Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಗೆಲುವಿಗಾಗಿ ತಿರುವಣ್ಣಾಮಲೈಯ ಅರುಣಾಚಲೇಶ್ವರನಿಗೆ ಮೊರೆ ಹೋದ ಡಿಕೆಶಿ, ಈ ದೇವಾಲಯದ ವಿಶೇಷತೆಯೇನು?
ಕರ್ನಾಟಕ ಚುನಾವಣೆ ಫಲಿತಾಂಶ ನೋಡಿದಾಗ ಕಾಂಗ್ರೆಸ್ ಸ್ಪಷ್ಟಬಹುಮತ ಪಡೆದಿರುವುದರಿಂದ ಅಧಿಕಾರದ ಚುಕ್ಕಾಣಿಯನ್ನು ಕಾಂಗ್ರೆಸ್ ಹಿಡಿಯಲಿದೆ. ಪಕ್ಷವನ್ನು ಬಲಪಡಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಶ್ರಮ ಎದ್ದು ಕಾಣುತ್ತಿದೆ.
ಈ ಬಾರಿ ಮತದಾರ ಕಾಂಗ್ರೆಸ್ ಕಡೆಗೆ ಒಲವು ತೋರಿಸಿದ್ದಾನೆ. ಇಂದು ಮತ ಎಣಿಕೆಗೆ ಮೊದಲೇ ಬಹುತೇಕ ರಾಜಕೀಯ ನಾಯಕರು ದೇವರ ಮೊರೆಹೋಗಿದ್ದರು. ಡಿಕೆ ಶಿವಕುಮಾರ್ ಪತ್ನಿ ಸಮೇತ ತಮಿಳುನಾಡಿನ ತಿರುವಣ್ಣಾಮಲೈಯ ಅರುಣಾಚಲೇಶ್ವರನಿಗೆ ಪೂಜೆ ಸಲ್ಲಸಿದ್ದರು. ಈ ದೇವಾಲಯದ ಮಹಿಮೆ ಬಗ್ಗೆ ತಿಳಿಯೋಣ ಬನ್ನಿ:

ತಮಿಳುನಾಡಿನಲ್ಲಿರುವ ಶಿವನ ದೇವಾಲಯ
ಅರುಣಾಚಲೇಶ್ವರ ದೇವಾಲಯವು ತಮಿಳು ನಾಡಿನ ತಿರುವಣ್ಣ ಬೆಟ್ಟದಲ್ಲಿದೆ. ಹಿಂದೂ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಈ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ. ಈ ಶಿವ ದೇವಾಲಯದಲ್ಲಿ ಶಿವ ಲಿಂಗದ ಜೊತೆಗೆ ಪಾರ್ವತಿ ದೇವಿಯನ್ನು ಆರಾಧಿಸಲಾಗುವುದು. ಈ ದೇವಾಲಯಕ್ಕೆ ಇಂದು ಡಿಕೆಶಿ ಪತ್ನಿ ಸಮೇತ ಹೋಗಿ ಪೂಜೆ ಸಲ್ಲಿಸಿ ಬಂದಿದ್ದಾರೆ.
ಈ ದೇವಾಲಯದ ವಿಶೇಷತೆ ಬಗ್ಗೆ ನೋಡುವುದಾದರೆ:
ಈ ದೇವಾಲಯವನ್ನು ಅಗ್ನಿ ಪ್ರತೀಕವೆಂದು ಭಾವಿಸಲಾಗಿದೆ, ಇಲ್ಲಿರುವ ಶಿವಲಿಂಗವನ್ನುನ ಅಗ್ನಿ ಲಿಂಗವೆಂದು ಕರೆಯುತ್ತಾರೆ. ಇದು ದೇವಾಲಯದಲ್ಲಿ ಅತ್ಯಂತ ದೊಡ್ಡ ದೇವಾಲಯ ಇದಾಗಿದೆ. ಸುಮಾರು ಹತ್ತು ಹೆಕ್ಟೇರ್ನಷ್ಟು ವಿಸ್ತೀರ್ಣದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ. ಇಲ್ಲಿ ನಾಲ್ಕು ಗೋಪುರಗಳಿದ್ದು ಈ ದೇವಾಲಯದಲ್ಲಿರುವ ಪೂರ್ವದ ಗೋಪುರ 66 ಮೀಟರ್ ಎತ್ತರವಿದೆ, ಈ ಗೋಪುರ ಭಾರತದ ಎತ್ತರದ ಗೋಪುರವಾಗಿದೆ.
