Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಗೆಲುವಿಗಾಗಿ ತಿರುವಣ್ಣಾಮಲೈಯ ಅರುಣಾಚಲೇಶ್ವರನಿಗೆ ಮೊರೆ ಹೋದ ಡಿಕೆಶಿ, ಈ ದೇವಾಲಯದ ವಿಶೇಷತೆಯೇನು?
ಕರ್ನಾಟಕ ಚುನಾವಣೆ ಫಲಿತಾಂಶ ನೋಡಿದಾಗ ಕಾಂಗ್ರೆಸ್ ಸ್ಪಷ್ಟಬಹುಮತ ಪಡೆದಿರುವುದರಿಂದ ಅಧಿಕಾರದ ಚುಕ್ಕಾಣಿಯನ್ನು ಕಾಂಗ್ರೆಸ್ ಹಿಡಿಯಲಿದೆ. ಪಕ್ಷವನ್ನು ಬಲಪಡಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಶ್ರಮ ಎದ್ದು ಕಾಣುತ್ತಿದೆ.
ಈ ಬಾರಿ ಮತದಾರ ಕಾಂಗ್ರೆಸ್ ಕಡೆಗೆ ಒಲವು ತೋರಿಸಿದ್ದಾನೆ. ಇಂದು ಮತ ಎಣಿಕೆಗೆ ಮೊದಲೇ ಬಹುತೇಕ ರಾಜಕೀಯ ನಾಯಕರು ದೇವರ ಮೊರೆಹೋಗಿದ್ದರು. ಡಿಕೆ ಶಿವಕುಮಾರ್ ಪತ್ನಿ ಸಮೇತ ತಮಿಳುನಾಡಿನ ತಿರುವಣ್ಣಾಮಲೈಯ ಅರುಣಾಚಲೇಶ್ವರನಿಗೆ ಪೂಜೆ ಸಲ್ಲಸಿದ್ದರು. ಈ ದೇವಾಲಯದ ಮಹಿಮೆ ಬಗ್ಗೆ ತಿಳಿಯೋಣ ಬನ್ನಿ:

ತಮಿಳುನಾಡಿನಲ್ಲಿರುವ ಶಿವನ ದೇವಾಲಯ
ಅರುಣಾಚಲೇಶ್ವರ ದೇವಾಲಯವು ತಮಿಳು ನಾಡಿನ ತಿರುವಣ್ಣ ಬೆಟ್ಟದಲ್ಲಿದೆ. ಹಿಂದೂ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಈ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ. ಈ ಶಿವ ದೇವಾಲಯದಲ್ಲಿ ಶಿವ ಲಿಂಗದ ಜೊತೆಗೆ ಪಾರ್ವತಿ ದೇವಿಯನ್ನು ಆರಾಧಿಸಲಾಗುವುದು. ಈ ದೇವಾಲಯಕ್ಕೆ ಇಂದು ಡಿಕೆಶಿ ಪತ್ನಿ ಸಮೇತ ಹೋಗಿ ಪೂಜೆ ಸಲ್ಲಿಸಿ ಬಂದಿದ್ದಾರೆ.
ಈ ದೇವಾಲಯದ ವಿಶೇಷತೆ ಬಗ್ಗೆ ನೋಡುವುದಾದರೆ:
ಈ ದೇವಾಲಯವನ್ನು ಅಗ್ನಿ ಪ್ರತೀಕವೆಂದು ಭಾವಿಸಲಾಗಿದೆ, ಇಲ್ಲಿರುವ ಶಿವಲಿಂಗವನ್ನುನ ಅಗ್ನಿ ಲಿಂಗವೆಂದು ಕರೆಯುತ್ತಾರೆ. ಇದು ದೇವಾಲಯದಲ್ಲಿ ಅತ್ಯಂತ ದೊಡ್ಡ ದೇವಾಲಯ ಇದಾಗಿದೆ. ಸುಮಾರು ಹತ್ತು ಹೆಕ್ಟೇರ್ನಷ್ಟು ವಿಸ್ತೀರ್ಣದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ. ಇಲ್ಲಿ ನಾಲ್ಕು ಗೋಪುರಗಳಿದ್ದು ಈ ದೇವಾಲಯದಲ್ಲಿರುವ ಪೂರ್ವದ ಗೋಪುರ 66 ಮೀಟರ್ ಎತ್ತರವಿದೆ, ಈ ಗೋಪುರ ಭಾರತದ ಎತ್ತರದ ಗೋಪುರವಾಗಿದೆ.
