Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಶಂಖಚಕ್ರಧಾರಿ ತಿಮ್ಮಪ್ಪನಿಗೆ ಚಿನ್ನದ ಶಂಖ ಕಾಣಿಕೆ ನೀಡಿದ ನಾರಾಯಣ ಮೂರ್ತಿ ದಂಪತಿ: ಹಿಂದೂ ಧರ್ಮದಲ್ಲಿ ಶಂಖದ ಮಹತ್ವ
ಶಂಖಚಕ್ರಧಾರಿ ತಿಮ್ಮಪ್ಪನಿಗೆ ಇನ್ಫೋಸಿಸ್ ಸಂಸ್ಥೆ ಮುಖ್ಯಸ್ಥರಾದ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ತಿರುಪತಿ ತಿಮ್ಮಪ್ಪನಿಗೆ ಚಿನ್ನದ ಶಂಖವನ್ನು ಅರ್ಪಿಸಿದ್ದಾರೆ. ತಿರುಪತಿ ತಿಮ್ಮಪ್ಪನಿಗೆ ಚಿನ್ನದ ಶಂಖ, ಆಮೆ ವಿಗ್ರಹವನ್ನು ಕಾಣಿಕೆಯಾಗಿ ನೀಡಿದ್ದಾರೆ.
ನಾರಾಯಣ ಮೂರ್ತಿ, ಸುಧಾಮೂರ್ತಿ ದಾಂಪತ್ಯ ಜೀವನಕ್ಕೆ ಈಗ ನಲವತ್ತೈದು ವರ್ಷ
ನಾರಾಣಯಣ ಮೂರ್ತಿ, ಸುಧಾಮೂರ್ತಿ ನಮ್ಮ ಜೀವನದ ಪ್ರತಿಯೊಂದು ಸ್ತರಗಳಲ್ಲಿ ನಮಗೆ ಮಾದರಿಯಾಗಿದ್ದಾರೆ. ಉದ್ಯಮಿಯಾಗಿ ಮಾತ್ರವಲ್ಲ, ಆದರ್ಶ ದಂಪತಿಯಾಗಿ, ಆದರ್ಶ ಪೋಷಕರಾಗಿ, ಸನ್ನಡತೆಯಲ್ಲಿ, ಸರಳತೆಯಲ್ಲಿ ಹೀಗೆ ಪ್ರತಿಯೊಂದು ವಿಷಯದಲ್ಲೂ ಈ ದಂಪತಿ ಮಾದರಿಯಾಗಿದ್ದಾರೆ. ಇದೀಗ ಈ ದಂಪತಿಯ ದಾಂಪತ್ಯ ಜೀವನಕ್ಕೆ 45ನೇ ವರ್ಷ. ಹೀಗಾಗಿ ದಂಪತಿ ಜೋಡಿಯಾಗಿ ಬಂದು ತಿರುಪತಿ ತಿಮ್ಮಪ್ಪನಿಗೆ ಚಿನ್ನದ ಶಂಖ ಹಾಗೂ ಆಮೆಯನ್ನು ಕಾಣಿಕೆಯನ್ನಾಗಿ ಅರ್ಪಿಸಿದ್ದಾರೆ.

ಹಿಂದೂ ಧರ್ಮದಲ್ಲಿ ಶಂಖದ ಮಹತ್ವ
ಪೌರಾಣಿಕೆ ನಂಬಿಕೆ ಪ್ರಕಾರ ಸಮುದ್ರ ಮಂಥನ ಸಮಯದಲ್ಲಿ ಶಂಖ ಹುಟ್ಟಿಕೊಂಡಿತ್ತು ಎಂದು ಹೇಳಲಾಗಿದೆ. ಶಂಖದಲ್ಲಿ ಎರಡು ವಿಧಗಳಿಗೆ ಎಡಬದಿ ಹಿಡಿಕೆಯ ಶಂಖ, ಬಲ ಬದಿ ಹಿಡಿಕೆಯ ಶಂಖ. ಬಲಬದಿ ಹಿಡಿಕೆಯ ಶಂಖವನ್ನು ಶುಭ ಎಂದು ಪರಿಗಣಿಸಲಾಗಿದ್ದು ಇದನ್ನು ಲಕ್ಷ್ಮಿ ಶಂಖ ಎಂದು ಕೂಡ ಕರೆಯುತ್ತಾರೆ.
