Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಜುಲೈ 17ಕ್ಕೆ ಗೌರಿ ಅಮವಾಸ್ಯೆ, ಈ ದಿನ ಗೌರಿ ಪೂಜೆಯ ಮಹತ್ವವೇನು? ಪೂಜಾ ವಿಧಿಗಳೇನು?
ಜುಲೈ 17ಕ್ಕೆ ಆಷಾಢ ಅಮವಾಸ್ಯೆ. ಹಲವು ಕಾರಣಗಳಿಂದಾಗಿ ಈ ದಿನ ತುಂಬಾ ಪ್ರಾಮುಖ್ಯತೆ ಹೊಂದಿದೆ. ಈ ದಿನ ಭೀಮನ ಅಮವಾಸ್ಯೆ ಆಚರಿಸಲಾಗುವುದು, ಪಿತೃ ತರ್ಪಣ ಮಾಡಲಾಗುವುದು, ಕಾಳ ಸರ್ಪ ದೋಷವಿದ್ದರೆ ಅದಕ್ಕೆ ಪರಿಹಾರ ಮಾಡಲಾಗುವುದು ಹೀಗೆ ಹಲವು ಕಾರಣಗಳಿಂದ ತುಂಬಾನೇ ಪ್ರಾಮುಖ್ಯತೆ ಹೊಂದಿದೆ. ಇನ್ನು ಈ ಅಮವಾಸ್ಯೆಯನ್ನು ದಿವಾಸಿ ಅಮವಾಸ್ಯೆಯೆಂದು ಕೂಡ ಆಚರಿಸಲಾಗುವುದು.
ಈ ದಿವಾಸಿ ಅಮವಾಸ್ಯೆಯಂದು ಗೌರಿ ಪೂಜೆ ಮಾಡಲಾಗುವುದು, ಆದ್ದರಿಂದ ಈ ಅಮವಾಸ್ಯೆಯನ್ನು ಗೌರಿ ಅಮವಾಸ್ಯೆ ಎಂದು ಕರಿಯಲಾಗುವುದು. ಇದರ ಕುರಿತ ಹೆಚ್ಚಿನ ಮಾಹಿತಿ ಈ ಲೇಖನದ ಮೂಲಕ ತಿಳಿಯೋಣ:

ದಿವಾಸಿ ಅಮವಾಸ್ಯೆ ತಿಥಿ
ಗೌರಿ ಅಮವಾಸ್ಯೆ ಜುಲೈ 16ರಿಂದ ಪ್ರಾರಂಭವಾಗಿ ಜುಲೈ 17ಕ್ಕೆ ಮುಕ್ತಾಯವಾಗುತ್ತದೆ.
ಗೌರಿ ಅಮವಾಸ್ಯೆ
ಈ ಅಮವಾಸ್ಯೆಯೆಂದು ಗೌರಿಗೆ ಪೂಜೆಯನ್ನು ಮಾಡಲಾಗುವುದು. ಈ ಪೂಜೆ ಮಾಡುವುದರಿಂದ ಕುಟುಂಬಕ್ಕೆ ಹಾಗೂ ಮಕ್ಕಳಿಗೆ ಒಳಿತಾಗುವುದು ಎಂಬ ನಂಬಿಕೆಯಿದೆ, ಹಾಗಾಗಿ ಮಹಿಳೆಯರು ಈ ದಿನ ಗೌರಿ ಪೂಜೆ ಮಾಡುತ್ತಾರೆ.
ಈ ದಿನ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು
ಈ ದಿನ ಕರ್ನಾಟಕದ ವಿವಿಧ ದೇವಾಲಯಗಳಲ್ಲಿ ದೇವಿಗೆ ರುದ್ರಾಭಿಷೇಕ, ಕುಂಕುಮಾಭಿಷೇಕ, ಬಿಲ್ವಾರ್ಚಾನೆ, ದೇವಿಗೆ ನಿಂಬೆಹಣ್ಣಿನ ಹಾರ ಹಾಕಿ ವಿಶೇಷ ಪೂಜೆ ಸಲ್ಲಿಸಲಾಗುವುದು. ಈ ದಿನ ದೇವಿಯ ದರ್ಶನ ಪಡೆಯಲು ಬರುವ ಭಕ್ತರ ಸಂಖ್ಯೆ ಎಂದಿಗಿಂತಲೂ ಹೆಚ್ಚು ಅಧಿಕವಿರುತ್ತದೆ.
ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಗೌರಿದಾರ ಕಟ್ಟಿಕೊಳ್ಳಬೇಕು
ಮಹಿಳೆಯರು ಗೌರಿಗೆ ಪೂಜೆಯನ್ನು ಸಲ್ಲಿಸಿದ ಬಳಿಕ 9 ಗಂಟುಗಳ ಪವಿತ್ರ ದಾರವಾದ ಗೌರಿ ದಾರವನ್ನು ತಮ್ಮ ಬಲಗೈಗೆ (ಬಲ ಮಣಿಕಟ್ಟಿಗೆ) ಕಟ್ಟಬೇಕು. ಈ ದಾರವನ್ನು ಕಟ್ಟುವುದರಿಂದ ಗೌರಿ ಮಾತೆಯ ಆಶೀರ್ವಾದ ದೊರೆಯಲಿದೆ.
ಈ ದಿನ ಮಹಿಳೆಯರಿಗೆ ಭೀಮನ ಅಮವಾಸ್ಯೆ ಕಾರಣದಿಂದಲೂ ತುಂಬಾನೇ ಪ್ರಾಮುಖ್ಯತೆಯಾದ ದಿನವಾಗಿದೆ
ಈ ದಿನ ಮಹಿಳೆಯರು ಗೌರಿಯನ್ನು ಮಾತ್ರವಲ್ಲ ಶಿವ-ಪಾರ್ವತಿಯನ್ನು ಆಚರಿಸಲಾಗುವುದು. ಶಿವ ಪಾರ್ವತಿಗೆ ಪೂಜೆ ಸಲ್ಲಿಸಿ ನಂತರ ತಮ್ಮ ಗಂಡನ ಪಾದಗಳಿಗೆ ಪಾದ ಪೂಜೆ ಮಾಡಿ ಅವರಿಂದ ಆಶೀರ್ವಾದ ಪಡೆಯುವ ಪದ್ಧತಿ ಇದೆ.
* ಈ ದಿನ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ನಂತರ ರಂಗೋಲಿ ಹಾಕಿ.
* ನಂತರ ಮರದ ಹಲಗೆ ಅಥವಾ ಪೀಠ ಇಟ್ಟು ಮಂಗಳ ಗೌರಿ ಮೂರ್ತಿ ಜೊತೆಗೆ ತಟ್ಟೆಯಲ್ಲಿ ಅಕ್ಕಿ ಹಾಕಿ ಎರಡು ಮಣ್ಣಿನ ಅಥವಾ ಬೆಳ್ಳಿಯ ದೀಪವನ್ನು ಇಡಿ.
* ನಂತರ ಅದೇ ತಟ್ಟೆಯಲ್ಲಿ 9 ವೀಳ್ಯೆದೆಲೆ ಹಾಗೂ 9 ಗಂಟಿನ ದಾರವನ್ನು ಇಡಿ.
* ದೇವಿಗೆ ನೈವೇದ್ಯವಾಗಿ ಕಡಬು ಇಡಬಹುದು. ಎಣ್ಣೆಯಲ್ಲಿ ಕರಿಯಬೇಡಿ, ಹಬೆಯಲ್ಲಿ ಬೇಯಿಸಿದ ಕಡಬು ದೇವರಿಗೆ ಅರ್ಪಿಸಿ.
* 9 ಗಂಟಿನ ದಾರವನ್ನು ಅರಿಶಿಣ ಪೇಸ್ಟ್ನಲ್ಲಿ ಅದ್ದಿ ನಂತರ ಆ ದಾರವನ್ನು ಬಲಗೈಗೆ ಕಟ್ಟಿಕೊಳ್ಳಿ.
* ದೇವಿಯ ಮಂತ್ರ ಅಥವಾ ಹಾಡು ಹೇಳುವ ಮೂಲಕ ದೇವರಿಗೆ ಆರತಿ ಎತ್ತಿ.
ಹೆಣ್ಮಕ್ಕಳು ಗಂಡ-ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಗೌರಿ ಪೂಜೆಯನ್ನು ಮಾಡುತ್ತಾರೆ.



Click it and Unblock the Notifications
