Latest Updates
-
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ!
ಜುಲೈ 17ಕ್ಕೆ ಗೌರಿ ಅಮವಾಸ್ಯೆ, ಈ ದಿನ ಗೌರಿ ಪೂಜೆಯ ಮಹತ್ವವೇನು? ಪೂಜಾ ವಿಧಿಗಳೇನು?
ಜುಲೈ 17ಕ್ಕೆ ಆಷಾಢ ಅಮವಾಸ್ಯೆ. ಹಲವು ಕಾರಣಗಳಿಂದಾಗಿ ಈ ದಿನ ತುಂಬಾ ಪ್ರಾಮುಖ್ಯತೆ ಹೊಂದಿದೆ. ಈ ದಿನ ಭೀಮನ ಅಮವಾಸ್ಯೆ ಆಚರಿಸಲಾಗುವುದು, ಪಿತೃ ತರ್ಪಣ ಮಾಡಲಾಗುವುದು, ಕಾಳ ಸರ್ಪ ದೋಷವಿದ್ದರೆ ಅದಕ್ಕೆ ಪರಿಹಾರ ಮಾಡಲಾಗುವುದು ಹೀಗೆ ಹಲವು ಕಾರಣಗಳಿಂದ ತುಂಬಾನೇ ಪ್ರಾಮುಖ್ಯತೆ ಹೊಂದಿದೆ. ಇನ್ನು ಈ ಅಮವಾಸ್ಯೆಯನ್ನು ದಿವಾಸಿ ಅಮವಾಸ್ಯೆಯೆಂದು ಕೂಡ ಆಚರಿಸಲಾಗುವುದು.
ಈ ದಿವಾಸಿ ಅಮವಾಸ್ಯೆಯಂದು ಗೌರಿ ಪೂಜೆ ಮಾಡಲಾಗುವುದು, ಆದ್ದರಿಂದ ಈ ಅಮವಾಸ್ಯೆಯನ್ನು ಗೌರಿ ಅಮವಾಸ್ಯೆ ಎಂದು ಕರಿಯಲಾಗುವುದು. ಇದರ ಕುರಿತ ಹೆಚ್ಚಿನ ಮಾಹಿತಿ ಈ ಲೇಖನದ ಮೂಲಕ ತಿಳಿಯೋಣ:

ದಿವಾಸಿ ಅಮವಾಸ್ಯೆ ತಿಥಿ
ಗೌರಿ ಅಮವಾಸ್ಯೆ ಜುಲೈ 16ರಿಂದ ಪ್ರಾರಂಭವಾಗಿ ಜುಲೈ 17ಕ್ಕೆ ಮುಕ್ತಾಯವಾಗುತ್ತದೆ.
ಗೌರಿ ಅಮವಾಸ್ಯೆ
ಈ ಅಮವಾಸ್ಯೆಯೆಂದು ಗೌರಿಗೆ ಪೂಜೆಯನ್ನು ಮಾಡಲಾಗುವುದು. ಈ ಪೂಜೆ ಮಾಡುವುದರಿಂದ ಕುಟುಂಬಕ್ಕೆ ಹಾಗೂ ಮಕ್ಕಳಿಗೆ ಒಳಿತಾಗುವುದು ಎಂಬ ನಂಬಿಕೆಯಿದೆ, ಹಾಗಾಗಿ ಮಹಿಳೆಯರು ಈ ದಿನ ಗೌರಿ ಪೂಜೆ ಮಾಡುತ್ತಾರೆ.
ಈ ದಿನ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು
ಈ ದಿನ ಕರ್ನಾಟಕದ ವಿವಿಧ ದೇವಾಲಯಗಳಲ್ಲಿ ದೇವಿಗೆ ರುದ್ರಾಭಿಷೇಕ, ಕುಂಕುಮಾಭಿಷೇಕ, ಬಿಲ್ವಾರ್ಚಾನೆ, ದೇವಿಗೆ ನಿಂಬೆಹಣ್ಣಿನ ಹಾರ ಹಾಕಿ ವಿಶೇಷ ಪೂಜೆ ಸಲ್ಲಿಸಲಾಗುವುದು. ಈ ದಿನ ದೇವಿಯ ದರ್ಶನ ಪಡೆಯಲು ಬರುವ ಭಕ್ತರ ಸಂಖ್ಯೆ ಎಂದಿಗಿಂತಲೂ ಹೆಚ್ಚು ಅಧಿಕವಿರುತ್ತದೆ.
ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಗೌರಿದಾರ ಕಟ್ಟಿಕೊಳ್ಳಬೇಕು
ಮಹಿಳೆಯರು ಗೌರಿಗೆ ಪೂಜೆಯನ್ನು ಸಲ್ಲಿಸಿದ ಬಳಿಕ 9 ಗಂಟುಗಳ ಪವಿತ್ರ ದಾರವಾದ ಗೌರಿ ದಾರವನ್ನು ತಮ್ಮ ಬಲಗೈಗೆ (ಬಲ ಮಣಿಕಟ್ಟಿಗೆ) ಕಟ್ಟಬೇಕು. ಈ ದಾರವನ್ನು ಕಟ್ಟುವುದರಿಂದ ಗೌರಿ ಮಾತೆಯ ಆಶೀರ್ವಾದ ದೊರೆಯಲಿದೆ.
ಈ ದಿನ ಮಹಿಳೆಯರಿಗೆ ಭೀಮನ ಅಮವಾಸ್ಯೆ ಕಾರಣದಿಂದಲೂ ತುಂಬಾನೇ ಪ್ರಾಮುಖ್ಯತೆಯಾದ ದಿನವಾಗಿದೆ
ಈ ದಿನ ಮಹಿಳೆಯರು ಗೌರಿಯನ್ನು ಮಾತ್ರವಲ್ಲ ಶಿವ-ಪಾರ್ವತಿಯನ್ನು ಆಚರಿಸಲಾಗುವುದು. ಶಿವ ಪಾರ್ವತಿಗೆ ಪೂಜೆ ಸಲ್ಲಿಸಿ ನಂತರ ತಮ್ಮ ಗಂಡನ ಪಾದಗಳಿಗೆ ಪಾದ ಪೂಜೆ ಮಾಡಿ ಅವರಿಂದ ಆಶೀರ್ವಾದ ಪಡೆಯುವ ಪದ್ಧತಿ ಇದೆ.
* ಈ ದಿನ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ನಂತರ ರಂಗೋಲಿ ಹಾಕಿ.
* ನಂತರ ಮರದ ಹಲಗೆ ಅಥವಾ ಪೀಠ ಇಟ್ಟು ಮಂಗಳ ಗೌರಿ ಮೂರ್ತಿ ಜೊತೆಗೆ ತಟ್ಟೆಯಲ್ಲಿ ಅಕ್ಕಿ ಹಾಕಿ ಎರಡು ಮಣ್ಣಿನ ಅಥವಾ ಬೆಳ್ಳಿಯ ದೀಪವನ್ನು ಇಡಿ.
* ನಂತರ ಅದೇ ತಟ್ಟೆಯಲ್ಲಿ 9 ವೀಳ್ಯೆದೆಲೆ ಹಾಗೂ 9 ಗಂಟಿನ ದಾರವನ್ನು ಇಡಿ.
* ದೇವಿಗೆ ನೈವೇದ್ಯವಾಗಿ ಕಡಬು ಇಡಬಹುದು. ಎಣ್ಣೆಯಲ್ಲಿ ಕರಿಯಬೇಡಿ, ಹಬೆಯಲ್ಲಿ ಬೇಯಿಸಿದ ಕಡಬು ದೇವರಿಗೆ ಅರ್ಪಿಸಿ.
* 9 ಗಂಟಿನ ದಾರವನ್ನು ಅರಿಶಿಣ ಪೇಸ್ಟ್ನಲ್ಲಿ ಅದ್ದಿ ನಂತರ ಆ ದಾರವನ್ನು ಬಲಗೈಗೆ ಕಟ್ಟಿಕೊಳ್ಳಿ.
* ದೇವಿಯ ಮಂತ್ರ ಅಥವಾ ಹಾಡು ಹೇಳುವ ಮೂಲಕ ದೇವರಿಗೆ ಆರತಿ ಎತ್ತಿ.
ಹೆಣ್ಮಕ್ಕಳು ಗಂಡ-ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಗೌರಿ ಪೂಜೆಯನ್ನು ಮಾಡುತ್ತಾರೆ.



Click it and Unblock the Notifications