Latest Updates
-
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ಗಂಗಾ ಸಪ್ತಮಿ 2022: ಗಂಗಾ ಸ್ನಾನದ ಪುಣ್ಯಕ್ಕಾಗಿ ಈ ಮಂತ್ರಗಳನ್ನು ತಪ್ಪದೇ ಪಠಿಸಿ
ವೈಶಾಖ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯನ್ನು ಗಂಗಾ ಜಯಂತಿ ಮತ್ತು ಗಂಗಾ ಸಪ್ತಮಿ ಎಂದು ಕರೆಯಲಾಗುತ್ತದೆ. ಗಂಗಾ ಸಪ್ತಮಿಯನ್ನು ಗಂಗೆಯ ಪುನರ್ಜನ್ಮ ಎಂದೂ ಕರೆಯುತ್ತಾರೆ. ಈ ದಿನಕ್ಕೆ ಹಿಂದೂ ಧರ್ಮದಲ್ಲಿ ಬಹಳ ವಿಶೇಷವಾದ ಮಹತ್ವವಿದೆ. ಗಂಗಾ ಸಪ್ತಮಿಯ ದಿನದಂದು ಗಂಗಾಮಾತೆಯ ಕೆಲವು ಮಂತ್ರಗಳನ್ನು ಜಪಿಸಿದರೆ ಭಕ್ತರಿಗೆ ಗಂಗಾಸ್ನಾನ ಮಾಡಿದ ಪುಣ್ಯ ಲಭಿಸುತ್ತದೆ. ಹಾಗಾದರೆ, ಯಾವ ಮಂತ್ರಗಳನ್ನು ಪಠಿಸುವ ಮೂಲಕ ಗಂಗಾ ಮಾತೆಯನ್ನು ಮೆಚ್ಚಿಸಬಹುದು ಮತ್ತು ಪುಣ್ಯವನ್ನು ಪಡೆಯಬಹುದು ಎಂಬುದನ್ನು ಇಲ್ಲಿ ನೋಡೋಣ.
ಗಂಗಾ ಮಂತ್ರದ ಅರ್ಥ ಹಾಗೂ ಮಹತ್ವದ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಗಂಗಾ ಸಪ್ತಮಿ ತಿಥಿ :
ಸಪ್ತಮಿ ದಿನಾಂಕ ಪ್ರಾರಂಭ- 07 ಮೇ 2022, ಬೆಳಿಗ್ಗೆ 05:26 ರಿಂದ
ಸಪ್ತಮಿ ದಿನಾಂಕ ಅಂತ್ಯ - 08 ಮೇ 2022, 07:30 ರವರೆಗೆ

ಗಂಗಾ ಸಪ್ತಮಿ 2022 ಶುಭ ಮುಹೂರ್ತ :
ಗಂಗಾ ಸಪ್ತಮಿ - 7 ನೇ ಮೇ 2022, ಶನಿವಾರ
ಗಂಗಾ ಸಪ್ತಮಿ ಮಧ್ಯಾಹ್ನ ಮುಹೂರ್ತ - 11:28 ರಿಂದ 02:18 ರವರೆಗೆ (ಅವಧಿ - 02 ಗಂಟೆ 50 ನಿಮಿಷಗಳು)

ಗಂಗಾ ಸಪ್ತಮಿಯಂದು ಪಠಿಸಬೇಕಾದ ಮಂತ್ರಗಳು ಹಾಗೂ ಅದರ ಅರ್ಥ:
ಗಂಗಾ ಸಪ್ತಮಿಯ ದಿನದಂದು ಗಂಗಾಮಾತೆಯ ಕೆಲವು ಮಂತ್ರಗಳನ್ನು ಜಪಿಸಿದರೆ ಭಕ್ತರಿಗೆ ಗಂಗಾಸ್ನಾನ ಮಾಡಿದ ಪುಣ್ಯ ಲಭಿಸುತ್ತದೆ. ಅಂತಹ ಮಂತ್ರಗಳಾವುವು ಇಲ್ಲಿದೆ ನೋಡಿ:

1. ಗಂಗೆಯಲ್ಲಿ ಸ್ನಾನ ಮಾಡುವ ಮೊದಲು ಈ ಮಂತ್ರವನ್ನು ಪಠಿಸಿ:
''ಗಂಗಾ ಚ ಯಮುನಾ ಚೈವ ಗೋದಾವರಿ ಸರಸ್ವತಿ
ನರ್ಮದೇ ಸಿಂಧು ಕಾವೇರಿ ಜಲೇ ಅಸ್ಮಿನ್ ಸನ್ನಿಧಿಂ ಕುರು''
ಅರ್ಥ: ಓ ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧೂ, ಕಾವೇರಿ! (ನೀವೆಲ್ಲರೂ) ಈ ನೀರಿನಲ್ಲಿ (ನನ್ನ ಸ್ನಾನ ಮಾಡಿಸಲು) ಬನ್ನಿ ಎಂಬುದಾಗಿದೆ.

