಸ್ನೇಹಿತರ ಮನೆ ಮನೆಗೆ ಹೋಗಿ ಸಂಕ್ರಾಂತಿಯ ಶುಭಾಶಯ ಕೋರಿ ನೀಡಿ ಬರುವುದು ಕನ್ನಡಿಗರ ಸಂಪ್ರದಾಯ.



Click it and Unblock the Notifications



