Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಈ ವರ್ಷ ಚಾತುರ್ಮಾಸ್ಯ ವ್ರತ ಯಾವಾಗ ಪ್ರಾರಂಭ? ಈ ವ್ರತದ ಮಹತ್ವವೇನು?
ಸನಾತನ ಧರ್ಮದಲ್ಲಿ ಚಾತುರ್ಮಾಸ್ಯಕ್ಕೆ ತುಂಬಾನೇ ಮಹತ್ವವಿದೆ. ಈ ಚಾತುರ್ಮಾಸವು ದೇವಶಯನಿ ಏಕಾದಶಿಯಂದ ಪ್ರಾರಂಭವಾಗುವುದು. ಆಷಾಢಮಾಸದ ಹುಣ್ಣಿಮೆಯಿಂದ ಕಾರ್ತಿಕ ಮಾಸದ ಹುಣ್ಣಿಮೆಯವರಿಗೆ ನಾಲ್ಕು ತಿಂಗಳು ಶ್ರೀ ವಿಷ್ಣು ಯೋಗನಿದ್ರೆಗೆ ಜಾರುತ್ತಾನೆ.

ಈ ಸಮಯ ಧಾರ್ಮಿಕ ಕಾರ್ಯಗಳಲ್ಲಿ ಸಾಧನೆ ಮಾಡುವವರಿಗೆ ತುಂಬಾನೇ ಮಹತ್ವವಾಗಿದೆ. ಈ ಸಮಯದಲ್ಲಿ ಸಂನ್ಯಾಸಿಗಳು, ಸಾಧುಗಳು ಆಧ್ಯಾತ್ಮಿಕ ಸಾಧನೆಗೆ ಸಂಕಲ್ಪ ಮಾಡುತ್ತಾರೆ. ಈ ವರ್ಷ ಚಾತುರ್ಮಾಸ ವ್ರತ ಯಾವಾಗ ಪ್ರಾರಂಭ? ಚಾತುರ್ಮಾಸ ವ್ರತದ ಮಹತ್ವವೇನು? ವ್ರತ ನಿಯಮಗಳೇನು? ಧಾರ್ಮಿಕ ದೃಷ್ಟಿಯಿಂದ ಈ ನಾಲ್ಕು ತಿಂಗಳು ತುಂಬಾ ಮಹತ್ವವಾದದ್ದು ಏಕೆ ಎಂದು ನೋಡೋಣ ಬನ್ನಿ:
2023ರಲ್ಲಿ ಚಾತುರ್ಮಾಸ ಯಾವಾಗ?
ಚಾತುರ್ಮಾಸ ಶಯನಿ ಏಕಾದಶಿಯಿಂದ ಪ್ರಾರಂಭ, ಈ ವರ್ಷ ಜೂನ್ 29ರಂದು ಪ್ರಾರಂಭ. ಕಾರ್ತಿಕ ಹುಣ್ಣಿಮೆಯವರೆಗೆ ಅಂದರೆ ನವೆಂಬರ್ 23ರವರೆಗೆ ಚಾತುರ್ಮಾಸ ಅಥವಾ ಚಾತುರ್ಮಾಸ್ಯ ಆಚರಿಸಲಾಗುವುದು.
ಚಾತುರ್ಮಾಸ್ಯದಲ್ಲಿ ಯಾವುದೇ ಶುಭ ಕಾರ್ಯ ಮಾಡುವಂತಿಲ್ಲ
ಹಿಂದೂ ಧಾರ್ಮಿಕ ನಂಬಿಕೆ ಪ್ರಕಾರ ಚಾತುರ್ಮಾಸ್ಯದಲ್ಲಿ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ. ಈ ಸಮಯದಲ್ಲಿ ಗೃಹ ಪ್ರವೇಶ, ಮದುವೆ, ನಾಮಕಾರಣ ಹೀಗೆ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ. 4 ತಿಂಗಳವರೆಗೆ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ.
