Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜುಲೈ 8-17: ಈ ಸಮಯದಲ್ಲಿ ಏಕಾದಶಿ, ಆಷಾಢ ಅಮವಾಸ್ಯೆ ಸೇರಿ ಈ ಪ್ರಮುಖ ವ್ರತಗಳಿವೆ
ಜುಲೈ 08-17ರವರೆಗೆ ಬರುವ ಹಬ್ಬಗಳು, ವ್ರತಗಳ ಬಗ್ಗೆ ನೋಡುವುದಾದರೆ ಉತ್ತರ ಭಾರತದ ಕಡೆ ಶ್ರಾವಣ ಮಾಸ ಶುರುವಾಗಿದೆ, ಕರ್ನಾಟಕದಲ್ಲಿ ಆಷಾಢ ಮಾಸ ಮುಗಿಯಲಿದೆ(ಜುಲೈ 17ಕ್ಕೆ ಮುಗಿಯಲಿದೆ) ಕರ್ನಾಟಕದ ಇನ್ನು ಕೆಲವು ಕಡೆ ಆಟಿ ಮಾಸ ಜುಲೈ 17ರಿಂದ ಪ್ರಾರಂಭವಾಗಿ ಆಗಸ್ಟ್ 17ರವರೆಗೆ ಇರಲಿದೆ. ಆದ್ದರಿಂದ ಕೆಲವು ಆಷಾಢ ಪದ್ಧತಿಗಳು ಮುಂದುವರೆಯಲಿದೆ, ಇನ್ನು ಕೆಲವರಿಗೆ ಶ್ರಾವಣ ಮಾಸ ಆಚರಣೆ...
ಈ ವಾರದಲ್ಲಿ ಬರುವ ಪ್ರಮುಖ ಹಬ್ಬಗಳು, ವ್ರತಗಳ ಲಿಸ್ಟ್ ಇಲ್ಲಿ ನೀಡಲಾಗಿದೆ ನೋಡಿ:

ಜುಲೈ 9, ಭಾನುವಾರ
ಮಾಸಿಕ ಕೃಷ್ಣ ಜನ್ಮಾಷ್ಟಮಿ
ಭಾನು ಸಪ್ತಮಿ
ಜುಲೈ 11 (ಉತ್ತರ ಭಾರತದಲ್ಲಿ 2ನೇ ಮಂಗಳ ಗೌರಿ ವ್ರತ)
ಜುಲೈ 13: ಕಾಮಿಕ ಏಕಾದಶಿ
ಜುಲೈ 14: ಪ್ರದೋಷ ವ್ರತ
ಜುಲೈ 15: ಮಾಸಿಕ ಶಿವರಾತ್ರಿ
ಜುಲೈ 17: ಆಷಾಢ ಅಮವಾಸ್ಯೆ
ಈ ದಿನಗಳಲ್ಲಿ ಕರ್ನಾಟಕದಲ್ಲಿ ಆಚರಿಸುವ ಪ್ರಮುಖ ವ್ರತಗಳು
ಕಾಮಿಕ ಏಕಾದಶಿ: ಕಾಮಿಕ ಏಕಾದಶಿಯು ಆಷಾಢ ಮಾಸದ ಕೊನೆಯ ಏಕಾದಶಿಯಾಗಿದೆ. ಈ ಏಕಾದಶಿ ಬಳಿಕ ಶ್ರಾವಣ ಮಾಸ ಪ್ರಾರಂಭ. ಚಾತುರ್ಮಾಸದ ಮೊದಲ ಏಕಾದಶಿಯಾಗಿದೆ. ಯಾರು ಈ ಏಕಾದಶಿಯನ್ನು ಶ್ರದ್ಧೆ, ಭಕ್ತಿಯಿಂದ ಆಚರಿಸುತ್ತಾರೋ ಅವರ ಇಷ್ಟಾರ್ಥಗಳು ನೆರವೇರಲಿದೆ. ಈ ವರ್ಷ ಜುಲೈ 13ರಂದು ಆಚರಿಸಲಾಗುವುದು.