2. ಗಂಗಾ ಸಪ್ತಮಿಯ ಪೂಜೆಯ ಸಮಯದಲ್ಲಿ ಈ ಮಂತ್ರ ಪಠಿಸಿ:
''ಓಂ ನಮೋ ಗಂಗಾಯೈ ವಿಶ್ವರೂಪಿಣಾಯೈ ನಾರಾಯಣಾಯೈ ನಮೋ ನಮಃ''
ಅರ್ಥ: ಗಂಗಾ ಮಾತೆ ನೀನು ವಿಶ್ವರೂಪಿಣಿ, ನೀನು ನರನಾರಾಯಣ ರೂಪಿ, ಗಂಗಾಮಯಿ, ನಿನಗೆ ನಮಸ್ಕಾರಗಳು ಎಂಬುದಾಗಿದೆ.
ಗಂಗಾ ಸಪ್ತಮಿಯ ದಿನದಂದು ಪೂಜೆಯ ಸಮಯದಲ್ಲಿ ನೀವು ಈ ಪವಿತ್ರ ಮಂತ್ರವನ್ನು ಜಪಿಸಬೇಕು. ಈ ಮಂತ್ರವನ್ನು ಪ್ರತಿದಿನವೂ ಜಪಿಸಬಹುದು.
''ಗಂಗಾಂ ವಾರಿ ಮನೋಹರಿ ಮುರಾರಿಚರಂಚುತಮ್
ತ್ರಿಪುರಾಋಷಿರ್ಶ್ಚರೀ ಪಾಪಹಾರೀ ಪುನತು ಮಾತಾ''
ಅರ್ಥ: ಸುಂದರವಾಗಿರುವ, ವಿಷ್ಣುವಿನ ಪಾದಗಳಿಂದ ಹುಟ್ಟಿದ, ತ್ರಿಪುರಾರಿಯ ತಲೆಯ ಮೇಲೆ ಕುಳಿತಿರುವ, ಪಾಪ ವಿನಾಶಿನಿ, ಓ ತಾಯಿಯೇ, ನನ್ನನ್ನು ಶುದ್ಧಿಸು ಎಂಬುದಾಗಿದೆ.

3. ಗಂಗೆಯಲ್ಲಿ ಸ್ನಾನ ಮಾಡಲಾಗದಿದ್ದರೆ ಹೀಗೆ ಮಾಡಿ:
ಗಂಗಾ ಸಪ್ತಮಿಯ ಪವಿತ್ರ ದಿನದಂದು ನಿಮಗೆ ಗಂಗಾ ನದಿಯಲ್ಲಿ ಸ್ನಾನ ಮಾಡಲು ಸಾಧ್ಯವಾಗದಿದ್ದರೆ, ಮನೆಯಲ್ಲೇ ಸ್ನಾನ ಮಾಡುವ ನೀರಿಗೆ ಗಂಗಾ ಜಲವನ್ನು ಬೆರೆಸಿ ಸ್ನಾನ ಮಾಡಬಹುದು. ಈ ದಿನ ಸ್ನಾನ ಮಾಡುವಾಗ "ಓಂ ನಮೋ ಗಂಗಾಯೈ ವಿಶ್ವರೂಪಿಣ್ಯೈ ನಾರಾಯಣ್ಯೈ ನಮೋ ನಮಃ" ಎನ್ನುವ ಮಂತ್ರವನ್ನು ಪಠಿಸುತ್ತಾ ಸ್ನಾನ ಮಾಡಿ. ಮನೆಯಲ್ಲಿ ಗಂಗಾ ಸ್ನಾನ ಮಾಡಿದ ನಂತರ, ಈ ಕೆಳಗಿನ ಮಂತ್ರವನ್ನು ಪಠಿಸುತ್ತಾ ಗಂಗಾ ಮಾತೆಯ ಚಿತ್ರವನ್ನು ಪೂಜಿಸಿ.
''ನಮಾಮಿ ಗಂಗೇ ತವ ಪಾದ ಪಂಕಜಂ ಸುರಾಸುರೈವೃಂದಿತ ದಿವ್ಯ ರೂಪಂ
ಭುಕ್ತಿ ಚ ಚ ಮುಕ್ತಿ ಚ ದದಾಸಿ ನಿತ್ಯಂ ಭಾವಾನುಸಾರೇಣ ಸದಾನಾರಾಯಣಂ''
''ಗಂಗಾ ಗಂಗಾ ಗಂಗೇತಿ ಯೋ ಬ್ರೂಯಾತ್ ಯೋಜನಾನಾಂ ಶತೈರಪಿ
ಮುಚ್ಯತೇ ಸರ್ವಪಾಪೇಭ್ಯೋ ವಿಷ್ಣುಲೋಕಂ ಸ ಗಚ್ಛತಿ''
ಅರ್ಥ: ಗಂಗೆಯನ್ನು ನೂರು ಕಿ.ಮೀ ದೂರ ನಿಂತು ಸ್ಮರಿಸುವವನು ಸಹ ತನ್ನ ಪಾಪಗಳೆಲ್ಲವನ್ನು ಕಳೆದು, ವಿಷ್ಣುವಿನ ಅಂದರೆ ಸ್ವರ್ಗಕ್ಕೆ ತೆರಳುತ್ತಾರೆ. ಇದರರ್ಥ ನೀವು ಗಂಗೆಯಿರುವ ಜಾಗಕ್ಕೆ ಹೋಗಿ, ಪೂಜೆ-ಪಠಣೆ ಮಾಡಬೇಕೆಂದಿಲ್ಲ. ಎಲ್ಲಿದ್ದೀರೋ ಅಲ್ಲಿಂದಲೇ ಶ್ರದ್ಧೆಯಿಂದ ಮಂತ್ರವನ್ನು ಪಠಿಸಿದರೆ, ಗಂಗಾಮಾತೆ ನಿಮ್ಮೆಲ್ಲ ಪಾಪಗಳನ್ನು ಕಳೆಯುತ್ತಾಳೆ ಎಂಬುದಾಗಿದೆ.



Click it and Unblock the Notifications