ಈ ದೇವಾಲಯದ ಬಗ್ಗೆ ಪೌರಾಣಿಕ ಕತೆ
ಪೌರಾಣಿಕ ಕತೆಯ ಪ್ರಕಾರ ಒಮ್ಮೆ ಶಿವ-ಪಾರ್ವತಿ ಕುಳಿತು ಮಾತನಾಡುತ್ತಿರುವಾಗ ಪಾರ್ವತಿ ದೇವಿಗೆ ತಮಾಷೆ ಮಾಡಬೇಕೆಂದು ಅನಿಸುವುದ, ಹಾಗಾಗಿ ಶಿವನ ಕಣ್ಣುಗಳನ್ನು ಮುಚ್ಚುತ್ತಾಳೆ. ಆವಾಗ ಇಡೀ ಲೋಕಕ ಕತ್ತಲಾಗುತ್ತೆ, ರಾಕ್ಷಸರ ಅಟ್ಟಹಾಸ ಹೆಚ್ಚಾಗುವುದು, ತ್ರಿಲೋಕದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗುವುದು. ಶಿವನು ಕಣ್ಣುಗಳನ್ನು ತೆರೆಯದೆ ಮುಚ್ಚಿಯೇ ಇರುತ್ತಾನೆ, ಆವಾಗ ದೇವಾನು ದೇವತೆಗಳು ಬಂದು ಪಾರ್ವತಿ ಬಳಿ ಬೇಡಿಕೊಳ್ಳುತ್ತಾರೆ. ಪಾರ್ವತಿಯು ಶಿವನನ್ನು ಕಣ್ತೆರೆಯುವಂತೆ ಭಕ್ತಿಯಿಂದ ಪ್ರಾರ್ಥಿಸುತ್ತಾಳೆ. ಇದರಿಂದ ಪ್ರಸನ್ನನಾದ ಶಿಬವ ಗುಡ್ಡವೊಂದರಲ್ಲಿ ಅತ್ಯಂತ ತೇಜಸ್ಸಿನಿಂದ ಕೂಡಿದ ಪ್ರಭೆಯೊಂದಿಗೆ ಪ್ರತ್ಯಕ್ಷನಾಗುತ್ತಾನೆ. ಆವಾಗ ಮತ್ತೆ ಜಗತ್ತಿಗೆ ಬೆಳಕು ಬರುತ್ತದೆ, ಶಿವನು ಈ ರೀತಿ ಪ್ರತ್ಯಕ್ಷವಾದ ಬೆಟ್ಟವೇ ತಿರುವಣ್ಣಮಲೈ (ಮಲೈ ಎಂದರೆ ತಮಿಳಿನಲ್ಲಿ ಬೆಟ್ಟವೆಂದರ್ಥ).
ಇತಿಹಾಸ: ಇತಿಹಾಸದ ಪ್ರಕಾರ ಈ ದೇವಾಲಯವನ್ನು ಜೋಳರು 9ನೇ ಶತಮಾನದಲ್ಲಿ ನಿರ್ಮಿಸಲಾಗುವುದು ಎಂದು ಹೇಳಲಾಗಿದೆ.
ಈ ದೇವಾಲಯದ ಮಹಿಮೆ
* ಈ ಶಿವನ ದೇವಾಲಯಕ್ಕೆ ಪ್ರತಿನಿತ್ಯ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರ.
* ಬೇಡಿದ್ದನ್ನು ನೆರವೇರಿಸುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ.
* ತುಂಬಾ ಭಕ್ತಿಯಿಂದ ಬಂದು ಬೇಡಿದರೆ ಇಷ್ಟಾರ್ಥಗಳು ನೆರವೇರುವುದು.
ಪೂಜಾ ಸಮಯ:
* ಈ ದೇವಾಲಯ ಬೆಳಗ್ಗೆ 5 ಗಂಟೆಗೆ ತೆರೆಯುತ್ತದೆ
ಬೆಳಗ್ಗೆ 5:30, 6, 8:30ಕ್ಕೆ ವಿಶೇಷ ಪೂಜೆ ಇರಲಿದೆ.
* ನಂತರ11 ಗಂಟೆ, ಮಧ್ಯಾಹ್ನ12:30. 3:30, ಸಂಜೆ 6 ಗಂಟೆಗೆ ಪೂಜೆ ಇರಲಿದೆ.
* ರಾತ್ರಿ ಹೊತ್ತಿನಲ್ಲಿ 7:30ಕ್ಕೆ, 9 ಗಂಟೆಗೆ ಹಾಗೂ 9:30ಕ್ಕೆ ವಿಶೇಷ ಪೂಜೆ ಇರಲಿದೆ.



Click it and Unblock the Notifications