Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ಜುಲೈ 17ಕ್ಕೆ ಗೌರಿ ಅಮವಾಸ್ಯೆ, ಈ ದಿನ ಗೌರಿ ಪೂಜೆಯ ಮಹತ್ವವೇನು? ಪೂಜಾ ವಿಧಿಗಳೇನು?
ಜುಲೈ 17ಕ್ಕೆ ಆಷಾಢ ಅಮವಾಸ್ಯೆ. ಹಲವು ಕಾರಣಗಳಿಂದಾಗಿ ಈ ದಿನ ತುಂಬಾ ಪ್ರಾಮುಖ್ಯತೆ ಹೊಂದಿದೆ. ಈ ದಿನ ಭೀಮನ ಅಮವಾಸ್ಯೆ ಆಚರಿಸಲಾಗುವುದು, ಪಿತೃ ತರ್ಪಣ ಮಾಡಲಾಗುವುದು, ಕಾಳ ಸರ್ಪ ದೋಷವಿದ್ದರೆ ಅದಕ್ಕೆ ಪರಿಹಾರ ಮಾಡಲಾಗುವುದು ಹೀಗೆ ಹಲವು ಕಾರಣಗಳಿಂದ ತುಂಬಾನೇ ಪ್ರಾಮುಖ್ಯತೆ ಹೊಂದಿದೆ. ಇನ್ನು ಈ ಅಮವಾಸ್ಯೆಯನ್ನು ದಿವಾಸಿ ಅಮವಾಸ್ಯೆಯೆಂದು ಕೂಡ ಆಚರಿಸಲಾಗುವುದು.
ಈ ದಿವಾಸಿ ಅಮವಾಸ್ಯೆಯಂದು ಗೌರಿ ಪೂಜೆ ಮಾಡಲಾಗುವುದು, ಆದ್ದರಿಂದ ಈ ಅಮವಾಸ್ಯೆಯನ್ನು ಗೌರಿ ಅಮವಾಸ್ಯೆ ಎಂದು ಕರಿಯಲಾಗುವುದು. ಇದರ ಕುರಿತ ಹೆಚ್ಚಿನ ಮಾಹಿತಿ ಈ ಲೇಖನದ ಮೂಲಕ ತಿಳಿಯೋಣ:

ದಿವಾಸಿ ಅಮವಾಸ್ಯೆ ತಿಥಿ
ಗೌರಿ ಅಮವಾಸ್ಯೆ ಜುಲೈ 16ರಿಂದ ಪ್ರಾರಂಭವಾಗಿ ಜುಲೈ 17ಕ್ಕೆ ಮುಕ್ತಾಯವಾಗುತ್ತದೆ.
ಗೌರಿ ಅಮವಾಸ್ಯೆ
ಈ ಅಮವಾಸ್ಯೆಯೆಂದು ಗೌರಿಗೆ ಪೂಜೆಯನ್ನು ಮಾಡಲಾಗುವುದು. ಈ ಪೂಜೆ ಮಾಡುವುದರಿಂದ ಕುಟುಂಬಕ್ಕೆ ಹಾಗೂ ಮಕ್ಕಳಿಗೆ ಒಳಿತಾಗುವುದು ಎಂಬ ನಂಬಿಕೆಯಿದೆ, ಹಾಗಾಗಿ ಮಹಿಳೆಯರು ಈ ದಿನ ಗೌರಿ ಪೂಜೆ ಮಾಡುತ್ತಾರೆ.
ಈ ದಿನ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು
ಈ ದಿನ ಕರ್ನಾಟಕದ ವಿವಿಧ ದೇವಾಲಯಗಳಲ್ಲಿ ದೇವಿಗೆ ರುದ್ರಾಭಿಷೇಕ, ಕುಂಕುಮಾಭಿಷೇಕ, ಬಿಲ್ವಾರ್ಚಾನೆ, ದೇವಿಗೆ ನಿಂಬೆಹಣ್ಣಿನ ಹಾರ ಹಾಕಿ ವಿಶೇಷ ಪೂಜೆ ಸಲ್ಲಿಸಲಾಗುವುದು. ಈ ದಿನ ದೇವಿಯ ದರ್ಶನ ಪಡೆಯಲು ಬರುವ ಭಕ್ತರ ಸಂಖ್ಯೆ ಎಂದಿಗಿಂತಲೂ ಹೆಚ್ಚು ಅಧಿಕವಿರುತ್ತದೆ.
ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಗೌರಿದಾರ ಕಟ್ಟಿಕೊಳ್ಳಬೇಕು
ಮಹಿಳೆಯರು ಗೌರಿಗೆ ಪೂಜೆಯನ್ನು ಸಲ್ಲಿಸಿದ ಬಳಿಕ 9 ಗಂಟುಗಳ ಪವಿತ್ರ ದಾರವಾದ ಗೌರಿ ದಾರವನ್ನು ತಮ್ಮ ಬಲಗೈಗೆ (ಬಲ ಮಣಿಕಟ್ಟಿಗೆ) ಕಟ್ಟಬೇಕು. ಈ ದಾರವನ್ನು ಕಟ್ಟುವುದರಿಂದ ಗೌರಿ ಮಾತೆಯ ಆಶೀರ್ವಾದ ದೊರೆಯಲಿದೆ.
ಈ ದಿನ ಮಹಿಳೆಯರಿಗೆ ಭೀಮನ ಅಮವಾಸ್ಯೆ ಕಾರಣದಿಂದಲೂ ತುಂಬಾನೇ ಪ್ರಾಮುಖ್ಯತೆಯಾದ ದಿನವಾಗಿದೆ
ಈ ದಿನ ಮಹಿಳೆಯರು ಗೌರಿಯನ್ನು ಮಾತ್ರವಲ್ಲ ಶಿವ-ಪಾರ್ವತಿಯನ್ನು ಆಚರಿಸಲಾಗುವುದು. ಶಿವ ಪಾರ್ವತಿಗೆ ಪೂಜೆ ಸಲ್ಲಿಸಿ ನಂತರ ತಮ್ಮ ಗಂಡನ ಪಾದಗಳಿಗೆ ಪಾದ ಪೂಜೆ ಮಾಡಿ ಅವರಿಂದ ಆಶೀರ್ವಾದ ಪಡೆಯುವ ಪದ್ಧತಿ ಇದೆ.
* ಈ ದಿನ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ನಂತರ ರಂಗೋಲಿ ಹಾಕಿ.
* ನಂತರ ಮರದ ಹಲಗೆ ಅಥವಾ ಪೀಠ ಇಟ್ಟು ಮಂಗಳ ಗೌರಿ ಮೂರ್ತಿ ಜೊತೆಗೆ ತಟ್ಟೆಯಲ್ಲಿ ಅಕ್ಕಿ ಹಾಕಿ ಎರಡು ಮಣ್ಣಿನ ಅಥವಾ ಬೆಳ್ಳಿಯ ದೀಪವನ್ನು ಇಡಿ.
* ನಂತರ ಅದೇ ತಟ್ಟೆಯಲ್ಲಿ 9 ವೀಳ್ಯೆದೆಲೆ ಹಾಗೂ 9 ಗಂಟಿನ ದಾರವನ್ನು ಇಡಿ.
* ದೇವಿಗೆ ನೈವೇದ್ಯವಾಗಿ ಕಡಬು ಇಡಬಹುದು. ಎಣ್ಣೆಯಲ್ಲಿ ಕರಿಯಬೇಡಿ, ಹಬೆಯಲ್ಲಿ ಬೇಯಿಸಿದ ಕಡಬು ದೇವರಿಗೆ ಅರ್ಪಿಸಿ.
* 9 ಗಂಟಿನ ದಾರವನ್ನು ಅರಿಶಿಣ ಪೇಸ್ಟ್ನಲ್ಲಿ ಅದ್ದಿ ನಂತರ ಆ ದಾರವನ್ನು ಬಲಗೈಗೆ ಕಟ್ಟಿಕೊಳ್ಳಿ.
* ದೇವಿಯ ಮಂತ್ರ ಅಥವಾ ಹಾಡು ಹೇಳುವ ಮೂಲಕ ದೇವರಿಗೆ ಆರತಿ ಎತ್ತಿ.
ಹೆಣ್ಮಕ್ಕಳು ಗಂಡ-ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಗೌರಿ ಪೂಜೆಯನ್ನು ಮಾಡುತ್ತಾರೆ.



Click it and Unblock the Notifications