Latest Updates
-
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ! -
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ತೋರಿಸುವ ಹೊಸ ಟ್ರೆಂಡ್: 'ಸಾಫ್ಟ್ ಲಾಂಚ್' ಮೂಲಕ ನಿಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಿ! -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಲ್ಲೂ ನಿಮ್ಮ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಟಿಪ್ಸ್ ಸಾಕು! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ!
ಬೀದಿ ಮಕ್ಕಳಿಗೆ ಫೈವ್ ಸ್ಟಾರ್ ಹೋಟೆಲ್ ಕೊಡಿಸಿದ ವ್ಯಕ್ತಿ: ಹೃದಯಸ್ಪರ್ಶಿ ವೀಡಿಯೋ ವೈರಲ್
ಊಟದ ಬೆಲೆ ಏನೆಂಬುವುದು ಹಸಿದವರಿಗಷ್ಟೇ ಗೊತ್ತಿರುತ್ತದೆ ಎಂಬುವುದು ಸುಳ್ಳಲ್ಲ, ಒಂದು ಹೊತ್ತಿನ ಊಟಕ್ಕೆ ಕಷ್ಟಪಡುತ್ತಿರುವ ಮಕ್ಕಳಿಗೆ ಫೈವ್ಸ್ಟಾರ್ ಹೋಟೆಲ್ ಊಟ ಸಿಕ್ಕಾಗ ಎಷ್ಟು ಖುಷಿಯಾಗಿರಬೇಡ, ಬಡ ಮಕ್ಕಳ ಆ ಸಂತೋಷದ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಮಾನವೀಯತೆ ಸಾರುವ ಈ ವೀಡಿಯೋ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ಕೂಡ ಸಾರುತ್ತದೆ.

ಆತ ಕಾವಲ್ಚಬ್ಬರ್ರ ಎಂಬ ವ್ಯಕ್ತಿ ಕಾರಿನಲ್ಲಿ ಹೋಗುತ್ತಿದ್ದಾಗ ಟ್ರಾಫಿಕ್ ಸಿಗ್ನಿಲ್ ಬರುತ್ತದೆ, ಅಲ್ಲಿ ಕಾರು ನಿಂತಿರುವಾಗ ಒಂದಿಷ್ಟು ಬಡ ಹುಡುಗರು ಬಂದು ಕಾರನ್ನು ಒರೆಸುತ್ತಾರೆ, ಹೀಗೆ ಕಾರು ಒರೆಸಿದಾಗ ಜನರು ಚಿಲ್ಲರೆ ಕಾಸು ಕೊಡುತ್ತಾರೆ, ಆ ಕಾಸಿನಿಂದ ಹೊಟ್ಟೆ ತುಂಬಿಸಿಕೊಳ್ಳಬೇಕಾದ ಪರಿಸ್ಥಿತಿ ಅವರದ್ದು.
ಟ್ರಾಫಿಕ್ ಸಿಗ್ನಲ್ನಲ್ಲಿ ನಿಂತಿದ್ದಾಗ ಇಂಥ ದೃಶ್ಯಗಳು ಕಣ್ಣಿಗೆ ಬೀಳುತ್ತದೆ, ಕೆಲವರು ಪೆನ್ನು ಮಾರುತ್ತಿತ್ತಾರೆ, ಕೆಲವರು ಆಟಿಕೆ ಹೀಗೆ ತಮ್ಮ ಹೊಟ್ಟೆ ಪಾಡಿಗಾಗಿ ಸಿಗ್ನಲ್ ಗ್ಯಾಪ್ನಲ್ಲಿ ಕಷ್ಟಪಡುತ್ತಿರುತ್ತಾರೆ. ಈ ಮಕ್ಕಳು ಕೂಡ ಅಷ್ಟೇ ಕಾರು ಒರೆಸಿ ಬರುವ ಅಲ್ಪ-ಸ್ವಲ್ಪ ಹಣದಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಿರುತ್ತಾರೆ.
