Latest Updates
-
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ
ಜುಲೈ 8-17: ಈ ಸಮಯದಲ್ಲಿ ಏಕಾದಶಿ, ಆಷಾಢ ಅಮವಾಸ್ಯೆ ಸೇರಿ ಈ ಪ್ರಮುಖ ವ್ರತಗಳಿವೆ
ಜುಲೈ 08-17ರವರೆಗೆ ಬರುವ ಹಬ್ಬಗಳು, ವ್ರತಗಳ ಬಗ್ಗೆ ನೋಡುವುದಾದರೆ ಉತ್ತರ ಭಾರತದ ಕಡೆ ಶ್ರಾವಣ ಮಾಸ ಶುರುವಾಗಿದೆ, ಕರ್ನಾಟಕದಲ್ಲಿ ಆಷಾಢ ಮಾಸ ಮುಗಿಯಲಿದೆ(ಜುಲೈ 17ಕ್ಕೆ ಮುಗಿಯಲಿದೆ) ಕರ್ನಾಟಕದ ಇನ್ನು ಕೆಲವು ಕಡೆ ಆಟಿ ಮಾಸ ಜುಲೈ 17ರಿಂದ ಪ್ರಾರಂಭವಾಗಿ ಆಗಸ್ಟ್ 17ರವರೆಗೆ ಇರಲಿದೆ. ಆದ್ದರಿಂದ ಕೆಲವು ಆಷಾಢ ಪದ್ಧತಿಗಳು ಮುಂದುವರೆಯಲಿದೆ, ಇನ್ನು ಕೆಲವರಿಗೆ ಶ್ರಾವಣ ಮಾಸ ಆಚರಣೆ...
ಈ ವಾರದಲ್ಲಿ ಬರುವ ಪ್ರಮುಖ ಹಬ್ಬಗಳು, ವ್ರತಗಳ ಲಿಸ್ಟ್ ಇಲ್ಲಿ ನೀಡಲಾಗಿದೆ ನೋಡಿ:

ಜುಲೈ 9, ಭಾನುವಾರ
ಮಾಸಿಕ ಕೃಷ್ಣ ಜನ್ಮಾಷ್ಟಮಿ
ಭಾನು ಸಪ್ತಮಿ
ಜುಲೈ 11 (ಉತ್ತರ ಭಾರತದಲ್ಲಿ 2ನೇ ಮಂಗಳ ಗೌರಿ ವ್ರತ)
ಜುಲೈ 13: ಕಾಮಿಕ ಏಕಾದಶಿ
ಜುಲೈ 14: ಪ್ರದೋಷ ವ್ರತ
ಜುಲೈ 15: ಮಾಸಿಕ ಶಿವರಾತ್ರಿ
ಜುಲೈ 17: ಆಷಾಢ ಅಮವಾಸ್ಯೆ
ಈ ದಿನಗಳಲ್ಲಿ ಕರ್ನಾಟಕದಲ್ಲಿ ಆಚರಿಸುವ ಪ್ರಮುಖ ವ್ರತಗಳು
ಕಾಮಿಕ ಏಕಾದಶಿ: ಕಾಮಿಕ ಏಕಾದಶಿಯು ಆಷಾಢ ಮಾಸದ ಕೊನೆಯ ಏಕಾದಶಿಯಾಗಿದೆ. ಈ ಏಕಾದಶಿ ಬಳಿಕ ಶ್ರಾವಣ ಮಾಸ ಪ್ರಾರಂಭ. ಚಾತುರ್ಮಾಸದ ಮೊದಲ ಏಕಾದಶಿಯಾಗಿದೆ. ಯಾರು ಈ ಏಕಾದಶಿಯನ್ನು ಶ್ರದ್ಧೆ, ಭಕ್ತಿಯಿಂದ ಆಚರಿಸುತ್ತಾರೋ ಅವರ ಇಷ್ಟಾರ್ಥಗಳು ನೆರವೇರಲಿದೆ. ಈ ವರ್ಷ ಜುಲೈ 13ರಂದು ಆಚರಿಸಲಾಗುವುದು.
