Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಗಣೇಶ ಚತುರ್ಥಿ 2022: ಗಣೇಶನನ್ನು ಪ್ರತಿಷ್ಠಾಪಿಸಿದ ನಂತರ ಮಾಡಲೇಬಾರದ ಕೆಲಸಗಳಿವು
ವಿದ್ಯೆ, ಜ್ಞಾನ, ಸಂಕಷ್ಟಹರ ನಿವಾರಕ ಗಣೇಶನ್ನು ಪೂಜಿಸುವುದರಿಂದ ನಮ್ಮ ಜೀವನದಲ್ಲಿ ಕಷ್ಟ, ನೋವುಗಳು ಪರಿಹಾರವಾಗುತ್ತದೆ, ಜ್ಞಾನ, ವಿದ್ಯೆಯಿಂದ ಆಶೀರ್ವದಿಸಲ್ಪಡುತ್ತೇವೆ ಎಂದು ನಂಬಲಾಗಿದೆ.
ಮೋದಕ ಪ್ರಿಯ ಗಣೇಶನ ಹಬ್ಬವನ್ನು 2022ನೇ ಸಾಲಿನಲ್ಲಿ ಆಗಸ್ಟ್ 31ರಂದು ಆಚರಿಸಲಾಗುತ್ತಿದೆ. ಗಣೇಶನನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ಇಷ್ಟವಾದ ಬಗೆ ಬಗೆಯ ತಿಂಡಿ, ಫಲಪುಷ್ಪಗಳನ್ನು ಅರ್ಪಿಸಿ ಪೂಜಿಸುತ್ತೇವೆ.
ವಿನಾಯಕನ ಪೂಜೆಯ ವೇಳೆ ನಾವು ಮಾಡಲೇಬಾರದ ತಪ್ಪುಗಳು, ಪಾಲಿಸಲೇಬೇಕಾದ ನಿಯಮಗಳು ಹಾಗೂ ಗಣೇಶನನ್ನು ಎಷ್ಟು ದಿನ ಪ್ರತಿಷ್ಠಾಪಿಸಬೇಕು ಎಂಬ ವಿವರಗಳನ್ನು ನಾವಿಂದು ನಿಮಗೆ ನೀಡಲಿದ್ದೇವೆ:

ಗಣಪತಿ ಸ್ಥಾಪನೆಯನ್ನು ಮಾಡಿದ ನಂತರ ಭಕ್ತರು ಈ ಕೆಳಗಿನ ನಿಯಮಗಳನ್ನು ಪಾಲಿಸಬೇಕು:
* ಭಕ್ತರು ಗಣೇಶನನ್ನು 1.5 ದಿನ, 3 ದಿನ, 7 ದಿನ ಅಥವಾ 10 ದಿನ ಮನೆಯಲ್ಲಿ ಪ್ರತಿಷ್ಠಾಪಿಸಬಹುದು.
* ಭಕ್ತರು ಮತ್ತು ಅವರ ಕುಟುಂಬ ಸದಸ್ಯರು ಹಬ್ಬದ ಸಮಯದಲ್ಲಿ ಗಣಪತಿ ಪ್ರತಿಷ್ಠಾಪನೆಯ ನಂತರ ಬೆಳ್ಳುಳ್ಳಿ ಮತ್ತು ಈರುಳ್ಳಿ ಸೇವಿಸುವುದನ್ನು ತಪ್ಪಿಸಬೇಕು.

ಗಣೇಶನ್ನು ಮನೆಯಲ್ಲಿ ಎಷ್ಟು ದಿನ ಪ್ರತಿಷ್ಠಾಪಿಸಬೇಕು
* ಹಬ್ಬದ ಸಮಯದಲ್ಲಿ ಗಣೇಶ ದೇವರು ನಿಮ್ಮ ಮನೆಗೆ ಅತಿಥಿಯಾಗಿದ್ದಾನೆ. ಆದ್ದರಿಂದ, ಎಲ್ಲವೂ- ಅಂದರೆ ಆಹಾರ, ನೀರು ಅಥವಾ ಪ್ರಸಾದವಾಗಿರಲಿ- ಮೊದಲು ಗಣಪತಿಗೆ ಮೊದಲು ಅರ್ಪಿಸಬೇಕು.
* ಹಳೆಯ ಗಣಪತಿಯ ಮೂರ್ತಿಯನ್ನು ಈ ವರ್ಷ ಪೂಜಿಸುವುದು ಅಥವಾ ಎರಡು ಗಣಪತಿ ಮೂರ್ತಿಯನ್ನು ಮನಯಲ್ಲಿಟ್ಟು ಪೂಜೆ ಮಾಡುವುದು ನಿಷಿದ್ಧ.