ಚಾತುರ್ಮಾಸ್ಯ ಧಾರ್ಮಿಕ ಕಾರ್ಯಗಳಿಗೆ ತುಂಬಾನೇ ಶ್ರೇಷ್ಠ
ಚಾತುರ್ಮಾಸ್ಯ ಪೂಜೆ, ಯಜ್ಞ, ಯಾಗಗಳಿಗೆ ತುಂಬಾನೇ ಶ್ರೇಷ್ಠವಾಗಿದೆ. ಈ ಸಮಯದಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡುವುದರಿಂದ ತುಂಬಾನೇ ಶುಭ ಫಲ ಸಿಗಲಿದೆ. ಚಾತುರ್ಮಾಸ್ಯ ವ್ರತವನ್ನು ಸಾಧು ಸಂತರು ತುಂಬಾ ಎದುರು ನೋಡುತ್ತಿರುತ್ತಾರೆ. ಆಷಾಢ ಹುಣ್ಣಿಮೆಯಂದು ವ್ಯಾಸ ಪೂಜೆ ಮಾಡುವ ಮೂಲಕ ಚಾತುರ್ಮಾಸ್ಯ ವ್ರತವನ್ನು ಪ್ರಾರಂಭಿಸುತ್ತಾರೆ.
ಚಾತುರ್ಮಾಸ್ಯ ವ್ರತ
* ಆಧ್ಯಾತ್ಮದ ಸಾಧನೆಗೆ ಸೂಕ್ತವಾದ ಸಮಯ: ಸಾಮಾನ್ಯವಾಗಿ ಸಾಧು ಸಂತರು ಯಾವುದೇ ಸ್ಥಳದಲ್ಲಿ 3 ದಿನಗಳಿಗಿಂತ ಅಧಿಕ ಸಮಯ ಇರುವಂತಿಲ್ಲ. ಆದ್ದರಿಂದ ಸಂನ್ಯಾಸಿಗಳು ಭಿಕ್ಷೆ ಬೇಡುತ್ತಾ ಸಂಚರಿಸುತ್ತಲೇ ಇರುತ್ತಾರೆ. ಆದರೆ ಚಾತುರ್ಮಾಸ್ಯದಲ್ಲಿ ಹಾಗಲ್ಲ, ಸಂನ್ಯಾಸಿಗಳು ಮಠ, ಮಂದಿರಗಳಲ್ಲಿ ನೆಲೆ ನಿಂತು ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿರುತ್ತಾರೆ.
* ಅಹಿಂಸೆಗೆ ಹೆಚ್ಚಿನ ಒತ್ತು ನೀಡಲಾಗುವುದು: ಈ ಸಮಯದಲ್ಲಿ ಯಾವುದೇ ಪ್ರಾಣಿಗಳಿಗೆ ಹಿಂಸೆ ಮಾಡಬಾರದು ಎಂಬ ನಂಬಿಕೆ ಇದೆ. ಅಲ್ಲದೆ ಚಾತುರ್ಮಾಸದಲ್ಲಿ ಆ ನಾಲ್ಕು ತಿಂಗಳು ತುಂಬಾನೇ ಮಳೆ ಸುರಿಯುತ್ತಿರುತ್ತದೆ. ಈ ಸಮಯದಲ್ಲಿ ಹುಳ ಹುಪ್ಪಟೆಗಳು ಅಧಿಕ. ಈ ಸಮಯದಲ್ಲಿ ಸಾಧುಗಳು ಓಡಾಡುವುದರಿಂದ ಹುಳ ಹುಪ್ಪಟೆಗೆ ನೋವಾಗಬಾರದು ಎಂಬ ಕಾರಣದಿಂದ ಯಾವುದಾದರೂ ದೇವಾಲಯ ಅಥವಾ ಮಠದಲ್ಲಿ ನೆಲೆನಿಂತು ಆಧ್ಯಾತ್ಮಿಕ ಧ್ಯಾನ ಮಾಡುತ್ತಿರುತ್ತಾರೆ.