ಯಾರು ಈ ಏಕಾದಶಿಯನ್ನು ಆಚರಿಸುತ್ತಾರೋ ಅವರ ಅರ್ಧಕ್ಕೆ ಸ್ಥಗಿತಗೊಂಡ ಕೆಲಸಗಳಿದ್ದರೆ ಅದು ಪೂರ್ಣಗೊಳ್ಳುವುದು, ಸಂಕಷ್ಟಗಳು ದೂರಾಗುವುದು ಎಂಬ ನಂಬಿಕೆಯಾಗಿದೆ. ಈ ಏಕಾದಶಿ ಮಾಡುವುದರಿಂದ ಅಶ್ವಮೇಧ ಯಾಗದ ಫಲ ಸಿಗುವುದು ಎಂದು ಹೇಳಲಾಗುವುದು. ಈ ದಿನ ತುಳಸಿಯನ್ನು ಆರಾಧಿಸಿದರೆ ಒಳಿತಾಗುವುದು.
ಪ್ರದೋಷ ವ್ರತ ಮತ್ತು ಮಾಸಿಕ ಶಿವರಾತ್ರಿ
ಪ್ರದೋಷ ವ್ರತ ಮತ್ತು ಮಾಸಿಕ ಶಿವರಾತ್ರಿ ಶಿವ ಪೂಜೆಗೆ ಮೀಸಲಾದ ದಿನ. ಪ್ರತಿಮಾಸ ಎರು ಪ್ರದೋಷ ವ್ರತಗಳಿರುತ್ತದೆ, ಒಂದು ಕೃಷ್ಣ ಪಕ್ಷದಲ್ಲಿ, ಮತ್ತೊಂದು ಶುಕ್ಲ ಪಕ್ಷದಲ್ಲಿ. ಪ್ರದೋಷ ವ್ರತವನ್ನು ಪ್ರದೋಷ ಕಾಲದಲ್ಲಿ ಮಾತ್ರ ಮಾಡಲಾಗುವುದು. ಈ ದಿನ ಶಿವ-ಪಾರ್ವತಿಗೆ ಪೂಜೆಯನ್ನು ಸಲ್ಲಿಸಲಾಗುವುದು. ಅದರಲ್ಲೂ ಮಹಿಳೆಯರಿಗೆ ಈ ಪೂಜೆ ವಿಶೇಷವಾದ ದಿನವಾಗಿದೆ. ಪ್ರದೋಷ ವ್ರತ ಮಾಡುವುದರಿಂದ ಶಿವಕೃಪೆಗೆ ಪಾತ್ರರಾಗುವಿರಿ.
ಆಷಾಢ ಅಮವಾಸ್ಯೆ
ಹಿಂದೂ ಧರ್ಮದಲ್ಲಿ ಆಷಾಢ ಅಮವಾಸ್ಯೆಗೆ ತುಂಬಾನೇ ಪ್ರಾಮುಖ್ಯತೆ ನೀಡಲಾಗಿದೆ. ಆಷಾಢ ಅಮವಾಸ್ಯೆ ಪಿತೃದೋಷ ನಿವಾರಣೆಗೆ ತುಂಬಾ ಮುಖ್ಯವಾದ ದಿನವಾಗಿದೆ. ಈ ದಿನ ಪಿತೃತರ್ಪಣ ಮಾಡುವುದರಿಂದ ಹಿರಿಯರಿಗೆ ಪುಣ್ಯ ಫಲ ಸಿಗುವುದು ಎಂದು ನಂಬಲಾಗಿದೆ. ಪಿತೃಗಳ ಆಶೀರ್ವಾದ ಇದ್ದರೆ ಮಾತ್ರ ಒಳಿತಾಗುವುದು.



Click it and Unblock the Notifications











