Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ದೇವರಿಗೆ ಬಳಸುವ ಹೂವಿನ ಪರಿಮಳ ಗ್ರಹಿಸಲೇಬಾರದು ಏಕೆ?
ಹಿಂದೂ ಧರ್ಮದಲ್ಲಿ ಪೂಜೆಗೆ ತುಂಬಾ ಮಹತ್ವವಿದೆ. ಬೆಳಗ್ಗೆ ಮತ್ತು ಸಂಜೆ ದೀಪ ಬೆಳಗಿದರೆ ಆ ಮನೆಗೆ ಒಂದು ಶುಭ. ಇನ್ನು ದೇವರ ಪೂಜೆಯಲ್ಲಿ ಬತ್ತಿ ಹಾಗೂ ಎಣ್ಣೆ ಎಷ್ಟು ಮುಖ್ಯವೋ, ಹೂ ಕೂಡ ಅಷ್ಟೇ ಮುಖ್ಯ. ಆದ್ದರಿಂದ ದೇವರ ಪೂಜೆಗೆ ಹೂ ಇರಲೇಬೇಕು.
ಹೂವನ್ನು ಪೂಜೆಗೆ ಬಳಸಿದರೆ ಅದರಿಂದ ದೇವರು ಖುಷಿಯಾಗುತ್ತಾರೆ ಎಂಬ ನಂಬಿಕೆ ಇದೆ. ಅಲ್ಲದೆ ಅದರ ಪರಿಮಳ ಆ ವಾತಾವರಣದ ಸುತ್ತ ಹರಡಿ ಮನಸ್ಸಿಗೆ ಆಹ್ಲಾದಕರ ಉಂಟಾಗುತ್ತದೆ. ಸುಗಂಧಿತ ಶಕ್ತಿಗಳು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.
ಈ ಲೇಖನದಲ್ಲಿ ದೇವರ ಪೂಜೆಗೆ ಹೂ ಬಳಸುವುದರ ಉದ್ದೇಶ ಹಾಗೂ ಅದನ್ನು ಹೇಗೆ ಬಳಸಬೇಕು, ದೇವರಿಗೆ ಬಳಸಿದ ಹೂವಿನ ವಾಸನೆ ಏಕೆ ಗ್ರಹಿಸಬಾರದು ಎಂಬ ಮಾಹಿತಿ ನೀಡಿದ್ದೇವೆ ನೋಡಿ:

ದೇವರ ಪೂಜೆಯಲ್ಲಿ ಹೂ ಬಳಸಲೇಬೇಕು ಏಕೆ?
ಹೂಗಳು ದೈವ ಶಕ್ತಿಯನ್ನು ಆಕರ್ಷಿಸುತ್ತದೆ ಎಂಬ ನಂಬಿಕೆ ಇದೆ. ಹೂಗಳನ್ನು ಬಳಸುವುದರಿಂದ ಆ ಸ್ಥಳ ಸುಂದರವಾಗಿ ಕಾಣುವುದರ ಜೊತೆಗೆ ಆ ಸ್ಥಳದಲ್ಲಿ ಸುವಾಸನೆ ಇರುತ್ತದೆ. ಈ ಮರಿಮಳ ಮನಸ್ಸಿನ ಏಕಾಗ್ರತೆ ಹೆಚ್ಚಲು ಸಹಕಾರಿ. ಪೂಜೆ ಮಾಡುವಾಗ ಮನಸ್ಸು ಏಕಾಗ್ರತೆಯಿಂದ ಇರಬೇಕು, ಮನಸ್ಸಿನಲ್ಲಿ ಪ್ರಶಾಂತತೆ ಇರಬೇಕು. ಹೂ ಬಳಸಿದರೆ ಅದರ ಸುವಾಸನೆ ಅಲ್ಲೆಲ್ಲ ಹರಡಿ ಆ ಪರಿಸರ ಆಹ್ಲಾದಕರವಾಗಿರುತ್ತದೆ, ಮನಸ್ಸಿನಲ್ಲಿ ದೈವ ಭಕ್ತಿ ಹೆಚ್ಚುವುದು.

ದೇವರಿಗೆ ಬಳಸುವ ಹೂ ಹೇಗಿರಬೇಕು?
ದೇವರಿಗೆ ಬಳಸುವ ಹೂಗಳಿಗೆ ತೊಟ್ಟು ಇರಬೇಕು. ತೊಟ್ಟು ಕಿತ್ತರೆ ಹೂಗಳ ಎಸಳುಗಳು ಉದುರುವುದು ಹಾಗೂ ಹೂಗಳಲ್ಲಿ ಚೈತನ್ಯ ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆ ಕಡಿಮೆಯಾಗುವುದು. ಆದ್ದರಿಂದ ತೊಟ್ಟು ಸಹಿತ ಹೂ ಸರ್ಪಿಸಬೇಕು.