ಯಾರು ಈ ಏಕಾದಶಿಯನ್ನು ಆಚರಿಸುತ್ತಾರೋ ಅವರ ಅರ್ಧಕ್ಕೆ ಸ್ಥಗಿತಗೊಂಡ ಕೆಲಸಗಳಿದ್ದರೆ ಅದು ಪೂರ್ಣಗೊಳ್ಳುವುದು, ಸಂಕಷ್ಟಗಳು ದೂರಾಗುವುದು ಎಂಬ ನಂಬಿಕೆಯಾಗಿದೆ. ಈ ಏಕಾದಶಿ ಮಾಡುವುದರಿಂದ ಅಶ್ವಮೇಧ ಯಾಗದ ಫಲ ಸಿಗುವುದು ಎಂದು ಹೇಳಲಾಗುವುದು. ಈ ದಿನ ತುಳಸಿಯನ್ನು ಆರಾಧಿಸಿದರೆ ಒಳಿತಾಗುವುದು.
ಪ್ರದೋಷ ವ್ರತ ಮತ್ತು ಮಾಸಿಕ ಶಿವರಾತ್ರಿ
ಪ್ರದೋಷ ವ್ರತ ಮತ್ತು ಮಾಸಿಕ ಶಿವರಾತ್ರಿ ಶಿವ ಪೂಜೆಗೆ ಮೀಸಲಾದ ದಿನ. ಪ್ರತಿಮಾಸ ಎರು ಪ್ರದೋಷ ವ್ರತಗಳಿರುತ್ತದೆ, ಒಂದು ಕೃಷ್ಣ ಪಕ್ಷದಲ್ಲಿ, ಮತ್ತೊಂದು ಶುಕ್ಲ ಪಕ್ಷದಲ್ಲಿ. ಪ್ರದೋಷ ವ್ರತವನ್ನು ಪ್ರದೋಷ ಕಾಲದಲ್ಲಿ ಮಾತ್ರ ಮಾಡಲಾಗುವುದು. ಈ ದಿನ ಶಿವ-ಪಾರ್ವತಿಗೆ ಪೂಜೆಯನ್ನು ಸಲ್ಲಿಸಲಾಗುವುದು. ಅದರಲ್ಲೂ ಮಹಿಳೆಯರಿಗೆ ಈ ಪೂಜೆ ವಿಶೇಷವಾದ ದಿನವಾಗಿದೆ. ಪ್ರದೋಷ ವ್ರತ ಮಾಡುವುದರಿಂದ ಶಿವಕೃಪೆಗೆ ಪಾತ್ರರಾಗುವಿರಿ.
ಆಷಾಢ ಅಮವಾಸ್ಯೆ
ಹಿಂದೂ ಧರ್ಮದಲ್ಲಿ ಆಷಾಢ ಅಮವಾಸ್ಯೆಗೆ ತುಂಬಾನೇ ಪ್ರಾಮುಖ್ಯತೆ ನೀಡಲಾಗಿದೆ. ಆಷಾಢ ಅಮವಾಸ್ಯೆ ಪಿತೃದೋಷ ನಿವಾರಣೆಗೆ ತುಂಬಾ ಮುಖ್ಯವಾದ ದಿನವಾಗಿದೆ. ಈ ದಿನ ಪಿತೃತರ್ಪಣ ಮಾಡುವುದರಿಂದ ಹಿರಿಯರಿಗೆ ಪುಣ್ಯ ಫಲ ಸಿಗುವುದು ಎಂದು ನಂಬಲಾಗಿದೆ. ಪಿತೃಗಳ ಆಶೀರ್ವಾದ ಇದ್ದರೆ ಮಾತ್ರ ಒಳಿತಾಗುವುದು.



Click it and Unblock the Notifications