Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಜುಲೈ 8-17: ಈ ಸಮಯದಲ್ಲಿ ಏಕಾದಶಿ, ಆಷಾಢ ಅಮವಾಸ್ಯೆ ಸೇರಿ ಈ ಪ್ರಮುಖ ವ್ರತಗಳಿವೆ
ಜುಲೈ 08-17ರವರೆಗೆ ಬರುವ ಹಬ್ಬಗಳು, ವ್ರತಗಳ ಬಗ್ಗೆ ನೋಡುವುದಾದರೆ ಉತ್ತರ ಭಾರತದ ಕಡೆ ಶ್ರಾವಣ ಮಾಸ ಶುರುವಾಗಿದೆ, ಕರ್ನಾಟಕದಲ್ಲಿ ಆಷಾಢ ಮಾಸ ಮುಗಿಯಲಿದೆ(ಜುಲೈ 17ಕ್ಕೆ ಮುಗಿಯಲಿದೆ) ಕರ್ನಾಟಕದ ಇನ್ನು ಕೆಲವು ಕಡೆ ಆಟಿ ಮಾಸ ಜುಲೈ 17ರಿಂದ ಪ್ರಾರಂಭವಾಗಿ ಆಗಸ್ಟ್ 17ರವರೆಗೆ ಇರಲಿದೆ. ಆದ್ದರಿಂದ ಕೆಲವು ಆಷಾಢ ಪದ್ಧತಿಗಳು ಮುಂದುವರೆಯಲಿದೆ, ಇನ್ನು ಕೆಲವರಿಗೆ ಶ್ರಾವಣ ಮಾಸ ಆಚರಣೆ...
ಈ ವಾರದಲ್ಲಿ ಬರುವ ಪ್ರಮುಖ ಹಬ್ಬಗಳು, ವ್ರತಗಳ ಲಿಸ್ಟ್ ಇಲ್ಲಿ ನೀಡಲಾಗಿದೆ ನೋಡಿ:

ಜುಲೈ 9, ಭಾನುವಾರ
ಮಾಸಿಕ ಕೃಷ್ಣ ಜನ್ಮಾಷ್ಟಮಿ
ಭಾನು ಸಪ್ತಮಿ
ಜುಲೈ 11 (ಉತ್ತರ ಭಾರತದಲ್ಲಿ 2ನೇ ಮಂಗಳ ಗೌರಿ ವ್ರತ)
ಜುಲೈ 13: ಕಾಮಿಕ ಏಕಾದಶಿ
ಜುಲೈ 14: ಪ್ರದೋಷ ವ್ರತ
ಜುಲೈ 15: ಮಾಸಿಕ ಶಿವರಾತ್ರಿ
ಜುಲೈ 17: ಆಷಾಢ ಅಮವಾಸ್ಯೆ
ಈ ದಿನಗಳಲ್ಲಿ ಕರ್ನಾಟಕದಲ್ಲಿ ಆಚರಿಸುವ ಪ್ರಮುಖ ವ್ರತಗಳು
ಕಾಮಿಕ ಏಕಾದಶಿ: ಕಾಮಿಕ ಏಕಾದಶಿಯು ಆಷಾಢ ಮಾಸದ ಕೊನೆಯ ಏಕಾದಶಿಯಾಗಿದೆ. ಈ ಏಕಾದಶಿ ಬಳಿಕ ಶ್ರಾವಣ ಮಾಸ ಪ್ರಾರಂಭ. ಚಾತುರ್ಮಾಸದ ಮೊದಲ ಏಕಾದಶಿಯಾಗಿದೆ. ಯಾರು ಈ ಏಕಾದಶಿಯನ್ನು ಶ್ರದ್ಧೆ, ಭಕ್ತಿಯಿಂದ ಆಚರಿಸುತ್ತಾರೋ ಅವರ ಇಷ್ಟಾರ್ಥಗಳು ನೆರವೇರಲಿದೆ. ಈ ವರ್ಷ ಜುಲೈ 13ರಂದು ಆಚರಿಸಲಾಗುವುದು.