ಚಬ್ರರ್ರ ಅವರಿಗೆ ಈ ಮಕ್ಕಳನ್ನು ನೋಡಿದಾಗ ಅಯ್ಯೋ ಪಾಪ ಅನಿಸುತ್ತೆ, ಅಲ್ಲಿಂದ ಸ್ವಲ್ಪ ದೂರದಲ್ಲಿ ಫೈವ್ಸ್ಟಾರ್ ಹೋಟೆಲ್ ಇರುತ್ತದೆ, ಅಲ್ಲಿಗೆ ಕರೆದುಕೊಂಡು ಹೋಗಿ ಊಟ ಕೊಡಿಸಲು ಯೋಚಿಸಿ ಕಾರು ಹತ್ತಲು ಹೇಳುತ್ತಾರೆ. ಅವರು ಹಾಗೆ ಹೇಳಿದಾಗ ಆ ಐಷಾರಾಮಿ ಕಾರು ಹತ್ತಮು ಹಿಂದೇಟು ಹಾಕುವ ಮಕ್ಕಳು ನಂತರ ಹತ್ತುತ್ತಾರೆ, ಅವರನ್ನು ಫೈವ್ ಸ್ಟಾರ್ ಹೋಟೆಲ್ಗೆ ಕರೆದುಕೊಂಡು ಹೋಗುತ್ತಾರೆ, ಆ ಮಕ್ಕಳಿಗೆ ಒಂದು ಅದ್ಭುತ ಪ್ರಪಂಚಕ್ಕೆ ಬಂದಂತೆ ಅನಿಸುತ್ತದೆ, ಅವರ ಕಣ್ಣಿಗೆ ಅದು ಸ್ವರ್ಗದಂತೆ ಭಾಸವಾಗಿದೆ ಎಂಬುವುದನ್ನು ಅವರ ಕಣ್ಣುಗಳೇ ಹೇಳುತ್ತಿವೆ, ನಂತರ ಆ ಮಕ್ಕಳಿಗೆ ಒಳ್ಳೆಯ ಭೋಜನ ಬಡಿಸಲಾಯಿತು.
ಆ ಬಡ ಮಕ್ಕಳ ಖುಷಿಗೆ ಪಾರವೇ ಇರಲಿಲ್ಲ, ಜೀವನದಲ್ಲಿ ಇದುವರೆಗೆ ತಿಂದಿರದ ಆಹಾರವನ್ನು ತಿಂದ ಅವರು ಆ ದಿನವನ್ನು ಅವರ ಜೀವನದಲ್ಲಿಯೇ ಮರೆಯಲ್ಲ.
ಅವರು ಈ ವೀಡಿಯೋವನ್ನು ಇನ್ಸ್ಟಾದಲ್ಲಿ ಶೇರ್ ಮಾಡಿದ್ದು ಜೊತೆಗೆ ಕೂತು ಅವರ ಸಂತೋಷವನ್ನು ನೋಡುವಾಗ ತುಂಬಾನೇ ಖುಷಿಯಾಗಿತ್ತು, ಅಂದರ ಸುಂದರ ಕ್ಷಣ ಸೃಷ್ಟಿ ಆಗಿದ್ದಕ್ಕೆ ತುಂಬಾನೇ ಖುಷಿಯಾಯ್ತ, ಏಕೆಂದರೆ ಅವರ ಖುಷಿ ನಿಜವಾಗಿತ್ತು, ನಾವು ಮಾತ್ರ ಗೆಲ್ಲುವುದು ನಿಜವಾದ ಗೆಲುವಲ್ಲ, ಬೇರೆಯವರ ಕನಸು ನನಸು ಮಾಡುವುದೇ ಜಯ ಎಂಬುವುದಾಗಿ ಬರೆದುಕೊಂಡಿದ್ದಾರೆ,.
ಈ ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾ ಗಮನ ಸೆಳೆದಿದ್ದು ಇವರು ಮಾಡಿದ ಕೆಲಸಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ, ಇವರು ಈ ರೀತಿ ಮಾಡುವ ಮೂಲಕ ಮತ್ತೊಂದಿಷ್ಟು ಜನರಿಗೆ ಸ್ಪೂರ್ತಿಯಾಗಿದ್ದಾರೆ.