ಗಣೇಶನ್ನು ಮನೆಯಲ್ಲಿ ಎಷ್ಟು ದಿನ ಪ್ರತಿಷ್ಠಾಪಿಸಬೇಕು
* ಗಣೇಶನನ್ನು ಎಂದಿಗೂ ಒಂಟಿಯಾಗಿ ಅಥವಾ ಗಮನಿಸದೆ ಬಿಡಬಾರದು ಎಂದು ಗಮನಿಸಬೇಕು. ಅವನೊಂದಿಗೆ ಕುಟುಂಬದ ಸದಸ್ಯರು ಸದಾ ಇರಲೇಬೇಕು.
* ಗಣಪತಿ ಪೂಜೆಯ ಸ್ಥಳವನ್ನುಹೆಚ್ಚು ಬೆಳಕಿನಲ್ಲಿಡಿ. ಕತ್ತಲೆಯಲ್ಲಿ ಗಣಪತಿಯನ್ನು ನೋಡುವುದು ಅಶುಭ.

ಗಣೇಶನ್ನು ಮನೆಯಲ್ಲಿ ಎಷ್ಟು ದಿನ ಪ್ರತಿಷ್ಠಾಪಿಸಬೇಕು
* ಈ ಸಮಯದಲ್ಲಿ, ಭಕ್ತರು ಮನೆಯ ಒಳಗೆ ಅಥವಾ ಹೊರಗೆ ಜೂಜನ್ನು ತಪ್ಪಿಸಬೇಕು.
* ಮಾಂಸ ಮತ್ತು ಆಲ್ಕೋಹಾಲ್ ಸೇವಿಸುವುದನ್ನು ಸಹ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
* ಗಣೇಶನಿಗೆ ತುಳಸಿಯನ್ನು ಅರ್ಪಿಸಬೇಡಿ, ವಿನಾಯಕನು ಕೋಪಗೊಳ್ಳಬಹುದು.
* ಗಣೇಶನಿಂದ ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ನೀಡುವಾತ, ಆದ್ದರಿಂದ ಕದಿಯಬಾರದು ಅಥವಾ ಮೋಸ ಮಾಡಬಾರದು.

ಗಣೇಶನ್ನು ಮನೆಯಲ್ಲಿ ಎಷ್ಟು ದಿನ ಪ್ರತಿಷ್ಠಾಪಿಸಬೇಕು
* ನಕಾರಾತ್ಮಕ ಆಲೋಚನೆಗಳನ್ನು ತಪ್ಪಿಸಿ. ಗಣೇಶನನ್ನು ಮನೆಯಲ್ಲಿಟ್ಟು ಜಗಳವಾಡಬಾರದು ಅಥವಾ ಅಸಭ್ಯ ಭಾಷೆಯನ್ನು ಬಳಸಬಾರದು. * ಕಷ್ಟದ ಸಂದರ್ಭಗಳಲ್ಲಿ ಶಾಂತವಾಗಿರಲು ಪ್ರಯತ್ನಿಸಿ, ಏಕೆಂದರೆ ಗಣೇಶನು ನಿಮ್ಮನ್ನು ಮತ್ತು ನಿಮ್ಮ ತೊಂದರೆಗಳನ್ನು ನೋಡಿಕೊಳ್ಳುತ್ತಾನೆ.
* ಚಂದ್ರನನ್ನು ಯಾವುದೇ ಕಾರಣಕ್ಕೂ ನೋಡವುದನ್ನು ತಪ್ಪಿಸಿ. ಆಕಸ್ಮಿಕವಾಗಿ ಚಂದ್ರನನ್ನು ನೋಡಿದರೆ ಕೂಡಲೇ ನೆಲದಿಂದ ಕಲ್ಲಿನ ತುಂಡನ್ನು ತೆಗೆದುಕೊಂಡು ಅದನ್ನು ಹಿಂದಕ್ಕೆ ಎಸೆಯಿರಿ ಇದೊಂದು ರೀತಿಯ ಪರಿಹಾರವಾಗಿದೆ.
* ಗಣೇಶನ ಪೂಜೆಯ ವೇಳೆ ನೀಲಿ ಮತ್ತು ಕಪ್ಪು ಬಟ್ಟೆಗಳನ್ನು ಧರಿಸಬಾರದು. ಆದಷ್ಟು ಚತುರ್ಥಿಯಂದು ಕೆಂಪು ಮತ್ತು ಹಳದಿ ಬಟ್ಟೆಗಳನ್ನು ಧರಿಸುವುದು ಉತ್ತಮ.



Click it and Unblock the Notifications