ಈ ದೇವಾಲಯದ ಬಗ್ಗೆ ಪೌರಾಣಿಕ ಕತೆ
ಪೌರಾಣಿಕ ಕತೆಯ ಪ್ರಕಾರ ಒಮ್ಮೆ ಶಿವ-ಪಾರ್ವತಿ ಕುಳಿತು ಮಾತನಾಡುತ್ತಿರುವಾಗ ಪಾರ್ವತಿ ದೇವಿಗೆ ತಮಾಷೆ ಮಾಡಬೇಕೆಂದು ಅನಿಸುವುದ, ಹಾಗಾಗಿ ಶಿವನ ಕಣ್ಣುಗಳನ್ನು ಮುಚ್ಚುತ್ತಾಳೆ. ಆವಾಗ ಇಡೀ ಲೋಕಕ ಕತ್ತಲಾಗುತ್ತೆ, ರಾಕ್ಷಸರ ಅಟ್ಟಹಾಸ ಹೆಚ್ಚಾಗುವುದು, ತ್ರಿಲೋಕದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗುವುದು. ಶಿವನು ಕಣ್ಣುಗಳನ್ನು ತೆರೆಯದೆ ಮುಚ್ಚಿಯೇ ಇರುತ್ತಾನೆ, ಆವಾಗ ದೇವಾನು ದೇವತೆಗಳು ಬಂದು ಪಾರ್ವತಿ ಬಳಿ ಬೇಡಿಕೊಳ್ಳುತ್ತಾರೆ. ಪಾರ್ವತಿಯು ಶಿವನನ್ನು ಕಣ್ತೆರೆಯುವಂತೆ ಭಕ್ತಿಯಿಂದ ಪ್ರಾರ್ಥಿಸುತ್ತಾಳೆ. ಇದರಿಂದ ಪ್ರಸನ್ನನಾದ ಶಿಬವ ಗುಡ್ಡವೊಂದರಲ್ಲಿ ಅತ್ಯಂತ ತೇಜಸ್ಸಿನಿಂದ ಕೂಡಿದ ಪ್ರಭೆಯೊಂದಿಗೆ ಪ್ರತ್ಯಕ್ಷನಾಗುತ್ತಾನೆ. ಆವಾಗ ಮತ್ತೆ ಜಗತ್ತಿಗೆ ಬೆಳಕು ಬರುತ್ತದೆ, ಶಿವನು ಈ ರೀತಿ ಪ್ರತ್ಯಕ್ಷವಾದ ಬೆಟ್ಟವೇ ತಿರುವಣ್ಣಮಲೈ (ಮಲೈ ಎಂದರೆ ತಮಿಳಿನಲ್ಲಿ ಬೆಟ್ಟವೆಂದರ್ಥ).
ಇತಿಹಾಸ: ಇತಿಹಾಸದ ಪ್ರಕಾರ ಈ ದೇವಾಲಯವನ್ನು ಜೋಳರು 9ನೇ ಶತಮಾನದಲ್ಲಿ ನಿರ್ಮಿಸಲಾಗುವುದು ಎಂದು ಹೇಳಲಾಗಿದೆ.
ಈ ದೇವಾಲಯದ ಮಹಿಮೆ
* ಈ ಶಿವನ ದೇವಾಲಯಕ್ಕೆ ಪ್ರತಿನಿತ್ಯ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರ.
* ಬೇಡಿದ್ದನ್ನು ನೆರವೇರಿಸುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ.
* ತುಂಬಾ ಭಕ್ತಿಯಿಂದ ಬಂದು ಬೇಡಿದರೆ ಇಷ್ಟಾರ್ಥಗಳು ನೆರವೇರುವುದು.
ಪೂಜಾ ಸಮಯ:
* ಈ ದೇವಾಲಯ ಬೆಳಗ್ಗೆ 5 ಗಂಟೆಗೆ ತೆರೆಯುತ್ತದೆ
ಬೆಳಗ್ಗೆ 5:30, 6, 8:30ಕ್ಕೆ ವಿಶೇಷ ಪೂಜೆ ಇರಲಿದೆ.
* ನಂತರ11 ಗಂಟೆ, ಮಧ್ಯಾಹ್ನ12:30. 3:30, ಸಂಜೆ 6 ಗಂಟೆಗೆ ಪೂಜೆ ಇರಲಿದೆ.
* ರಾತ್ರಿ ಹೊತ್ತಿನಲ್ಲಿ 7:30ಕ್ಕೆ, 9 ಗಂಟೆಗೆ ಹಾಗೂ 9:30ಕ್ಕೆ ವಿಶೇಷ ಪೂಜೆ ಇರಲಿದೆ.



Click it and Unblock the Notifications