ಗೊರಟೆ, ನಂದಿಬಟ್ಟಲ ಹೂಗಳನ್ನು ಅರ್ಪಿಸುವಾಗ ಇದನ್ನು ಗಮನಿಸಿ
ಇನ್ನು ಗೋರಂಟೆ (ಗೊರಟೆ, ಗೊರಟಿಗೆ) ನಂದಿಬಟ್ಟಲು ಇಂಥ ಹೂವುಗಳಿಗೆತೊಟ್ಟಲ್ಲದೇ ಒಂದು ಸಣ್ಣ ಹಸಿರು ಭಾಗವು ತೊಟ್ಟಿನ ಕೆಳಗೆ ಜೋಡಿಸಿರುತ್ತದೆ. ಆ ತುಂಬನ್ನು ಅವಶ್ಯವಾಗಿ ತೆಗೆಯಬೇಕು. ಏಕೆಂದರೆ ಈ ತುಂಬುಗಳು ತೊಟ್ಟಿನ ಕಡೆಗೆ ಸಂಕ್ರಮಿತವಾಗುವ ದೇವತೆಯ ಚೈತನ್ಯಕ್ಕೆ ಅಡಚಣೆಯನ್ನುಂಟು ಮಾಡುತ್ತವೆ ಎಂದು ಹೇಳಲಾಗುವುದು. ಈ ತುಂಬುಗಳನ್ನು ತೆಗೆಯದೇ ಇದ್ದರೆ ಇದರ ಜಡತ್ವ ಗುಣದಿಂದ ಚೈತನ್ಯ ಪ್ರವಹಿಸುವ ಕ್ಷಮತೆಯು ಅತ್ಯಂತ ಕಡಿಮೆಯಿರುತ್ತದೆ. ಈ ತುಂಬುಗಳನ್ನು ತೆಗೆಯದೇ ಹೂವುಗಳ ತೊಟ್ಟಿನ ಜೊತೆಗೆ ಹಾಗೇ ಬಿಟ್ಟರೆ ದೈವತ್ವವನ್ನು ಆಕರ್ಷಿಸುವ ಕ್ಷಮತೆ ಕಡಿಮೆಯಾಗುವುದು. ಇದರಿಂದಾಗಿ ಪೂಜಿಸುವವನಿಗೆ ಅಪೇಕ್ಷಿತ ಫಲ ಸಿಗಲ್ಲ. ಆದ್ದರಿಂದ ತೊಟ್ಟಿನ ಕೆಳಗಿರುವ ತುಂಬು ತೆಗೆದೇ ದೇವರಿಗೆ ಹೂ ಅರ್ಪಿಸಬೇಕು.

ದೇವರಿಗೆ ಅರ್ಪಿಸುವ ಹೂವಿನ ವಾಸನೆ ಗ್ರಹಿಸಬಾರದು ಏಕೆ?
ಹೂಗಳಿಗೆ ದೈವತ್ವನ್ನು ಆಕರ್ಷಿಸುವ ಹಾಗೂ ಪ್ರಕ್ಷೇಪಿಸುವ ಕ್ಷಮತೆ ಇರುತ್ತದೆ. ಮನುಷ್ಯರು ಹೂವಿನ ಪರಿಮಳ ತೆಗೆದುಕೊಂಡಾಗ ಜೀವದ ಗಂಧರೂಪದ ವಾಸನೆಗೆ ಸಂಬಂಧಿಸಿದ ಇಚ್ಛಾಶಕ್ತಿಯು ಉಚ್ಛ್ವಾಸದೊಂದಿಗೆ ಹೂವಿನ ಸೂಕ್ಷ್ಮ-ಕಕ್ಷೆಯಲ್ಲಿ ಪ್ರವೇಶಿಸುವುದರಿಂದ ಹೂವಿಗೆ ದೈವತ್ವವನ್ನು ಆಕರ್ಷಿಸುವವ ಕಾರ್ಯಕ್ಷಮತೆಯು ಕಡಿಮೆಯಾಗುತ್ತದೆ. ನಾವು ಹೂವಿನ ವಾಸನೆ ಗ್ರಹಿಸಿದರೆ ನೈಸರ್ಗಿಕವಾಗಿ ಅದರ ಸತ್ತ್ವವೂ ಕಡಿಮೆಯಾಗುವುದು.
ಸತ್ತ್ವ ಕಡಿಮೆಯಾದ ಹೂವನ್ನು ದೇವರಿಗೆ ಅರ್ಪಿಸುವುದರಿಂದ ಮೂರ್ತಿಯು ರಜ-ತಮದಿಂದ ತುಂಬಿಕೊಳ್ಳುವ ಸಾಧ್ಯತೆಯಿರುತ್ತದೆ. ಇದರಿಂದ ಮೂರ್ತಿಯಿಂದ ಬರುವ ಧನಾತ್ಮಕ ಶಕ್ತಿ ಹಾಗೂ ಚೈತನ್ಯಕಣಗಳ ಪ್ರಕ್ಷೇಪಣೆಗೆ ಅಡಚಣೆಯಾಗುತ್ತದೆ. ಇದರ ಪರಿಣಾಮದಿಂದ (ಸಮಷ್ಟಿಯಲ್ಲಿ) ಚೈತನ್ಯವು ಕಡಿಮೆ ಪ್ರಕ್ಷೇಪಣೆಯಾಗುತ್ತದೆ. ಇದೇ ಕಾರಣದಿಂದ ದೇವತೆಗಳಿಗೆ ಅರ್ಪಿಸುವ ಹೂವುಗಳ ಪರಿಮಳ ತೆಗೆದುಕೊಳ್ಳುವುದು ಒಂದು ರೀತಿಯಲ್ಲಿ ಅಪರಾಧವಾಗಿದೆ.



Click it and Unblock the Notifications