ಯಾರು ಈ ಏಕಾದಶಿಯನ್ನು ಆಚರಿಸುತ್ತಾರೋ ಅವರ ಅರ್ಧಕ್ಕೆ ಸ್ಥಗಿತಗೊಂಡ ಕೆಲಸಗಳಿದ್ದರೆ ಅದು ಪೂರ್ಣಗೊಳ್ಳುವುದು, ಸಂಕಷ್ಟಗಳು ದೂರಾಗುವುದು ಎಂಬ ನಂಬಿಕೆಯಾಗಿದೆ. ಈ ಏಕಾದಶಿ ಮಾಡುವುದರಿಂದ ಅಶ್ವಮೇಧ ಯಾಗದ ಫಲ ಸಿಗುವುದು ಎಂದು ಹೇಳಲಾಗುವುದು. ಈ ದಿನ ತುಳಸಿಯನ್ನು ಆರಾಧಿಸಿದರೆ ಒಳಿತಾಗುವುದು.
ಪ್ರದೋಷ ವ್ರತ ಮತ್ತು ಮಾಸಿಕ ಶಿವರಾತ್ರಿ
ಪ್ರದೋಷ ವ್ರತ ಮತ್ತು ಮಾಸಿಕ ಶಿವರಾತ್ರಿ ಶಿವ ಪೂಜೆಗೆ ಮೀಸಲಾದ ದಿನ. ಪ್ರತಿಮಾಸ ಎರು ಪ್ರದೋಷ ವ್ರತಗಳಿರುತ್ತದೆ, ಒಂದು ಕೃಷ್ಣ ಪಕ್ಷದಲ್ಲಿ, ಮತ್ತೊಂದು ಶುಕ್ಲ ಪಕ್ಷದಲ್ಲಿ. ಪ್ರದೋಷ ವ್ರತವನ್ನು ಪ್ರದೋಷ ಕಾಲದಲ್ಲಿ ಮಾತ್ರ ಮಾಡಲಾಗುವುದು. ಈ ದಿನ ಶಿವ-ಪಾರ್ವತಿಗೆ ಪೂಜೆಯನ್ನು ಸಲ್ಲಿಸಲಾಗುವುದು. ಅದರಲ್ಲೂ ಮಹಿಳೆಯರಿಗೆ ಈ ಪೂಜೆ ವಿಶೇಷವಾದ ದಿನವಾಗಿದೆ. ಪ್ರದೋಷ ವ್ರತ ಮಾಡುವುದರಿಂದ ಶಿವಕೃಪೆಗೆ ಪಾತ್ರರಾಗುವಿರಿ.
ಆಷಾಢ ಅಮವಾಸ್ಯೆ
ಹಿಂದೂ ಧರ್ಮದಲ್ಲಿ ಆಷಾಢ ಅಮವಾಸ್ಯೆಗೆ ತುಂಬಾನೇ ಪ್ರಾಮುಖ್ಯತೆ ನೀಡಲಾಗಿದೆ. ಆಷಾಢ ಅಮವಾಸ್ಯೆ ಪಿತೃದೋಷ ನಿವಾರಣೆಗೆ ತುಂಬಾ ಮುಖ್ಯವಾದ ದಿನವಾಗಿದೆ. ಈ ದಿನ ಪಿತೃತರ್ಪಣ ಮಾಡುವುದರಿಂದ ಹಿರಿಯರಿಗೆ ಪುಣ್ಯ ಫಲ ಸಿಗುವುದು ಎಂದು ನಂಬಲಾಗಿದೆ. ಪಿತೃಗಳ ಆಶೀರ್ವಾದ ಇದ್ದರೆ ಮಾತ್ರ ಒಳಿತಾಗುವುದು.



Click it and Unblock the Notifications