ಚಾತುರ್ಮಾಸ್ಯದ ವ್ರತದ ಸಮಯದಲ್ಲಿ ಆಹಾರಕ್ರಮ ಹೀಗಿರಬೇಕು ಎಂಬ ನಿಯಮ ಕೂಡ ಇದೆ:
* ಚಾತುರ್ಮಾಸ್ಯದ ಮೊದಲ ತಿಂಗಳವನ್ನು ಶಾಕವ್ರತ ಎಂದು ಕರೆಯಲಾಗುವುದು. ಈ ತಿಂಗಳಿನಲ್ಲಿ ತರಕಾರಿ, ಹಣ್ಣುಗಳನ್ನು ಬಳಸಬಾರದು ಎಂದು ಹೇಳಲಾಗುವುದು. ಈ ಸಮಯದಲ್ಲಿ ತಿಮರೆ ಸೊಪ್ಪು, ಮಾವಿನಕಾಯಿ, ಕಾಳು ಮೆಣಸು ಈ ಬಗೆಯ ಆಹಾರವನ್ನು ಬಳಸುತ್ತಾರೆ. ಒಣ ಮೆಣಸು, ಹುಣಸೆ ಹಣ್ಣು ಇವುಗಳನ್ನು ಬಳಸುವುದಿಲ್ಲ.
ಈ ಸಮಯದಲ್ಲಿ ಕೆಸ, ಪತ್ರೊಡೆ, ತಜಂಕ್ ಸೊಪ್ಪು ಹೀಗೆ ಈ ಕಾಲದಲ್ಲಿಯೇ ಬಳಸುವ ಆಹಾರಗಳಿವೆ ಅವುಗಳನ್ನು ಹೆಚ್ಚಾಗಿ ಬಳಸುತ್ತಾರೆ.
ಎರಡನೇಯ ತಿಂಗಳ ವ್ರತವನ್ನು ಕ್ಷೀರವ್ರತವೆಂದು ಕರೆಯಲಾಗುವುದು. ಈ ತಿಂಗಳಿನಲ್ಲಿ ಹಾಲನ್ನು ಬಳಸುವುದಿಲ್ಲ.
ಮೂರನೇ ತಿಂಗಳ ವ್ರತವನ್ನು ದವ್ರತ ಎಂದು ಕರೆಯಲಾಗುವುದು. ಈ ಅವಧಿಯಲ್ಲಿ ಮೊಸರು ಬಳಸುವಂತಿಲ್ಲ.
ನಾಲ್ಕನೇ ತಿಂಗಳಿನಲ್ಲಿ ದ್ವಿದಳ ವ್ರತ ಎಂದು ಕರೆಯಲಾಗುವುದು. ಈ ತಿಂಗಳಿನಲ್ಲಿ ಹಸಿ ಮೆಣಸು, ಒಣ ಮೆಣಸು ಬಳಸಬಾರದು, ಕಾಳು ಮೆಣಸು ಬಳಸಬೇಕು.
ಆಧ್ಯಾತ್ಮಿಕ ಕಾರ್ಯಗಳಲ್ಲಿ ಗಮನಹರಿಸಲು ಸೂಕ್ತ ಸಮಯ
ಈ ನಾಲ್ಕು ತಿಂಗಳು ಭಗವಂತ ಯೋಗ ನಿದ್ರೆಯಲ್ಲಿರುತ್ತಾರೆ. ಈ ಸಮಯದಲ್ಲಿ ಪೂಜೆ ಕಾರ್ಯಗಳಿಗೆ ತುಂಬಾನೇ ಶ್ರೇಷ್ಠ. ಆದರೆ ಯಾವುದೇ ಶುಭ ಕಾರ್ಯ ಮಾಡುವಂತಿಲ್ಲ.



Click it and Unblock the Notifications