ಇವರು ಮಾಡಿದ್ದು ತುಂಬಾ ಒಳ್ಳೆಯ ಕಾರ್ಯ, ಎಷ್ಟೋ ಮಕ್ಕಳು ಒಂದು ಹೊತ್ತು ಊಟವಿಲ್ಲದೆ ಕಷ್ಟಪಡುತ್ತಿರುತ್ತಾರೆ ಅಂಥವರಿಗೆ ಬದುಕು ಕಟ್ಟಿಕೊಳ್ಳಲು ಸಾಮರ್ಥ್ಯವಿರುವವರು ಸಹಾಯ ಮಾಡಿದರೆ ಖಂಡಿತ ಇಂಥ ಮಕ್ಕಳ ಬಾಳು ತುಂಬಾ ಸುಂದರವಾಗುವುದು.
ಈ ವೀಡಿಯೋ ನೋಡಿದಾಗ ಸಾಮಾಜಿಕ ತಾಣದಲ್ಲಿ ನೋಡಿದ್ದ ಒಂದು ವೀಡಿಯೋ ನೆನಪಿಗೆ ಬರುತ್ತೆ
ಒಬ್ಬ ವಯಸ್ಸಾದ ಮಹಿಳೆ ದಾರಿಯಲ್ಲಿ ಕೂತು ಭಿಕ್ಷೆ ಬೇಡುತ್ತಿರುತ್ತಾಳೆ, ಅದನ್ನು ನೋಡಿ ವ್ಯಕ್ತಿಯೊಬ್ಬರು ಆಕೆಗೆ ಭಿಕ್ಷೆ ಹಾಕಲು ಬರುತ್ತಾರೆ, ಇನ್ನೇನು ಆ ತಾಯಿಗೆ ಹಣ ನೀಡಬೇಕು ಅಷ್ಟರಲ್ಲಿ ಅವರ ಮನಸ್ಸು ಬದಲಾಗುತ್ತೆ ಹಣ ಕೊಡಲ್ಲ, ಆ ತಾಯಿ ಮುಖ ಚಿಕ್ಕದಾಗುತ್ತೆ, ಆದರೆ ಸ್ವಲ್ಪ ಹೊತ್ತಿನಲ್ಲಿ ತೂಕದ ಯಂತ್ರ ತಂದುಕೊಟ್ಟು ಹಣ ಕೊಟ್ಟು ಹೋಗುತ್ತಾರೆ, ಎಲ್ಲರೂ ಬಂದು ತೂಕ ಚೆಕ್ ಮಾಡಿ ಹಣ ಕೊಟ್ಟು ಹೋಗುತ್ತಾರೆ...
ಸ್ವಲ್ಪ ದಿನಗಳು ಕಳೆದ ಮೇಲೆ ಆ ವ್ಯಕ್ತಿ ಒಂದು ಜ್ಯೂಸ್ ಅಂಗಡಿಗೆ ಹೋಗ್ತಾರೆ, ನೋಡಿದರೆ ಅದೇ ಮಹಿಳೆ, ಇವರು ಮಾಡಿದ ಚಿಕ್ಕ ಸಹಾಯದಿಂದ ಅವರ ಬದುಕು ಸುಂದರವಾಗಿ ರೂಪುಗೊಂಡಿತ್ತು, ಆ ತಾಯಿ ಇವರು ಕುಡಿದ ಜ್ಯೂಸ್ಗೆ ಹಣ ಪಡೆಯದೆ ನಗು ಬೀರುತ್ತಾರೆ.
ಈ ಎರಡು ಕತೆಗಳು ತುಂಬಾ ಸ್ಪೂರ್ತಿ ಕತೆಗಳಾಗಿದೆ ಅಲ್ಲವೇ? ನೀವು ಇಂಥ ಸಹಾಯ ಮಾಡಿದ್ದರೆ ನಮ್ಮೊಂದಿಗೆ ಕಮೆಂಟ್ ಮೂಲಕ ತಿಳಿಸಿ....



Click it and Unblock the Notifications