ಹಿಂದೂ ಧರ್ಮದಲ್ಲಿ ಶಂಖದ ಮಹತ್ವ
ಶ್ರೀವಿಷ್ಣುವಿನ ಪಂಚ ಆಯುಧಗಳಲ್ಲಿ ಶಂಖ ಕೂಡ ಒಂದು ಎಂದು ಪರಿಗಣಿಸಲಾಗಿದೆ. ವಿಷ್ಣುವಿನ ಶಂಖವನ್ನು ಪಂಚಜನ್ಯ ಎಂದು ಕರೆಯಲಾಗುವುದು. ಈ ಶಂಖವು ಪಂಚ ಧಾತುಗಳನ್ನು ಹೊಂದಿದೆ. ಇದರಲ್ಲಿ ನೀರು, ಬೆಂಕಿ, ಭೂಮಿ, ಆಕಾಶ, ವಾಯು ಅಂಶಗಳಿದೆ.
ಶಂಖ ಸಂಪತ್ತು ಆಕರ್ಷಿಸುತ್ತದೆ
ಶಂಖ ಕುಬೇರ ಕೃಪೆ ಆಕರ್ಷಿಸುತ್ತದೆ. ಬಲ ಹಿಡಿಕೆಯ ಶಂಖ ಮನೆಯಲ್ಲಿದ್ದರೆ ಲಕ್ಷ್ಮಿ ಕೃಪೆ ಆ ಮನೆ ಮೇಲಿರುತ್ತದೆ, ಆ ಮನೆಯಲ್ಲಿ ಐಶ್ವರ್ಯ, ಸಂಪತ್ತು ವೃದ್ಧಿಸುವುದು.
ಶಂಖದ ಮಹತ್ವ
- ಶಂಖ ಶುದ್ಧತೆಯ ಸಂಕೇತವಾಗಿದೆ.
- ಶಂಖವನ್ನು ಪ್ರತೀ ಹಿಂದೂಗಳ ಮನೆಯಲ್ಲಿ ಇಡಲಾಗುವುದು.
- ಇದನ್ನು ಶುದ್ಧವಾದ ಕೆಂಪು ಬಟ್ಟೆಯಲ್ಲಿ ಇಡಬೇಕು ಇಲ್ಲದಿದ್ದರೆ ಬೆಳ್ಳಿ ಅಥವಾ ಮಣ್ಣಿನ ಮಡಿಕೆಯಲ್ಲಿ ಇಡಬೇಕು.
- ಸಾಮಾನ್ಯವಾಗಿ ಶಂಖದಲ್ಲಿ ನೀರನ್ನು ತುಂಬಿ ಇಡಲಾಗುವುದು.
- ಪೂಜೆಯ ವೇಳೆ ಆ ನೀರನ್ನು ಚಿಮುಕಿಸಲಾಗುವುದು
- ಶಂಖವನ್ನು ಊದಿದಾಗ ಮನೆಯಲ್ಲಿರುವ ಋಣಾತ್ಮಕ ಶಕ್ತಿ ಹೊರದೂಡಲ್ಪಡುತ್ತದೆ, ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬಿರುತ್ತದೆ ಎಂದು ಹೇಳಲಾಗುವುದು.
ಶಂಖದಿಂದ ಆರೋಗ್ಯವೂ ವೃದ್ಧಿಸುವುದು
ಶಂಖದಿಂದ ದೊರೆಯುವ ಧಾರ್ಮಿಕ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಿರುತ್ತದೆ, ಆದರೆ ಇದರಿಂದ ಆರೋಗ್ಯಕ್ಕೂ ಹಲವು ಪ್ರಯೋಜನಗಳಿವೆ ಎಂಬುವುದು ಗೊತ್ತೇ?
ಶಂಖದಲ್ಲಿ ನೀರನ್ನು ಇಟ್ಟು ಆ ನೀರನ್ನು ಬೆಳಗ್ಗೆ ಕುಡಿಯುವುದರಿಂದ ಅರಿಶಿಣ ಕಾಮಲೆ, ದಂತ ಸಮಸ್ಯೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಗುಣ ಪಡಿಸಲು ಸಹಕಾರಿಯಾಗಿದೆ. ಶಂಖದಲ್ಲಿ ಕ್ಯಾಲ್ಸಿಯಂ, ರಂಜಕ, ಮೆಗ್ನಿಷ್ಯಿಯಂ, ರಂಜಕ ಇದ್ದು ದೇಹಕ್ಕೆ ತುಂಬಾನೇ ಪ್ರಯೋಜನಕಾರಿಯಾಗಿದೆ. ಇದರ ನೀರು ಥೈರಾಯ್ಡ್ ಗ್ರಂಥಿಗೂ ಒಳ್ಳೆಯದು.



Click it and Unblock the Notifications